AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paramathma: ಎದೆಯಲ್ಲಿ ಪ್ರೇಮ ಅಧ್ಯಾತ್ಮ ಅರಳಿಸಿದ ಪರಮಾತ್ಮನಿಗೆ 10 ವರ್ಷ

10 Years for Paramathma: ಪರವಶನಾದೆನು..ಅರಿಯುವ ಮುನ್ನವೇ ಎನ್ನುತ್ತಲೇ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಹೊಗಬಾರದೆಂದು ಉಪದೇಶಿಸಿದ ಪರಮಾತ್ಮನ ಹಾಡುಗಳು ಕ್ಲಾಸಿಕ್ ಎಂದೇ ಹೇಳಬಹುದು.

Paramathma: ಎದೆಯಲ್ಲಿ ಪ್ರೇಮ ಅಧ್ಯಾತ್ಮ ಅರಳಿಸಿದ ಪರಮಾತ್ಮನಿಗೆ 10 ವರ್ಷ
ಪರಮಾತ್ಮ
TV9 Web
| Edited By: |

Updated on: Oct 06, 2021 | 1:37 PM

Share

ಕನ್ನಡ ಚಿತ್ರಪ್ರೇಮಿಗಳಲ್ಲಿ ಹೊಸ ರೀತಿಯ ಸಂಚಲನವನ್ನೇ ಮೂಡಿಸಿದ್ದ ಪರಮಾತ್ಮ ಸಿನಿಮಾ ಬಿಡುಗಡೆಯಾಗಿ ಇಂದು ಬುಧವಾರ (ಅಕ್ಟೋಬರ್ 6) ಬರೋಬ್ಬರಿ 10 ವರ್ಷ. ಯೋಗರಾಜ್ ಭಟ್ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಪರಮಾತ್ಮ ಕನ್ನಡಿಗರ ಎದೆಯಲ್ಲಿ ಅರಳಿಸಿದ ಪ್ರೇಮವನ್ನು ಎಂದೂ ಮರೆಯಲಾಗದು. 2011ರ ನವರಾತ್ರಿಗೆ ತೆರೆಗಪ್ಪಳಿಸಿ ಪರಮಾತ್ಮ ಪ್ರೇಮದಲ್ಲೂ ಅಧ್ಯಾತ್ಮವನ್ನು ಹುಡುಕುವ ಪ್ರಯತ್ನ ಮಾಡಿತು. ಬಿಡುಗಡೆಗೂ ಮುನ್ವವೇ 25 ಕೋಟಿಗಳನ್ನು ಬಾಚಿಕೊಂಡಿತ್ತು.

ಪರಂ (ಪುನೀತ್ ರಾಜ್​ಕುಮಾರ್) ಜೀವನದಲ್ಲಿ ನಾನಾ ರಿಸ್ಕ್ಗಳನ್ನು ಎದುರುನೋಡುವ ಭಯಂಕರ ಉತ್ಸಾಹದ ಹುಡುಗ. ದೀಪಾಳ (ದೀಪಾ ಸನ್ನಿಧಿ) ಜತೆ ಪರಂಗೆ ಪ್ರೇಮವುಂಟಾಗುತ್ತದೆ. ಆದರೆ ಈಕಡೆ ಸಾನ್ವಿ (ಐಂದ್ರಿರಾ ರೇ) ಪರಂನನ್ನು ಪ್ರೇಮಿಸುತ್ತಾಳೆ. ಇದೊಂದು ತ್ರಿಕೋನ ಪ್ರೇಮ ಕಥೆ ಎನಿಸಿದರೂ ಅದಲ್ಲದ ಬೇರೆಯದೇ ಆದ ವೀಕ್ಷಕನ ಮೈ ನೇವರಿಸುವಂತಹ ಕಥಾನಕ. ಪರಮಾತ್ಮದ ಆಳ ಲವ್ ಸ್ಟೋರಿ ವೀಕ್ಷಕರ ಕಣ್ಣೆವೆ ತೋಯಿಸಿತ್ತು. ಪ್ರೇಮವೆಂದರೆ ಪ್ರೇಮವಷ್ಟೇ ಅಲ್ಲ, ಸಹಿಸಲೇಬೇಕಾದ ನೋವಿನಂತಹ ಭಾವನೆ ಎಂದನಿಸುವಂತಿತ್ತು ಪರಮಾತ್ಮ. ಮರ ಸುತ್ತುವ ಹೀರೋ ಹೀರೋಯಿನ್, ಅದದೇ ಫೈಟ್, ಅದೇ ವಿಲನ್ ಎಂಬ ಪ್ರೇಮಕಥೆಗಳಲ್ಲಿ ರೋಸಿಹೋಗಿದ್ದ ವೀಕ್ಷಕ ಯೋಗರಾಜ ಭಟ್ಟರ ಪರಮಾತ್ಮನಲ್ಲಿ ಪುಳಕಗೊಂಡಿದ್ದ. ವಿಕ್ಷಕನ ನೋಟದಲ್ಲೊಂದೇ ಅಲ್ಲದೇ ಕಮರ್ಶಿಯಲಿ ಸಹ ಚಿತ್ರ ಹಿಟ್ ಆಗುತ್ತು. ಇಂದೂ ಸಹ ಪರಮಾತ್ಮನನ್ನು ನೆನೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ ಎಂಬುದೇ ಪರಮಾತ್ಮನ ಶಕ್ತಿಗೆ ಸಾಕ್ಷಿ.

ಹಾಡುಗಳ ಸಾಲು ಪರವಶನಾದೆನು..ಅರಿಯುವ ಮುನ್ನವೇ ಎನ್ನುತ್ತಲೇ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಹೊಗಬಾರದೆಂದು ಉಪದೇಶಿಸಿದ ಪರಮಾತ್ಮನ ಹಾಡುಗಳು ಕ್ಲಾಸಿಕ್ ಎಂದೇ ಹೇಳಬಹುದು. ಹೆಸರು ಪೂರ್ತಿ ಹೇಳದೇ..ತುಟಿಯ ಕಚ್ಚಿ ಕೊಳ್ಳದೇ ಆಗುವ ಪ್ರೀತಿ ಎಬಿಸಿಡನಾ ಆಲೂಗಡ್ಡೆನಾ ಗೋಡೆ ಹಲ್ಲಿನಾ ಯಾವನ್ನಿಗೊತ್ತು? ಎನ್ನಬಹುದಷ್ಟೇ. ಒಟ್ಟಿನಲ್ಲಿ ಮನಸು ಪೂರ್ತಿ ಮಾಗಿದವರ, ಮುಗ್ಧರ ಎಂದೆಂದಿಗೂ ಫೆವರೇಟ್ ಪ್ರೇಮ ಪರಮಾತ್ಮ.

ಇದನ್ನೂ ಓದಿ: 

ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ; ಸೆಟ್ಟೇರೋದು ಯಾವಾಗ?

Puneeth Rajkumar: ಪ್ರಭುದೇವ ಜತೆ ಸ್ಟೆಪ್​ ಹಾಕಿದ ಪುನೀತ್​ ರಾಜ್​ಕುಮಾರ್​; ಏನಿದು ಸಮಾಚಾರ?

Follow Us
17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆಯಲು ಸಿದ್ದರಾಮಯ್ಯ ಸಜ್ಜು
17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆಯಲು ಸಿದ್ದರಾಮಯ್ಯ ಸಜ್ಜು
ಸಿಬ್ಬಂದಿ ಬಳಿ ಪೈಲ್ಸ್​ ಆಪರೇಷನ್​ ಆಗಿರುವ ಪ್ರೂಫ್ ಕೇಳಿದ ಹಿರಿಯ ಅಧಿಕಾರಿ
ಸಿಬ್ಬಂದಿ ಬಳಿ ಪೈಲ್ಸ್​ ಆಪರೇಷನ್​ ಆಗಿರುವ ಪ್ರೂಫ್ ಕೇಳಿದ ಹಿರಿಯ ಅಧಿಕಾರಿ
ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ
ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್: ಜೋಡಿಯ ಮೋಜು-ಮಸ್ತಿ ರಹಸ್ಯ ಬಯಲು
ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್: ಜೋಡಿಯ ಮೋಜು-ಮಸ್ತಿ ರಹಸ್ಯ ಬಯಲು
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್