AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಟರ್ನೆಟ್ ಇಲ್ಲದ ಫೀಚರ್ ಫೋನ್​ನಿಂದ ಯುಪಿಐ ಪೇಮೆಂಟ್: ಫೋನ್​ಪೇಯಿಂದ UPI 123Pay ಸೇವೆ

PhonePe launches UPI 123Pay service for feature phones: ಭಾರತದ ನಂಬರ್ ಒನ್ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್​ಪೇ ಫೀಚರ್ ಫೋನ್ ಬಳಕೆದಾರರಿಗೆ ಯುಪಿಐ ಪೇಮೆಂಟ್ ಫೀಚರ್ ಶುರು ಮಾಡಿದೆ. ಇಂಟರ್ನೆಟ್ ಸಂಪರ್ಕ ಇಲ್ಲದ ಫೀಚರ್ ಫೋನ್​ನಲ್ಲಿ ಫೋನ್​ಪೇನ ಯುಪಿಐ 123ಪೇ ಸರ್ವಿಸ್ ಬಳಸಿ ಯುಪಿಐ ಪೇಮೆಂಟ್ ಮಾಡಬಹುದು.

ಇಂಟರ್ನೆಟ್ ಇಲ್ಲದ ಫೀಚರ್ ಫೋನ್​ನಿಂದ ಯುಪಿಐ ಪೇಮೆಂಟ್: ಫೋನ್​ಪೇಯಿಂದ UPI 123Pay ಸೇವೆ
ಫೋನ್‌ಪೇImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2026 | 9:55 PM

Share

ನವದೆಹಲಿ, ಆಗಸ್ಟ್ 31: ಭಾರತದ ಅತಿದೊಡ್ಡ ಯುಪಿಐ ಪೇಮೆಂಟ್ ಸಂಸ್ಥೆಯಾದ ಫೋನ್‌ಪೇ (PhonePe) ಇದೀಗ ಫೀಚರ್ ಫೋನ್​ಗಳಿಗೆ ಯುಪಿಐ ಪಾವತಿ ಅವಕಾಶ ಕಲ್ಪಿಸಿದೆ. ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಸೌಲಭ್ಯವಿಲ್ಲದ ಕೀಪ್ಯಾಡ್ (Feature) ಫೋನ್ ಬಳಕೆದಾರರಿಗಾಗಿ ‘PhonePe UPI 123Pay’ ಎಂಬ ನೂತನ ಸೇವೆ ಪ್ರಾರಂಭಿಸಿದೆ.

ಈ ಸೇವೆಯು ಎಸ್‌ಎಮ್‌ಎಸ್ (SMS) ಆಧಾರಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವುದರಿಂದ 2G ನೆಟ್‌ವರ್ಕ್ ಇರುವ ಪ್ರದೇಶಗಳಲ್ಲೂ ಇಂಟರ್ನೆಟ್ ಇಲ್ಲದೆಯೇ ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು.

ಇದನ್ನೂ ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

ನೆರವು ಮತ್ತು ಸೇವೆಗಳು: ಫೋನ್​ಪೆನ ಈ ಹೊಸ ಸೇವೆಯ ಮೂಲಕ ಹಣ ವರ್ಗಾವಣೆ, ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವುದು, ಬ್ಯಾಲೆನ್ಸ್ ಪರಿಶೀಲನೆ ಹಾಗೂ ವಹಿವಾಟಿನ ವಿವರಗಳನ್ನು ನೋಡಬಹುದು.

ಭಾರತದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿದ್ದು, ಥರ್ಡ್ ಪಾರ್ಟಿ ಆಪ್ (TPAP) ವಿಭಾಗದಲ್ಲಿ ಈ ಸೌಲಭ್ಯ ತಂದ ಮೊದಲ ಪ್ರಮುಖ ಸಂಸ್ಥೆ ಫೋನ್‌ಪೇ ಆಗಿದೆ.

ನೋಕಿಯಾ (Nokia), ಎಚ್‌ಎಂಡಿ (HMD), ಲಾವಾ (Lava) ಮತ್ತು ಐಟೆಲ್ (Itel) ಫೋನ್‌ಗಳಲ್ಲಿ ಈ ಆಪ್ ಪ್ರೀ-ಇನ್‌ಸ್ಟಾಲ್ (pre-bundled) ಆಗಿ ಸಿಗಲಿದೆ.

ಇದನ್ನೂ ಓದಿ: ಶೇ. 90 ಆದಾಯ ಹೂಡಿಕೆ ಹಾಕುವ ರಾಧಿಕಾ ಗುಪ್ತಾ; ಒಂದು ಪೈಸೆಯೂ ಉಳಿಸಲು ಆಗದಿದ್ದ ಅವರಿಗೆ ಇದು ಸಾಧ್ಯವಾಗಿದ್ದು ಹೇಗೆ?

ಧ್ವನಿ ಸಹಾಯ (Voice Assistant): ಫೀಚರ್ ಫೋನ್​ಗಳಲ್ಲಿ ಯುಪಿಐ ಪೇಮೆಂಟ್ ಸೌಲಭ್ಯವನ್ನು ಸಕ್ರಿಯಗೊಳಿಸಲು ಮತ್ತು ಬಳಸಲು ಸಹಾಯ ಮಾಡಲು ಕನ್ನಡ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಎಐ (AI) ಧ್ವನಿ ಮಾರ್ಗದರ್ಶನ ಲಭ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ