AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paramathma: ಎದೆಯಲ್ಲಿ ಪ್ರೇಮ ಅಧ್ಯಾತ್ಮ ಅರಳಿಸಿದ ಪರಮಾತ್ಮನಿಗೆ 10 ವರ್ಷ

10 Years for Paramathma: ಪರವಶನಾದೆನು..ಅರಿಯುವ ಮುನ್ನವೇ ಎನ್ನುತ್ತಲೇ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಹೊಗಬಾರದೆಂದು ಉಪದೇಶಿಸಿದ ಪರಮಾತ್ಮನ ಹಾಡುಗಳು ಕ್ಲಾಸಿಕ್ ಎಂದೇ ಹೇಳಬಹುದು.

Paramathma: ಎದೆಯಲ್ಲಿ ಪ್ರೇಮ ಅಧ್ಯಾತ್ಮ ಅರಳಿಸಿದ ಪರಮಾತ್ಮನಿಗೆ 10 ವರ್ಷ
ಪರಮಾತ್ಮ
TV9 Web
| Edited By: |

Updated on: Oct 06, 2021 | 1:37 PM

Share

ಕನ್ನಡ ಚಿತ್ರಪ್ರೇಮಿಗಳಲ್ಲಿ ಹೊಸ ರೀತಿಯ ಸಂಚಲನವನ್ನೇ ಮೂಡಿಸಿದ್ದ ಪರಮಾತ್ಮ ಸಿನಿಮಾ ಬಿಡುಗಡೆಯಾಗಿ ಇಂದು ಬುಧವಾರ (ಅಕ್ಟೋಬರ್ 6) ಬರೋಬ್ಬರಿ 10 ವರ್ಷ. ಯೋಗರಾಜ್ ಭಟ್ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಪರಮಾತ್ಮ ಕನ್ನಡಿಗರ ಎದೆಯಲ್ಲಿ ಅರಳಿಸಿದ ಪ್ರೇಮವನ್ನು ಎಂದೂ ಮರೆಯಲಾಗದು. 2011ರ ನವರಾತ್ರಿಗೆ ತೆರೆಗಪ್ಪಳಿಸಿ ಪರಮಾತ್ಮ ಪ್ರೇಮದಲ್ಲೂ ಅಧ್ಯಾತ್ಮವನ್ನು ಹುಡುಕುವ ಪ್ರಯತ್ನ ಮಾಡಿತು. ಬಿಡುಗಡೆಗೂ ಮುನ್ವವೇ 25 ಕೋಟಿಗಳನ್ನು ಬಾಚಿಕೊಂಡಿತ್ತು.

ಪರಂ (ಪುನೀತ್ ರಾಜ್​ಕುಮಾರ್) ಜೀವನದಲ್ಲಿ ನಾನಾ ರಿಸ್ಕ್ಗಳನ್ನು ಎದುರುನೋಡುವ ಭಯಂಕರ ಉತ್ಸಾಹದ ಹುಡುಗ. ದೀಪಾಳ (ದೀಪಾ ಸನ್ನಿಧಿ) ಜತೆ ಪರಂಗೆ ಪ್ರೇಮವುಂಟಾಗುತ್ತದೆ. ಆದರೆ ಈಕಡೆ ಸಾನ್ವಿ (ಐಂದ್ರಿರಾ ರೇ) ಪರಂನನ್ನು ಪ್ರೇಮಿಸುತ್ತಾಳೆ. ಇದೊಂದು ತ್ರಿಕೋನ ಪ್ರೇಮ ಕಥೆ ಎನಿಸಿದರೂ ಅದಲ್ಲದ ಬೇರೆಯದೇ ಆದ ವೀಕ್ಷಕನ ಮೈ ನೇವರಿಸುವಂತಹ ಕಥಾನಕ. ಪರಮಾತ್ಮದ ಆಳ ಲವ್ ಸ್ಟೋರಿ ವೀಕ್ಷಕರ ಕಣ್ಣೆವೆ ತೋಯಿಸಿತ್ತು. ಪ್ರೇಮವೆಂದರೆ ಪ್ರೇಮವಷ್ಟೇ ಅಲ್ಲ, ಸಹಿಸಲೇಬೇಕಾದ ನೋವಿನಂತಹ ಭಾವನೆ ಎಂದನಿಸುವಂತಿತ್ತು ಪರಮಾತ್ಮ. ಮರ ಸುತ್ತುವ ಹೀರೋ ಹೀರೋಯಿನ್, ಅದದೇ ಫೈಟ್, ಅದೇ ವಿಲನ್ ಎಂಬ ಪ್ರೇಮಕಥೆಗಳಲ್ಲಿ ರೋಸಿಹೋಗಿದ್ದ ವೀಕ್ಷಕ ಯೋಗರಾಜ ಭಟ್ಟರ ಪರಮಾತ್ಮನಲ್ಲಿ ಪುಳಕಗೊಂಡಿದ್ದ. ವಿಕ್ಷಕನ ನೋಟದಲ್ಲೊಂದೇ ಅಲ್ಲದೇ ಕಮರ್ಶಿಯಲಿ ಸಹ ಚಿತ್ರ ಹಿಟ್ ಆಗುತ್ತು. ಇಂದೂ ಸಹ ಪರಮಾತ್ಮನನ್ನು ನೆನೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ ಎಂಬುದೇ ಪರಮಾತ್ಮನ ಶಕ್ತಿಗೆ ಸಾಕ್ಷಿ.

ಹಾಡುಗಳ ಸಾಲು ಪರವಶನಾದೆನು..ಅರಿಯುವ ಮುನ್ನವೇ ಎನ್ನುತ್ತಲೇ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಹೊಗಬಾರದೆಂದು ಉಪದೇಶಿಸಿದ ಪರಮಾತ್ಮನ ಹಾಡುಗಳು ಕ್ಲಾಸಿಕ್ ಎಂದೇ ಹೇಳಬಹುದು. ಹೆಸರು ಪೂರ್ತಿ ಹೇಳದೇ..ತುಟಿಯ ಕಚ್ಚಿ ಕೊಳ್ಳದೇ ಆಗುವ ಪ್ರೀತಿ ಎಬಿಸಿಡನಾ ಆಲೂಗಡ್ಡೆನಾ ಗೋಡೆ ಹಲ್ಲಿನಾ ಯಾವನ್ನಿಗೊತ್ತು? ಎನ್ನಬಹುದಷ್ಟೇ. ಒಟ್ಟಿನಲ್ಲಿ ಮನಸು ಪೂರ್ತಿ ಮಾಗಿದವರ, ಮುಗ್ಧರ ಎಂದೆಂದಿಗೂ ಫೆವರೇಟ್ ಪ್ರೇಮ ಪರಮಾತ್ಮ.

ಇದನ್ನೂ ಓದಿ: 

ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ; ಸೆಟ್ಟೇರೋದು ಯಾವಾಗ?

Puneeth Rajkumar: ಪ್ರಭುದೇವ ಜತೆ ಸ್ಟೆಪ್​ ಹಾಕಿದ ಪುನೀತ್​ ರಾಜ್​ಕುಮಾರ್​; ಏನಿದು ಸಮಾಚಾರ?

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ