Festive Season: ಹಬ್ಬದ ಅವಧಿಯಲ್ಲಿ ಮಿತಿಮೀರಿದ ಖರ್ಚಾಗುತ್ತಿದೆಯೇ? ತಡೆಯಲು ಇಲ್ಲಿದೆ 5 ಟಿಪ್ಸ್

ಈ ದೀಪಾವಳಿ ಹಬ್ಬದ ಅವಧಿಯಲ್ಲಿ ಅತಿಯಾಗಿ ಖರ್ಚಾಗುವುದನ್ನು ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Festive Season: ಹಬ್ಬದ ಅವಧಿಯಲ್ಲಿ ಮಿತಿಮೀರಿದ ಖರ್ಚಾಗುತ್ತಿದೆಯೇ? ತಡೆಯಲು ಇಲ್ಲಿದೆ 5 ಟಿಪ್ಸ್
ಸಾಂದರ್ಭಿಕ ಚಿತ್ರImage Credit source: PTI
Follow us
| Updated By: ಗಣಪತಿ ಶರ್ಮ

Updated on: Oct 24, 2022 | 5:29 PM

ಹಬ್ಬದ ಅವಧಿಯಲ್ಲಿ (Festive Season) ತುಸು ಹೆಚ್ಚೇ ಖರ್ಚಾಗುವುದು (Expenditure) ಸಹಜ. ಆನ್​ಲೈನ್ ಹಾಗೂ ಆಫ್​ಲೈನ್ ಮಾರುಕಟ್ಟೆಗಳಲ್ಲಿ ಅನೇಕ ರಿಯಾಯಿತಿ ದರದ ಕೊಡುಗೆಗಳು ಲಭ್ಯವಿರುತ್ತವೆ. ಇದರಿಂದಾಗಿ ಗ್ರಾಹಕರು ತಮಗರಿವಿಲ್ಲದೆಯೇ ಹೆಚ್ಚು ಖರ್ಚು ಮಾಡುವಂತಾಗುತ್ತದೆ. ಇಂಥ ಖರ್ಚು ನಿಮ್ಮ ಹಣಕಾಸಿನ ಯೋಜನೆ ಮೇಲೆ ದೊಡ್ಡ ಹೊಡೆತ ನೀಡಬಹುದು. ಹೀಗಾಗಿ ಖರ್ಚುಗಳನ್ನು ಕಡಿಮೆ ಮಾಡುವುದಕ್ಕಾಗಿ ಮತ್ತು ಅಗತ್ಯವುಳ್ಳ ವಸ್ತುಗಳ ಖರೀದಿಗಾಗಿ ವಿವೇಕಯುತ ಕ್ರಮ ಕೈಗೊಳ್ಳುವುದು ಉಳಿತಾಯದ ಹಿತದೃಷ್ಟಿಯಿಂದ ಅಗತ್ಯ. ಈ ದೀಪಾವಳಿ (Diwali) ಹಬ್ಬದ ಅವಧಿಯಲ್ಲಿ ಅತಿಯಾಗಿ ಖರ್ಚಾಗುವುದನ್ನು ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ;

ಭಾವನಾತ್ಮಕ ಖರೀದಿಯನ್ನು ತಪ್ಪಿಸಿ

ಶಾಪಿಂಗ್ ಅಥವಾ ಖರೀದಿಯಲ್ಲಿ ಮನಸ್ಸಿನ ಪ್ರಚೋದನೆ ಬಹು ಮುಖ್ಯವಾಗಿ ಕೆಲಸ ಮಾಡುತ್ತದೆ. ಭಾವನಾತ್ಮಕವಾಗಿ ಖರೀದಿಗೆ ಮುಂದಾಗುವುದು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ವಸ್ತುವೊಂದು ಬೇಕೆನಿಸಿದಾಗ ಅದು ಅಗತ್ಯವಿದೆಯೋ ಇಲ್ಲವೋ ಎಂದು ವಿವೇಚಿಸದೆ, ಆಫರ್ ಇದೆ ಎಂಬ ಮಾತ್ರಕ್ಕೆ ಹಠಾತ್ ಖರೀದಿಗೆ ಮುಂದಾಗುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ಹಣಕಾಸಿನ ಒತ್ತಡಕ್ಕೆ ಒಳಗಾಗಬೇಕಾಗಬಹುದು. ದೈನಂದಿನ ವೆಚ್ಚಗಳ ಬಗ್ಗೆ ಶಿಸ್ತಿನಿಂದ ಇರಿ.

ಇದನ್ನೂ ಓದಿ
Image
Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ
Image
Share Market Predictions: ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ ರಜೆ, ತ್ರೈಮಾಸಿಕ ಫಲಿತಾಂಶ, ಮಾಸಾಂತ್ಯ…
Image
ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
Image
Dhanteras 2022: ದೀಪಾವಳಿಯ ಎರಡು ದಿನ 40 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ; ಸಿಎಐಟಿ

ನಿಮ್ಮ ಬಜೆಟ್ ತಿಳಿದಿರಲಿ

ಹಲವು ವಸ್ತುಗಳನ್ನು ಖರೀದಿಸಬೇಕಾಗಿ ಬಂದಾಗ ನಿಮ್ಮ ಬಜೆಟ್ ಏನಿದೆ ಎಂಬುದರ ಬಗ್ಗೆ ಗಮನವಿರಲಿ. ಖರ್ಚಿನ ಸಾಮರ್ಥ್ಯ, ಭವಿಷ್ಯದ ಹಣಕಾಸು ಲಭ್ಯತೆ, ಉಳಿತಾಯ ಹಾಗೂ ತಿಂಗಳ ಮಾಮೂಲಿ ಖರ್ಚಿನ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕಿಕೊಂಡೇ ಹಬ್ಬದ ಅವಧಿಯ ಶಾಪಿಂಗ್​ಗೆ ಮುಂದಾಗುವುದು ಒಳ್ಳೆಯದು. ಇಲ್ಲವಾದಲ್ಲಿ ತಿಂಗಳ ಕೊನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು.

ಇದನ್ನೂ ಓದಿ: Fixed Deposit: ಎಫ್​ಡಿ ಖಾತೆ ತೆರೆಯಲು ಉದ್ದೇಶಿಸಿದ್ದೀರಾ? ಇಲ್ಲಿದೆ ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್ ಬಡ್ಡಿ ವಿವರ

ದೀಪಾವಳಿ ಹಬ್ಬದ ಶಾಪಿಂಗ್ ಸಮಯದಲ್ಲಿ ಬಜೆಟ್ ಮೀರಿ ಖರ್ಚಾಗುವುದು ಅಥವಾ ಖರ್ಚು ಮಾಡುವುದು ಸಹಜ. ಆದರೆ, ಇದರಿಂದಾಗಿ ಹಬ್ಬದ ಋತುವಿನ ನಂತರದ ನಿಮ್ಮ ಅಗತ್ಯಗಳ ಮೇಲೆ ಹೊರೆಯಾಗದಿರಲಿ. ಬಾಡಿಗೆ ಅಥವಾ ಇಎಂಐಗಳಂತಹ ಪ್ರಾಥಮಿಕ ವೆಚ್ಚಗಳನ್ನು ಪೂರೈಸುವ ನಿಮ್ಮ ಸಾಮರ್ಥ್ಯದ ಮೇಲೆ ಹಬ್ಬದ ಶಾಪಿಂಗ್ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಕ್ರೆಡಿಟ್ ಕಾರ್ಡ್‌ ಬಳಸಿಕೊಂಡೇ ಹೆಚ್ಚು ಖರ್ಚು ಮಾಡಿದ್ದರೂ, ಮರುಪಾವತಿ ಬಗ್ಗೆ ಜಾಗೃತರಾಗಿರಿ. ಯೋಜಿತವಲ್ಲದ ವೆಚ್ಚವು ನಿಮ್ಮ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಿ ಎಂದು ಬ್ಯಾಂಕ್​ಬಾಜಾರ್ ಡಾಟ್ ಕಾಮ್​ನ ಸಿಇಒ ಅದಿಲ್ ಶೆಟ್ಟಿ ಸಲಹೆ ನೀಡಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಖರೀದಿ ಬಗ್ಗೆ ಮೊದಲೇ ಯೋಜನೆ ಸಿದ್ಧಪಡಿಸಿ

ಪ್ರತಿ ವರ್ಷ ಹಬ್ಬದ ಅವಧಿಯ ಖರೀದಿಗಳ ಬಗ್ಗೆ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡರೆ ಉತ್ತಮ. ಆ ಸಂದರ್ಭದಲ್ಲಿ ನಿಮ್ಮ ಬಳಿ ಹಣಕಾಸಿನ ಹರಿವು ಹೇಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಯೋಜನೆ ರೂಪಿಸಿ ಉಳಿತಾಯ ಮಾಡಿಕೊಂಡರೆ ಬಹಳ ಒಳ್ಳೆಯದು ಎಂದಿದ್ದಾರೆ ಹಣಕಾಸು ಸಲಹೆಗಾರರು. ಉದಾಹರಣೆಗೆ; ಹಬ್ಬದ ಅವಧಿಯಲ್ಲಿ 1 ಲಕ್ಷ ರೂ. ಖರ್ಚು ಮಾಡಬೇಕು ಎಂದುಕೊಂಡಿದ್ದೀರಿ ಎಂದುಕೊಳ್ಳೋಣ. ಇದಕ್ಕೆ ಪೂರಕವಾಗಿ ತಿಂಗಳಿಗೆ ಕನಿಷ್ಠ 10,000 ರೂ. ಆದರೂ ಉಳಿತಾಯ ಮಾಡಲಾರಂಭಿಸಿ. ಆರ್​ಡಿ ಅಥವಾ ಇನ್ನಾವುದೇ ರೂಪದಲ್ಲಿ ಹೂಡಿಕೆ ಆರಂಭಿಸಿ. ಇದು ಹಬ್ಬದ ಅವಧಿಯಲ್ಲಿ ನಿಮಗೆ ಶಾಪಿಂಗ್​ನಿಂದ ಹೆಚ್ಚಿನ ಹೊರೆಯಾಗುವುದನ್ನು ತಪ್ಪಿಸಬಹುದು.

ಅಗತ್ಯಗಳು ಮತ್ತು ಆದ್ಯತೆಗಳ ಮೇಲೆ ಗಮನವಿರಲಿ

ಶಾಪಿಂಗ್ ಮಾಡುವಾಗ ನಿಮ್ಮ ಅಗತ್ಯಗಳು ಮತ್ತು ಆದ್ಯತೆಗಳ ಮೇಲೆ ಗಮನವಿರಲಿ. ತೀರಾ ಅನಿವಾರ್ಯವಲ್ಲದ ವಸ್ತುಗಳ ಖರೀದಿಯನ್ನು ಮುಂದೂಡಬಹುದು. ತಕ್ಷಣಕ್ಕೆ ಅನಿವಾರ್ಯವಿದೆ ಎಂಬ ವಸ್ತುಗಳನ್ನಷ್ಟೇ ಖರೀದಿಸಿ.

ನೋ ಕಾಸ್ಟ್ ಇಎಂಐ ಆಯ್ಕೆಗಳ ಬಗ್ಗೆ ತಿಳಿಯಿರಿ

ಹಬ್ಬದ ಅವಧಿಯಲ್ಲಿ ವಿವಿಧ ಬ್ಯಾಂಕ್​ಗಳ ಕ್ರೆಡಿಟ್ ಕಾರ್ಡ್​ಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ನೀಡಲಾಗುತ್ತದೆ. ಇವುಗಳ ಬಗ್ಗೆ ಗಮನ ಇರಲಿ. ಇಂಥ ಆಫರ್​ಗಳ ಪ್ರಯೋಜನ ಪಡೆಯುವುದರಿಂದ ಒಂದೇ ಬಾರಿಗೆ ದೊಡ್ಡ ಮೊತ್ತ ಖರ್ಚಾಗುವುದನ್ನು ತಡೆಯಬಹುದು. ಅಲ್ಲದೆ, ಬಡ್ಡಿರಹಿತವಾಗಿ ಕಂತಿನಲ್ಲಿ ಹಣವನ್ನು ಪಾವತಿ ಮಾಡಬಹುದು. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಉತ್ತಮಗೊಳ್ಳಬುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?