AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ; 7.5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ

Auto Sector: ಆಟೋಮೊಬೈಲ್ ವಿಭಾಗಕ್ಕೆ ಘೋಷಿಸಲಾಗಿರುವ ಈ ಪಿಎಲ್​ಐ ಯೋಜನೆಯು, 2021- 22ನೇ ಸಾಲಿನಲ್ಲಿ ಘೋಷಿಸಲಾಗಿರುವ ಒಟ್ಟಾರೆ ಬಜೆಟ್​ನ ಉತ್ಪಾದನಾ ಪ್ರೋತ್ಸಾಹ ಧನದ ಒಂದು ಭಾಗವಾಗಿದೆ.

ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ; 7.5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ
TV9 Web
| Edited By: |

Updated on:Sep 15, 2021 | 5:27 PM

Share

ದೆಹಲಿ: ಆಟೋಮೊಬೈಲ್ ಕ್ಷೇತ್ರಕ್ಕೆ ಭಾರತ ಸರ್ಕಾರ ಸುಮಾರು 26,000 ಕೋಟಿ ರೂಪಾಯಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (ಪಿಎಲ್​ಐ) ಘೋಷಿಸಿದೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಹೈಡ್ರೋಜನ್ ಇಂಧನ ವಾಹನಗಳ ಉತ್ಪಾದನೆ ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಸುಮಾರು 7.5 ಲಕ್ಷ ಉದ್ಯೋಗಗಳು ಆಟೋ ಸೆಕ್ಟರ್​ನಲ್ಲಿ ಸೃಷ್ಟಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಕಳೆದ ಬಾರಿ, ಸರ್ಕಾರ ಆಟೋಮೊಬೈಲ್ ಹಾಗೂ ಆಟೋ ಕಾಂಪೊನೆಂಟ್ಸ್​ ವಲಯದಲ್ಲಿ 57,043 ಕೋಟಿಯ ಯೋಜನೆಯನ್ನು ಐದು ವರ್ಷಗಳ ಅವಧಿಗೆ ಘೋಷಣೆ ಮಾಡಿತ್ತು. ಈ ಬಾರಿ 25,938 ಕೋಟಿ ರೂಪಾಯಿಗೆ ಯೋಜನೆ ಘೋಷಿಸಲಾಗಿದೆ. ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಚಾಲಿತ ವಾಹನಗಳ ಮೇಲೆ ಕೇಂದ್ರಿಸಿ ಈ ಯೋಜನೆ ಹಾಕಲಾಗಿದೆ.

ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ವ್ಯವಸ್ಥೆ, ಆಟೋಮ್ಯಾಟಿಕ್ ಟ್ರಾನ್ಸ್​ಮಿಶನ್ ಅಸೆಂಬ್ಲಿ, ಸೆನ್ಸಾರ್​ಗಳು, ಸನ್​ರೂಫ್​​ಗಳು, ಸೂಪರ್ ಕೆಪಾಸಿಟರ್ಸ್, ಅಡಾಪ್ಟೀವ್ ಫ್ರಂಟ್ ಲೈಟಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಆಟೊಮ್ಯಾಟಿಕ್ ಬ್ರೇಕಿಂಗ್, ಟೈರ್ ಪ್ರೆಶ್ಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಕೊಲಿಶನ್ ವಾರ್ನಿಂಗ್ ಸಿಸ್ಟಮ್ ಇಷ್ಟು ಉಪಕರಣಗಳು ಪಿಎಲ್​ಐ ಯೋಜನೆಯಡಿ ಒಳಗೊಳ್ಳಲಿದೆ.

ಆಟೋಮೊಬೈಲ್ ವಿಭಾಗಕ್ಕೆ ಘೋಷಿಸಲಾಗಿರುವ ಈ ಪಿಎಲ್​ಐ ಯೋಜನೆಯು, 2021- 22ನೇ ಸಾಲಿನಲ್ಲಿ ಘೋಷಿಸಲಾಗಿರುವ ಒಟ್ಟಾರೆ ಬಜೆಟ್​ನ ಉತ್ಪಾದನಾ ಪ್ರೋತ್ಸಾಹ ಧನದ ಒಂದು ಭಾಗವಾಗಿದೆ. ಬಜೆಟ್​ನಲ್ಲಿ 13 ವಿಭಾಗಗಳಿಗೆ ಒಟ್ಟು 1.97 ಲಕ್ಷ ಕೋಟಿ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ.

ಪಿಎಲ್ಐ ಯೋಜನೆಯಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ 42,500 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷೆಯಿದೆ. ಡ್ರೋನ್ ಕ್ಷೇತ್ರದಲ್ಲಿ ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಣೆಯ ಗುರಿಯಿದೆ. ಡ್ರೋನ್ ಉತ್ಪಾದನೆಗೆ ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಜಾರಿಗೊಳಿಸುತ್ತೇವೆ ಎಂದು ತಿಳಿಸಲಾಗಿದೆ.

ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್ ಹೊಸ ಸಿಮ್ ಕಾರ್ಡ್ ಪಡೆಯಲು ಯಾವುದೇ ಫಾರಂ ಭರ್ತಿ ಮಾಡುವ ಅಗತ್ಯವಿಲ್ಲ. ಹೊಸ ಸಿಮ್ ಕಾರ್ಡ್ ಕೊಳ್ಳುವ ಪ್ರಕ್ರಿಯೆ ಇನ್ನುಮುಂದೆ ಸಂಪೂರ್ಣ ಡಿಜಿಟಲೈಸ್ ಆಗಿರುತ್ತದೆ ಎಂದು (ಸೆಪ್ಟೆಂಬರ್ 15) ನಡೆದ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಕೇಂದ್ರದ ಟೆಲಿಕಾಂ ಖಾತೆ ಸಚಿವ ಅಶ್ವಿನ್ ವೈಷ್ಣವ್ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದಾರೆ. ಮೊಬೈಲ್ ಸಿಮ್ ಕಾರ್ಡ್ ದಾಖಲೆಗಳು, ಕೆವೈಸಿ ಎಲ್ಲವೂ ಡಿಜಿಟಲೈಜ್ ಆಗಿರಲಿದೆ. ಮೊಬೈಲ್ ನಂಬರ್ ಕೆವೈಸಿ ಪ್ರಕ್ರಿಯೆ ಸರಳೀಕರಣ ಮಾಡಲಿದ್ದೇವೆ. ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಬದಲಾದಾಗ ಕೆವೈಸಿ ಹೆಚ್ಚುವರಿ ದಾಖಲೆ ಬೇಕಿಲ್ಲ. 4G, 5G ಟೆಕ್ನಾಲಜಿಯನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟೆಲಿಕಾಂ ಕಂಪನಿಗಳಿಗೆ 4 ವರ್ಷ ಮೋರಾಟೋರಿಯಂ ಘೋಷಣೆ: ವೊಡಾಫೋನ್ ಐಡಿಯಾಗೆ ತುಸು ನೆಮ್ಮದಿ

ಇದನ್ನೂ ಓದಿ: ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್, ಫಾರಂ ಭರ್ತಿ ಬೇಕಿಲ್ಲ: ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಘೋಷಣೆ

Published On - 5:26 pm, Wed, 15 September 21

Follow Us
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ