AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India CAD: ಭಾರತದ ಕರೆಂಟ್ ಅಕೌಂಟ್ ಕೊರತೆ ಕೇವಲ ಶೇ. 0.2; ಚಾಲ್ತಿ ಖಾತೆ ವಿವರ ಯಾಕೆ ಮಹತ್ವದ್ದು?

Current Account Deficit Decreases: 2022-23ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಭಾರತದ ಚಾಲ್ತಿ ಖಾತೆಯಲ್ಲಿ ಸುಧಾರಣೆ ಆಗಿದೆ. ಆ ಅವಧಿಯಲ್ಲಿ ಕರೆಂಟ್ ಅಕೌಂಟ್ ಕೊರತೆ ಕೇವಲ ಶೇ. 0.2 ಮಾತ್ರ ಇದೆ.

India CAD: ಭಾರತದ ಕರೆಂಟ್ ಅಕೌಂಟ್ ಕೊರತೆ ಕೇವಲ ಶೇ. 0.2; ಚಾಲ್ತಿ ಖಾತೆ ವಿವರ ಯಾಕೆ ಮಹತ್ವದ್ದು?
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 28, 2023 | 10:43 AM

Share

ನವದೆಹಲಿ: ಇದೇ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ (CAD- Current Account Deficit) ಅಥವಾ ಚಾಲ್ತಿ ಖಾತೆ ಕೊರತೆ ಗಣನೀಯವಾಗಿ ಇಳಿಕೆಯಾಗಿದೆ. ಆರ್​ಬಿಐ ಬಿಡುಗಡೆ ಮಾಡಿದ ವರದಿ ಪ್ರಕಾರ ಕರೆಂಟ್ ಅಕೌಂಟ್ ಅಂತರ 1.3 ಬಿಲಿಯನ್ ಡಾಲರ್ (ಸುಮಾರು 10,650 ಕೋಟಿ ರೂ) ಇದೆ. ಕರೆಂಟ್ ಅಕೌಂಟ್ ಅಂತರವು ಜಿಡಿಪಿಯ ಶೇ. 0.2ರಷ್ಟು ಮಾತ್ರವೇ ಇರುವುದು. ಆದರೆ, ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಆ ಅವಧಿಯಲ್ಲಿ ಆರ್ಥಿಕ ತಜ್ಞರು ಚಾಲ್ತಿ ಖಾತೆಯಲ್ಲಿ ಕೊರತೆ ನೀಗಿ ಹೆಚ್ಚುವರಿ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಅವರು ನಿರೀಕ್ಷಿಸಿದಂತೆ ಕೊರತೆ ನೀಗದೇ ಇದ್ದರೂ ಗಣನೀಯವಾಗಿ ಅಂತರ ಇಳಿಕೆಯಾಗಿರುವುದು ಹೌದು. ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2022ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಜಿಡಿಪಿಯ ಶೇ. 2.2ರಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಅಂತರ ಬಹಳಷ್ಟು ಕಡಿಮೆ ಆಗಿದೆ.

ಆದರೆ, 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ. 2ರಷ್ಟು ಇರುವುದು ದಾಖಲಾಗಿದೆ. ಹಿಂದಿನ ವರ್ಷದಲ್ಲಿ, ಅಂದರೆ 2021-22ರ ಹಣಕಾಸು ವರ್ಷದಲ್ಲಿ ಇದರ ಕೊರತೆ ಶೇ. 1.2ರಷ್ಟು ಮಾತ್ರ ಇತ್ತು. ಆದರೆ, 2022-23ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ ಭಾರತದ ಸಿಎಡಿ ಬಹಳ ಹೆಚ್ಚಿನ ಮಟ್ಟದಲ್ಲಿತ್ತು.

ಇದನ್ನೂ ಓದಿBig Salary: ಎಐ, ಚ್ಯಾಟ್​ಜಿಪಿಟಿ ಗೊತ್ತಿದ್ದವರಿಗೆ ಭರ್ಜರಿ ಡಿಮ್ಯಾಂಡ್; ಕೋಟಿಗಟ್ಟಲೆ ಸಂಬಳ ಕೊಡಲು ಕಾರ್ಪೊರೇಟ್ ಕಂಪನಿಗಳು ತಯಾರು

ಕೊನೆಯ ಕ್ವಾರ್ಟರ್​ನಲ್ಲಿ ಕೊರತೆ ಕಡಿಮೆ ಆಗಿದ್ದು ಯಾಕೆ?

2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಶೇ. 0.2ಕ್ಕೆ ಇಳಿದಿರುವುದಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ವ್ಯಾಪಾರ ಕೊರತೆ ಸಂಕುಚಿತಗೊಂಡಿದ್ದು ಹಾಗೂ ಸರ್ವಿಸ್ ರಫ್ತು ಹೆಚ್ಚಿದ್ದು ಎಂದು ಹೇಳಲಾಗುತ್ತಿದೆ. ಮೂರನೇ ಕ್ವಾರ್ಟರ್​ನಲ್ಲಿ 71.3 ಬಿಲಿಯನ್ ಡಾಲರ್ ಇದ್ದ ವ್ಯಾಪಾರ ಕೊರತೆ ನಾಲ್ಕನೇ ಕ್ವಾರ್ಟರ್​ನಲ್ಲಿ 52.6 ಬಿಲಿಯನ್ ಡಾಲರ್​ಗೆ ಇಳಿದಿತ್ತು. ಇದು ಒಟ್ಟಾರೆ ಕರೆಂಟ್ ಅಕೌಂಟ್ ಅಂತರವನ್ನು ತಗ್ಗಿಸಲು ಸಹಾಯವಾಗಿದೆ.

ರಾಯ್ಟರ್ಸ್ ಸಂಸ್ಥೆ ನಡೆಸಿದ ಪೋಲ್​ನಲ್ಲಿ 22 ಆರ್ಥಿಕ ತಜ್ಞರು ನಾಲ್ಕನೇ ಕ್ವಾರ್ಟರ್​ನಲ್ಲಿ ಚಾಲ್ತಿ ಖಾತೆಗೆ ಕೊರತೆ ಬದಲು ಹೆಚ್ಚುವರಿ ಸೇರಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. 22 ಆರ್ಥಿಕ ತಜ್ಞರು ನೀಡಿದ ಅಂಕಿಅಂಶಗಳನ್ನು ಸರಾಸರಿಯಾಗಿ ಗಣಿಸಿದಾಗ ನಾಲ್ಕನೇ ಕ್ವಾರ್ಟರ್​ನಲ್ಲಿ ಕರೆಂಟ್ ಅಕೌಂಟ್​ನಲ್ಲಿ ಜಿಡಿಪಿಯ ಶೇ. 0.3ರಷ್ಟು ಹೆಚ್ಚುವರಿ ಮೊತ್ತ ಜಮೆ ಆಗಬಹುದು ಎಂದು ಅಂದಾಜಿಸಲಾಗಿತ್ತು.

ಇದನ್ನೂ ಓದಿIndian Economy: ಮುಂದಿನ 3 ವರ್ಷವೂ ಅತಿವೇಗದಲ್ಲಿ ಭಾರತದ ಆರ್ಥಿಕವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಂದಾಜು

ಏನಿದು ಕರೆಂಟ್ ಅಕೌಂಟ್ ಡೆಫಿಸಿಟ್?

ಬಹಳ ಸರಳವಾಗಿ ಹೇಳುವುದಾದರೆ ಚಾಲ್ತಿ ಖಾತೆ ಎಂದರೆ ದೇಶದ ಆಮದು ವೆಚ್ಚ ಮತ್ತು ರಫ್ತು ಆದಾಯದ ಮಧ್ಯೆ ಇರುವ ಅಂತರ. ಅಂದರೆ ರಫ್ತಿನಿಂದ ಬರುವ ಆದಾಯಕ್ಕಿಂತ ಆಮದು ವೆಚ್ಚ ಹೆಚ್ಚಾದಾಗ ಚಾಲ್ತಿ ಖಾತೆ ಕೊರತೆ ಆಗುತ್ತದೆ. ಇನ್ನು, ಆಮದಿಗೆ ಆಗುವ ವ್ಯಯಕ್ಕಿಂತ ರಫ್ತು ಮೂಲಕ ಬಂದ ಆದಾಯ ಹೆಚ್ಚಿದ್ದರೆ ಆಗ ಕರೆಂಟ್ ಅಕೌಂಟ್ ಸರ್ಪ್ಲಸ್ ಅಥವಾ ಚಾಲ್ತಿ ಖಾತೆ ಹೆಚ್ಚುವರಿ ಎಂದು ಪರಿಗಣಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ