AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜರ್​ಬೈಜಾನ್, ಅರ್ಮೇನಿಯಾ ಗಡಿ ಸಂಘರ್ಷ: ಏನಿದು ನಾಗೋರ್ನೋ-ಕರಾಬಖ್​​ ವಿವಾದ?

ಮಂಗಳವಾರ ಮುಂಜಾನೆ ಭುಗಿಲೆದ್ದ ಘರ್ಷಣೆಗಳ ಬಗ್ಗೆ ಅರ್ಮೇನಿಯಾ ಮತ್ತು ಅಜರ್​ಬೈಜಾನ್ ಪರಸ್ಪರ ಆರೋಪ ಮಾಡಿವೆ. ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನ್ಯಾನ್ ಪ್ರಕಾರ, ದೇಶದ 49 ಸೈನಿಕರು

ಅಜರ್​ಬೈಜಾನ್, ಅರ್ಮೇನಿಯಾ ಗಡಿ ಸಂಘರ್ಷ: ಏನಿದು ನಾಗೋರ್ನೋ-ಕರಾಬಖ್​​ ವಿವಾದ?
ಅಜರ್​ಬೈಜಾನ್, ಅರ್ಮೇನಿಯಾ ಗಡಿ ಸಂಘರ್ಷ
TV9 Web
| Edited By: |

Updated on:Sep 16, 2022 | 11:20 PM

Share

ಅರ್ಮೇನಿಯಾ (Armenia) ಮತ್ತು ಅಜರ್​ಬೈಜಾನ್ (Azerbaijan) ನಡುವೆ ವಿವಾದಿತ ನಾಗೋರ್ನೊ-ಕರಾಬಖ್ ಪ್ರದೇಶದ (Nagorno-Karabakh)ಗಡಿ ಸಂಘರ್ಷ ಮಂಗಳವಾರ ಪ್ರಾರಂಭವಾಗಿದ್ದು, 99 ಯೋಧರು ಸಾವಿಗೀಡಾಗಿದ್ದಾರೆ. ಅರ್ಮೇನಿಯಾದ 49 ಸೈನಿಕರು ಹತರಾಗಿದ್ದು ಅಜರ್​ಬೈಜಾನ್ 50 ಯೋಧರನ್ನು ಕಳೆದುಕೊಂಡಿದೆ. ಅರ್ಮೇನಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಅರ್ಮೇನಿಯನ್ ಪ್ರದೇಶದ ಅನೇಕ ವಿಭಾಗಗಳಲ್ಲಿ ಅಜರ್​ಬೈಜಾನ್ ಪಡೆಗಳು ಫಿರಂಗಿ ದಾಳಿ ಮತ್ತು ಡ್ರೋನ್ ದಾಳಿಯನ್ನು ಸಡಿಲಿಸುವುದರೊಂದಿಗೆ ಮಧ್ಯರಾತ್ರಿಯ ನಂತರ ದಾಳಿ ಶುರುವಾಗಿದೆ. ಹಗಲಿನಲ್ಲಿ ಶೆಲ್ ದಾಳಿ ಕಡಿಮೆ. ಆದರೆ ಅಜರ್​ಬೈಜಾನ್ ಪಡೆಗಳು ಅರ್ಮೇನಿಯನ್ ಪ್ರದೇಶಕ್ಕೆ ಮುನ್ನಡೆಯಲು ಪ್ರಯತ್ನಿಸುತ್ತಿವೆ ಎಂದು ಅದು ಹೇಳಿದೆ. 2020 ರ ಯುದ್ಧದ ನಂತರ ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಇದು ಅತ್ಯಂತ ಗಂಭೀರವಾದುದು ಎಂದು ಹೇಳಲಾಗುತ್ತದೆ.

ಈ ಪ್ರದೇಶದಲ್ಲಿ ಇದೀಗ ಏನು ನಡೆಯುತ್ತಿದೆ?

ಮಂಗಳವಾರ ಮುಂಜಾನೆ ಭುಗಿಲೆದ್ದ ಘರ್ಷಣೆಗಳ ಬಗ್ಗೆ ಅರ್ಮೇನಿಯಾ ಮತ್ತು ಅಜರ್​ಬೈಜಾನ್ ಪರಸ್ಪರ ಆರೋಪ ಮಾಡಿವೆ. ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನ್ಯಾನ್ ಪ್ರಕಾರ, ದೇಶದ 49 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಏತನ್ಮಧ್ಯೆ, ತಮ್ಮ ಕಡೆಯಿಂದ 50 ಜನರು ಸಾವನ್ನಪ್ಪಿದ್ದಾರೆ ಎಂದು ಅಜೆರ್ಬೈಜಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಅಜರ್​ಬೈಜಾನ್ ಪಡೆಗಳು ಗಡಿಯಾಚೆಗಿನ ದಾಳಿಯನ್ನು ಪ್ರಾರಂಭಿಸಿದ ನಂತರ ಸಂಘರ್ಷ ಪ್ರಾರಂಭವಾದವು ಎಂದು ಅರ್ಮೇನಿಯಾ ಹೇಳಿದೆ. ದಾಳಿಯ ಸಂದರ್ಭದಲ್ಲಿ ಇತರ ಕಡೆಯಿಂದ ಮೋರ್ಟಾರ್‌ಗಳು, ಡ್ರೋನ್‌ಗಳು, ಫಿರಂಗಿಗಳು ಮತ್ತು ದೊಡ್ಡ ಕ್ಯಾಲಿಬರ್ ರೈಫಲ್‌ಗಳನ್ನು ಬಳಸಲಾಗಿದೆ ಎಂದು ಅರ್ಮೇನಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ತೀವ್ರವಾದ ದಾಳಿ ಮುಂದುವರಿದಿದೆ. ಅಜರ್​ಬೈಜಾನ್ ಕಡೆಯಿಂದ ದೊಡ್ಡ ಪ್ರಮಾಣದ ಪ್ರಚೋದನೆಯ ಪರಿಣಾಮವಾಗಿ ದಾಳಿ ಪ್ರಾರಂಭವಾಯಿತು. ಅರ್ಮೇನಿಯಾದ ಸಶಸ್ತ್ರ ಪಡೆಗಳು  ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಪ್ರಾರಂಭಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ

ಏತನ್ಮಧ್ಯೆ, ಅಜರ್​ಬೈಜಾನ್ ತನ್ನ ಹಲವಾರು ಪೋಸ್ಟ್‌ಗಳು ಅರ್ಮೇನಿಯನ್ ಕಡೆಯಿಂದ ಶೆಲ್ ದಾಳಿಗೆ ನಾಶವಾಗಿದೆ ಎಂದು ಹೇಳಿದೆ. ರಾಯಿಟರ್ಸ್ ವರದಿಯ ಪ್ರಕಾರ, ಅರ್ಮೇನಿಯನ್ ಪಡೆಗಳು ಸೋಮವಾರ ರಾತ್ರಿಯಿಂದ ಗಡಿಯಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳು ಮತ್ತು ಗುಪ್ತಚರ ಚಟುವಟಿಕೆಗಳನ್ನು ನಡೆಸಿವೆ ಎಂದು ಅಜರ್​ಬೈಜಾನ್ ಪಡೆ ಹೇಳಿದೆ.

ವಿಶ್ವ ನಾಯಕರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಈ ಉದ್ವಿಗ್ನತೆಯ ಹೊತ್ತಲ್ಲಿ ವಿಶ್ವ ನಾಯಕರು ಈ ಪ್ರದೇಶದಲ್ಲಿ ಶಾಂತಿಗಾಗಿ ಕರೆ ನೀಡಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಅಜರ್​ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಮತ್ತು ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನ್ಯಾನ್ ಅವರೊಂದಿಗೆ ಈ ಪ್ರದೇಶದಲ್ಲಿನ ಸಂಘರ್ಷದ ಬಗ್ಗೆ ತಮ್ಮ ಕಳವಳವನ್ನು ತಿಳಿಸಲು ಕರೆ ಮಾಡಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು  ಕದನ ವಿರಾಮಕ್ಕೆ ಕರೆ ನೀಡಿದರು. ಏತನ್ಮಧ್ಯೆ,  ಅರ್ಮೇನಿಯಾದ ಮಿತ್ರರಾಷ್ಟ್ರವಾಗಿರುವ ರಷ್ಯಾ, ಮಾಸ್ಕೋದಲ್ಲಿ ಕದನ ವಿರಾಮ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಏನಿದು ವಿವಾದ?

1990 ರ ದಶಕದಲ್ಲಿ ಮತ್ತು 2020ರಲ್ಲಿ ಅರ್ಮೇನಿಯಾ ಮತ್ತು ಅಜರ್​ಬೈಜಾನ್ ನಗೋರ್ನೊ-ಕರಾಬಖ್ ಪ್ರದೇಶದ ಮೇಲೆ ಎರಡು ಯುದ್ಧಗಳನ್ನು ನಡೆಸಿವೆ.  ಈ ಪ್ರದೇಶವು ಅಜರ್​ಬೈಜಾನ್ ಪ್ರದೇಶದ ಭಾಗವಾಗಿ ಅಂತರಾಷ್ಟ್ರೀಯ ಶಕ್ತಿಗಳಿಂದ ಗುರುತಿಸಲ್ಪಟ್ಟಿದೆಯಾದರೂ, ಈ ಪ್ರದೇಶದ ಹೆಚ್ಚಿನ ಜನಸಂಖ್ಯೆಯು ಅರ್ಮೇನಿಯನ್ನರಾಗಿದ್ದಾರೆ. ಎರಡೂ ದೇಶಗಳು ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ ಪ್ರದೇಶದ ಮೇಲೆ ಸಂಘರ್ಷ ನಡೆಯಿತು. ರಾಯಿಟರ್ಸ್ ವರದಿಯ ಪ್ರಕಾರ, ಅರ್ಮೇನಿಯನ್ನರು ಅಜರ್​ಬೈಜಾನ್ ಪ್ರದೇಶದಿಂದ ಗುರುತಿಸಲ್ಪಟ್ಟಿದ್ದರೂ ಸಹ ನಾಗೋರ್ನೊ-ಕರಾಬಖ್ ಪ್ರದೇಶದ ದೊಡ್ಡ ವಿಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಭೂಪ್ರದೇಶದಲ್ಲಿರುವ ಅರ್ಮೇನಿಯನ್ನರು ಅರ್ಮೇನಿಯಾವನ್ನು ಸೇರಲು ಬಯಸುತ್ತಾರೆ ಅಥವಾ ಅಜರ್​ಬೈಜಾನ್​​ನಿಂದ  ಪ್ರತ್ಯೇಕಗೊಳ್ಳಲು ಬಯಸುತ್ತಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

2020ರಲ್ಲಿ, ಉಭಯ ದೇಶಗಳು ಆರು ವಾರಗಳ ಕಾಲ ಯುದ್ಧದಲ್ಲಿ ಹೋರಾಡಿದವು. ಈ ಯುದ್ಧದಲ್ಲಿ  5,000 ಕ್ಕೂ ಹೆಚ್ಚು ಜನರು ಹತರಾದರು.

Published On - 7:35 am, Thu, 15 September 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?