AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ದಿವ್ಯಾ ಸುರೇಶ್​ ನಟನೆಯ ‘ರೌಡಿ ಬೇಬಿ’ ಚಿತ್ರ ಫೆ.11ಕ್ಕೆ ರಿಲೀಸ್​; ಸದ್ದು ಮಾಡ್ತಿದೆ ಟ್ರೇಲರ್​

‘ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇದ್ದೇ ಇರುತ್ತೆ’ ಎಂಬ ಥೀಮ್​ ಇಟ್ಟುಕೊಂಡು ರೌಡಿ ಬೇಬಿ ಸಿನಿಮಾ ತಯಾರಾಗಿದೆ. ಈ ಚಿತ್ರದಲ್ಲಿ ದಿವ್ಯಾ ಸುರೇಶ್​, ರವಿ ಗೌಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಬಿಗ್​ ಬಾಸ್​ ದಿವ್ಯಾ ಸುರೇಶ್​ ನಟನೆಯ ‘ರೌಡಿ ಬೇಬಿ’ ಚಿತ್ರ ಫೆ.11ಕ್ಕೆ ರಿಲೀಸ್​; ಸದ್ದು ಮಾಡ್ತಿದೆ ಟ್ರೇಲರ್​
ದಿವ್ಯಾ ಸುರೇಶ್​, ರವಿ ಗೌಡ
TV9 Web
| Updated By: ಮದನ್​ ಕುಮಾರ್​|

Updated on: Feb 03, 2022 | 5:56 PM

Share

ಬಿಗ್​ ಬಾಸ್​ ಕಾರ್ಯಕ್ರಮದಿಂದ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ದಿವ್ಯಾ ಸುರೇಶ್​ (Divya Suresh) ಅವರು ಈಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಅಭಿನಯಿಸಿರುವ ಹೊಸ ಸಿನಿಮಾ ‘ರೌಡಿ ಬೇಬಿ’ ಬಿಡುಗಡೆಗೆ ಸಜ್ಜಾಗಿದೆ. ಫೆ.11ರಂದು ಈ ಚಿತ್ರ ರಿಲೀಸ್​ ಆಗಲಿದೆ. ಫೆ.3ರಂದು ‘ರೌಡಿ ಬೇಬಿ’ (Rowdy Baby Movie) ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ‘ಮದಗಜ’ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಮುಂತಾದವರು ಉಪಸ್ಥಿತರಿದ್ದರು. ಈ ಸಿನಿಮಾದಲ್ಲಿ ದಿವ್ಯಾ ಸುರೇಶ್​ ಜೊತೆ ಎಸ್​.ಎಸ್.​ ರವಿ ಗೌಡ (SS Ravi Gowda) ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಹೀರ್​ ಕೌರ್​, ಅಮಿತ್​ ವಿ., ಕೆಂಪೇಗೌಡ, ಅರುಣಾ ಬಾಲರಾಜ್​, ಶ್ರೀನಾಥ್​ ವಸಿಷ್ಠ, ಅವಿನಾಶ್​ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. Epuru Krishna ನಿರ್ದೇಶನ ಮಾಡಿದ್ದು, ಅರಮಾನ್​ ಮೆರುಗು ಸಂಗೀತ ನೀಡಿದ್ದಾರೆ. ವಾರ್​ ಫೂಟ್​ ಸ್ಟುಡಿಯೋಸ್​ ಮತ್ತು ಸುಮುಖ ಎಂಟರ್​ಟೇನರ್ಸ್​ ಸಂಸ್ಥೆ ಮೂಲಕ ‘ರೌಡಿ ಬೇಬಿ’ ಚಿತ್ರ ತಯಾರಾಗಿದೆ.

‘ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇದ್ದೇ ಇರುತ್ತೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಎಲ್ಲರೂ ಫಸ್ಟ್​ ಲವ್​ಗೆ ಹೆಚ್ಚು ಮಹತ್ವ ನೀಡುತ್ತಾರೆ. ಆದರೆ ಒಬ್ಬರಿಗೆ ಎಷ್ಟೇ ಬಾರಿ ಪ್ರೀತಿ ಆದರೂ ಅದರ ತೀವ್ರತೆ ಅದೇ ರೀತಿ ಇರುತ್ತೆ ಎಂಬ ಪರಿಕಲ್ಪನೆಯನ್ನು ಇದರಲ್ಲಿ ಹೇಳಿದ್ದೇನೆ’ ಎಂದಿದ್ದಾರೆ ನಿರ್ದೇಶಕರು. ಈ ಸಿನಿಮಾದ ಟ್ರೇಲರ್​ನಲ್ಲಿ ದಿವ್ಯಾ ಸುರೇಶ್​ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಟ್ರೇಲರ್ ವೈರಲ್​ ಆಗಿದೆ.

ಟ್ರೇಲರ್​ ರಿಲೀಸ್​ ಆಗಿದ್ದಕ್ಕೆ ದಿವ್ಯಾ ಸುರೇಶ್​ ಖುಷಿ ಆಗಿದ್ದಾರೆ. ‘ಕೊರೊನಾ ಹಾವಳಿ ಕಡಿಮೆ ಆಗಿದ್ದು ನಮ್ಮ ಸಿನಿಮಾ ರಿಲೀಸ್​ ಆಗುತ್ತಿರುವುದು ಸಂತಸ ತಂದಿದೆ. ಟೈಟಲ್​ ರೀತಿಯೇ ನನ್ನ ಪಾತ್ರ ರೌಡಿ ಬೇಬಿ ರೀತಿ ಇದೆ. ಪ್ರತಿ ಕಾಲೇಜ್​ ಗ್ಯಾಂಗ್​ನಲ್ಲಿ ಒಬ್ಬಳು ಹುಡುಗಿ ಆ ಥರ ಇರುತ್ತಾಳೆ. ಆ ಪಾತ್ರವನ್ನು ನಾನು ಮಾಡಿದ್ದೀನಿ’ ಎಂದಿದ್ದಾರೆ ದಿವ್ಯಾ ಸುರೇಶ್​.

‘ಸಿನಿಮಾದವರ ನಡುವೆ ಯಾವುದೇ ಬೇಧ-ಭಾವ ಇಲ್ಲ. ನಾವೆಲ್ಲ ಕಲಾದೇವತೆಯ ಮಕ್ಕಳು. ಕನ್ನಡದ ಸಿನಿಮಾಗಳು ಹೆಚ್ಚು ಬೆಳೆಯಬೇಕು. ಸಿನಿಮಾ ಮಾಡುವುದು ಎಷ್ಟು ಕಷ್ಟ ಇದೆಯೋ, ರಿಲೀಸ್​ ಮಾಡುವುದು ಅದಕ್ಕಿಂತ ಹೆಚ್ಚು ಕಷ್ಟ. ರಿಲೀಸ್​ ಸಮಯದಲ್ಲಿ ಕಲಾವಿದರು ಜೊತೆಯಲ್ಲಿ ನಿಂತು ಪ್ರಚಾರ ಮಾಡಬೇಕು’ ಎಂದು ಉಮಾಪತಿ ಶ್ರೀನಿವಾಸ ಗೌಡ ಹೇಳಿದರು.

ಇದನ್ನೂ ಓದಿ:

ಅಪಘಾತ ಸಂಭವಿಸಿದ್ದು ಹೇಗೆ? ಟಿವಿ9ಗೆ ಎಲ್ಲವನ್ನೂ ವಿವರಿಸಿದ ದಿವ್ಯಾ ಸುರೇಶ್​

Divya Suresh: ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ