AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryavardhan Guruji: ಜಯಶ್ರೀ ಮಾಂಗಲ್ಯ ಸರಕ್ಕೆ ಆರ್ಯವರ್ಧನ್ ಸ್ಪಾನ್ಸರ್​; ಇದು ಜೋಕ್ ಅಲ್ಲ

Jayashree Aradhya: ಗುರೂಜಿ ಹಾಗೂ ಜಯಶ್ರೀ ನಡುವೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇದಕ್ಕೆ ಕಾರಣವೂ ಇದೆ. ಆರಂಭದಲ್ಲಿ ಜಯಶ್ರೀ ಹಾಗೂ ಚೈತ್ರಾ ಹಳ್ಳಿಕೇರಿ ಕ್ಲೋಸ್ ಆಗಿದ್ದರು. ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋದ ನಂತರದಲ್ಲಿ ಗುರೂಜಿ ಜತೆ ಜಯಶ್ರೀಗೆ ಬಾಂಧವ್ಯ ಬೆಳೆಯಿತು.

Aryavardhan Guruji: ಜಯಶ್ರೀ ಮಾಂಗಲ್ಯ ಸರಕ್ಕೆ ಆರ್ಯವರ್ಧನ್ ಸ್ಪಾನ್ಸರ್​; ಇದು ಜೋಕ್ ಅಲ್ಲ
ಜಯಶ್ರೀ-ಆರ್ಯವರ್ಧನ್
TV9 Web
| Edited By: |

Updated on:Sep 17, 2022 | 9:39 AM

Share

‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಅಂತ್ಯವಾಗಿದೆ. ಸೆಪ್ಟೆಂಬರ್​ 16ರ ರಾತ್ರಿ ಅದ್ದೂರಿಯಾಗಿ ಫಿನಾಲೆ ಕಾರ್ಯಕ್ರಮ ನಡೆದಿದೆ. ಸೆಪ್ಟೆಂಬರ್ 24ರಿಂದ ಬಿಗ್ ಬಾಸ್ ಟಿವಿ ಸೀಸನ್ ಆರಂಭ ಆಗಲಿದೆ. ಪ್ರತಿ ಬಾರಿ ಬಿಗ್ ಬಾಸ್ ಕೊನೆಯಾಗುವಾಗ ಎಲ್ಲಾ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಗುತ್ತದೆ. ಈ ಟಾಸ್ಕ್​ನ ಅನುಸಾರ ಮನೆಯ ಉಳಿದ ಸ್ಪರ್ಧಿಗಳಿಗೆ ಕ್ಷಮೆ ಕೇಳಬಹುದು, ಧನ್ಯವಾದ ಹೇಳಬಹುದು, ತಮ್ಮಿಷ್ಟದ ಸ್ಪರ್ಧಿಗೆ ಗಿಫ್ಟ್ ಕೂಡ ನೀಡಬಹುದು. ಈ ಸಂದರ್ಭದಲ್ಲಿ ಆರ್ಯವರ್ಧನ್ ಗುರೂಜಿ (Aryavardhan) ಅವರು ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಸ್ಪರ್ಧಿಗಳಲ್ಲಿ ಒಂದಷ್ಟು ಬದಲಾವಣೆ ಆಗುತ್ತದೆ. ಸಣ್ಣ ವಿಚಾರಕ್ಕೆ ದೊಡ್ಡ ಜಗಳ ನಡೆಯುತ್ತದೆ. ಕೆಲವರು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಕ್ಲೊಸ್ ಆಗುತ್ತಾರೆ. ಇನ್ನೂ ಕೆಲವರು ಗೊತ್ತಿಲ್ಲದೆಯೇ ಮತ್ತೊಬ್ಬರ ಮನಸ್ಸನ್ನು ನೋಯಿಸಿರುತ್ತಾರೆ. ಆ ಕ್ಷಣಗಳನ್ನು ನೆನಪು ಮಾಡಿಕೊಳ್ಳಲು, ತಪ್ಪಿದ್ದರೆ ಕ್ಷಮೆ ಕೇಳಲು ಬಿಗ್ ಬಾಸ್ ಈ ಬಾರಿ ಅವಕಾಶ ನೀಡಿದ್ದರು. ಆಗ ಮಾಂಗಲ್ಯ ಸರ ಮಾಡಿಸಿಕೊಡುವ ಭರವಸೆಯನ್ನು ಜಯಶ್ರೀಗೆ ಗುರೂಜಿ ನೀಡಿದ್ದಾರೆ.

ಗುರೂಜಿ ಹಾಗೂ ಜಯಶ್ರೀ ನಡುವೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇದಕ್ಕೆ ಕಾರಣವೂ ಇದೆ. ಆರಂಭದಲ್ಲಿ ಜಯಶ್ರೀ ಹಾಗೂ ಚೈತ್ರಾ ಹಳ್ಳಿಕೇರಿ ಕ್ಲೋಸ್ ಆಗಿದ್ದರು. ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋದ ನಂತರದಲ್ಲಿ ಗುರೂಜಿ ಜತೆ ಜಯಶ್ರೀಗೆ ಬಾಂಧವ್ಯ ಬೆಳೆಯಿತು. ಅದನ್ನು ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಅನೇಕ ಬಾರಿ ಮಾತನಾಡಿಕೊಂಡಿದ್ದಿದೆ.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ ವಸ್ತುವನ್ನು ಗಿಫ್ಟ್ ಆಗಿ ಮತ್ತೊಂದು ಸ್ಪರ್ಧಿಗೆ ನೀಡಬೇಕು. ಜಯಶ್ರೀ ಅವರು ತಮ್ಮ ಹೇರ್​ಬ್ಯಾಂಡ್​ಅನ್ನು ಗುರೂಜಿಗೆ ನೀಡಿದರು. ಇದನ್ನು ಮಗಳಿಗೆ ನೀಡುವಂತೆ ಜಯಶ್ರೀ ಕೋರಿದರು. ಮಗಳು ನೆನಪಾಗುತ್ತಿದ್ದಂತೆ ಗುರೂಜಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಸಾನ್ಯಾ ಅಯ್ಯರ್​ಗೆ ಕಿವಿಮಾತು ಹೇಳಿದ ಗುರೂಜಿ; ವಿಡಿಯೋ ನೋಡಿ

ನಂತರ ಗುರೂಜಿ ಕೂಡ ತಮ್ಮ ಬಳಿ ಚಿಕ್ಕ ವಸ್ತುವೊಂದನ್ನು ಜಯಶ್ರೀಗೆ ಕೊಟ್ಟಿದ್ದಾರೆ. ‘ಮನೆಯಿಂದ ಹೊರ ಹೋದ ನಂತರ ನಿನ್ನ ಮಾಂಗಲ್ಯ ಸರಕ್ಕೆ ನಾನು ಸ್ಪಾನ್ಸರ್ ಮಾಡುತ್ತೇನೆ’ ಎಂಬ ಭರವಸೆ ಜಯಶ್ರೀಗೆ ಗುರೂಜಿ ಕಡೆಯಿಂದ ಸಿಕ್ಕಿದೆ. ದೊಡ್ಮನೆಯಿಂದ ಹೊರ ಹೋದ ನಂತರದಲ್ಲಿ ಮದುವೆ ಆಗುತ್ತೇನೆ ಎಂದು ಜಯಶ್ರೀ ಈ ಮೊದಲು ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Sat, 17 September 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು