AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ನೀಲ್ ಅರ್ಪಿಸುವ ಭಯಾನಕ ಸಿನಿಮಾ; ‘418’ ಟ್ರೇಲರ್ ಬಿಡುಗಡೆ

ಹಾರರ್ ಕಥಾಹಂದರದ ‘418’ ಸಿನಿಮಾವನ್ನು ಪ್ರಶಾಂತ್ ನೀಲ್ ಅವರು ಅರ್ಪಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಅವರ ಗರಡಿಯಲ್ಲಿ ಪಳಗಿರುವ ಕೀರ್ತನ್ ನಾಡಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಎ’ ಪ್ರಮಾಣಪತ್ರ ಪಡೆದಿರುವ ಈ ಸಿನಿಮಾದಲ್ಲಿ ಕನ್ನಡದ ನಟಿ ಚೈತ್ರಾ ಆಚಾರ್ ಅವರು ಅಭಿನಯಿಸಿದ್ದಾರೆ. ಟ್ರೇಲರ್ ಭಯಾನಕವಾಗಿದೆ.

ಪ್ರಶಾಂತ್ ನೀಲ್ ಅರ್ಪಿಸುವ ಭಯಾನಕ ಸಿನಿಮಾ; ‘418’ ಟ್ರೇಲರ್ ಬಿಡುಗಡೆ
418 Trailer Screen GrabImage Credit source: Mythri Movie Makers
ಮದನ್​ ಕುಮಾರ್​
|

Updated on: Sep 13, 2026 | 8:28 AM

Share

‘ಮೈತ್ರಿ ಮೂವಿ ಮೇಕರ್ಸ್’ ಸಂಸ್ಥೆಯ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ‘418’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ಕುತೂಹಲಕಾರಿ ಹಾರರ್ ಚಿತ್ರಗಳಲ್ಲಿ ‘418’ ಪ್ರಮುಖವಾದದ್ದು, ಸುಮಾರು 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ರಹಸ್ಯಮಯ ಕಟ್ಟಡವೊಂದರ ಸುತ್ತ ಹೆಣೆದಿರುವ ಭಯಾನಕ ಕಥೆಯ ಸುಳಿವನ್ನು ಈ ಟ್ರೇಲರ್ ನೀಡುತ್ತದೆ. ‘ಕೆಜಿಎಫ್’ ಹಾಗೂ ‘ಸಲಾರ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸುವ ಈ ಚಿತ್ರದ ಮೂಲಕ ಕೀರ್ತನ್ ನಾಡಗೌಡ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಟ್ರೇಲರ್‌ನ ಆರಂಭಿಕ ದೃಶ್ಯಗಳೇ ತೀವ್ರ ಕುತೂಹಲ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತವೆ. ಸೆಕ್ಯೂರಿಟಿ ಗಾರ್ಡ್ ಹೇಳುವ ನಿಗೂಢ ಮಾತುಗಳು ಆ ರಹಸ್ಯಮಯ ಕಟ್ಟಡದ ಕಡೆಗೆ ಬೆರಳು ಮಾಡಿಕೊಡುತ್ತವೆ. 15 ವರ್ಷಗಳಿಂದ ಯಾರೂ ಪ್ರವೇಶಿಸದ ಆ ಕಟ್ಟಡ ಮತ್ತು ಅದರೊಳಗಿನ ಭಯಾನಕ ‘ರೂಮ್ ನಂಬರ್ 418’ ರಹಸ್ಯವನ್ನು ಭೇದಿಸಲು ಹೊರಡುವ 18 ವರ್ಷದ ವಿವೇಕ್ ಎಂಬ ಯುವಕನ ಸುತ್ತ ಕಥೆ ಸಾಗುತ್ತದೆ. ಗರ್ಭಿಣಿ ದೇವಿಕಾ ಎಂಬ ಪಾತ್ರದ ಆಗಮನದೊಂದಿಗೆ ಕಥೆಯ ತಿರುವು ಮತ್ತಷ್ಟು ತೀವ್ರಗೊಳ್ಳುತ್ತದೆ.

ಟ್ರೇಲರ್‌ನ ದ್ವಿತೀಯಾರ್ಧವು ಸಂಪೂರ್ಣವಾಗಿ ಹಾರರ್ ಶೈಲಿಗೆ ತಿರುಗುತ್ತದೆ. ಕೇವಲ ದಿಢೀರ್ ಜಂಪ್ ಸ್ಕೇರ್‌ಗಳಿಗಷ್ಟೇ ಸೀಮಿತವಾಗದೆ, ಕಥೆಯ ನಿಧಾನಗತಿ, ಹಿನ್ನೆಲೆ ಸಂಗೀತ ಹಾಗೂ ಭಯಾನಕವಾದ ದೃಶ್ಯಗಳ ಮೂಲಕ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಪೋಷಕ ಪಾತ್ರವರ್ಗದ ಪ್ರತಿಯೊಬ್ಬರೂ ಈ ನಿಗೂಢ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಟ್ರೇಲರ್ ಸುಳಿವು ನೀಡುತ್ತದೆ.

‘418’ ಚಿತ್ರದ ಟ್ರೇಲರ್:

ಛಾಯಾಗ್ರಾಹಕ ದಿನೇಶ್ ದಿವಾಕರ್ ಅವರು ಆ ರಹಸ್ಯಮಯ ಕಟ್ಟಡದ ಆವರಣವನ್ನು ಅತ್ಯಂತ ಭಯಾನಕವಾಗಿ ಸೆರೆಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ವೆಂಕಿ ಜಿಜಿ ಅವರ ಹಿನ್ನೆಲೆ ಸಂಗೀತ ಭಯದ ತೀವ್ರತೆಯನ್ನು ಹೆಚ್ಚಿಸಿದೆ. ನಟಿ ಚೈತ್ರಾ ಆಚಾರ್ ವಿಭಿನ್ನ ಹಾಗೂ ಅಸಹಜ ನಡವಳಿಕೆಯ ಪಾತ್ರದಲ್ಲಿ ಕಂಗೊಳಿಸಿದ್ದು, ಅವರ ಅಭಿನಯ ಗಮನ ಸೆಳೆಯುತ್ತದೆ. ರಕ್ತಪಾತ ಮತ್ತು ಕ್ರೂರ ದೃಶ್ಯಗಳ ಸನ್ನಿವೇಶಗಳಿಂದಾಗಿ ಈ ಚಿತ್ರವು ಹೆಚ್ಚು ಕತ್ತಲೆ ಮತ್ತು ತೀವ್ರ ಸ್ವರೂಪದ ಹಾರರ್ ಅನುಭವ ನೀಡಲಿದೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಸದ್ಯಕ್ಕಂತೂ ಸೆಟ್ಟೇರಲ್ಲ ಮಹೇಶ್​ ಬಾಬು-ಪ್ರಶಾಂತ್ ನೀಲ್ ಸಿನಿಮಾ; ಇಲ್ಲಿದೆ ಕಾರಣಗಳ ಪಟ್ಟಿ

ಕೀರ್ತನ್ ನಾಡಗೌಡ ನಿರ್ದೇಶನದ ‘418’ ಚಿತ್ರವನ್ನು ಪ್ರಶಾಂತ್ ನೀಲ್ ಅರ್ಪಿಸುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಹಾರರ್ ಶೈಲಿಯ ಸಿನಿಮಾವನ್ನು ನಿರ್ಮಿಸಿರುವುದು ವಿಶೇಷ. ಈ ಚಿತ್ರವು ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್