AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ

Tips To Manage Money: ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಹಣಕಾಸು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಉಳಿತಾಯ, ಹೂಡಿಕೆ, ಹಣದ ಬೆಳವಣಿಗೆ ಬಗ್ಗೆ ಯುವಸಮುದಾಯಕ್ಕೆ ತಿಳಿವಳಿಕೆ ಇರಬೇಕು ಎಂದು ಕುಶಾಲ್ ಲೋಧಾ ಹೇಳುತ್ತಾರೆ.

Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 04, 2023 | 1:41 PM

Share

ಹಣ ಸಂಪಾದನೆಯಂತೆ ಹಣ ನಿರ್ವಹಣೆಯೂ (Money Management) ಬಹಳ ಮುಖ್ಯ. ಇಲ್ಲದಿದ್ದರೆ ಕೂಡಿಟ್ಟ ಆಸ್ತಿ ಕರಗಿದಂತೆ, ಗಳಿಸಿದ ಸಂಪಾದನೆ ನೋಡನೋಡುತ್ತಿದ್ದಂತೆಯೇ ಶೂನ್ಯವಾಗಿ ಹೋಗುತ್ತದೆ. ಉಳಿತಾಯ, ಹೂಡಿಕೆಗಳ ಬಗ್ಗೆ ಸರಿಯಾದ ಮಾಹಿತಿ ಅಥವಾ ಮನೋಭಾವನೆ ಇಲ್ಲದೇ ಹೋದರೆ ಜೀವನ ಕಷ್ಟಕರ ಆಗುತ್ತದೆ. ಕೆಎಜಿಆರ್​ನ ಸಂಸ್ಥಾಪಕ ಕುಶಾಲ್ ಲೋಧಾ (Kushal Lodha, founder of KAGR) ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಯುವಜನರಲ್ಲಿಆರ್ಥಿಕ ಮತ್ತು ಹಣಕಾಸು ತಿಳಿವು ಬಹಳ ಬೇಗ ಮೂಡಬೇಕು ಎಂದು ವಾದಿಸಿದ್ದಾರೆ. ಅವರು ನೀಡಿರುವ ಕೆಲ ಪ್ರಮುಖ ಟಿಪ್ಸ್​ಗಳನ್ನು ಇಲ್ಲಿ ನೀವು ಓದಬಹುದು.

  • ಬಾಲ್ಯದಿಂದಲೇ ಮಕ್ಕಳಲ್ಲಿ ಪೋಷಕರು ಹಣದ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಹಣ ಬೆಳೆಯುವ ವಿಧಾನದ ತಿಳಿವಳಿಕೆ ನೀಡಬೇಕು. ಉಳಿತಾಯ, ಹೂಡಿಕೆ ಇವುಗಳ ಬಗ್ಗೆ ಜ್ಞಾನದ ಬೀಜ ಬಿತ್ತಬೇಕು.
  • ಯುವ ಸಮುದಾಯವು ಪರ್ಸನಲ್ ಫೈನಾನ್ಸ್ ಅಥವಾ ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಯಾವ್ಯಾವ ಹೂಡಿಕೆ ಆಯ್ಕೆಗಳಿವೆ ಎಂಬುದನ್ನು ಬಹಳ ಬೇಗನೇ ತಿಳಿದುಕೊಳ್ಳಬೇಕು.

ಇದನ್ನೂ ಓದಿ: FD vs PPF: ಎಫ್​ಡಿ ಉತ್ತಮವೋ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉತ್ತಮವೋ? ಇಲ್ಲೊಂದು ಹೋಲಿಕೆ

  • ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಿಂದಲೇ ನಿವೃತ್ತಿಗಾಗಿ ಹೂಡಿಕೆ ಮಾಡುವುದಕ್ಕೆ ತೊಡಗಬೇಕು
  • ನಿಮ್ಮ ದಿನದ ಮತ್ತು ತಿಂಗಳ ಖರ್ಚು, ವೆಚ್ಚ, ಆದಾಯ, ಉಳಿತಾಯ ಇವೆಲ್ಲವನ್ನೂ ದಾಖಲು ಮಾಡಿಟ್ಟುಕೊಳ್ಳಬೇಕು. ಡೈರಿಯಲ್ಲಾದರೂ ಸರಿ, ಎಕ್ಸೆಲ್​ನಲ್ಲಾದರೂ ಸರಿ ಇವುಗಳನ್ನು ಬರೆದಿಟ್ಟರೆ ನಮ್ಮ ಹಣವನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.
  • ಹೂಡಿಕೆ ಎಂದರೆ ಎಫ್​ಡಿ ಮಾತ್ರವಲ್ಲ. ಹೂಡಿಕೆ ವಿಸ್ತೃತ ಕ್ಷೇತ್ರದಲ್ಲಿ ಇರಬೇಕು. ಈಕ್ವಿಟಿ (ಷೇರು), ನಿಶ್ಚಿತ ಠೇವಣಿ, ಪಿಪಿಎಫ್, ಗೋಲ್ಡ್ ಬಾಂಡ್ ಇತ್ಯಾದಿಗಳಲ್ಲಿ ಹೂಡಿಕೆ ಹಣ ಹಂಚಬೇಕು. ಹೆಚ್ಚಿನ ಪಾಲು ಈಕ್ವಿಟಿಯತ್ತ ಇರಬೇಕು. ಎಫ್​ಡಿ, ಕಾರ್ಪೊರೇಟ್ ಬಾಂಡ್ ಇತ್ಯಾದಿ ಒಂದೇ ತೆರನಾದ ಕಡೆ ಹೂಡಿಕೆ ಮಾಡಿದರೆ ಹೆಚ್ಚು ಆಭ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್: 10 ಲಕ್ಷ ರೂ ಇದ್ದರೆ ಎಷ್ಟು ಪಿಂಚಣಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

  • ನಿಮ್ಮ ಜೀವನದ ಗುರಿ ಏನು, ಅಗತ್ಯತೆಗಳು ಏನು ಎಂಬುದನ್ನು ಆರಂಭದಲ್ಲೇ ಕಂಡುಕೊಳ್ಳಬೇಕು. ಅದರಂತೆ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ, ಮನೆ ಕಟ್ಟುವುದು, ಕಾರು ಖರೀದಿಸುವುದು ಇತ್ಯಾದಿ.
  • ನಿಶ್ಚಿತ ಆದಾಯ ತರುವ ಆಸ್ತಿ ಗಳಿಸಲು ಯೋಜಿಸಿ. ಇದರಿಂದ ನೀವು ರಿಸ್ಕ್ ಇಲ್ಲದ ಆರಾಮ ಜೀವನ ನಡೆಸಬಹುದು.

(ಮಾಹಿತಿಕೃಪೆ: ಕುಶಾಲ್ ಲೋಧ, ಕೆಎಜಿಆರ್ ಸಂಸ್ಥಾಪಕರು)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!