AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trade Deficit: ದೇಶದ ವ್ಯಾಪಾರ ಕೊರತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಕಾರಣ ಏನೆಂಬ ವಿವರಣೆ ಇಲ್ಲಿದೆ

ಭಾರತದ ವ್ಯಾಪಾರ ಕೊರತೆಯು 2021ರ ನವೆಂಬರ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಅದಕ್ಕೆ ಕಾರಣ ಏನು ಎಂಬ ವಿವರಣೆ ಈ ಲೇಖನದಲ್ಲಿದೆ.

Trade Deficit: ದೇಶದ ವ್ಯಾಪಾರ ಕೊರತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಕಾರಣ ಏನೆಂಬ ವಿವರಣೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 15, 2021 | 8:32 AM

ಪೆಟ್ರೋಲಿಯಂ, ಚಿನ್ನ, ಬೆಳ್ಳಿ ಮತ್ತು ಖನಿಜ ಆಮದು ದೇಶದ ಒಟ್ಟಾರೆ ಒಳಬರುವ ಸಾಗಣೆಯನ್ನು ಶೇ 56.5ರಷ್ಟು 52.9 ಶತಕೋಟಿ ಡಾಲರ್‌ಗೆ ಹೆಚ್ಚಿಸಿದ್ದರಿಂದ ಭಾರತದ ವ್ಯಾಪಾರ ಕೊರತೆಯು ನವೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 22.91 ಶತಕೋಟಿ ಯುಎಸ್​ಡಿಗೆ ವಿಸ್ತರಣೆ ಆಗಿದೆ. 2020ರ ನವೆಂಬರ್​ನಲ್ಲಿ ಇದ್ದ 10.19 ಶತಕೋಟಿ ಡಾಲರ್​ನಿಂದ ವ್ಯಾಪಾರ ಕೊರತೆಯು ದ್ವಿಗುಣಗೊಂಡಿದೆ. ಮಂಗಳವಾರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯು ಭಾರತದ ನವೆಂಬರ್ ಸರಕು ರಫ್ತು ಒಂಬತ್ತು ತಿಂಗಳ ಕನಿಷ್ಠ 30.04 ಶತಕೋಟಿ ಡಾಲರ್​ನಲ್ಲಿದೆ. ಆದರೆ ವರ್ಷಕ್ಕೆ ಶೇ 27.16 ಹೆಚ್ಚಾಗಿದೆ ಎಂದು ತೋರಿಸಿದೆ.

2021ರ ಏಪ್ರಿಲ್-ನವೆಂಬರ್​ನಲ್ಲಿ ವ್ಯಾಪಾರಿ ಆಮದು 384.34 ಬಿಲಿಯನ್ ಡಾಲರ್ ಆಗಿದ್ದು, ವರ್ಷದ ಹಿಂದಿನ ಅವಧಿಯಲ್ಲಿ 219.82 ಬಿಲಿಯನ್ ಡಾಲರ್ ಆಗಿತ್ತು. ಇದು ಶೇ 74.84ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಚಿನ್ನದ ಆಮದು ನವೆಂಬರ್‌ನಲ್ಲಿ ಶೇ 39.7ರಷ್ಟು ಏರಿಕೆಯಾಗಿ 4.2 ಶತಕೋಟಿ ಡಾಲರ್​ಗೆ ತಲುಪಿದೆ. ಪೆಟ್ರೋಲಿಯಂ ಆಮದು ಶೇ 132.4ರಷ್ಟು ಏರಿಕೆಯಾಗಿ 14.7 ಶತಕೋಟಿ ಡಾಲರ್​ಗೆ ತಲುಪಿದೆ. “ನವೆಂಬರ್ 2020ರ ಸರಕುಗಳ ವ್ಯಾಪಾರ ಕೊರತೆಯು ನವೆಂಬರ್ 2020ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಆದರೆ ನವೆಂಬರ್ 2019ರ ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು H2 FY22ನಲ್ಲಿನ ಚಾಲ್ತಿ ಖಾತೆ ಕೊರತೆಯ ಗಾತ್ರದ ಪರಿಣಾಮಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ,” ಎಂದು ICRAದ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ

ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ವಸ್ತುಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಹತ್ತಿ ನೂಲು, ಕೈಮಗ್ಗ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳು ರಫ್ತು ಮಾಡುವ ಪ್ರಮುಖ ವಲಯಗಳಾಗಿವೆ. “ನವೆಂಬರ್ 2020ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನಗಳಲ್ಲದ ಮತ್ತು ಆಭರಣ ರಫ್ತುಗಳು 23.68 ಬಿಲಿಯನ್ ಡಾಲರ್ ಆಗಿದ್ದು, ನವೆಂಬರ್ 2020ರಲ್ಲಿ ಪೆಟ್ರೋಲಿಯಂ ಅಲ್ಲದ ಮತ್ತು ರತ್ನೇತರ ಮತ್ತು ಆಭರಣಗಳ ರಫ್ತು 19.37 ಶತಕೋಟಿ ಡಾಲರ್​ಗಿಂತ ಶೇ 22.26ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎ. ಶಕ್ತಿವೇಲ್ ಮಾತನಾಡಿ, ಹಲವು ಉನ್ನತ ಕಾರ್ಯ ನಿರ್ವಹಣೆಯ ವಲಯಗಳು ಕಾರ್ಮಿಕ-ಬಳಕೆ ಹೆಚ್ಚಿರುವ ವಲಯಗಳಾಗಿದ್ದು, ತಿಂಗಳಲ್ಲಿ ರಫ್ತು ಬುಟ್ಟಿಗೆ ಪ್ರಮುಖವಾಗಿ ಕೊಡುಗೆ ನೀಡುತ್ತಿವೆ. ಇದು ಉತ್ತಮ ಸಂಕೇತವಾಗಿದೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಸಹಾಯ ಮಾಡುತ್ತದೆ ಎಂದಿದ್ದಾರೆ. “ಎಂಜಿನಿಯರಿಂಗ್ ಸರಕುಗಳ ರಫ್ತು ಬೆಳವಣಿಗೆಯ ವೇಗವನ್ನು ಮುಂದುವರಿಸಿದೆ ಮತ್ತು ನವೆಂಬರ್​ನಲ್ಲಿ 8.07 ಶತಕೋಟಿ ಡಾಲರ್​ಗೆ ಶೇ 37ರಷ್ಟು ಏರಿಕೆಯಾಗಿದೆ. ಆದರೆ ಒಮಿಕ್ರಾನ್​ನಿಂದಾಗಿ ಖಂಡಿತವಾಗಿಯೂ ಮುಂದಕ್ಕೆ ಹೋಗುವ ಬಲವಾದ ಏರಿಕೆಗೆ ಕೆಲವು ತೊಂದರೆಯ ಅಪಾಯಗಳನ್ನು ತಂದಿದೆ,” ಎಂದು EEPC ಇಂಡಿಯಾ ಅಧ್ಯಕ್ಷ ಮಹೇಶ್ ದೇಸಾಯಿ ಹೇಳಿದ್ದಾರೆ.

ಇಂಜಿನಿಯರಿಂಗ್ ಸರಕುಗಳ ವಲಯದಲ್ಲಿ ಪ್ರಾಬಲ್ಯ ಹೊಂದಿರುವ ಹೆಚ್ಚಿನ ಸಂಖ್ಯೆಯ ಎಂಎಸ್‌ಎಂಇಗಳು ಮತ್ತಷ್ಟು ಹೂಡಿಕೆ ಮಾಡಲು ಕಡಿಮೆ ಅವಕಾಶವನ್ನು ಬಿಟ್ಟು, ಕಚ್ಚಾ ವಸ್ತುಗಳ ಬೆಲೆಗಳ ಹೆಚ್ಚಳವು ಮಾರ್ಜಿನ್​ಗಳ ಮೇಲೆ ಮತ್ತಷ್ಟು ಒತ್ತಡವನ್ನು ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: WPI Inflation: ಸಗಟು ದರ ಸೂಚ್ಯಂಕ ಹಣದುಬ್ಬರ ನವೆಂಬರ್​ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿ ಶೇ 14.23ಕ್ಕೆ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ