AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ?

ಟ್ವಿಟರ್​ನಲ್ಲೇ ಮೊದಲು ಕಾರ್ಯನಿರ್ವಹಿಸಿದ್ದ, ಭಾರತೀಯ ಮೂಲದ ಟೆಕಿ ಶ್ರೀರಾಮ್ ಕೃಷ್ಣನ್ ಅವರು ಎಲಾನ್ ಮಸ್ಕ್​ಗೆ ನೆರವಾಗುವ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ?
ಶ್ರೀರಾಮ್ ಕೃಷ್ಣನ್Image Credit source: Twitter
TV9 Web
| Edited By: |

Updated on:Nov 01, 2022 | 1:38 PM

Share

ನವದೆಹಲಿ: ಟ್ವಿಟರ್ (Twitter) ಖರೀದಿ ಪ್ರಕ್ರಿಯೆಯನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದ ಉದ್ಯಮಿ ಎಲಾನ್ ಮಸ್ಕ್ (Elon Musk), ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿರುವವರನ್ನು ವಜಾಗೊಳಿಸಿದ್ದರು. ಟ್ವಿಟರ್​ ಅನ್ನು ಸರಪಡಿಸಿ ಮತ್ತೆ ಸರಿದಾರಿಗೆ ತರುತ್ತೇನೆ ಎಂದಿರುವ ಮಸ್ಕ್ ಇದೀಗ ಆ ಕೆಲಸಕ್ಕೆ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನೇ ಆಯ್ದುಕೊಳ್ಳುವ ಬಗ್ಗೆ ಬಲವಾದ ಸುಳಿವು ದೊರೆತಿದೆ. ಟ್ವಿಟರ್​ನಲ್ಲೇ ಮೊದಲು ಕಾರ್ಯನಿರ್ವಹಿಸಿದ್ದ, ಭಾರತೀಯ ಮೂಲದ ಟೆಕಿ ಶ್ರೀರಾಮ್ ಕೃಷ್ಣನ್ ಅವರು ಎಲಾನ್ ಮಸ್ಕ್​ಗೆ ನೆರವಾಗುವ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಯಾರು ಈ ಶ್ರೀರಾಮ್ ಕೃಷ್ಣನ್?

ಇದನ್ನೂ ಓದಿ
Image
Petrol Price on November 1: ಇಂದಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ; ಪ್ರತಿ ಲೀಟರ್​ಗೆ 40 ಪೈಸೆ ಕುಸಿತ
Image
LPG Cylinder Price: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟು?
Image
Banking Frauds: ಎಚ್ಚರ, ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಇದೆಯೇ ನೋಡಿಕೊಂಡು ವ್ಯವಹರಿಸಿ
Image
FD Rates: ಎಫ್​ಡಿಗೆ ಶೇಕಡಾ 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತಿವೆ ಈ ಬ್ಯಾಂಕ್​ಗಳು

ಶ್ರೀರಾಮ್ ಕೃಷ್ಣನ್ ಅವರು ಎಂಜಿನಿಯರ್ ಹಾಗೂ ತಂತ್ರಜ್ಞರಾಗಿದ್ದು ಟ್ವಿಟರ್, ಮೆಟಾ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2005ರಲ್ಲಿ ಅವರು ತಮ್ಮ 21ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ್ದರು. ನಂತರ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದ್ದರು.

ಟ್ವಿಟರ್​ನ ಮುಖ್ಯ ಟೈಮ್​ಲೈನ್, ಅದಕ್ಕೆ ಹೊಸ ಯುಐ ಅಭಿವೃದ್ಧಿಪಡಿಸುವಲ್ಲಿ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿಸುವಲ್ಲಿ ಶ್ರೀರಾಮ್ ಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದರು. ಫೇಸ್​ಬುಕ್​ನಲ್ಲಿ​ (ಮೆಟಾ) ಮೊಬೈಲ್ ಜಾಹೀರಾತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದರು. ಇದು ಇಂದು ಅತಿದೊಡ್ಡ ಜಾಹೀರಾತು ಪ್ರದರ್ಶನ ವೇದಿಕೆಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: Twitter Verification: ಟ್ವಿಟರ್​ನಲ್ಲಿ ಮಹತ್ವದ ಬದಲಾವಣೆ: ಬ್ಲೂಟಿಕ್ ಬೇಕಾದಲ್ಲಿ ಹಣ ಪಾವತಿಸಬೇಕು

ಮೈಕ್ರೋಸಾಫ್ಟ್​ನಲ್ಲಿ ವೃತ್ತಿ ಆರಂಭಿಸಿದ್ದ ಅವರು ವಿಂಡೋಸ್​ಗಾಗಿ ಹೆಚ್ಚು ಕೆಲಸ ಮಾಡಿದ್ದರು. ಸದ್ಯ ಆರಂಭಿಕ ಹಂತದಲ್ಲಿರುವ ಸ್ಟಾರ್ಟಪ್​ಗಳಲ್ಲಿ ಹೂಡಿಕೆದಾರರಾಗಿರುವ ಅವರು, ಎ16ಝಡ್ (a16z) ಕಂಪನಿಯ ಭಾಗವಾಗಿದ್ದು, ಕ್ರಿಪ್ಟೊ ಕರೆನ್ಸಿ ವಹಿವಾಟುಗಳ ಬಗ್ಗೆ ಕೂಲಂಕಷವಾಗಿ ಗಮನಿಸುತ್ತಿದ್ದಾರೆ.

‘ಈಗ ವಿಷಯ ಹೊರಬಿದ್ದಿದೆ. ನಾನು ಎಲಾನ್ ಮಸ್ಕ್ ಅವರಿಗೆ ಹಾಗೂ ಟ್ವಿಟರ್​ಗೆ ಕೆಲವೊಬ್ಬರು ಮಹಾನ್ ವ್ಯಕ್ತಿಗಳ ಜತೆಗೂಡಿ ನೆರವಾಗಲಿದ್ದೇನೆ. ಇದು ಅತ್ಯಂತ ಪ್ರಮುಖವೆಂದು ನಾನು (a16z) ಭಾವಿಸಿದ್ದು ಜಾಗತಿಕವಾಗಿ ಪರಿಣಾಮ ಬೀರಬಹುದು ಎಂದು ತಿಳಿದಿದ್ದೇನೆ. ಎಲಾನ್ ಮಸ್ಕ್ ಅದನ್ನು ಸಾಧ್ಯವಾಗಿಸಲಿದ್ದಾರೆ’ ಎಂದು ಶ್ರೀರಾಮ್ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.

ಶ್ರೀರಾಮ್ ಕೃಷ್ಣನ್ ಹಾಗೂ ಅವರ ಪತ್ನಿ ಜತೆಯಾಗಿ ‘ದಿ ಗೂಟ್ ಟೈಮ್’ ಎಂಬ ಪಾಡ್​ಕಾಸ್ಟ್ ಶೋವನ್ನೂ ನಡೆಸಿಕೊಡುತ್ತಿದ್ದು, ಮಾರ್ಕ್​ ಜುಕರ್​ಬರ್ಗ್, ಕಾಲ್​ವಿನ್ ಹ್ಯಾರಿಸ್ ಹಾಗೂ ಎಲಾನ್ ಮಸ್ಕ್​ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು.

ಶ್ರೀರಾಮ್ ಕೃಷ್ಣನ್ ಹೇಗೆ ಮಸ್ಕ್​ಗೆ ನೆರವಾಗಬಲ್ಲರು?

ಈ ಹಿಂದೆ ಶ್ರೀರಾಮ್ ಕೃಷ್ಣನ್ ಟ್ವಿಟರ್​ನಲ್ಲಿ ಕಾರ್ಯನಿರ್ವಹಿಸಿದ್ದರಿಂದ ಅದರ ಪ್ರಯೋಜನವನ್ನು ಪಡೆಯುವತ್ತ ಮಸ್ಕ್ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ. ಕಂಪನಿಯನ್ನು ಪುನರುತ್ಥಾನಗೊಳಿಸುವಲ್ಲಿ ಹಾಗೂ ಹೇಗೆ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಬಹುದು ಎಂಬ ಬಗ್ಗೆ ಅರಿಯಲು ಮಸ್ಕ್​​ಗೆ ಶ್ರೀರಾಮ್ ಕೃಷ್ಣನ್ ಅವರ ​ಅನುಭವ ನೆರವಿಗೆ ಬರಬಹುದು. ಟ್ವಿಟರ್​ ಸದ್ಯ ಮುಖ್ಯವಾಗಿ ಎದುರಿಸುತ್ತಿರುವುದು ಮಾನಿಟೈಸೇಷನ್ ಸಮಸ್ಯೆ. ಇದರ ಬಗ್ಗೆ ಮಸ್ಕ್ ಅವರು ಈಗಾಗಲೇ ಹಲವು ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟರ್​ನ ಬ್ಲೂ ಸಬ್​ಸ್ಕ್ರಿಪ್ಷನ್​ಗೆ ಸುಮಾರು 1,640 ರೂ. ಶುಲ್ಕ ವಿಧಿಸಲು ಮಸ್ಕ್ ಯೋಷಿಸುತ್ತಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು. ಮಸ್ಕ್ ಅವರು ಟ್ವಿಟರ್​ನಲ್ಲಿ ತಮ್ಮ ಉದ್ಯಮ ಯೋಜನೆಗಳನ್ನು ಜಾರಿಗೆ ತರಲು ಶ್ರೀರಾಮ್ ಕೃಷ್ಣನ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Tue, 1 November 22

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ