AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wood Satellite: ಲಿಗ್ನೋಸ್ಯಾಟ್; ಲೋಹವಲ್ಲ, ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್; ಇದು ಗೇಮ್ ಚೇಂಜರ್ ಎನ್ನುತ್ತಾರೆ ವಿಜ್ಞಾನಿಗಳು

World's first ever wooden satellite: ಜಪಾನ್​ನ ಕ್ಯೋಟೋ ಯೂನಿವರ್ಸಿಟಿಯ ವಿಜ್ಞಾನಿಗಳು ಮ್ಯಾಗ್ನೋಲಿಯಾ ಎಂಬ ಮರದ ತುಂಡುಗಳನ್ನು ಬಳಸಿ ಪುಟ್ಟ ಸೆಟಿಲೈಟ್ ನಿರ್ಮಿಸಿದ್ದಾರೆ. ಸಂಪೂರ್ಣ ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್ ಎನಿಸಿದೆ ಲಿಗ್ನೋಸ್ಯಾಟ್. ಮಾಮೂಲಿಯ ಸೆಟಿಲೈಟ್​ಗಳನ್ನು ಅಲೂಮಿನಿಯಂ ಲೋಹದಿಂದ ನಿರ್ಮಿಸಲಾಗುತ್ತದೆ. ಇವು ಭೂಮಿಯ ವಾತಾವರಣದ ಮೇಲೆ ಅಲೂಮಿನಾ ಕಣಗಳಾಗಿ ಉಳಿದು ಪರಿಸರಕ್ಕೆ ಧಕ್ಕೆ ಮಾಡಬಹುದು.

Wood Satellite: ಲಿಗ್ನೋಸ್ಯಾಟ್; ಲೋಹವಲ್ಲ, ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್; ಇದು ಗೇಮ್ ಚೇಂಜರ್ ಎನ್ನುತ್ತಾರೆ ವಿಜ್ಞಾನಿಗಳು
ಸೆಟಿಲೈಟ್ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2024 | 5:18 PM

Share

ವಾಷಿಂಗ್ಟನ್, ಫೆಬ್ರುವರಿ 22: ಜಪಾನ್ ಮತ್ತು ಅಮೆರಿಕದ ವಿಜ್ಞಾನಿಗಳು ಸೇರಿ ಲಿಗ್ನೋಸ್ಯಾಟ್ (Lignosat) ಎಂಬ ಉಪಗ್ರಹ ತಯಾರಿಸಿದ್ದು ಉಡಾವಣೆಗೆ ಸಜ್ಜಾಗಿದ್ದಾರೆ. ಒಂದು ಸಣ್ಣ ಕಾಫಿ ಕಪ್ ಗಾತ್ರದ ಈ ಸೆಟಿಲೈಟ್ ತಯಾರಿಕೆಗೆ ಲೋಹ (metal) ಬಳಸಲಾಗಿಲ್ಲ. ಸಂಪೂರ್ಣ ಮರದಿಂದ ತಯಾರಿಸಲಾಗಿದೆ. ಅಂತೆಯೇ, ಮರದಿಂದ ತಯಾರಾದ ವಿಶ್ವದ ಮೊದಲ ಸೆಟಿಲೈಟ್ ಎಂಬ ಹೆಗ್ಗಳಿಗೆ ಇದಕ್ಕೆ ಇದೆ. ಜಪಾನ್​ನ ಕ್ಯೋಟೋ ಯೂನಿವರ್ಸಿಟಿಯ ವಿಜ್ಞಾನಿಗಳು ಮ್ಯಾಗ್ನೋಲಿಯಾ (Magnolia wood) ಎಂಬ ಮರದಿಂದ ಈ ಪುಟ್ಟ ಸೆಟಿಲೈಟ್ ಅನ್ನು ಪ್ರಾಯೋಗಿಕವಾಗಿ ನಿರ್ಮಿಸಿದ್ದಾರೆ. ಮರದಿಂದ ಮಾಡಲಾಗಿದ್ದರೂ ಬಾಹ್ಯಾಕಾಶದಲ್ಲಿ ಈ ಮರ ಹಾಳಾಗುವುದಿಲ್ಲ ಎಂಬುದು ಹಲವು ಪ್ರಯೋಗ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ.

ಮರದಿಂದ ಸೆಟಿಲೈಟ್ ತಯಾರಿಸಬೇಕೆಂದು ವಿಜ್ಞಾನಿಗಳು ಹೊರಟಾಗ ಎಲ್ಲಾ ಜಾತಿಯ ಮರಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು. ಬಾಹ್ಯಾಕಾಶ ವಾತಾವರಣದಲ್ಲಿ ಇವುಗಳನ್ನು ಪರೀಕ್ಷಿಸಲಾಯಿತು. ಭೂಮಿಯ ಕೆಳ ಕಕ್ಷೆಯಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ವಿವಿಧ ಮರಗಳ ಸ್ಯಾಂಪಲ್​ಗಳನ್ನು ಕಳುಹಿಸಿ ಒಂದು ವರ್ಷ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಮ್ಯಾಗ್ನೋಲಿಯಾ ಮರ ಹೆಚ್ಚು ಕ್ಷಮತಾ ಗುಣ ಹೊಂದಿದ್ದು ಗೊತ್ತಾದ ಕಾರಣ ಅದರಿಂದಲೇ ಸೆಟಿಲೈಟ್ ತಯಾರಿಸಲಾಗಿದೆ.

ಇದನ್ನೂ ಓದಿ: ಅಮೆರಿಕದ ‘ದರ್ಪ’ ಶಕ್ತಿ; ಬೇಡದ ಸರ್ಕಾರಗಳ ಉರುಳಿಸಲು ಹೊಸ ಮೀಡಿಯಾ ಅಸ್ತ್ರಗಳು; ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ

ಮರದ ಸೆಟಿಲೈಟ್​ನಿಂದ ಏನು ಪ್ರಯೋಜನ?

ಬಾಹ್ಯಾಕಾಶಕ್ಕೆ ಮನುಷ್ಯ ನಿರ್ಮಿತ ವಸ್ತುಗಳು ದಿನನಿತ್ಯ ಹೋಗುತ್ತಲೇ ಇರುತ್ತವೆ. ಒಂದಲ್ಲ ಒಂದು ದೇಶದಲ್ಲಿ ನಿತ್ಯ ಸೆಟಿಲೈಟ್ ಉಡಾವಣೆ ಇದ್ದೇ ಇರುತ್ತದೆ. ಭೂಮಿಯ ಕಕ್ಷೆಯಲ್ಲಿ ಸುತ್ತುವ ಈ ಉಪಗ್ರಹಗಳು ನಿರ್ದಿಷ್ಟ ಜೀವಿತಾವಧಿ ಅಥವಾ ಕಾರ್ಯಾವಧಿ ಹೊಂದಿರುತ್ತವೆ. ಆ ಬಳಿಕ ಅವು ಬಾಹ್ಯಾಕಾಶದಲ್ಲಿ ಉಳಿದುಹೋಗುತ್ತವೆ. ಅಥವಾ ಚೂರುಚೂರುಗಳಾಗಿ ಭೂಮಿಗೆ ಬಂದು ಬೀಳುತ್ತವೆ.

ಐವತ್ತರ ದಶಕದಲ್ಲಿ ಮನುಷ್ಯರಿಂದ ಬಾಹ್ಯಾಕಾಶ ಪ್ರಯೋಗಗಳು ಶುರುವಾಗಿವೆ. ಅಲ್ಲಿಂದ ಈವರೆಗೆ 50,000 ಟನ್​ಗಳಷ್ಟು ವಸ್ತುಗಳು ಆಗಸಕ್ಕೆ ಹೋಗಿವೆ. ಸಾಕಷ್ಟು ಬಾಹ್ಯಾಕಾಶ ಕಸ ನಿರ್ಮಾಣವಾಗಿದೆ. ನಾಸಾ ಪ್ರಕಾರ ಒಂದು ಮಿಲಿಮೀಟರ್​ಗಿಂತ ಸಣ್ಣದಿರುವ 10 ಕೋಟಿ ವಸ್ತುಗಳು ವಾತಾವರಣದಲ್ಲಿ ಸೇರಿವೆ. 10 ಸೆಂಟಿಮೀಟರ್​ಗೂ ದೊಡ್ಡದಾದ ವಸ್ತುಗಳ ಸಂಖ್ಯೆ 25,000ದಷ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಏರ್ ಫೋರ್ಸ್ ಒನ್ ಹತ್ತುವಾಗ ಎರಡು ಬಾರಿ ಮುಗ್ಗರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಹೆಚ್ಚಿನ ಸೆಟಿಲೈಟ್​ಗಳು ಅಲೂಮಿನಿಯಮ್ ಲೋಹದಿಂದ ನಿರ್ಮಿತವಾಗಿರುತ್ತವೆ. ಇವು ಭೂಮಿಯ ವಾತಾವರಣಕ್ಕೆ ಮರಳಿದಾಗ ಸುಟ್ಟು, ಸಣ್ಣ ಅಲೂಮಿನಿಯಾ ಕಣಗಳು ನಿರ್ಮಿತವಾಗುತ್ತವೆ. ಈ ಬಾಹ್ಯಾಕಾಶ ಕಸಗಳು ಭೂಮಿಯ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಅಪಾಯಕಾರಿಯಾಗಬಲ್ಲುವು. ಓಝೋನ್ ಪದರವನ್ನು ನಾಶ ಮಾಡಬಲ್ಲುವು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಜಪಾನ್ ವಿಜ್ಞಾನಿಗಳು ನಿರ್ಮಿಸಿರುವ ಮರದ ಸೆಟಿಲೈಟ್ ಈ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಎನಿಸಬಹುದು. ಈ ಮರದ ಸೆಟಿಲೈಟ್ ಭೂಮಿಗೆ ಪತನವಾದರೆ, ಹಾದಿಯಲ್ಲೇ ಸಂಪೂರ್ಣ ಸುಟ್ಟುಹೋಗಿ ಬೂದಿಯಾಗಿ ಬೀಳುತ್ತದೆ. ಬಾಹ್ಯಾಕಾಶದಲ್ಲಿ ಕಸವಾಗಿ ಉಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು