Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ

Tips To Manage Money: ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಹಣಕಾಸು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಉಳಿತಾಯ, ಹೂಡಿಕೆ, ಹಣದ ಬೆಳವಣಿಗೆ ಬಗ್ಗೆ ಯುವಸಮುದಾಯಕ್ಕೆ ತಿಳಿವಳಿಕೆ ಇರಬೇಕು ಎಂದು ಕುಶಾಲ್ ಲೋಧಾ ಹೇಳುತ್ತಾರೆ.

Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ
ಹೂಡಿಕೆ
Follow us
|

Updated on: Aug 04, 2023 | 1:41 PM

ಹಣ ಸಂಪಾದನೆಯಂತೆ ಹಣ ನಿರ್ವಹಣೆಯೂ (Money Management) ಬಹಳ ಮುಖ್ಯ. ಇಲ್ಲದಿದ್ದರೆ ಕೂಡಿಟ್ಟ ಆಸ್ತಿ ಕರಗಿದಂತೆ, ಗಳಿಸಿದ ಸಂಪಾದನೆ ನೋಡನೋಡುತ್ತಿದ್ದಂತೆಯೇ ಶೂನ್ಯವಾಗಿ ಹೋಗುತ್ತದೆ. ಉಳಿತಾಯ, ಹೂಡಿಕೆಗಳ ಬಗ್ಗೆ ಸರಿಯಾದ ಮಾಹಿತಿ ಅಥವಾ ಮನೋಭಾವನೆ ಇಲ್ಲದೇ ಹೋದರೆ ಜೀವನ ಕಷ್ಟಕರ ಆಗುತ್ತದೆ. ಕೆಎಜಿಆರ್​ನ ಸಂಸ್ಥಾಪಕ ಕುಶಾಲ್ ಲೋಧಾ (Kushal Lodha, founder of KAGR) ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಯುವಜನರಲ್ಲಿಆರ್ಥಿಕ ಮತ್ತು ಹಣಕಾಸು ತಿಳಿವು ಬಹಳ ಬೇಗ ಮೂಡಬೇಕು ಎಂದು ವಾದಿಸಿದ್ದಾರೆ. ಅವರು ನೀಡಿರುವ ಕೆಲ ಪ್ರಮುಖ ಟಿಪ್ಸ್​ಗಳನ್ನು ಇಲ್ಲಿ ನೀವು ಓದಬಹುದು.

  • ಬಾಲ್ಯದಿಂದಲೇ ಮಕ್ಕಳಲ್ಲಿ ಪೋಷಕರು ಹಣದ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಹಣ ಬೆಳೆಯುವ ವಿಧಾನದ ತಿಳಿವಳಿಕೆ ನೀಡಬೇಕು. ಉಳಿತಾಯ, ಹೂಡಿಕೆ ಇವುಗಳ ಬಗ್ಗೆ ಜ್ಞಾನದ ಬೀಜ ಬಿತ್ತಬೇಕು.
  • ಯುವ ಸಮುದಾಯವು ಪರ್ಸನಲ್ ಫೈನಾನ್ಸ್ ಅಥವಾ ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಯಾವ್ಯಾವ ಹೂಡಿಕೆ ಆಯ್ಕೆಗಳಿವೆ ಎಂಬುದನ್ನು ಬಹಳ ಬೇಗನೇ ತಿಳಿದುಕೊಳ್ಳಬೇಕು.

ಇದನ್ನೂ ಓದಿ: FD vs PPF: ಎಫ್​ಡಿ ಉತ್ತಮವೋ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉತ್ತಮವೋ? ಇಲ್ಲೊಂದು ಹೋಲಿಕೆ

  • ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಿಂದಲೇ ನಿವೃತ್ತಿಗಾಗಿ ಹೂಡಿಕೆ ಮಾಡುವುದಕ್ಕೆ ತೊಡಗಬೇಕು
  • ನಿಮ್ಮ ದಿನದ ಮತ್ತು ತಿಂಗಳ ಖರ್ಚು, ವೆಚ್ಚ, ಆದಾಯ, ಉಳಿತಾಯ ಇವೆಲ್ಲವನ್ನೂ ದಾಖಲು ಮಾಡಿಟ್ಟುಕೊಳ್ಳಬೇಕು. ಡೈರಿಯಲ್ಲಾದರೂ ಸರಿ, ಎಕ್ಸೆಲ್​ನಲ್ಲಾದರೂ ಸರಿ ಇವುಗಳನ್ನು ಬರೆದಿಟ್ಟರೆ ನಮ್ಮ ಹಣವನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.
  • ಹೂಡಿಕೆ ಎಂದರೆ ಎಫ್​ಡಿ ಮಾತ್ರವಲ್ಲ. ಹೂಡಿಕೆ ವಿಸ್ತೃತ ಕ್ಷೇತ್ರದಲ್ಲಿ ಇರಬೇಕು. ಈಕ್ವಿಟಿ (ಷೇರು), ನಿಶ್ಚಿತ ಠೇವಣಿ, ಪಿಪಿಎಫ್, ಗೋಲ್ಡ್ ಬಾಂಡ್ ಇತ್ಯಾದಿಗಳಲ್ಲಿ ಹೂಡಿಕೆ ಹಣ ಹಂಚಬೇಕು. ಹೆಚ್ಚಿನ ಪಾಲು ಈಕ್ವಿಟಿಯತ್ತ ಇರಬೇಕು. ಎಫ್​ಡಿ, ಕಾರ್ಪೊರೇಟ್ ಬಾಂಡ್ ಇತ್ಯಾದಿ ಒಂದೇ ತೆರನಾದ ಕಡೆ ಹೂಡಿಕೆ ಮಾಡಿದರೆ ಹೆಚ್ಚು ಆಭ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್: 10 ಲಕ್ಷ ರೂ ಇದ್ದರೆ ಎಷ್ಟು ಪಿಂಚಣಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

  • ನಿಮ್ಮ ಜೀವನದ ಗುರಿ ಏನು, ಅಗತ್ಯತೆಗಳು ಏನು ಎಂಬುದನ್ನು ಆರಂಭದಲ್ಲೇ ಕಂಡುಕೊಳ್ಳಬೇಕು. ಅದರಂತೆ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ, ಮನೆ ಕಟ್ಟುವುದು, ಕಾರು ಖರೀದಿಸುವುದು ಇತ್ಯಾದಿ.
  • ನಿಶ್ಚಿತ ಆದಾಯ ತರುವ ಆಸ್ತಿ ಗಳಿಸಲು ಯೋಜಿಸಿ. ಇದರಿಂದ ನೀವು ರಿಸ್ಕ್ ಇಲ್ಲದ ಆರಾಮ ಜೀವನ ನಡೆಸಬಹುದು.

(ಮಾಹಿತಿಕೃಪೆ: ಕುಶಾಲ್ ಲೋಧ, ಕೆಎಜಿಆರ್ ಸಂಸ್ಥಾಪಕರು)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ