AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Schengen Visa: ಶೆಂಜೆನ್ ವೀಸಾ ಇಲ್ಲದ ಭಾರತೀಯರು ಯುರೋಪಿಯನ್ ಒಕ್ಕೂಟದ ಏರ್‌ಲೈನ್ಸ್‌ನಲ್ಲಿ ಯುಕೆಗೆ ತೆರಳಲು ಸಾಧ್ಯವಿಲ್ಲ

ಯುರೋಪಿಯನ್ ಒಕ್ಕೂಟದ ವಿಮಾನಗಳಲ್ಲಿ ಯುನೈಟೆಡ್​ ಕಿಂಗ್​ಡಮ್​ಗೆ ತೆರಳುವುದಕ್ಕೆ ಭಾರತೀಯರಿಗೆ ಟ್ರಾನ್ಸಿಟ್ ಅಥವಾ ಶೆಂಜೆನ್ ವೀಸಾ ಕಡ್ಡಾಯವಾಗಿದೆ.

Schengen Visa: ಶೆಂಜೆನ್ ವೀಸಾ ಇಲ್ಲದ ಭಾರತೀಯರು ಯುರೋಪಿಯನ್ ಒಕ್ಕೂಟದ ಏರ್‌ಲೈನ್ಸ್‌ನಲ್ಲಿ ಯುಕೆಗೆ ತೆರಳಲು ಸಾಧ್ಯವಿಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 15, 2022 | 8:58 PM

Share

ಭಾರತೀಯ ನಾಗರಿಕರು ಟ್ರಾನ್ಸಿಟ್ ಅಥವಾ ಸಾಮಾನ್ಯ ಶೆಂಜೆನ್ ವೀಸಾಗಳಿಲ್ಲದೆ ಲುಫ್ತಾನ್ಸಾ, ಕೆಎಲ್‌ಎಂ ಮತ್ತು ಏರ್ ಫ್ರಾನ್ಸ್‌ನಂತಹ ಯುರೋಪಿಯನ್ ಒಕ್ಕೂಟದ ಏರ್‌ಲೈನ್‌ಗಳ ಮೂಲಕ ಯು.ಕೆ.ಗೆ (UK) ತೆರಳಲು ಸಾಧ್ಯ ಆಗುವುದಿಲ್ಲ. ಏಕೆಂದರೆ ಅವರನ್ನು ಭಾರತದಲ್ಲಿಯೇ ಮೂಲ ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸಲಾಗುತ್ತದೆ. ಯು.ಕೆ. ಇನ್ನು ಮುಂದೆ ಯುರೋಪಿಯನ್ ಒಕ್ಕೂಟದ ಭಾಗವಾಗಿ ಇಲ್ಲದಿರುವುದರಿಂದ, ಬ್ರೆಕ್ಸಿಟ್‌ನ ನಂತರ ಅದರ ವಿಮಾನ ಯಾನ ಸಂಸ್ಥೆಗಳು ನಿರ್ವಹಿಸುವ ಸಾರಿಗೆ ವಿಮಾನಗಳಲ್ಲಿ ಯು.ಕೆ.ಗೆ ಹಾರಲು ಯುರೋಪಿಯನ್ ಒಕ್ಕೂಟಕ್ಕೆ ಸೇರಿಲ್ಲದ ನಾಗರಿಕರು ಟ್ರಾನ್ಸಿಟ್, ಶೆಂಜೆನ್ ವೀಸಾವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಶೆಂಜೆನ್ ವೀಸಾವು ಅಲ್ಪಾವಧಿಯದಾಗಿದ್ದು, ಅದನ್ನು ಹೊಂದಿರುವವರು ಶೆಂಜೆನ್ ಪ್ರದೇಶದಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದು ಯುರೋಪಿಯನ್ ಒಕ್ಕೂಟದ 26 ದೇಶಗಳು ಅಥವಾ “ಶೆಂಜೆನ್ ಸರ್ಕಾರಗಳ” ಮಧ್ಯೆ ಗಡಿ ನಿಯಂತ್ರಣಗಳಿಲ್ಲದೆ ಸಂಚರಿಸಬಹುದಾಗಿದೆ. ಕಳೆದ ವರ್ಷ ಜನವರಿ 1ರಂದು ಈ ಕ್ರಮ ಜಾರಿಗೆ ಬಂತು. ಯುರೋಪಿಯನ್ ಒಕ್ಕೂಟಕ್ಕೆ ಸೇರಿಲ್ಲದ ಅಲ್ಲದ ನಾಗರಿಕರು ಟ್ರಾನ್ಸಿಟ್ ಅಥವಾ ಸಾಮಾನ್ಯ ಶೆಂಜೆನ್ ವೀಸಾ ಇಲ್ಲದೆ ಯು.ಕೆ.ಗೆ ಕೇವಲ ತಡೆರಹಿತ ವಿಮಾನಗಳ ಮೂಲಕ ಅಥವಾ ಗಲ್ಫ್ ರಾಷ್ಟ್ರಗಳು ಅಥವಾ ಸ್ವಿಟ್ಜರ್ಲೆಂಡ್ ಮೂಲಕ ಒಂದು ಸ್ಟಾಪ್ ವಿಮಾನಗಳಲ್ಲಿ ಮಾತ್ರ ಹಾರಬಹುದು. ಯುರೋಪಿಯನ್ ಒಕ್ಕೂಟದ ನಿಯಮವು ಸ್ವಿಟ್ಜರ್ಲೆಂಡ್‌ಗೆ ಅನ್ವಯಿಸುವುದಿಲ್ಲ ಏಕೆಂದರೆ ಅದು ಒಕ್ಕೂಟದ ಸದಸ್ಯ ಅಲ್ಲ.

ಆದರೂ ಯುನೈಟೆಡ್ ಕಿಂಗ್‌ಡಮ್‌ಗೆ ನೇರವಾಗಿ ಹಾರುವ ಹಲವಾರು ಸೇವೆಗಳಿವೆ. ನಿಗದಿತ ಅಂತರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸಿದ ನಂತರ ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತ ಮತ್ತು ಪ್ರಪಂಚದ ಇತರ ಭಾಗಗಳ ಮಧ್ಯೆ ಒಂದು-ನಿಲುಗಡೆ (One Stop) ಸಂಪರ್ಕವನ್ನು ನೀಡಲು ಪ್ರಾರಂಭಿಸಿವೆ. ರಷ್ಯಾ-ಉಕ್ರೇನ್ ಸಂಘರ್ಷದ ನಂತರ ಈ ಏಕ-ನಿಲುಗಡೆ ವ್ಯವಹಾರವು ಗಮನಾರ್ಹವಾಗಿ ಹೆಚ್ಚಾಗಿದೆ. ಕಳೆದ ವರ್ಷ ಏರ್ ಇಂಡಿಯಾ ಭಾರತ ಮತ್ತು ಯು.ಕೆ. ನಡುವೆ ತಡೆರಹಿತ ವಿಮಾನಗಳನ್ನು ಘೋಷಿಸಿತ್ತು.

ಇದನ್ನೂ ಓದಿ: Passport power index 2022: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ; ಪಾಸ್​ಪೋರ್ಟ್ ಶ್ರೇಯಾಂಕದಲ್ಲಿ ಏಳು ಸ್ಥಾನ ಮೇಲೇರಿದ ಭಾರತ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?