AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್​

ಸೋಶಿಯಲ್ ಮೀಡಿಯಾದಲ್ಲಿ ಕುಬ್ರಾ ಪರ ಅನೇಕರು ಧ್ವನಿ ಎತ್ತಿದ್ದರು. ಕುಬ್ರಾ ಪಾಲಿಗೆ ಆ ಘಟನೆ ಮುಗಿದು ಹೋದ ಅಧ್ಯಾಯ. ಅದನ್ನೇ ಅವರು ಒತ್ತಿ ಹೇಳಿದ್ದಾರೆ.

ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್​
ಕುಬ್ರಾ
TV9 Web
| Edited By: |

Updated on: Jul 01, 2022 | 4:00 PM

Share

ನಟಿ ಕುಬ್ರಾ ಸೇಠ್ (Kubbra Sait) ಅವರು ಇತ್ತೀಚೆಗೆ ತಮ್ಮ ಆತ್ಮಕಥನ ಬಿಡುಗಡೆ ಮಾಡಿದ್ದರು. ‘ಓಪನ್​ ಬುಕ್’ (Open Book) ಹೆಸರಿನ ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ಘಟನೆಗಳನ್ನು ಅವರು ವಿವರಿಸಿದ್ದರು. ಆ ಪೈಕಿ 17ನೇ ವಯಸ್ಸಿಗೆ ಅವರು ಲೈಂಗಿಕ ಶೋಷಣೆಗೆ ಒಳಗಾಗಿದ್ದರು ಎಂಬುದು ಕೂಡ ಒಂದು. ಈ ಘಟನೆ ಬಗ್ಗೆ ಹೇಳಿಕೊಂಡಾಗ ಅನೇಕರು ಮರುಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕುಬ್ರಾ ಮಾತನಾಡಿದ್ದಾರೆ. ಜನರು ಅನುಕಂಪ ತೋರಲಿ ಎಂದು ನಾನು ಇದನ್ನು ಬರೆದಿಲ್ಲ ಎಂದು ಅವರು ಹೇಳಿದ್ದಾರೆ.

ಕುಬ್ರಾ 17ನೇ ವಯಸ್ಸಿನಲ್ಲಿರುವಾಗ ಅವರ ತಾಯಿಗೆ ರೆಸ್ಟೋರೆಂಟ್​ನ ಮಾಲೀಕ ಹಣದ ಸಹಾಯ ಮಾಡಿದ್ದ. ಆತ ಪದೇಪದೇ ಕುಬ್ರಾ ಮನೆಗೆ ಬರುತ್ತಿದ್ದ. ಕುಬ್ರಾರನ್ನು ಕೆಟ್ಟ ರೀತಿಯಲ್ಲಿ ಮುಟ್ಟುತ್ತಿದ್ದ. ಅವರಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ. ಈ ಬಗ್ಗೆ ಕುಬ್ರಾ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಪರ ಅನೇಕರು ಧ್ವನಿ ಎತ್ತಿದ್ದರು. ಕುಬ್ರಾ ಪಾಲಿಗೆ ಆ ಘಟನೆ ಮುಗಿದು ಹೋದ ಅಧ್ಯಾಯ. ಅದನ್ನೇ ಅವರು ಒತ್ತಿ ಹೇಳಿದ್ದಾರೆ.

‘ನಾನು ಓರ್ವ ಮಾನ್​ಸ್ಟರ್​ನನ್ನು ಜನರ ಮುಂದಿಡಬೇಕು ಎಂದು ಆ ಘಟನೆ ಬಗ್ಗೆ ಹೇಳಿಲ್ಲ. ನಾನು ಬರೆದ ಪುಸ್ತಕವನ್ನು ಓದಿ ತಪ್ಪು ಮಾಡಿದ ವ್ಯಕ್ತಿ ಬಂದು ಕ್ಷಮೆ ಕೇಳಲಿ ಎಂಬುದೂ ನನ್ನ ಉದ್ದೇಶ ಅಲ್ಲ. ನಾನು ಏನು ಎಂಬುದನ್ನು ಅವನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಾನು ಅದಕ್ಕೂ ಮೇಲಿದ್ದೇನೆ. ಆ ಘಟನೆ ನನ್ನ ಮನಸ್ಸಿಗೆ ಹತ್ತಿರವಾಗಿಲ್ಲ. ಅದನ್ನು ಮತ್ತೆ ಪುನರ್ಮನನ ಮಾಡಿಕೊಳ್ಳಬೇಕು ಅನಿಸುವುದಿಲ್ಲ’ ಎಂದಿದ್ದಾರೆ ಕುಬ್ರಾ.

ಇದನ್ನೂ ಓದಿ
Image
‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ
Image
ಪೊಲೀಸ್​ ಆಫೀಸರ್​​ ಆಗಿ ಬರ್ತಿದ್ದಾರೆ ದಾನಿಶ್ ಸೇಠ್; ವೂಟ್​ನಲ್ಲಿ ರಿಲೀಸ್ ಆಗ್ತಿದೆ ‘ಸೋಲ್ಡ್’
Image
‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​
Image
ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

‘ನಾನು ದುಃಖದಲ್ಲಿದ್ದೇನೆ ಎಂದು ಹೇಳುವ ಉದ್ದೇಶ ನನ್ನದಲ್ಲ. ಅಂತಹ ಘಟನೆಯಿಂದ ನಮಗೆ ದುಃಖ ಆಗುತ್ತದೆ ನಿಜ. ಆದರೆ, ನಾನು ಆ ಪರಿಸ್ಥಿತಿಯಿಂದ ಎಷ್ಟೋ ದೂರ ಬಂದಿದ್ದೇನೆ. ನಾನು ಹೊರ ಜಗತ್ತಿನ ವ್ಯಕ್ತಿಯಾಗಿ ಆ ಘಟನೆಯನ್ನು ನೋಡುತ್ತಿದ್ದೇನೆ. ಲೈಂಗಿಕ ಶೋಷಣೆ ಎಂಬುದು ನನ್ನನ್ನು ವ್ಯಾಖ್ಯಾನಿಸುವುದಿಲ್ಲ’ ಎಂಬುದು ಕುಬ್ರಾ ಮಾತು.

ನಟ, ಆ್ಯಂಕರ್​ ಹಾಗೂ ಆರ್​ಸಿಬಿ ಇನ್​ಸೈಡರ್ ಆಗಿರುವ​ ದ್ಯಾನಿಶ್ ಸೇಠ್​ ಸಹೋದರಿಯೇ ಕುಬ್ರಾ ಸೇಠ್. ಅವರು ಕೂಡ​ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೆಬ್​ ಸೀರಿಸ್​ನಲ್ಲಿ ಮಿಂಚಿರುವ ಅವರಿಗೆ ಹಾಲಿವುಡ್​ನಿಂದಲೂ ಆಫರ್​ ಇದೆ. ‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಅತ್ತಿದ್ದ ಕುಬ್ರಾ ಸೇಠ್​

‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್​​ಗೆ ಬೆಂಗಳೂರು ಹೋಟೆಲ್​ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ