Wood Satellite: ಲಿಗ್ನೋಸ್ಯಾಟ್; ಲೋಹವಲ್ಲ, ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್; ಇದು ಗೇಮ್ ಚೇಂಜರ್ ಎನ್ನುತ್ತಾರೆ ವಿಜ್ಞಾನಿಗಳು

World's first ever wooden satellite: ಜಪಾನ್​ನ ಕ್ಯೋಟೋ ಯೂನಿವರ್ಸಿಟಿಯ ವಿಜ್ಞಾನಿಗಳು ಮ್ಯಾಗ್ನೋಲಿಯಾ ಎಂಬ ಮರದ ತುಂಡುಗಳನ್ನು ಬಳಸಿ ಪುಟ್ಟ ಸೆಟಿಲೈಟ್ ನಿರ್ಮಿಸಿದ್ದಾರೆ. ಸಂಪೂರ್ಣ ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್ ಎನಿಸಿದೆ ಲಿಗ್ನೋಸ್ಯಾಟ್. ಮಾಮೂಲಿಯ ಸೆಟಿಲೈಟ್​ಗಳನ್ನು ಅಲೂಮಿನಿಯಂ ಲೋಹದಿಂದ ನಿರ್ಮಿಸಲಾಗುತ್ತದೆ. ಇವು ಭೂಮಿಯ ವಾತಾವರಣದ ಮೇಲೆ ಅಲೂಮಿನಾ ಕಣಗಳಾಗಿ ಉಳಿದು ಪರಿಸರಕ್ಕೆ ಧಕ್ಕೆ ಮಾಡಬಹುದು.

Wood Satellite: ಲಿಗ್ನೋಸ್ಯಾಟ್; ಲೋಹವಲ್ಲ, ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್; ಇದು ಗೇಮ್ ಚೇಂಜರ್ ಎನ್ನುತ್ತಾರೆ ವಿಜ್ಞಾನಿಗಳು
ಸೆಟಿಲೈಟ್ ಸಾಂದರ್ಭಿಕ ಚಿತ್ರ
Follow us
|

Updated on: Feb 22, 2024 | 5:18 PM

ವಾಷಿಂಗ್ಟನ್, ಫೆಬ್ರುವರಿ 22: ಜಪಾನ್ ಮತ್ತು ಅಮೆರಿಕದ ವಿಜ್ಞಾನಿಗಳು ಸೇರಿ ಲಿಗ್ನೋಸ್ಯಾಟ್ (Lignosat) ಎಂಬ ಉಪಗ್ರಹ ತಯಾರಿಸಿದ್ದು ಉಡಾವಣೆಗೆ ಸಜ್ಜಾಗಿದ್ದಾರೆ. ಒಂದು ಸಣ್ಣ ಕಾಫಿ ಕಪ್ ಗಾತ್ರದ ಈ ಸೆಟಿಲೈಟ್ ತಯಾರಿಕೆಗೆ ಲೋಹ (metal) ಬಳಸಲಾಗಿಲ್ಲ. ಸಂಪೂರ್ಣ ಮರದಿಂದ ತಯಾರಿಸಲಾಗಿದೆ. ಅಂತೆಯೇ, ಮರದಿಂದ ತಯಾರಾದ ವಿಶ್ವದ ಮೊದಲ ಸೆಟಿಲೈಟ್ ಎಂಬ ಹೆಗ್ಗಳಿಗೆ ಇದಕ್ಕೆ ಇದೆ. ಜಪಾನ್​ನ ಕ್ಯೋಟೋ ಯೂನಿವರ್ಸಿಟಿಯ ವಿಜ್ಞಾನಿಗಳು ಮ್ಯಾಗ್ನೋಲಿಯಾ (Magnolia wood) ಎಂಬ ಮರದಿಂದ ಈ ಪುಟ್ಟ ಸೆಟಿಲೈಟ್ ಅನ್ನು ಪ್ರಾಯೋಗಿಕವಾಗಿ ನಿರ್ಮಿಸಿದ್ದಾರೆ. ಮರದಿಂದ ಮಾಡಲಾಗಿದ್ದರೂ ಬಾಹ್ಯಾಕಾಶದಲ್ಲಿ ಈ ಮರ ಹಾಳಾಗುವುದಿಲ್ಲ ಎಂಬುದು ಹಲವು ಪ್ರಯೋಗ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ.

ಮರದಿಂದ ಸೆಟಿಲೈಟ್ ತಯಾರಿಸಬೇಕೆಂದು ವಿಜ್ಞಾನಿಗಳು ಹೊರಟಾಗ ಎಲ್ಲಾ ಜಾತಿಯ ಮರಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು. ಬಾಹ್ಯಾಕಾಶ ವಾತಾವರಣದಲ್ಲಿ ಇವುಗಳನ್ನು ಪರೀಕ್ಷಿಸಲಾಯಿತು. ಭೂಮಿಯ ಕೆಳ ಕಕ್ಷೆಯಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ವಿವಿಧ ಮರಗಳ ಸ್ಯಾಂಪಲ್​ಗಳನ್ನು ಕಳುಹಿಸಿ ಒಂದು ವರ್ಷ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಮ್ಯಾಗ್ನೋಲಿಯಾ ಮರ ಹೆಚ್ಚು ಕ್ಷಮತಾ ಗುಣ ಹೊಂದಿದ್ದು ಗೊತ್ತಾದ ಕಾರಣ ಅದರಿಂದಲೇ ಸೆಟಿಲೈಟ್ ತಯಾರಿಸಲಾಗಿದೆ.

ಇದನ್ನೂ ಓದಿ: ಅಮೆರಿಕದ ‘ದರ್ಪ’ ಶಕ್ತಿ; ಬೇಡದ ಸರ್ಕಾರಗಳ ಉರುಳಿಸಲು ಹೊಸ ಮೀಡಿಯಾ ಅಸ್ತ್ರಗಳು; ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ

ಮರದ ಸೆಟಿಲೈಟ್​ನಿಂದ ಏನು ಪ್ರಯೋಜನ?

ಬಾಹ್ಯಾಕಾಶಕ್ಕೆ ಮನುಷ್ಯ ನಿರ್ಮಿತ ವಸ್ತುಗಳು ದಿನನಿತ್ಯ ಹೋಗುತ್ತಲೇ ಇರುತ್ತವೆ. ಒಂದಲ್ಲ ಒಂದು ದೇಶದಲ್ಲಿ ನಿತ್ಯ ಸೆಟಿಲೈಟ್ ಉಡಾವಣೆ ಇದ್ದೇ ಇರುತ್ತದೆ. ಭೂಮಿಯ ಕಕ್ಷೆಯಲ್ಲಿ ಸುತ್ತುವ ಈ ಉಪಗ್ರಹಗಳು ನಿರ್ದಿಷ್ಟ ಜೀವಿತಾವಧಿ ಅಥವಾ ಕಾರ್ಯಾವಧಿ ಹೊಂದಿರುತ್ತವೆ. ಆ ಬಳಿಕ ಅವು ಬಾಹ್ಯಾಕಾಶದಲ್ಲಿ ಉಳಿದುಹೋಗುತ್ತವೆ. ಅಥವಾ ಚೂರುಚೂರುಗಳಾಗಿ ಭೂಮಿಗೆ ಬಂದು ಬೀಳುತ್ತವೆ.

ಐವತ್ತರ ದಶಕದಲ್ಲಿ ಮನುಷ್ಯರಿಂದ ಬಾಹ್ಯಾಕಾಶ ಪ್ರಯೋಗಗಳು ಶುರುವಾಗಿವೆ. ಅಲ್ಲಿಂದ ಈವರೆಗೆ 50,000 ಟನ್​ಗಳಷ್ಟು ವಸ್ತುಗಳು ಆಗಸಕ್ಕೆ ಹೋಗಿವೆ. ಸಾಕಷ್ಟು ಬಾಹ್ಯಾಕಾಶ ಕಸ ನಿರ್ಮಾಣವಾಗಿದೆ. ನಾಸಾ ಪ್ರಕಾರ ಒಂದು ಮಿಲಿಮೀಟರ್​ಗಿಂತ ಸಣ್ಣದಿರುವ 10 ಕೋಟಿ ವಸ್ತುಗಳು ವಾತಾವರಣದಲ್ಲಿ ಸೇರಿವೆ. 10 ಸೆಂಟಿಮೀಟರ್​ಗೂ ದೊಡ್ಡದಾದ ವಸ್ತುಗಳ ಸಂಖ್ಯೆ 25,000ದಷ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಏರ್ ಫೋರ್ಸ್ ಒನ್ ಹತ್ತುವಾಗ ಎರಡು ಬಾರಿ ಮುಗ್ಗರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಹೆಚ್ಚಿನ ಸೆಟಿಲೈಟ್​ಗಳು ಅಲೂಮಿನಿಯಮ್ ಲೋಹದಿಂದ ನಿರ್ಮಿತವಾಗಿರುತ್ತವೆ. ಇವು ಭೂಮಿಯ ವಾತಾವರಣಕ್ಕೆ ಮರಳಿದಾಗ ಸುಟ್ಟು, ಸಣ್ಣ ಅಲೂಮಿನಿಯಾ ಕಣಗಳು ನಿರ್ಮಿತವಾಗುತ್ತವೆ. ಈ ಬಾಹ್ಯಾಕಾಶ ಕಸಗಳು ಭೂಮಿಯ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಅಪಾಯಕಾರಿಯಾಗಬಲ್ಲುವು. ಓಝೋನ್ ಪದರವನ್ನು ನಾಶ ಮಾಡಬಲ್ಲುವು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಜಪಾನ್ ವಿಜ್ಞಾನಿಗಳು ನಿರ್ಮಿಸಿರುವ ಮರದ ಸೆಟಿಲೈಟ್ ಈ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಎನಿಸಬಹುದು. ಈ ಮರದ ಸೆಟಿಲೈಟ್ ಭೂಮಿಗೆ ಪತನವಾದರೆ, ಹಾದಿಯಲ್ಲೇ ಸಂಪೂರ್ಣ ಸುಟ್ಟುಹೋಗಿ ಬೂದಿಯಾಗಿ ಬೀಳುತ್ತದೆ. ಬಾಹ್ಯಾಕಾಶದಲ್ಲಿ ಕಸವಾಗಿ ಉಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಬಗ್ಗೆ ವಿನಯ್ ರಾಜ್​ಕುಮಾರ್ ಮಾತು
ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಬಗ್ಗೆ ವಿನಯ್ ರಾಜ್​ಕುಮಾರ್ ಮಾತು
ತನಗೆ ಕಚ್ಚಿದ್ದ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ
ತನಗೆ ಕಚ್ಚಿದ್ದ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ
ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕ
ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕ
ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
Daily Devotional: ದೇವರಿಗೆ ಅಲಂಕರಿಸುವ ಆಭರಣಗಳು ಹೇಗಿರಬೇಕು? ಈ ವಿಡಿಯೋ ನ
Daily Devotional: ದೇವರಿಗೆ ಅಲಂಕರಿಸುವ ಆಭರಣಗಳು ಹೇಗಿರಬೇಕು? ಈ ವಿಡಿಯೋ ನ
ಶ್ರಾವಣ ಮಾಸದ ಕೊನೆ ವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಶ್ರಾವಣ ಮಾಸದ ಕೊನೆ ವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶ್ರಾವಣ ಮಾಸದ ಭಾನುವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶ್ರಾವಣ ಮಾಸದ ಭಾನುವಾರದ ದಿನ ಭವಿಷ್ಯ ತಿಳಿಯಿರಿ
ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್
ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್
ಪರೀಕ್ಷೆ ಮುಂದೂಡಿ, ಇಲ್ಲ ದಯಾಮರಣಕ್ಕೆ ಅವಕಾಶ ಕೊಡಿ: ಕೆಎಎಸ್ ಆಕಾಂಕ್ಷಿ
ಪರೀಕ್ಷೆ ಮುಂದೂಡಿ, ಇಲ್ಲ ದಯಾಮರಣಕ್ಕೆ ಅವಕಾಶ ಕೊಡಿ: ಕೆಎಎಸ್ ಆಕಾಂಕ್ಷಿ
ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಿದ್ದೇವೆ ಅಂತ ಬಾಯಲ್ಲಿ ಹೇಳಿದರೆ ಸಾಲದು!
ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಿದ್ದೇವೆ ಅಂತ ಬಾಯಲ್ಲಿ ಹೇಳಿದರೆ ಸಾಲದು!