AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್

Five layers of India AI Stack: ಡಾವೊಸ್ ಸಮಿಟ್​ನಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದ ಎಐ ಬೆಳವಣಿಗೆಯಲ್ಲಿ ಐದು ಎಳೆಗಳನ್ನು ವಿವರಿಸಿದ್ದಾರೆ. ಅಪ್ಲಿಕೇಶನ್ ಲೇಯರ್, ಮಾಡಲ್ ಲೇಯರ್, ಚಿಪ್ ಲೇಯರ್, ಡಾಟಾ ಸೆಂಟರ್ ಲೇಯರ್, ಎನರ್ಜಿ ಲೇಯರ್ ಈ ಐದರಲ್ಲೂ ಭಾರತ ಪ್ರಗತಿ ಕಾಣುತ್ತಿದೆ. ಜಾಗತಿಕವಾಗಿ ಭಾರತವು ಎಐ ಸಿದ್ಧತೆಯಲ್ಲಿ ಮುಂಚೂಣಿ ದೇಶಗಳ ಸಾಲಿನಲ್ಲೇ ಇದೆ ಎಂದು ಸಚಿವರು ಹೇಳಿದ್ದಾರೆ.

ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್
ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 21, 2026 | 5:55 PM

Share

ನವದೆಹಲಿ, ಜನವರಿ 21: ಎಐ ಸಾಮರ್ಥ್ಯದಲ್ಲಿ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರು ಡಾವೊಸ್ ಶೃಂಗಸಭೆಯಲ್ಲಿ (Davos WEF Summit) ವಿವರಿಸಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ 2026 ವೇದಿಕೆಯಲ್ಲಿ ಎಐ ಸಿದ್ಧತೆ (AI Preparedness) ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವ ಎ ವೈಷ್ಣವ್ ಅವರು ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ನಿಯೋಜನೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ವಿಶದಪಡಿಸಿದ್ದಾರೆ.

ಬಹಳ ದೊಡ್ಡದಾದ, ತೀವ್ರ ಗಣಕದ ಅವಶ್ಯಕತೆ ಇರುವ ಮಾಡಲ್​ಗಳ ಬದಲು 20ರಿಂದ 50 ಬಿಲಿಯನ್ ಪ್ಯಾರಾಮೀಟರ್​ಗಳಿರುವ ಸಣ್ಣ ಸಣ್ಣ ಮಾಡಲ್​ಗಳನ್ನು ನಿರ್ಮಿಸಿ ಭಾರತೀಯ ಭಾಷೆಗಳಿಗೆ ತಕ್ಕಂತೆ ರೂಪಿಸಿ ವಿವಿಧ ಸೆಕ್ಟರ್​ಗಳಿಗೆ ಅವುಗಳನ್ನು ನಿಯೋಜಿಸಲಾಗುತ್ತಿದೆ. ಈ ರೀತಿಯಾಗಿ ಎಐನ ಫಲವನ್ನು ಅತಿಹೆಚ್ಚು ಪಡೆಯಲು ಸಾಧ್ಯವಾಗುತ್ತದೆ ಎಂದು ಎ ವೈಷ್ಣವ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಡಬ್ಲ್ಯುಇಎಫ್ ಫೋರಂನ ಸಂವಾದದಲ್ಲಿ ಅಶ್ವಿನಿ ವೈಷ್ಣವ್ ಅವರು ಭಾರತದ ಎಐ ಸಿದ್ಧತೆಯಲ್ಲಿನ ಐದು ಎಳೆಗಳನ್ನು ವಿವರಿಸಿದ್ದಾರೆ.

  1. ಅಪ್ಲಿಕೇಶನ್ ಲೇಯರ್
  2. ಮಾಡಲ್ ಲೇಯರ್
  3. ಚಿಪ್ ಲೇಯರ್
  4. ಡಾಟಾ ಸೆಂಟರ್ ಲೇಯರ್
  5. ಎನರ್ಜಿ ಲೇಯರ್

ಈ ಐದು ಲೇಯರ್​ಗಳಲ್ಲಿ ಭಾರತ ಪ್ರಗತಿ ಕಾಣುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಎಐ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಬಹಳ ಮುಖ್ಯವಾಗಿರುವ ಕಂಪ್ಯೂಟ್ ವ್ಯವಸ್ಥೆಗೆ ಜಿಪಿಯುಗಳು ಅಗತ್ಯ. ಅದಕ್ಕಾಗಿ ಭಾರತದಲ್ಲಿ 38,000 ಜಿಪಿಯುಗಳಿರುವ ಸಾಮಾನ್ಯ ಕಂಪ್ಯೂಟ್ ಫೆಸಿಲಿಟಿ ನಿರ್ಮಿಸಲಾಗುತ್ತಿದೆ. ಇದರಿಂದ ಜಿಪಿಯು ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ಧಾರೆ.

ಇದನ್ನೂ ಓದಿ: ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್​ನಲ್ಲಿ ಪ್ರಹ್ಲಾದ ಜೋಷಿ

ಭಾರತದ ಎಐ ಸ್ಟ್ಯಾಕ್​ನ ಐದು ಲೇಯರ್​ಗಳ ಪರಿಚಯ

1. ಅಪ್ಲಿಕೇಶನ್ ಲೇಯರ್: ಕೃಷಿ, ಹೆಲ್ತ್​ಕೇರ್, ಶಿಕ್ಷಣ, ಆಡಳಿತ, ಉತ್ಪಾದನೆ ಇತ್ಯಾದಿ ವಿವಿಧ ಸೆಕ್ಟರ್​ಗಳಿಗೆ ಎಐ ಅನ್ನು ಸೂಕ್ತವಾಗಿ ಅಳವಡಿಸಲಾಗುತ್ತದೆ. ಜನರು ಮತ್ತು ಉದ್ಯಮಗಳು ಎಐ ಫಲಾನುಭವಿಗಳಾಗುತ್ತಾರೆ.

2. ಮಾಡಲ್ ಲೇಯರ್: ವಿವಿಧ ಎಐ ಮಾಡಲ್​ಗಳನ್ನು ತಯಾರಿಸುವುದು. ಭಾರತೀಯ ಭಾಷೆಗಳು, ಸೆಕ್ಟರ್​ಗಳು ಮತ್ತು ನಿಯಮಾವಳಿಗಳಿಗೆ ಅನುಗುಣವಾದ ಮಾಡಲ್​ಗಳನ್ನು ನಿರ್ಮಿಸಲಾಗುವುದು.

3. ಚಿಪ್ ಲೇಯರ್: ಸಬ್ಸಿಡಿಗಳ ಮೂಲಕ ಬಹಳ ಕಡಿಮೆ ಬೆಲೆಗೆ 38,000ಕ್ಕೂ ಅಧಿಕ ಜಿಪಿಯುಗಳನ್ನು ತಯಾರಿಸಲಾಗುತ್ತದೆ. ಎಐ ಅಭಿವೃದ್ಧಿಯಲ್ಲಿ ತೊಡಗಿರುವವರೆಲ್ಲರಿಗೂ ಈ ಜಿಪಿಯುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು.

4. ಡಾಟಾ ಸೆಂಟರ್ ಲೇಯರ್: ಎಐ ಮಾಡಲ್​ಗಳು, ಡಾಟಾ ಮತ್ತು ಕಂಪ್ಯೂಟ್ ರಿಸೋರ್ಸ್​ಗಳನ್ನು ಹೋಸ್ಟ್ ಮಾಡಲು ಡಾಟಾ ಸೆಂಟರ್ ಬೇಕು. ಈ ಡಾಟಾ ಸೆಂಟರ್​ಗಳನ್ನು ಕೂಲಿಂಗ್ ಮಾಡಲು, ಸಮರ್ಪಕವಾಗಿ ನೀರು ಉಪಯೋಗಿಸಲು ಮತ್ತು ವಿದ್ಯುತ್ ಉಪಯೋಗಿಸಲು ಇನ್ನೋವೇಟಿವ್ ಮಾರ್ಗಗಳನ್ನು ಅನುಸರಿಸಲಾಗುವುದು.

5. ಎನರ್ಜಿ ಲೇಯರ್: ಎಐ ಇನ್​ಫ್ರಾಸ್ಟ್ರಕ್ಚರ್ ಸಮರ್ಪಕವಾಗಿರಬೇಕು. ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಬೇಕು. ಡಾಟಾ ಸೆಂಟರ್ ಹೆಚ್ಚಬೇಕು. ರಿನಿವಬಲ್ ಎನರ್ಜಿ ಹೆಚ್ಚಬೇಕು. ನ್ಯೂಕ್ಲಿಯಾರ್ ಎನರ್ಜಿ ಅಳವಡಿಸಬೇಕು. ಸಣ್ಣ ಸಣ್ಣ ಮಾಡ್ಯುಲಾರ್ ಮತ್ತು ಮೈಕ್ರೋ ರಿಯಾಕ್ಟರ್​ಗಳ ನಿರ್ಮಾಣ, ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್​ಶಿಪ್, ವಿದೇಶೀ ಹೂಡಿಕೆ ಇತ್ಯಾದಿಗೆ ಅನುವು ಮಾಡಿಕೊಡಬಲ್ಲ ಶಾಂತಿ ಕಾಯ್ದೆ ಜಾರಿ ಮಾಡಲಾಗುತ್ತಿದೆ.

ಅಶ್ವಿನಿ ವೈಷ್ಣವ್ ಅವರೊಂದಿಗಿನ ಸಂವಾದದ ವಿಡಿಯೋ ಲಿಂಕ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ