Sign In

By signing in or creating an account, you agree with Associated Broadcasting Company's Terms & Conditions and Privacy Policy.

Finance Bill: ವಿಪಕ್ಷಗಳ ಗದ್ದಲದ ಮಧ್ಯೆ ಹಣಕಾಸು ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ; ಏನಿದು ಬಿಲ್ ವಿಶೇಷತೆ?

Lok Sabha Approves Finance Bill: ಲೋಕಸಭೆಯಲ್ಲಿ ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ಮಧ್ಯೆ 2023ರ ಹಣಕಾಸು ಮಸೂದೆಗೆ ಮಾರ್ಚ್ 24, ಶುಕ್ರವಾರ ಅನುಮೋದನೆ ಸಿಕ್ಕಿದೆ. ಬಹಳ ನಿರೀಕ್ಷೆಯ ಈ ಮಸೂದೆ 45 ತಿದ್ದುಪಡಿಗಳನ್ನು ಹೊಂದಿದೆ.

Finance Bill: ವಿಪಕ್ಷಗಳ ಗದ್ದಲದ ಮಧ್ಯೆ ಹಣಕಾಸು ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ; ಏನಿದು ಬಿಲ್ ವಿಶೇಷತೆ?
ಲೋಕಸಭೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 24, 2023 | 2:14 PM

ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ಮಧ್ಯೆ 2023ರ ಹಣಕಾಸು ಮಸೂದೆಗೆ (Finance Bill 2023) ಮಾರ್ಚ್ 24, ಶುಕ್ರವಾರ ಅನುಮೋದನೆ ಸಿಕ್ಕಿದೆ. ಬಹಳ ನಿರೀಕ್ಷೆಯ ಈ ಮಸೂದೆಗೆ 45 ತಿದ್ದುಪಡಿಗಳನ್ನು ಮಾಡಲಾಗಿದೆ. ಮ್ಯೂಚುವಲ್ ಫಂಡ್​ಗಳ ಮೇಲಿನ ಹೂಡಿಕೆಗಳನ್ನು ಕಿರು ಅವಧಿ ಲಾಭ ಗಳಿಕೆಯಾಗಿ (Shot Term Capital Gain) ಪರಿಗಣಿಸಿ, ಅವುಗಳ ಮೇಲೆ ತೆರಿಗೆ ವಿಧಿಸುವುದು ಈ 45 ತಿದ್ದುಪಡಿಯಲ್ಲಿ ಒಂದು. ಅಂದರೆ ಮ್ಯೂಚುವಲ್ ಫಂಡ್​ನಿಂದ ಬರುವ ಲಾಭದ ಮೇಲೆ ನಿರ್ದಿಷ್ಟ ತೆರಿಗೆ (Tax on capital gain) ಹಾಕಲಾಗುತ್ತದೆ. ಹಣಕಾಸು ಮಸೂದೆಗೆ 45 ತಿದ್ದುಪಡಿ ಜೊತೆಗೆ ಇನ್ನಷ್ಟು 20 ಸೆಕ್ಷನ್​ಗಳನ್ನು ಸೇರಿಸಲಾಗಿದೆ. ಬಜೆಟ್​ನ ಪ್ರಕ್ರಿಯೆಯ ಭಾಗವಾಗಿ ಹಣಕಾಸು ಮಸೂದೆಯನ್ನು ಸಂಸತ್​ನಲ್ಲಿ ಮಂಡನೆ ಮಾಡಲಾಗಿದೆ. ಬಜೆಟ್​ನಲ್ಲಿ ಘೋಷಣೆಯಾದ ಕೆಲ ತೆರಿಗೆ ಕ್ರಮಗಳು ಹಣಕಾಸು ಮಸೂದೆಯಲ್ಲಿ ಅಡಕವಾಗಿದ್ದು, ಸಂಸತ್​ನ ಪೂರ್ಣ ಅನುಮೋದನೆ ದೊರೆತ ಬಳಿಕ ಜಾರಿಗೆ ಬರುತ್ತವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ ಮಂಡನೆ ಮಾಡುತ್ತಿರುವಂತೆಯೇ ವಿಪಕ್ಷಗಳ ಸದಸ್ಯರು ಪ್ರತಿಭಟನೆಗೆ ಇಳಿಸಿದರು. ಮಸೂದೆ ವಿರೋಧಿಸಿ ಗದ್ದಲ ನಡೆಸಿದ್ದಲ್ಲ, ಹಿಂಡನ್ಬರ್ಗ್ ರಿಸರ್ಚ್ ಕಂಪನಿ ಅದಾನಿ ಗ್ರೂಪ್ ಮೇಲೆ ಮಾಡಿದ ಆರೋಪದ ಮೇಲೆ ಜಂಟಿ ಸಂದೀಯ ಸಮಿತಿಯಿಂದ ತನಿಖೆ ಆಗಬೇಕೆಂದು ವಿಪಕ್ಷಗಳು ಒತ್ತಾಯಿಸಿದವು. ಗದ್ದಲ ಹೆಚ್ಚಾದಂತೆ ಲೋಕಸಭಾಧ್ಯಕ್ಷರು ಕಲಾಪವನ್ನು ಸ್ಥಗಿತಗೊಳಿಸಿ ಸೋಮವಾರಕ್ಕೆ ಮುಂದೂಡಿದರು. ಯಾವುದೇ ಚರ್ಚೆಯಾಗದೆಯೇ ಹಣಕಾಸು ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದಂತಾಯಿತು.

ಹಣಕಾಸು ಮಸೂದೆ ಮತ್ತು ತಿದ್ದುಪಡಿಯ ಪ್ರಮುಖ ಅಂಶಗಳು:

ಸಾಲಪತ್ರ, ಸರ್ಕಾರಿ ಬಾಂಡ್ ಇತ್ಯಾದಿ ಮ್ಯೂಚುವಲ್ ಫಂಡ್​ಗಳು ಇನ್ಮುಂದೆ ತೆರಿಗೆ ವಿನಾಯಿತಿ ಭಾಗ್ಯ ತಂದುಕೊಡುವುದಿಲ್ಲ. ಒಂದು ಮ್ಯೂಚುವಲ್ ಫಂಡ್ ತನ್ನಲ್ಲಿನ ಹೂಡಿಕೆದಾರರ ಹಣದಲ್ಲಿ ಶೇ. 35ಕ್ಕಿಂತ ಹೆಚ್ಚು ಮೊತ್ತವನ್ನು ದೇಶೀಯ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದಲ್ಲಿ ಮಾತ್ರ ತೆರಿಗೆ ವಿನಾಯಿತಿ ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಅಂಥ ಮ್ಯೂಚುವಲ್ ಫಂಡ್ ಮೇಲೆ ಮಾಡಿದ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುವುದು ಇರಲಿ, ಲಾಭದ ತೆರಿಗೆಯನ್ನು ಸರ್ಕಾರ ವಿಧಿಸಿದೆ.

ಇದನ್ನೂ ಓದಿJack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ

ಸರ್ಕಾರಿ ಉದ್ಯೋಗಿಗಳ ಪಿಂಚಣಿ ಸಮಸ್ಯೆಗಳನ್ನು ಪರಾಮರ್ಶಿಸಲು ಕೇಂದ್ರ ಹಣಕಾಸು ಕಾರ್ಯದರ್ಶಿ ಅಡಿಯಲ್ಲಿ ಒಂದು ಸಮಿತಿ ರಚನೆಯಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ವಿದೇಶೀ ಪ್ರವಾಸಗಳಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿ ಮೂಲದಲ್ಲೇ ತೆರಿಗೆಯಿಂದ ತಪ್ಪಿಸಿಕೊಳ್ಳಲಾಗುತ್ತಿರುವ ಪ್ರಕರಣಗಳತ್ತ ಆರ್​ಬಿಐ ಗಮನ ಹರಿಸುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್​ಟಿಟಿ) ಏರಿಕೆ

ಹಣಕಾಸು ಮಸೂದೆಯಲ್ಲಿ ಮಾಡಲಾಗಿರುವ ಮಹತ್ವದ ತಿದ್ದುಪಡಿಯಲ್ಲಿ ಎಸ್​ಟಿಟಿ ತೆರಿಗೆ ಹೆಚ್ಚಳವೂ ಒಂದು. ಷೇರು ವಹಿವಾಟುಗಳ ಮೇಲಿನ ಎಸ್​ಟಿಟಿ ತೆರಿಗೆಯನ್ನು ಶೇ. 25ರವರೆಗೂ ಏರಿಕೆ ಮಾಡಲಾಗಿದೆ. ಭಾರತದ ಷೇರು ವಿನಿಮಯ ಮಾರುಕಟ್ಟೆಯಲ್ಲಿ ಪಟ್ಟಿಯಾಗಿರುವ ಕಂಪನಿಗಳ ಷೇರುಗಳ ಮಾರಾಟ ಮತ್ತು ಖರೀದಿಗೆ ನೇರ ತೆರಿಗೆ ವಿಧಿಸಲಾಗುತ್ತದೆ. ಅದುವೇ ಎಸ್​ಟಿಟಿ. ಒಬ್ಬ ಹೂಡಿಕೆದಾರ ಷೇರು ಖರೀದಿಸಿದಾಗ ಅಥವಾ ಮಾರಾಟ ಮಾಡಿದಾಗ ಎಸ್​ಟಿಟಿ ಪಾವತಿಸಬೇಕು.

ಎಫ್ ಅಂಡ್ ಒ ವಹಿವಾಟಿನಲ್ಲಿ ಆಪ್ಷನ್ಸ್ ಕಾಂಟ್ರಾಕ್ಟ್ ಸೇಲ್​ನಲ್ಲಿ ಒಂದು ಕೋಟಿ ರೂ ವಹಿವಾಟು ನಡೆದರೆ ವಿಧಿಸಲಾಗುವ ಎಸ್​ಟಿಟಿಯು 1,700 ರೂನಿಂದ 2,100 ರೂಗೆ ಏರಿಕೆಯಾಗಿದೆ. ಇನ್ನು, ಫ್ಯೂಚರ್ಸ್ ಕಾಂಟ್ರಾಕ್ಟ್ ಸೇಲ್​ನಲ್ಲಿ 1 ಕೋಟಿ ರೂ ವಹಿವಾಟಿಗೆ 10,000 ರೂ ಇದ್ದ ಎಸ್​ಟಿಟಿ ತೆರಿಗೆ ಇದೀಗ 12,500 ರೂಪಾಯಿಗೆ ಹೆಚ್ಚಳವಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Fri, 24 March 23

ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..