AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೆಂಡ್ಸ್​ ಆಗಿರುವುದಾದರೆ ಡಿವೋರ್ಸ್​ ಯಾಕೆ ಬೇಕಿತ್ತು? ಕಿರಣ್​ ರಾವ್​ ಕುಟುಂಬದ್ದೂ ಇದೇ ಪ್ರಶ್ನೆ

ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ಡಿವೋರ್ಸ್ ಪಡೆದಿದ್ದರೂ ತುಂಬ ಆಪ್ತವಾಗಿದ್ದಾರೆ. ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಸಮಾರಂಭಗಳಲ್ಲಿ ಒಟ್ಟಿಗೆ ಸೇರುತ್ತಿದ್ದಾರೆ. ಈ ಚಂದಕ್ಕೆ ಡಿವೋರ್ಸ್​ ಯಾಕೆ ತೆಗೆದುಕೊಳ್ಳಬೇಕಿತ್ತು ಅಂತ ಅನೇಕರು ಈಗಾಗಲೇ ಕೇಳಿದ್ದಾರೆ. ಈ ಪ್ರಶ್ನೆಯ ಬಗ್ಗೆ ಕಿರಣ್ ರಾವ್​ ಅವರು ವಿವರವಾಗಿ ಮಾತನಾಡಿದ್ದಾರೆ.

ಫ್ರೆಂಡ್ಸ್​ ಆಗಿರುವುದಾದರೆ ಡಿವೋರ್ಸ್​ ಯಾಕೆ ಬೇಕಿತ್ತು? ಕಿರಣ್​ ರಾವ್​ ಕುಟುಂಬದ್ದೂ ಇದೇ ಪ್ರಶ್ನೆ
ಆಮಿರ್​ ಖಾನ್​, ಕಿರಣ್​ ರಾವ್​
Follow us
ಮದನ್​ ಕುಮಾರ್​
|

Updated on: Jul 22, 2024 | 6:24 PM

ಸಾಮಾನ್ಯವಾಗಿ ಯಾವುದೇ ದಂಪತಿ ವಿಚ್ಛೇದನ ಪಡೆದುಕೊಂಡರೂ ಅವರ ನಡುವೆ ಮನಸ್ತಾಪ ಜೋರಾಗಿರುತ್ತದೆ. ಡಿವೋರ್ಸ್​ ಬಳಿಕ ಒಬ್ಬರ ಮುಖ ಇನ್ನೊಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣ ಆಗಿರುತ್ತದೆ. ಆದರೆ ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರು ವಿಚ್ಛೇದನ ಪಡೆದ ನಂತರವೂ ಸ್ನೇಹಿತರಾಗಿ ಮುಂದುವರಿದಿದ್ದಾರೆ. ಅವರಿಬ್ಬರ ನಡುವೆ ಈಗಲೂ ಆಪ್ತವಾದ ಸ್ನೇಹ ಇದೆ. ಈ ರೀತಿ ಫ್ರೆಂಡ್ಸ್​ ಆಗಿ ಇರುವುದಾದರೆ ವಿಚ್ಛೇದನ ಪಡೆಯುವ ಅಗತ್ಯ ಏನಿತ್ತು ಎಂಬುದು ಅನೇಕರ ಪ್ರಶ್ನೆ. ಕಿರಣ್​ ರಾವ್​ ಅವರ ತಂದೆ-ತಾಯಿ ಕೂಡ ಕಿರಣ್​ಗೆ ಇದೇ ಪ್ರಶ್ನೆ ಕೇಳಿದ್ದರಂತೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿರಣ್ ರಾವ್​ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಆಮಿರ್​ ಖಾನ್​ ಜೊತೆ ಕಿರಣ್​ ರಾವ್​ ಅವರು ಸ್ನೇಹ ಮುಂದುವರಿಸಿದ್ದಾರೆ. ಆಮಿರ್​ ಖಾನ್​ರ ಮೊದಲ ಪತ್ನಿಯ ಮಗಳಾದ ಇರಾ ಖಾನ್​ ಮದುವೆಯಲ್ಲಿ ಕಿರಣ್​ ರಾವ್​ ಭಾಗಿ ಆಗಿದ್ದರು. ಅಷ್ಟೇ ಅಲ್ಲದೇ, ಕಿರಣ್​ ರಾವ್​ ನಿರ್ದೇಶನದ ‘ಲಾಪತಾ ಲೇಡೀಸ್​’ ಸಿನಿಮಾಗೆ ಆಮಿರ್​ ಖಾನ್​ ಬಂಡವಾಳ ಹೂಡಿದರು. ಈ ಮಾಜಿ ದಂಪತಿಗೆ ಆಜಾದ್​ ಎಂಬ ಮಗನಿದ್ದು, ಆತನ ಪಾಲನೆಯ ಜವಾಬ್ದಾರಿಯನ್ನು ಇಬ್ಬರೂ ನಿಭಾಯಿಸುತ್ತಿದ್ದಾರೆ. ಈ ಆಪ್ತತೆ ಬಗ್ಗೆ ಕಿರಣ್ ರಾವ್​ ಮಾತನಾಡಿದ್ದಾರೆ.

‘ನನ್ನ ಪಾಲಕರು ಕೂಡ ಇದೇ ಪ್ರಶ್ನೆ ಕೇಳುತ್ತಾರೆ. ಆದರೆ ನಾನು ಸ್ವತಂತ್ರವಾಗಿ ಇರಬೇಕು. ಆಜಾದ್​ನ ಪಾಲಕರಾಗಿ, ಕುಟುಂಬದವರಾಗಿ ಆಮಿರ್​ ಜೊತೆ ನನಗೆ ಉತ್ತಮ ಬಾಂಧವ್ಯ ಇದೆ. ಇದರಿಂದ ವಿಚ್ಛೇದನವನ್ನು ಸಹಿಸಲು ಸಾಧ್ಯವಾಯ್ತು. ಆಜಾದ್​ನ ತಂದೆ ನನ್ನ ಆಪ್ತ ಸ್ನೇಹಿತ ಎಂಬ ಭರವಸೆಯಲ್ಲಿ ನಾನು ನನ್ನ ವೈಯಕ್ತಿಕ ಸಮಯವನ್ನು ಕಳೆಯಬಹುದು. ನನಗೆ ಮತ್ತು ಆಮಿರ್​ ಖಾನ್​ ಅವರಿಗೆ ಭಾವನಾತ್ಮಕವಾಗಿ, ಮಾನಸಿಕವಾಗಿ ಈ ಸ್ಥಿತಿಗೆ ಬರಲು ಸ್ವಲ್ಪ ಸಮಯ ಹಿಡಿಯಿತು. ನಾವು ಬೇರೆ ಎಲ್ಲಿಗೋ ಹೋಗುವುದಿಲ್ಲ. ಎಂದೆಂದಿಗೂ ನಾವು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತೇನೆ. ಅದಕ್ಕೆ ದಂಪತಿಯೇ ಆಗಿರಬೇಕಿಲ್ಲ’ ಎಂದು ಕಿರಣ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಮಗ ಜುನೈದ್​ ಖಾನ್​ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್​ ಜೋಡಿ

‘ಒಂಟಿಯಾಗಿ ಇರುವುದು ನನಗೆ ಖುಷಿ ನೀಡುತ್ತದೆ. ಆಮಿರ್​ ಜೊತೆ ಮದುವೆಗೂ ಮುನ್ನ ನಾನು ಒಂಟಿಯಾಗಿದ್ದೆ. ನನ್ನ ಸ್ವತಂತ್ರವನ್ನು ನಾನು ಎಂಜಾಯ್​ ಮಾಡಿದೆ. ಈಗ ನಾನು ಒಂಟಿಯಾದರೂ ಕೂಡ ಮಗ ಇದ್ದಾನೆ. ವಿಚ್ಛೇದನ ಬಯಸಿದ ಅನೇಕ ಮಹಿಳೆಯರು ಒಂಟಿಯಾಗಿರಲು ಹೆದರುತ್ತಾರೆ. ಅದೃಷ್ಟವಶಾತ್​ ನನಗೆ ಅದು ಎದುರಾಗಿಲ್ಲ. ಎರಡೂ ಕುಟುಂಬದವರಿಂದ ನನಗೆ ಬೆಂಬಲ ಸಿಕ್ಕಿತು. ನಮ್ಮದು ಖುಷಿ ಖುಷಿಯ ಡಿವೋರ್ಸ್​’ ಎಂದಿದ್ದಾರೆ ಕಿರಣ್​ ರಾವ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು