AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಹತ್ಯೆಗೆ ಬಳಸಲಾದ ಆಧುನಿಕ ಮೆಷಿನ್​ ಗನ್​ ಇದೇ!

ಕಳೆದ ಕೆಲವು ದಿನಗಳ ಹಿಂದೆ ಹತ್ಯೆಯಾಗಿದ್ದ ಇರಾನ್​ನ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆರನ್ನು ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್ ಮುಖಾಂತರ ಕೊಲೆ​ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮೊಹ್ಸೆನ್ ಫಕ್ರಿಜಾಡೆ ಇರಾನ್​ ರಾಜಧಾನಿ ತೆಹ್ರಾನ್​ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್​ ಬಳಸಿ ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಇರಾನ್​ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಹತ್ಯೆಗೆ ಬಳಸಲಾದ ಆಧುನಿಕ ಮೆಷಿನ್​ ಗನ್​ ಇದೇ!
ವಿಜ್ಞಾನಿ ಹತ್ಯೆಗೆ ಸ್ಯಾಟಲೈಟ್ ನಿಯಂತ್ರಿತ ಮೆಷಿನ್​ ಗನ್​ ಬಳಕೆ
Skanda
| Edited By: |

Updated on: Dec 07, 2020 | 4:17 PM

Share

ಕಳೆದ ಕೆಲವು ದಿನಗಳ ಹಿಂದೆ ಹತ್ಯೆಯಾಗಿದ್ದ ಇರಾನ್​ನ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆರನ್ನು ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್ ಮುಖಾಂತರ ಕೊಲೆ​ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಮೊಹ್ಸೆನ್ ಫಕ್ರಿಜಾಡೆ ಇರಾನ್​ ರಾಜಧಾನಿ ತೆಹ್ರಾನ್​ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಯಾಟಲೈಟ್​ ನಿಯಂತ್ರಿತ ಮೆಷಿನ​ ಗನ್​ ಬಳಸಿ ಇವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಅಂದ ಹಾಗೆ, ದಾಳಿಯಲ್ಲಿ ಬಳಕೆಯಾಗಿದ್ದ ಗನ್​ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಥವಾ ಆರ್ಟಿಫೀಷಿಯಲ್​ ಇಂಟಲಿಜೆನ್ಸ್ ಬಳಕೆಯಾಗಿತ್ತು. ಈ ಮೆಷಿನ್​ ಗನ್​ ನೇರವಾಗಿ ಸ್ಯಾಟಲೈಟ್​ನಿಂದ ನಿಯಂತ್ರಣಕ್ಕೆ ಒಳಪಟ್ಟಿತ್ತು. ಗನ್​ನಿಂದ ಬರೋಬ್ಬರಿ 13 ಗುಂಡು ಹಾರಿದ್ದು ದಾಳಿಯಲ್ಲಿ ಮೊಹ್ಸೆನ್ ತೀವ್ರವಾಗಿ ಗಾಯಗೊಂಡಿದ್ದರು. ಈ ಗನ್​ನಿಂದ ಇರಿಸಲಾದ ಗುರಿ ಎಷ್ಟು ಕರಾರುವಕ್ಕಾಗಿತ್ತೆಂದರೆ, ಮೊಹ್ಸೆನ್ ಪಕ್ಕದಲ್ಲೇ ಕೂತಿದ್ದ ಅವರ ಹೆಂಡತಿಗೆ ಒಂದೇ ಒಂದು ಬುಲೆಟ್​ ಕೂಡ ತಗುಲಿರಲಿಲ್ಲ. ಹೀಗಾಗಿ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ನಡುವೆ, ಮೊಹ್ಸೆನ್ ​ಹತ್ಯೆ ಹಿಂದೆ ಇಸ್ರೇಲ್​ ಕೈವಾಡವಿದೆ ಎಂದು ಇರಾನ್​ ಅಧ್ಯಕ್ಷ ಹಸನ್​ ರೋಹಾನಿ ಆರೋಪಿಸಿದ್ದಾರೆ. 2000 ಇಸವಿಯಲ್ಲಿ ಮೊಹ್ಸೆನ್ ಸೇನಾ ಪರಮಾಣು ಕಾರ್ಯಕ್ರಮದ ರೂವಾರಿಯಾಗಿದ್ದರು ಎಂಬುದು ಇಸ್ರೇಲ್​ ಆರೋಪವಾಗಿತ್ತು. ಇದೇ ಕಾರಣಕ್ಕೆ ಇಸ್ರೇಲ್​ಅವರನ್ನು ಹತ್ಯೆ ಮಾಡಿದೆ ಎಂಬ ಮಾತು ಕೇಳಿಬಂದಿದೆ.

ವಿಮಾನ ಆಯ್ತು, ಈಗ ತನ್ನದೇ ಹಡಗು ಸ್ಫೋಟಿಸಿದ ಇರಾನ್: 19 ಯೋಧರ ದುರ್ಮರಣ!

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ