AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​ ಸಿಂಗ್​ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ

Jayeshbhai Jordaar: ರಣವೀರ್​ ಸಿಂಗ್ ಅವರ ಡ್ರೆಸ್ಸಿಂಗ್​ ಸೆನ್ಸ್​ ಬಗ್ಗೆ ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ.

ರಣವೀರ್​ ಸಿಂಗ್​ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ
ರಣವೀರ್ ಸಿಂಗ್
TV9 Web
| Edited By: |

Updated on: May 12, 2022 | 9:05 AM

Share

ಬಾಲಿವುಡ್​ನ ಜನಪ್ರಿಯ ನಟ ರಣವೀರ್​ ಸಿಂಗ್​ (Ranveer Singh) Ranveer Singh Movies, Bollywood News,  ಅವರು ಇತರೆ ಹೀರೋಗಳಿಗಿಂತಲೂ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರ ನಡೆ-ನುಡಿ ಮಾತ್ರವಲ್ಲದೇ ಧರಿಸುವ ಬಟ್ಟೆಯಲ್ಲೂ ಭಿನ್ನತೆ ಇದೆ. ಜನರ ಕಣ್ಣಿಗೆ ಅತಿ ವಿಚಿತ್ರವಾಗಿ ಕಾಣುವ ಬಟ್ಟೆಗಳನ್ನು ಧರಿಸುವ ಮೂಲಕ ರಣವೀರ್​ ಸಿಂಗ್​ ಸುದ್ದಿ (Ranveer Singh News) ಆಗುತ್ತಾರೆ. ಪ್ರತಿ ಬಾರಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಅವರ ಕಾಸ್ಟ್ಯೂಮ್ ಗಮನಿಸುತ್ತಾರೆ. ಡ್ರೆಸ್​ ಆಯ್ಕೆಯ ವಿಚಾರದಲ್ಲಿ ರಣವೀರ್ ಸಿಂಗ್​ ಅವರ ಅಭಿರುಚಿ ಯಾಕೆ ಈ ರೀತಿ ಇದೆ ಎಂದು ಜನರು ತಲೆ ಕೆಡಿಸಿಕೊಂಡಿದ್ದಾರೆ. ಈ ಕುರಿತಾಗಿ ಅವರಿಗೆ ಪ್ರಶ್ನೆ ಕೂಡ ಎದುರಾಗಿದೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ರಣವೀರ್ ಸಿಂಗ್​ ಉತ್ತರ ನೀಡಿದ್ದಾರೆ. ತಮ್ಮ ರಂಗು ರಂಗಿನ ಬಟ್ಟೆ (Ranveer Singh Dress)​ ಕುರಿತಾಗಿ ಇರುವ ಎಲ್ಲ ಅನುಮಾನಗಳನ್ನೂ ಅವರು ಪರಿಹರಿಸಿದ್ದಾರೆ. ಅಷ್ಟಕ್ಕೂ ಅವರು ಈ ರೀತಿ ಡ್ರೆಸ್​ ಮಾಡಿಕೊಳ್ಳುವುದು ಯಾಕೆ? ಇಲ್ಲಿದೆ ಉತ್ತರ..

ರಣವೀರ್​ ಸಿಂಗ್​ ನಟನೆಯ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 13ರಂದು ಈ ಸಿನಿಮಾ ರಿಲೀಸ್​ ಆಗುತ್ತಿದೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ಶಾಲಿನಿ ಪಾಂಡೆ ಅವರು ಈ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಪ್ರಚಾರ ಕಾರ್ಯದಲ್ಲಿ ರಣವೀರ್​ ಸಿಂಗ್​ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿದೆ.

ಇದನ್ನೂ ಓದಿ
Image
‘ಸೆಟ್​ನಲ್ಲಿ ಇಟ್ಟಿಗೆ ಎಸೆದರೂ ನಾನು ದೀಪಿಕಾಗೆ ಕಿಸ್ ಮಾಡುತ್ತಲೇ ಇದ್ದೆ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣವೀರ್
Image
ಅರೆಬರೆ ಬಟ್ಟೆ ತೊಟ್ಟು ವಿಡಿಯೋ ಪೋಸ್ಟ್​ ಮಾಡಿದ ಉರ್ಫಿ; ನೆಟ್ಟಿಗರಿಂದ ಟೀಕೆ
Image
‘ಇದು ರಣವೀರ್​ ಸಿಂಗ್​ ಡ್ರೆಸ್​’; ಬಟ್ಟೆ ವಿಚಾರದಲ್ಲಿ ಟ್ರೋಲ್​ ಆದ ದೀಪಿಕಾ ಪಡುಕೋಣೆ
Image
ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ರಣವೀರ್​ ಸಿಂಗ್​? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ

ರಣವೀರ್​ ಸಿಂಗ್​ ಅವರು ‘ಟ್ವಿಟರ್​ ಮೂವೀಸ್​’ ಖಾತೆ ಮೂಲಕ ತಮ್ಮ ಸಿನಿಮಾದ ಪ್ರಚಾರ ಮಾಡಿದ್ದಾರೆ. ಈ ರೀತಿ ಮಾಡಿದ ಮೊದಲ ಬಾಲಿವುಡ್​ ನಟ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. #AskRanveer ಎಂದು ಅಭಿಮಾನಿಗಳಿಂದ ಅವರು ಪ್ರಶ್ನೆ ಆಹ್ವಾನಿಸಿದ್ದರು. ಆಗ ಕೆಲವರು ಅವರ​ ಡ್ರೆಸ್ಸಿಂಗ್​ ಸೆನ್ಸ್​ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರಣವೀರ್​ ಸಿಂಗ್ ಉತ್ತರ ನೀಡಿದ್ದಾರೆ.

‘ನಾನು ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುತ್ತೇನೆ. ಮುಖಭಾವದಲ್ಲಿ ಆಗಿರಬಹುದು ಅಥವಾ ಮಾತಿನಲ್ಲಿ ಆಗಿರಬಹುದು. ಅದೇ ರೀತಿ ಬಟ್ಟೆಗಳ ವಿಚಾರದಲ್ಲೂ ನಾನು ಹೆಚ್ಚು ಎಕ್ಸ್​ಪ್ರೆಸಿವ್​ ವ್ಯಕ್ತಿ. ನಾನು ಭಾವನೆಗಳನ್ನು ತಡೆದು ಇಟ್ಟುಕೊಳ್ಳುವುದಿಲ್ಲ. ಬಹಳ ಕಾಲದ ಹಿಂದೆ ನಾನು ಈ ಗುಣವನ್ನು ಅಳವಡಿಸಿಕೊಂಡೆ. ಜನರು ಏನು ಅಂದುಕೊಳ್ಳುತ್ತಾರೋ ಎಂಬುದರ ಭಯ ಬಿಟ್ಟು, ಅನಿಸಿದ್ದನ್ನು ಹೇಳಲು ಶುರುಮಾಡಿದೆ. ಅದಕ್ಕೂ ಮುನ್ನ ನಾನು ಹೀಗೆ ಇರಲಿಲ್ಲ’ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ.

‘ಹೇಗಿದ್ದರೂ ಜನರು ನಮ್ಮನ್ನು ಜಡ್ಜ್​ ಮಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ನಿಮಗೆ ಏನು ಅನಿಸುತ್ತೋ ಅದನ್ನು ಹೇಳಬೇಕು. ಖುಷಿ ನೀಡುವಂತಹ ಬಟ್ಟೆಯನ್ನೇ ಹಾಕಬೇಕು. ಜನರು ಏನು ಅಂದುಕೊಳ್ಳುತ್ತಾರೋ ಎಂಬ ಭಯದಿಂದ ನಿಮ್ಮನ್ನು ನೀವು ಬಿಡಿಸಿಕೊಳ್ಳಬೇಕು’ ಎಂದು ರಣವೀರ್​ ಸಿಂಗ್​ ಉತ್ತರ ನೀಡಿದ್ದಾರೆ. ಆ ಮೂಲಕ ತಮ್ಮ ಬಟ್ಟೆಗಳ ಆಯ್ಕೆ ಹಿಂದಿನ ಮನಸ್ಥಿತಿ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ.

ಟ್ರೇಲರ್​ ಮೂಲಕ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಭರವಸೆ ಮೂಡಿಸಿದೆ. ‘83’ ಸಿನಿಮಾದ ಸೋಲಿನ ಬಳಿಕ ರಣವೀರ್​ ಸಿಂಗ್​ ಅವರಿಗೆ ಒಂದು ಗೆಲುವು ಬೇಕಾಗಿದೆ. ಹಾಗಾಗಿ ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!