AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?

One Nation One Time: ಮೈಕ್ರೋಸೆಕಂಡ್ ನಿಖರತೆಯ ಐಎಸ್​ಟಿ ಕಾಲಮಾನ ರೂಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಒಂದು ದೇಶ, ಒಂದು ಸಮಯ ಎನ್ನುವ ಪರಿಕಲ್ಪನೆಯಲ್ಲಿ ಎಲ್ಲಾ ಸೆಕ್ಟರ್​ಗಳೂ ಐಎಸ್​​ಟಿಯನ್ನು ಅಳವಡಿಸಲು ಅನುವಾಗುವಂತೆ ಯೋಜನೆ ಮಾಡಲಾಗುತ್ತಿದೆ. ಇಸ್ರೋ, ಎನ್​ಪಿಎಲ್, ಐಐಟಿ, ವಿವಿಧ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳೆಲ್ಲರೂ ಸೇರಿರುವ ಸಮಿತಿಯಿಂದಲೂ ನೆರವು ಪಡೆಯಲಾಗಿದೆ.

ಒಂದು ರಾಷ್ಟ್ರ ಒಂದು ಸಮಯ; ಹೆಚ್ಚು ನಿಖರತೆಯ ಭಾರತೀಯ ಕಾಲಮಾನ ರೂಪಿಸುವ ಯೋಜನೆ; ಏನಿದರ ಮಹತ್ವ?
ಐಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 27, 2025 | 3:15 PM

Share

ನವದೆಹಲಿ, ಜನವರಿ 27: ಎಲ್ಲದಕ್ಕೂ ಒಂದೇ ಕಾಲಮಾನ ವ್ಯವಸ್ಥೆ ಬಳಕೆಯಾಗುವ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆ ಕೈಗೊಂಡಿದೆ. ಭಾರತೀಯ ಕಾಲಮಾನವಾದ ಐಎಸ್​ಟಿಯ ನಿಖರತೆಯನ್ನು ಹೆಚ್ಚಿಸುವ ಈ ಯೋಜನೆಯನ್ನು ಇಸ್ರೋ ಮತ್ತು ಎನ್​ಪಿಎಲ್ (ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ) ಸಹಯೋಗದೊಂದಿಗೆ ಗ್ರಾಹಕ ವ್ಯವಹಾರಗಳ ಇಲಾಖೆ ಕೈಗೆತ್ತಿಕೊಂಡಿದೆ. ದೇಶಾದ್ಯಂತ ಇರುವ ಐದು ಲೀಗಲ್ ಮೆಟ್ರೋಲಜಿ ಲ್ಯಾಬ್​ಗಳ (Legal Metrology labs) ಮೂಲಕ ಹೆಚ್ಚು ನಿಖರ ಐಎಸ್​ಟಿಯನ್ನು ರೂಪಿಸುವ ಉದ್ದೇಶ ಇದೆ. ಒಂದು ದೇಶ, ಒಂದು ಸಮಯ ಎನ್ನುವ ಪರಿಕಲ್ಪನೆ ಅಡಿಯಲ್ಲಿ ಈ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಐಎಸ್​ಟಿ ನಿಖರತೆಯನ್ನು ಮಿಲ್ಲಿಸೆಕಂಡ್​ನಿಂದ ಮೈಕ್ರೋಸೆಕಂಡ್​ಗೆ ವ್ಯಾಪಿಸುವುದು ಈ ಯೋಜನೆಯ ಗುರಿ. ಮಿಲ್ಲಿಸೆಕಂಡ್ ಎಂದರೆ ಒಂದು ಸೆಕಂಡ್​ನ ಒಂದು ಸಾವಿರನೇ ಭಾಗ. ಅಂದರೆ, ಸಾವಿರ ಮಿಲ್ಲಿ ಸೆಕಂಡ್ ಸೇರಿಸಿದರೆ ಒಂದು ಸೆಕಂಡ್ ಆಗುತ್ತದೆ. ಇನ್ನು, ಹತ್ತು ಲಕ್ಷ ಮೈಕ್ರೋಸೆಕೆಂಡ್ ಸೇರಿದರೆ ಒಂದು ಸೆಕಂಡ್ ಆಗುತ್ತದೆ. ಇಷ್ಟು ಸೂಕ್ಷ್ಮ ಸಮಯ ರೂಪಿಸಲು ಭಾರತ ಮುಂದಾಗಿದೆ. ಇದಾದ ಬಳಿಕ ಎಲ್ಲಾ ಸೆಕ್ಟರ್​ಗಳೂ ಕೂಡ ಐಎಸ್​ಟಿಯನ್ನೇ ಅಳವಡಿಸಬೇಕು ಎನ್ನುವ ಕಾನೂನು ರೂಪಿಸಲು ಸರ್ಕಾರ ಮುಂದಾಗಬಹುದು.

ಇದನ್ನೂ ಓದಿ: India’s exports: ಜಾಗತಿಕ ವ್ಯಾಪಾರ ಕುಂಠಿತವಾದರೂ ಭಾರತದಿಂದ ದಾಖಲೆಯ ರಫ್ತು

ಈ ನಿಖರ ಸಮಯ ಯಾಕೆ ಮುಖ್ಯ?

ವಾಹನ ಚಲನೆ, ದೂರವಾಣಿ, ಪವರ್ ಗ್ರಿಡ್ ಸಿಂಕ್ರೊನೈಸೇಶನ್, ಬ್ಯಾಂಕಿಂಗ್, ಡಿಜಿಟಲ್ ಗವರ್ನೆನ್ಸ್, ಅತ್ಯುಚ್ಚ ವೈಜ್ಞಾನಿಕ ಸಂಶೋಧನೆ ಇತ್ಯಾದಿ ಕಾರ್ಯಗಳಿಗೆ ಸಮಯದ ನಿಖರತೆ ಹೆಚ್ಚು ಇದ್ದಷ್ಟೂ ಉತ್ತಮ. ಎಲ್ಲಾ ನೆಟ್ವರ್ಕ್​ಗಳು ಮತ್ತು ಸಿಸ್ಟಂಗಳನ್ನು ಐಎಸ್​ಟಿಗೆ ಮಿಳಿತಗೊಳಿಸುವುದು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಸುರಕ್ಷಿತ ಎನಿಸುತ್ತದೆ. ನ್ಯಾವಿಗೇಶನ್ ರೀತಿ ರಿಯಲ್ ಟೈಮ್ ಅಪ್ಲಿಕೇಶನ್​ಗಳಲ್ಲಿ ಇದು ಅವಶ್ಯಕ ಎನಿಸುತ್ತದೆ.

ಐಎಸ್​ಟಿಯನ್ನು ಭಾರತದ ಎಲ್ಲಾ ಸೆಕ್ಟರ್​ಗಳೂ ಬಳಸುವುದು ನಿಯಮ ಪ್ರಕಾರ ಕಡ್ಡಾಯ ಅಲ್ಲವಾದರೂ, ವ್ಯವಸ್ಥೆ ದೃಷ್ಟಿಯಿಂದ ಅವಶ್ಯಕ. ಕಡ್ಡಾಯ ಬಳಕೆ ಎನ್ನುವ ನಿಯಮ ಇಲ್ಲದ್ದರಿಂದ ಟೆಲಿಕಾಂ ಸರ್ವಿಸ್ ನೀಡುಗರು, ಇಂಟರ್ನೆಟ್ ಸರ್ವಿಸ್ ನೀಡುಗರು (ಐಎಸ್​ಪಿ) ಮೊದಲಾದವರು ಐಎಸ್​ಟಿಯನ್ನು ಅಳವಡಿಸದೇ ಜಿಪಿಎಸ್ ಇತ್ಯಾದಿ ಹೊರ ದೇಶಗಳ ಕಾಲಮಾನ ವ್ಯವಸ್ಥೆಯನ್ನು ಬಳಸುತ್ತಿರುವುದುಂಟು.

ಇದನ್ನೂ ಓದಿ: ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಅವಧಿ ಫೆ. 28ಕ್ಕೆ ಅಂತ್ಯ; ಮುಂದುವರಿಯುವ ಸಾಧ್ಯತೆ ಇಲ್ಲ; ಸರ್ಕಾರದಿಂದ ಬೇರೆ ಅಭ್ಯರ್ಥಿಗಳಿಗೆ ಹುಡುಕಾಟ

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ, ಐಎಸ್​ಟಿಯನ್ನು ಅಳವಡಿಸಲು ಅನುವಾಗುವ ರೀತಿಯಲ್ಲಿ ನೀತಿ, ನಿಯಮಾವಳಿ, ಶಾಸನಗಳನ್ನು ರೂಪಿಸಲು ನೆರವಾಗುವಂತೆ ತಿಳಿಸಲಾಯಿತು. ನ್ಯಾಷನಲ್ ಫಿಸಿಕಲ್ ಲ್ಯಾಬ್, ಇಸ್ರೋ, ಐಐಟಿ ಕಾನಪುರ್, ಎನ್​ಐಸಿ, ಸೆಬಿ, ಸರ್ಟ್-ಇನ್ ಇತ್ಯಾದಿ ಸಂಸ್ಥೆಗಳಿಂದ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದರು. ಹಾಗೆಯೇ, ರೈಲ್ವೇಸ್, ಟೆಲಿಕಾಂ, ಫೈನಾನ್ಷಿಯಲ್ ಸರ್ವಿಸಸ್ ಇತ್ಯಾದಿ ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳಿಂದಲೂ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದರು.

ಹಲವ ಸಭೆಗಳ ಬಳಿಕ ಈ ಸಮಿತಿ ಒಂದಷ್ಟು ಶಿಫಾರಸುಗಳನ್ನು ಮಾಡಿತು. ಅದರ ಆಧಾರದ ಮೇಲೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಅಡಿಗೆ ಬರುವ ಲೀಗಲ್ ಮೆಟ್ರೋಲಜಿ ಡಿವಿಶನ್​ನಿಂದ 2025ರ ಐಎಸ್​ಟಿ ನಿಯಮಗಳ – (Legal Metrology -IST- draft rules) ಕರಡು ಪ್ರತಿ ಸಿದ್ಧವಾಗಿದೆ. ಜನವರಿ 15ರಂದು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಅದರ ಲಿಂಕ್ ಈ ಕೆಳಕಂಡಂತಿದೆ.

consumeraffairs.nic.in/sites/default/files/file-uploads/latestnews/Draft%20Rules%20Time%20Dissemination.pdf

ಈ ಕರಡು ಪ್ರತಿಯಲ್ಲಿರುವ ಅಂಶಗಳ ಯಾರಿಗಾದರೂ ಪ್ರತಿಕ್ರಿಯೆ ನೀಡಬೇಕೆನಿಸಿದಲ್ಲಿ ಫೆಬ್ರುವರಿ 14ರವರೆಗೂ ಕಾಲಾವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ