AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇ-ಆಧಾರ್ ಇದ್ರೆ ಸಾಕು, ಮನೆಯಲ್ಲೇ ಕೂತು ಎಲ್ಲಾ ಮಾಡಲು ಸಾಧ್ಯ; ಏನಂತಾರೆ ಯುಐಡಿಎಐ ಸಿಇಒ?

Aadhaar rules simplified: ಹೋಟೆಕ್ ಚೆಕ್ ಇನ್​ಗೆ ಹೋದಾಗ, ಅಥವಾ ಹೊಸ ಗ್ಯಾಸ್ ಕನೆಕ್ಷನ್ ಪಡೆಯುವಾಗ, ಅಥವಾ ಸಿಮ್ ಪಡೆಯುವಾಗ ನೀವು ಆಧಾರ್ ಫೋಟೋಕಾಪಿ ಕೊಡುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಆ್ಯಪ್ ಮೂಲಕ ನೀವು ಇ-ಆಧಾರ್ ದಾಖಲೆ ಒದಗಿಸಬಹುದು. ಕ್ಯುಆರ್ ಕೋಡ್ ಆಧಾರಿತ ಆ್ಯಪ್ ಅನ್ನು ಯುಐಎಡಿಐ ಅಭಿವೃದ್ಧಿಪಡಿಸಿದ್ದು ನವೆಂಬರ್​​ನಲ್ಲಿ ಅದು ಬಿಡುಗಡೆ ಆಗಬಹುದು.

ಇ-ಆಧಾರ್ ಇದ್ರೆ ಸಾಕು, ಮನೆಯಲ್ಲೇ ಕೂತು ಎಲ್ಲಾ ಮಾಡಲು ಸಾಧ್ಯ; ಏನಂತಾರೆ ಯುಐಡಿಎಐ ಸಿಇಒ?
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 16, 2025 | 12:42 PM

ನವದೆಹಲಿ, ಜೂನ್ 16: ಆಡಳಿತ ವ್ಯವಸ್ಥೆಯನ್ನು, ನಾಗರಿಕ ಸೇವೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ನಿರಂತರ ಪ್ರಯತ್ನ ಮಾಡುತ್ತಿದೆ. ಇಪಿಎಫ್, ಆಧಾರ್ ಇತ್ಯಾದಿ ಪ್ರಮುಖ ನಾಗರಿಕ ಸೇವೆಗಳಲ್ಲಿ ಸಾಕಷ್ಟು ನಿಯಮ ಮತ್ತು ಕ್ರಮ ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಆಧಾರ್ ವ್ಯವಸ್ಥೆಯನ್ನು (Aadhaar ecosystem) ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ನೀವು ಕುಳಿತ ಜಾಗದಲ್ಲೇ ಹಲವು ಕಾರ್ಯಗಳನ್ನು ಮಾಡಲು ಸಾಧ್ಯವಾಗುವ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಲಿದೆ.

ವಿವಿಧ ಸೇವೆಗಳಿಗೆ ನೀವು ಆಧಾರ್ ಕಾಪಿಯನ್ನು ಸಲ್ಲಿಸುತ್ತೀರಿ. ಆದರೆ, ಮುಂದಿನ ದಿನಗಳಲ್ಲಿ ನಿಮಗೆ ಇದರ ಪ್ರಮೇಯ ತಪ್ಪಲಿದೆ. ಆಧಾರ್​​ನ ಫೋಟೋ ಕಾಪಿ ಬದಲು ಇ-ಆಧಾರ್ ನೀಡಿದರೆ ಸಾಕಾಗುತ್ತದೆ. ಕ್ಯುಆರ್ ಕೋಡ್ ಆಧಾರಿತವಾದ ಹೊಸ ಆ್ಯಪ್ ಸಿದ್ಧವಾಗಿದ್ದು ಅದರ ಮೂಲಕ ನೀವು ಆಧಾರ್ ದಾಖಲೆಯ ಸಾಫ್ಟ್​​ಕಾಪಿ ಕೊಡಬಹುದು. ನಿಮ್ಮ ಪೂರ್ಣ ಆಧಾರ್ ವಿವರ ಮರೆಮಾಚುವ ಮಾಸ್ಕ್ಡ್ ಆಧಾರ್ ಬೇಕಾದರೂ ನೀಡಬಹುದು. ಅದು ಸಿಂಧುವಾಗಿರುತ್ತದೆ. ನವೆಂಬರ್​​ನಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಇದನ್ನೂ ಓದಿ: ಭಾರತದಲ್ಲಿ ಮಿಲಿಯನೇರ್​​​ಗಳ ಸಂಖ್ಯೆ 85,000 ಕ್ಕಿಂತ ಹೆಚ್ಚು; ಜಾಗತಿಕವಾಗಿ ಮೂರೇ ದೇಶಗಳು ಭಾರತಕ್ಕಿಂತ ಮುಂದು

ಇದನ್ನೂ ಓದಿ
Image
ಸ್ಟಾರ್ಟಪ್ ಇಕೋಸಿಸ್ಟಂ, ಬೆಂಗಳೂರು ನಂ. 1
Image
ಆಪ್ಟಾನಿಕ್ ಶೀಲ್ಡ್; ಡಿಆರ್​​ಡಿಒದಿಂದ ಹೊಸ ಡಿಫೆನ್ಸ್ ಸಿಸ್ಟಂ
Image
ಕೆವೈಸಿ ತಿದ್ದುಪಡಿ ನಿಯಮಗಳು ಜಾರಿಗೆ; ಇಲ್ಲಿದೆ ವಿವರ
Image
ಯುಪಿಐ ಪಾವತಿ ಮೇಲೆ ಎಂಡಿಆರ್ ಇಲ್ಲ: ಹಣಕಾಸು ಇಲಾಖೆ ಸ್ಪಷ್ಟನೆ

ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಪ್ರಕಾರ, ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್​ಗಳಿಗಾಗಿ ಮಾತ್ರ ನೀವು ಆಧಾರ್ ಸೆಂಟರ್​​ಗೆ ಹೋಗಬೇಕಾಗಬಹುದು. ಉಳಿದೆಲ್ಲಾ ಆಧಾರ್ ಕಾರ್ಯಗನ್ನು ನೀವು ಕೂತಲ್ಲಿಂದಲೇ ಮಾಡಬಹುದು. ಆಧಾರ್​​ನಲ್ಲಿನ ವಿಳಾಸ, ಫೋನ್ ನಂಬರ್, ಹೆಸರು, ಜನ್ಮದಿನಾಂಕ ಇತ್ಯಾದಿ ವಿವರಗಳ ಬದಲಾವಣೆಗೆ ನೀವು ಆಧಾರ್ ಸೆಂಟರ್​​ಗೆ ಹೋಗಬೇಕಾಗುವುದಿಲ್ಲ.

ಹಾಗೆಯೇ, ಜನನ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್​​ಪೋರ್ಟ್, ಪ್ಯಾನ್, ಪಿಡಿಎಸ್, ಮನ್​ರೇಗಾ ಇತ್ಯಾದಿ ಲಭ್ಯ ಇರುವ ನಿಮ್ಮ ದಾಖಲೆಗಳು ನಿಮ್ಮ ಆಧಾರ್​​ಗೆ ಲಿಂಕ್ ಮಾಡುವ ಅವಕಾಶ ಇದೆ. ವಿದ್ಯುತ್ ಬಿಲ್ ಡಾಟಾಬೇಸ್ ಅನ್ನೂ ಲಿಂಕ್ ಮಾಡಬಹುದು. ಈ ಎಲ್ಲಾ ಡಾಟಾಬೇಸ್ ಅನ್ನು ಬಳಸುವುದರಿಂದ ನಿಮ್ಮ ಎಲ್ಲಾ ದಾಖಲೆ ಮತ್ತು ವಿವರಗಳು ಒಟ್ಟಿಗೆ ಲಭ್ಯವಾಗುತ್ತವೆ. ಇದರಿಂದ ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ದಾಖಲೆಗಳನ್ನು ಕೊಡುವ ಅವಶ್ಯಕತೆ ಕಡಿಮೆ ಆಗುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿಸುವವರಿಗೆ ಇನ್ಮುಂದೆ ಕಷ್ಟವಾಗಬಹುದು.

ಇದನ್ನೂ ಓದಿ: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ

ಹೋಟೆಲ್​​ಗಳಲ್ಲಿ ಚೆಕ್ ಇನ್ ಆಗುವುದರಿಂದ ಹಿಡಿದು ವಿವಿಧ ಕೆಲಸಗಳಿಗೆ ಗುರುತು ದಾಖಲೆ ಅಗತ್ಯ ಇದ್ದ ಸಂದರ್ಭದಲ್ಲಿ ಕ್ಯುಆರ್ ಕೋಡ್ ಆಧಾರಿತ ಮೊಬೈಲ್ ಆ್ಯಪ್ ಅನ್ನು ಬಳಸಬಹುದು. ಆ ಆ್ಯಪ್ ಮೂಲಕ ಆಧಾರ್ ದಾಖಲೆಯನ್ನು ನೀಡಬಹುದು.

ಆಸ್ತಿ ನೊಂದಣಿ ವೇಳೆ ಈ ಪ್ರಯೋಗ ಬಹಳ ಉಪಯೋಗಕ್ಕೆ ಬರಲಿದೆ. ಅಧಾರ್ ಅನ್ನು ದುರ್ಬಳಕೆ ಮಾಡಿಕೊಂಡು ಎಸಗಲಾಗುವ ಅಕ್ರಮಕ್ಕೆ ಕಡಿವಾಣ ಬೀಳಬಹುದು.

ಇದೇ ವೇಳೆ, ಶಾಲಾ ಮಕ್ಕಳಿಗೂ ಆಧಾರ್ ಬಯೋಮೆಟ್ರಿಕ್ ಲಿಂಕ್ ಮಾಡುವ ಕಾರ್ಯ ನಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Mon, 16 June 25

ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?