AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ; ಈ ಪ್ರಾಂತ್ಯ ಕೈತಪ್ಪಿದರೆ ಪಾಕಿಸ್ತಾನದ ಅರ್ಧಶಕ್ತಿ ಕುಂದಿದಂತಾಗುತ್ತಾ?

Why Balochistan is more important to Pakistan: ಪಾಕಿಸ್ತಾನದ ಪ್ರಾಂತ್ಯವೆನಿಸಿದ್ದ ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಇದು ಪಾಕಿಸ್ತಾನದ ರಾಜಕೀಯ ಪಡಸಾಲೆಯಲ್ಲಿರುವವರನ್ನು ನಡುಗಿಸುತ್ತಿದೆ. ಪಾಕಿಸ್ತಾನದಾದ್ಯಂತ ಹಿಂಸಾಚಾರಗಳು ಸರ್ವೇಸಾಮಾನ್ಯ. ಅದರಲ್ಲೂ ಬಲೂಚಿಸ್ತಾನ, ಪಿಒಕೆ ಮತ್ತು ಖೈಬರ್ ಪಖ್ತುಂಖ್ವದಲ್ಲಿ ಹಿಂಸಾಚಾರ ಹೆಚ್ಚು. ಆದರೆ, ಬಲೂಚಿಸ್ತಾನವು ಪಾಕಿಸ್ತಾನದ ಮಗ್ಗುಲಲ್ಲಿ ಕೆಂಡದಂತಿದೆ.

ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ; ಈ ಪ್ರಾಂತ್ಯ ಕೈತಪ್ಪಿದರೆ ಪಾಕಿಸ್ತಾನದ ಅರ್ಧಶಕ್ತಿ ಕುಂದಿದಂತಾಗುತ್ತಾ?
ಬಲೂಚಿಸ್ತಾನದ ಬುಗ್ತಿ ಹೋರಾಟಗಾರರುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2026 | 7:43 PM

Share

ಇಸ್ಲಾಮಾಬಾದ್, ಜುಲೈ 19: ಭಾರತವನ್ನು ನೂರು ಹೋಳುಗಳಾಗಿ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಈಗ ಆಂತರಿಕ ಸಮಸ್ಯೆಗಳಿಂದ ಜರ್ಝರಿತವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗು ಪ್ರತಿಧ್ವನಿಸುತ್ತಲೇ ಇರುತ್ತದೆ. ಇದೇ ವೇಳೆ, ಬಲೂಚಿಸ್ತಾನ (Balochistan) ಮೂರು ದಿನಗಳ ಹಿಂದೆ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ದಶಕಗಳಿಂದ ನಡೆಯುತ್ತಿರುವ ಸಶಸ್ತ್ರ ಹೋರಾಟದ ಮುಂದುವರಿದ ಭಾಗವಾಗಿ ಈ ಘೋಷಣೆ ನಡೆದಿದೆ. ಈ ಬಲೂಚಿಸ್ತಾನದ ಸ್ವಾತಂತ್ರ್ಯದ ವಿಷಯವು ಪಾಕಿಸ್ತಾನದ ಆಂತರಿಕ ಭದ್ರತೆ ಮತ್ತು ಭೌಗೋಳಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಚಾರವಾಗಿದೆ. ಪಾಕಿಸ್ತಾನಕ್ಕೆ ಪಿಒಕೆಗಿಂತ ಹೆಚ್ಚಾಗಿ ಬಲೂಚಿಸದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ವಿಷಯಕ್ಕಿಂತಲೂ ಬಲೂಚಿಸ್ತಾನದ ಬೆಳವಣಿಗೆಗಳು ಇಸ್ಲಾಮಾಬಾದ್‌ಗೆ ಏಕೆ ಹೆಚ್ಚು ಆತಂಕಕಾರಿ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ.

ಬಲೂಚಿಸ್ತಾನ ನೈಸರ್ಗಿಕ ಸಂಪನ್ಮೂಲಗಳ ಆಗರ

ಬಲೂಚಿಸ್ತಾನವು ಪಾಕಿಸ್ತಾನದ ಒಟ್ಟು ಭೂಪ್ರದೇಶದ ಸುಮಾರು 44% ರಷ್ಟನ್ನು ಹೊಂದಿದೆ. ಇದು ನೈಸರ್ಗಿಕ ಅನಿಲ (Gas), ತಾಮ್ರ ಮತ್ತು ಚಿನ್ನದಂತಹ ಅಪಾರ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಪಾಕಿಸ್ತಾನದ ಆರ್ಥಿಕತೆಯು ಈ ಸಂಪನ್ಮೂಲಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಬಲೂಚಿಸ್ತಾನ ಕೈತಪ್ಪಿದರೆ ಪಾಕಿಸ್ತಾನದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು?

ಗ್ವಾದರ್ ಬಂದರು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC)

ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾದ CPEC ಮತ್ತು ಗ್ವಾದರ್ ಬಂದರು ಬಲೂಚಿಸ್ತಾನದಲ್ಲಿದೆ. ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಈ ಪ್ರದೇಶ ಆರ್ಥಿಕವಾಗಿ ಮತ್ತು ತಂತ್ರಾತ್ಮಕವಾಗಿ (Strategically) ಬಹಳ ಮುಖ್ಯ. ಬಲೂಚಿಸ್ತಾನದಲ್ಲಿ ಅಶಾಂತಿ ಉಂಟಾದರೆ ಈ ಯೋಜನೆಗಳಿಗೆ ಭಾರಿ ಅಡಚಣೆಯಾಗುತ್ತದೆ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡುತ್ತದೆ.

ಬಲೂಚಿಸ್ತಾನದ ಸುದೀರ್ಘ ಇತಿಹಾಸ ಮತ್ತು ದಂಗೆ

ಬಲೂಚಿಸ್ತಾನದ ವಿಲೀನವು (1948ರಲ್ಲಿ ಕಲಾತ್ ಸಂಸ್ಥಾನದ ವಿಲೀನ) ವಿವಾದಾತ್ಮಕವಾಗಿದೆ. ಅಲ್ಲಿನ ಜನರಲ್ಲಿ ತಾವು ಪಾಕಿಸ್ತಾನದ ಭಾಗವಲ್ಲ ಎಂಬ ಭಾವನೆ ದಶಕಗಳಿಂದ ಇದೆ. ಅಲ್ಲಿನ ಸ್ಥಳೀಯರು ಸಂಪನ್ಮೂಲಗಳ ಶೋಷಣೆ ಮತ್ತು ಅಭಿವೃದ್ಧಿಯ ಕೊರತೆಯ ಬಗ್ಗೆ ದಶಕಗಳಿಂದ ದೂರು ನೀಡುತ್ತಿದ್ದಾರೆ. ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ನಂತಹ ಸಂಘಟನೆಗಳು ಪಾಕಿಸ್ತಾನದ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿವೆ.

PoK vs ಬಲೂಚಿಸ್ತಾನ

ಪಾಕ್ ಆಕ್ರಮಿಕ ಕಾಶ್ಮೀರವು ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಮತ್ತು ಪ್ರಾದೇಶಿಕ ವಿವಾದ. ಅಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ, ಬಲೂಚಿಸ್ತಾನದಷ್ಟು ತೀವ್ರವಾದ ಮತ್ತು ದೀರ್ಘಕಾಲೀನ ಸಶಸ್ತ್ರ ಬಂಡಾಯದ ಇತಿಹಾಸ ಅಲ್ಲಿಲ್ಲ. ಭಾರತದ ವಿರುದ್ಧ ರಕ್ಷಣಾತ್ಮಕವಾಗಿ ಇರಲು ಅಥವಾ ಆಕ್ರಮಣಕಾರಿಯಾಗಿ ಇರಲು ಪಾಕಿಸ್ತಾನಕ್ಕೆ ಪಿಒಕೆ ಅಗತ್ಯ ಇದೆ. ಅದು ಬಿಟ್ಟರೆ ಆ ಭೂಭಾಗದಿಂದ ಪಾಕಿಸ್ತಾನಕ್ಕೆ ಅಂಥದ್ದೇನು ಆಗಬೇಕಾದ್ದಿಲ್ಲ ಎಂಬುದು ಕೆಲ ತಜ್ಞರ ಅನಿಸಿಕೆ.

ಇದನ್ನೂ ಓದಿ: ಸ್ಕೂಲ್​ನಲ್ಲಿ ಫೇಲ್, ಬ್ಯುಸಿನೆಸ್​ನಲ್ಲಿ ವಿನ್; ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ರೋನಿ ಸ್ಕ್ರೂವಾಲಾ ಅವರ ಯಶೋಗಾಥೆ

ಆದರೆ, ಬಲೂಚಿಸ್ತಾನವು ಪಾಕಿಸ್ತಾನದ ‘ಅಖಂಡತೆ’ಗೇ ನೇರ ಸವಾಲಾಗಿ ಪರಿಣಮಿಸಿದೆ. ಬಲೂಚಿಸ್ತಾನದ ಬಂಡುಕೋರರು ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡಿದ್ದಾರೆ, ಇದು ಪಾಕಿಸ್ತಾನದ ಅಸ್ತಿತ್ವಕ್ಕೆ ದೊಡ್ಡ ಸವಾಲಾಗಿದೆ. ಈ ಬಲೂಚಿಗಳು ಸ್ವಾತಂತ್ರ್ಯ ಘೋಷಣೆ ಮಾಡಿರುವುದು ಪಾಕಿಸ್ತಾನಕ್ಕೆ ಹೊಸ ಸವಾಲು ತಂದಿದೆ.

ಪಾಕಿಸ್ತಾನಕ್ಕೆ ಬಲೂಚಿಸ್ತಾನ ಕೇವಲ ಒಂದು ಪ್ರದೇಶವಲ್ಲ; ಅದು ಅವರ ಆರ್ಥಿಕತೆಯ ಬೆನ್ನೆಲುಬು ಮತ್ತು ಕಾರ್ಯತಂತ್ರದ ಪ್ರಮುಖ ಕೇಂದ್ರ. ಅಲ್ಲಿನ ಸ್ವಾತಂತ್ರ್ಯದ ಕೂಗು ಮತ್ತು ಸಶಸ್ತ್ರ ಬಂಡಾಯವು ಪಾಕಿಸ್ತಾನದ ಸರ್ಕಾರದ ಮೇಲೆ ಭಾರಿ ಒತ್ತಡವನ್ನು ಹೇರುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ವಿಷಯವು ಪಾಕಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಆಡಳಿತ ವೈಫಲ್ಯದ ಬಗ್ಗೆ ಚರ್ಚೆಗೆ ಕಾರಣವಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!