AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ

ITR filing, last minute checklist: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫಾರ್ಮ್ ಅನ್ನು ಕೊನೆಯ ದಿನಗಳಲ್ಲಿ ಸಬ್ಮಿಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಗಡಿಬಿಡಿಯಲ್ಲಿ ಕೆಲ ಮುಖ್ಯಾಂಶಗಳನ್ನೇ ಮರೆತು ಐಟಿಆರ್ ಸಲ್ಲಿಕೆ ಮಾಡುವ ಸಾಧ್ಯತೆ ಇರುತ್ತದೆ. ತಪ್ಪಾದ ಮಾಹಿತಿ ತುಂಬಿದರೆ, ಅಥವಾ ಮುಖ್ಯ ಮಾಹಿತಿಯನ್ನೇ ಕೈಬಿಟ್​ಟರೆ ಟ್ಯಾಕ್ಸ್ ನೋಟೀಸ್ ಬರಬಹುದು.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ
ಇನ್ಕಮ್ ಟ್ಯಾಕ್ಸ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2026 | 4:20 PM

Share

ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಡೆಡ್​ಲೈನ್ ಹತ್ತಿರವಾಗುತ್ತಿದ್ದಂತೆ, ಧಾವಂತದಲ್ಲಿ ತೆರಿಗೆದಾರರು ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದು ಸಾಮಾನ್ಯ. ಸಬ್ಮಿಟ್ (Submit) ಬಟನ್ ಒತ್ತುವ ಮುನ್ನ ಈ ಕೆಳಗಿನ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರೆ, ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದನ್ನು ತಪ್ಪಿಸಬಹುದು ಹಾಗೂ ರೀಫಂಡ್ (Refund) ಬೇಗನೆ ಸಿಗುವಂತೆ ನೋಡಿಕೊಳ್ಳಬಹುದು.

ದಾಖಲೆಗಳನ್ನು ಕೈಯಲ್ಲಿಟ್ಟುಕೊಳ್ಳಿ

ಫಾರ್ಮ್ 16, ಬ್ಯಾಂಕ್ ಸ್ಟೇಟ್‌ಮೆಂಟ್, ಬಡ್ಡಿ ಪ್ರಮಾಣಪತ್ರಗಳು (Interest Certificates), ಡಿಮ್ಯಾಟ್/ಮ್ಯೂಚುಯಲ್ ಫಂಡ್ ಕ್ಯಾಪಿಟಲ್ ಗೇನ್ಸ್‌ ವಿವರಗಳು ಹಾಗೂ ಹೂಡಿಕೆಯ ಆಧಾರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

AIS ಮತ್ತು Form 26AS ಪರಿಶೀಲನೆ

ನಿಮ್ಮ ಬಳಿಯಿರುವ ದಾಖಲೆಗಳನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುವ AIS (Annual Information Statement) ಮತ್ತು Form 26AS ನೊಂದಿಗೆ ಹೋಲಿಸಿ ಪರಿಶೀಲಿಸಿ.

ಸಂಬಳ, ಬ್ಯಾಂಕ್ ಡೆಪಾಸಿಟ್‌ಗಳ ಬಡ್ಡಿ, ಷೇರು ಮಾರುಕಟ್ಟೆಯ ಲಾಭ ಮತ್ತು ಕಡಿತಗೊಂಡ ತೆರಿಗೆ (TDS) ವಿವರಗಳು ಸರಿಯಾಗಿ ಹೊಂದಾಣಿಕೆಯಾಗಬೇಕು. Mismatch ಇದ್ದರೆ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಸರಿಯಾದ ITR ಫಾರ್ಮ್ ಆಯ್ಕೆಮಾಡಿ

  • ITR-1 (ಸಹಜ್): ₹50 ಲಕ್ಷದವರೆಗೆ ಆದಾಯವಿರುವ, ಒಂದೇ ಮನೆ ಆಸ್ತಿ ಹೊಂದಿರುವ ವೇತನದಾರರಿಗೆ.
  • ITR-2: ₹50 ಲಕ್ಷಕ್ಕಿಂತ ಹೆಚ್ಚು ಆದಾಯ, ಕ್ಯಾಪಿಟಲ್ ಗೇನ್ಸ್ ಅಥವಾ ಒಂದಕ್ಕಿಂತ ಹೆಚ್ಚು ಮನೆ ಆಸ್ತಿ ಹೊಂದಿರುವವರಿಗೆ.
  • ITR-3 / ITR-4: ವ್ಯಾಪಾರ, ವೃತ್ತಿಪರ ಆದಾಯ ಅಥವಾ ಫ್ರೀಲ್ಯಾನ್ಸಿಂಗ್ ಮಾಡುವವರಿಗೆ. (ತಪ್ಪು ಫಾರ್ಮ್ ಆಯ್ಕೆಮಾಡಿದರೆ ನಿಮ್ಮ ಐಟಿಆರ್ ಅಮಾನ್ಯಗೊಳ್ಳುತ್ತದೆ).

ಎಲ್ಲಾ ಆದಾಯದ ಮೂಲಗಳನ್ನು ನಮೂದಿಸಿ

ಸಂಬಳದ ಹೊರತಾಗಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ (Savings Interest), ಫಿಕ್ಸ್ಡ್ ಡೆಪಾಸಿಟ್ ಬಡ್ಡಿ, ಡಿವಿಡೆಂಡ್, ಮನೆ ಬಾಡಿಗೆ ಆದಾಯ ಮತ್ತು ಕ್ರಿಪ್ಟೋ/ಷೇರು ಲಾಭಗಳನ್ನು ತಪ್ಪದೇ ನಮೂದಿಸಿ.

ಬ್ಯಾಂಕ್ ಖಾತೆಯ ವಿವರಗಳು

ತೆರಿಗೆ ಮರುಪಾವತಿ (Tax Refund) ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು, ನಿಮ್ಮ ಬ್ಯಾಂಕ್ ಖಾತೆ ಐಟಿಆರ್ ಪೋರ್ಟಲ್‌ನಲ್ಲಿ Pre-Validated ಆಗಿದೆಯೇ ಹಾಗೂ IFSC ಕೋಡ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ತೆರಿಗೆ ವಿಧಾನದ (Tax Regime) ಆಯ್ಕೆ

ನೀವು ‘ಹಳೆಯ ತೆರಿಗೆ ಪದ್ಧತಿ’ (Old Tax Regime) ಅಥವಾ ‘ಹೊಸ ತೆರಿಗೆ ಪದ್ಧತಿ’ (New Tax Regime) ಪೈಕಿ ಯಾವುದರಲ್ಲಿ ಹೆಚ್ಚು ತೆರಿಗೆ ಉಳಿತಾಯವಾಗುತ್ತದೆ ಎಂಬುದನ್ನು ಲೆಕ್ಕಹಾಕಿ ಸರಿಯಾದ ವಿಭಾಗವನ್ನು ಆಯ್ಕೆಮಾಡಿ.

ಐಟಿಆರ್ ಸಬ್ಮಿಟ್ ಮಾಡಿದ ತಕ್ಷಣ ಪ್ರಕ್ರಿಯೆ ಮುಗಿಯುವುದಿಲ್ಲ. ರಿಟರ್ನ್ ಸಲ್ಲಿಸಿದ 30 ದಿನಗಳ ಒಳಗಾಗಿ E-Verification (ಆಧಾರ್ OTP, ನೆಟ್ ಬ್ಯಾಂಕಿಂಗ್ ಮೂಲಕ) ಪೂರ್ಣಗೊಳಿಸುವುದು ಕಡ್ಡಾಯ. ಇ-ವೆರಿಫೈ ಮಾಡದಿದ್ದರೆ ಸಲ್ಲಿಕೆಯಾದ ಐಟಿಆರ್ ರದ್ದಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಕೆಪಿಎಸ್​ಸಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ತರಾಟೆ
ಕೆಪಿಎಸ್​ಸಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ತರಾಟೆ
ಸಿದ್ದರಾಮಯ್ಯ ನಿವೃತ್ತಿಯಾದರೆ ನಮಗೆ ಕಷ್ಟ:ಆತಂಕ ವ್ಯಕ್ತಪಡಿಸಿದ ಡಿಕೆಶಿ ಆಪ್ತ
ಸಿದ್ದರಾಮಯ್ಯ ನಿವೃತ್ತಿಯಾದರೆ ನಮಗೆ ಕಷ್ಟ:ಆತಂಕ ವ್ಯಕ್ತಪಡಿಸಿದ ಡಿಕೆಶಿ ಆಪ್ತ
ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿ?: ಹರಿಪ್ರಸಾದ್​​ ಸ್ಪಷ್ಟನೆ
ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿ?: ಹರಿಪ್ರಸಾದ್​​ ಸ್ಪಷ್ಟನೆ
ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್
ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್
ಚಿತ್ರಮಂದಿರಗಳಲ್ಲಿ 'ಕರಾವಳಿ' ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಖುಷ್
ಚಿತ್ರಮಂದಿರಗಳಲ್ಲಿ 'ಕರಾವಳಿ' ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಖುಷ್
ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026 ಮಂಡನೆ
ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026 ಮಂಡನೆ
ಡಿಕೆಶಿ ಸಚಿವ ಸಂಪುಟದಲ್ಲಿ 12ರಿಂದ 15  ಹೊಸ ಮುಖಗಳಿಗೆ ಮಣೆ?
ಡಿಕೆಶಿ ಸಚಿವ ಸಂಪುಟದಲ್ಲಿ 12ರಿಂದ 15  ಹೊಸ ಮುಖಗಳಿಗೆ ಮಣೆ?
ಬಾಯ್ಲರ್ ಟ್ಯಾಂಕ್ ಮಗುಚಿ ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಬಂದ್
ಬಾಯ್ಲರ್ ಟ್ಯಾಂಕ್ ಮಗುಚಿ ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಬಂದ್