AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಿಂಗೆ ಸಿನಿಮಾ ಮಾಡಿದ್ರೆ ನಿರ್ಮಾಪಕರು ನೇಣು ಹಾಕಿಕೊಳ್ತಾರೆ’: ಸುದೀಪ್​ ಹೇಳಿದ್ದು ಯಾರ ಬಗ್ಗೆ?

Kichcha Sudeep: ಬಿಗ್​ ಬಾಸ್​ಗೆ ಹೋಗುವುದಕ್ಕೂ ಮುನ್ನ ಆರ್ಯವರ್ಧನ್​ ಅವರು ಸಂಖ್ಯಾಶಾಸ್ತ್ರ ಹೇಳುವ ಮೂಲಕ ಫೇಮಸ್​ ಆಗಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಅವರು ಟ್ರೋಲ್​ ಆಗಿದ್ದೂ ಉಂಟು.

‘ಹಿಂಗೆ ಸಿನಿಮಾ ಮಾಡಿದ್ರೆ ನಿರ್ಮಾಪಕರು ನೇಣು ಹಾಕಿಕೊಳ್ತಾರೆ’: ಸುದೀಪ್​ ಹೇಳಿದ್ದು ಯಾರ ಬಗ್ಗೆ?
ಕಿಚ್ಚ ಸುದೀಪ್
TV9 Web
| Edited By: |

Updated on:Sep 17, 2022 | 6:33 PM

Share

ಚಿತ್ರರಂಗದಲ್ಲಿ ಕಿಚ್ಚ ಸುದೀಪ್​ (Kichcha Sudeep) ಅವರ ಅನುಭವ ಅಪಾರ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಎಲ್ಲ ನಿಭಾಗಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ತಿಳಿದಿದೆ. ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ಕಿಚ್ಚ ಸುದೀಪ್​ ನೀಡಿದ್ದಾರೆ. ಪರಭಾಷೆಯ ಚಿತ್ರರಂಗದಲ್ಲೂ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು, ಕಿರುತೆರೆ ಲೋಕದ ಜೊತೆಗೂ ಅವರ ನಂಟು ಚೆನ್ನಾಗಿದೆ. ‘ಬಿಗ್​ ಬಾಸ್’ (Bigg Boss) ಕಾರ್ಯಕ್ರಮವನ್ನು 8 ಸೀಸನ್​ಗಳಿಂದ ಅವರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್​ ಕೂಡ ಅವರ ನಿರೂಪಣೆಯಲ್ಲಿ ಮೂಡಿಬಂದಿದೆ. ಶುಕ್ರವಾರ (ಸೆ.16) ಇದರ ಫಿನಾಲೆ ನಡೆದಿದೆ. ಈ ವೇಳೆ ಅವರು, ‘ಈ ಥರ ಸಿನಿಮಾ ಮಾಡಿದ್ರೆ ನಿರ್ಮಾಪಕರು ನೇಣು ಹಾಕಿಕೊಳ್ತಾರೆ’ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್​ ಹೀಗೆ ಹೇಳಿದ್ದು ಯಾಕೆ? ಇಲ್ಲಿದೆ ಉತ್ತರ..

ಆರ್ಯವರ್ಧನ್​ ಗುರೂಜಿ, ರಾಕೇಶ್​ ಅಡಿಗ, ಸೋನು ಶ್ರೀನಿವಾಸ್​ ಗೌಡ, ಸಾನ್ಯಾ ಐಯ್ಯರ್​, ರೂಪೇಶ್​ ಶೆಟ್ಟಿ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ಜಶ್ವಂತ್​ ಬೋಪಣ್ಣ ಅವರು ಫಿನಾಲೆ ವಾರದವರೆಗೂ ಬಂದಿರು. ಇವರೆಲ್ಲರ ಪೈಕಿ ಹೆಚ್ಚು ಕಾಮಿಡಿ ಕಚಗುಳಿ ಇಟ್ಟವರು ಆರ್ಯವರ್ಧನ್​ ಗುರೂಜಿ. ಅವರನ್ನು ಕಲಾವಿದ ಎಂದು ಸೋಮಣ್ಣ ಬಣ್ಣಿಸಿದರು. ಆ ಮಾತಿಗೆ ಸುದೀಪ್​ ಕೂಡ ಧ್ವನಿಗೂಡಿಸಿದರು.

‘ಒಂದು ವೇಳೆ ನಾವು ಮಾಡಿದ ಸಿನಿಮಾಗಳನ್ನು ಆರ್ಯವರ್ಧನ್​ ಮಾಡಿದ್ದರೆ ಅವರು ಎಲ್ಲೋ ಹೋಗಿರುತ್ತಿದ್ದರು. ಅವರೇನಾದರೂ ಸಿನಿಮಾದಲ್ಲಿ ನಟಿಸಿದರೆ ಸಂಖ್ಯಾಶಾಸ್ತ್ರದ ಪ್ರಕಾರವೇ ಎಲ್ಲವನ್ನೂ ಆಯ್ಕೆ ಮಾಡುತ್ತಾರೆ. ಸಿನಿಮಾ ಹೆಸರಿನ ಅಕ್ಷರ ಎಷ್ಟು ಇರಬೇಕು? ಕಲಾವಿದರ ಡ್ರೆಸ್​ ಬಣ್ಣ ಯಾವುದು ಇರಬೇಕು? ಯಾವ ಬಣ್ಣದಲ್ಲಿ ಸೆಟ್​ ಹಾಕಬೇಕು? ಯಾವ ದಿನಾಂಕದಲ್ಲಿ ಶೂಟಿಂಗ್​ ಶುರು ಮಾಡಬೇಕು ಅಂತ ಹೇಳಬಹುದು. ಹಿಂಗೆಲ್ಲ ಸಿನಿಮಾ ಮಾಡಿದರೆ ನಿರ್ಮಾಪಕರು ಅರ್ಧಕ್ಕೆ ನೇಣು ಹಾಕಿಕೊಳ್ಳಬೇಕಾಗತ್ತೆ’ ಎಂದು ಸುದೀಪ್​ ಹೇಳಿದರು.

ಇದನ್ನೂ ಓದಿ
Image
Bigg Boss Kannada OTT Finale: ಜಯಶ್ರೀ, ಜಶ್ವಂತ್​, ಸೋಮಣ್ಣ, ಸೋನು ಗೌಡ ಪಾಲಿಗೆ ಅಂತ್ಯವಾಯ್ತು ಬಿಗ್​ ಬಾಸ್​ ಪಯಣ
Image
Roopesh Shetty: ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಟಾಪರ್​ ಆದ ರೂಪೇಶ್​ ಶೆಟ್ಟಿಗೆ 5 ಲಕ್ಷ ರೂ. ಬಹುಮಾನ
Image
BBK9 ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದ ರಾಕೇಶ್​, ರೂಪೇಶ್​, ಆರ್ಯವರ್ಧನ್​, ಸಾನ್ಯಾ ಐಯ್ಯರ್​
Image
Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ

ಬಿಗ್​ ಬಾಸ್​ಗೆ ಹೋಗುವುದಕ್ಕೂ ಮುನ್ನ ಆರ್ಯವರ್ಧನ್​ ಅವರು ಸಂಖ್ಯಾಶಾಸ್ತ್ರ ಹೇಳುವ ಮೂಲಕ ಫೇಮಸ್​ ಆಗಿದ್ದರು. ಅವರು ಹೇಳಿದ ಅನೇಕ ಸಂಗತಿಗಳು ನಿಜ ಆಗಿಲ್ಲ ಎಂಬ ಕಾರಣಕ್ಕೆ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಕೂಡ ಮಾಡಲಾಗಿತ್ತು. ‘ಬಿಗ್ ಬಾಸ್​ ಕನ್ನಡ ಒಟಿಟಿ’ ಕಾರ್ಯಕ್ರಮಕ್ಕೆ ಕಾಲಿಟ್ಟ ಬಳಿಕ ಆರ್ಯವರ್ಧನ್​ ಅವರ ಜನಪ್ರಿಯತೆ ಹೆಚ್ಚಿತು. ಅವರ ವ್ಯಕ್ತಿತ್ವ ಏನು ಎಂಬುದನ್ನು ವೀಕ್ಷಕರು ಈಗ ಹತ್ತಿರದಿಂದ ಕಂಡಿದ್ದಾರೆ. ತಮ್ಮ ಬದುಕಿನ ಅನೇಕ ಸಂಗತಿಗಳ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:33 pm, Sat, 17 September 22

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ