AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತುರಾಜ್ ಹೆಸರು ರಾಜ್​ಕುಮಾರ್ ಆಗಿ ಬದಲಾಗಿದ್ದು ಅಣ್ಣಾವ್ರಿಗೇ ಗೊತ್ತಿರಲಿಲ್ಲ

ರಾಜ್ ಕುಮಾರ್ ಅವರ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. 'ಬೇಡರ ಕಣ್ಣಪ್ಪ' ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕರು ಅವರ ಹೆಸರನ್ನು ರಾಜ್ ಕುಮಾರ್ ಎಂದು ಬದಲಾಯಿಸಿದ್ದರು. ರಾಜ್ ಕುಮಾರ್ ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಈ ಬದಲಾವಣೆಯ ಕುರಿತು ಅವರು ನೀಡಿದ ಸಂದರ್ಶನದ ಆಡಿಯೋ ಈಗ ವೈರಲ್ ಆಗಿದೆ.

ಮುತ್ತುರಾಜ್ ಹೆಸರು ರಾಜ್​ಕುಮಾರ್ ಆಗಿ ಬದಲಾಗಿದ್ದು ಅಣ್ಣಾವ್ರಿಗೇ ಗೊತ್ತಿರಲಿಲ್ಲ
ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 25, 2025 | 7:53 AM

Share

ರಾಜ್​ಕುಮಾರ್ (Rajkumar) ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿಡಿದವರು. ಅವರು ನಮ್ಮನ್ನು ಬಿಟ್ಟು ಹಲವು ವರ್ಷಗಳೇ ಕಳೆದಿದ್ದರೂ ಈಗಲೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ರಾಜ್​ಕುಮಾರ್ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಆ ಬಳಿಕ ಅವರ ಹೆಸರನ್ನು ರಾಜ್​ಕುಮಾರ್ ಎಂದು ಬದಲಿಸಲಾಯಿತು. ಈ ಬದಲಾವಣೆ ಬಗ್ಗೆ ರಾಜ್​ಕುಮಾರ್ ಅವರಿಗೇ ತಿಳಿದಿರಲಿಲ್ಲ.

ರಾಜ್​ಕುಮಾರ್ ನಾಟಕಗಳನ್ನು ಮಾಡಿಕೊಂಡಿದ್ದವರು. ಗುಬ್ಬಿ ವೀರಣ್ಣ ಕಂಪನಿಯಲ್ಲಿ ಅವರಿದ್ದರು. 1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಎಚ್​ಎಲ್​ಎನ್​ ಸಿಂಹ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದ ಡೈರೆಕ್ಟರ್ ಸಿಂಹ ಅವರೇ ತಂಡದ ಜೊತೆ ಚರ್ಚಿಸಿ ಮುತ್ತುರಾಜ್ ಎಂಬ ಹೆಸರನ್ನು  ರಾಜ್​ಕುಮಾರ್ ಆಗಿ ಬದಲಿಸಿದ್ದರು. ಆ ಬಗ್ಗೆ ರಾಜ್​ಕುಮಾರ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅದರ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋನ ಅನೇಕರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ
Image
ರಿಂಗ್ ಕೊಡಿಸಲು ರಮ್ಯಾ ಜೊತೆ ಜ್ಯುವೆಲರಿ ಶಾಪ್​ಗೆ ಹೋದ ವಿನಯ್;ಇದೆ ಟ್ವಿಸ್ಟ್
Image
‘ಬಿಗ್ ಬಾಸ್ 12’ರ ನಾಲ್ಕು ಸ್ಪರ್ಧಿಗಳ ಹೆಸರು ಶನಿವಾರವೇ ರಿವೀಲ್?
Image
ಪುನೀತ್ ರಾಜ್​ಕುಮಾರ್ ಯಾವಾಗಲೂ ಸರಳ ಉಡುಗೆ ಧರಿಸುತ್ತಿದ್ದಿದ್ದೇಕೆ?
Image
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ರಾಜ್​ಕುಮಾರ್ ಆಡಿಯೋ

‘ಬೇಡರ ಕಣ್ಣಪ್ಪ ಸಿನಿಮಾಗೆ ಹೋದಾಗ ಹೆಸರು ಬದಲಾಗಿತ್ತು. ಒಂದು ತಿಂಗಳು ಶೂಟ್ ಆಗಿತ್ತು. ನಾನು ಪೇಪರ್​ನಲ್ಲಿ ರಾಜ್​ಕುಮಾರ್ ಹೆಸರು ನೋಡಿ ಗಾಬರಿ ಆದೆ. ನನ್ನ ಹೆಸರು ಮುತ್ತುರಾಜು. ಬೇಡರಕಣ್ಣಪ್ಪ ಪಾತ್ರ ಕೊಟ್ಟಿದ್ದಾರೆ. ಆದರೆ, ಇಲ್ಲಿ ಯಾರೋ ರಾಜ್​ಕುಮಾರ್ ಅನ್ನೊರನ್ನು ಸೇರಿಸಿಕೊಂಡಿದ್ದಾರೆ ಎಂದುಕೊಂಡೆ. ನನ್ನ ನಟನೆ ಚೆನ್ನಾಗಿಲ್ಲ ಅಂತ ಬೇರೆ ಯಾರನ್ನೋ ಹಾಕಿಕೊಂಡಿದ್ದಾರೆ. ಕೊಟ್ಟರು ಕೈ ಅಂದುಕೊಂಡೆ’ ಎಂದಿದ್ದರು ರಾಜ್​ಕುಮಾರ್.

ಇದನ್ನೂ ಓದಿ: ಎನ್​ಟಿಆರ್​ಗೆ 20 ಸಾವಿರ, ರಾಜ್​ಕುಮಾರ್​ಗೆ 2 ಸಾವಿರ ನಂತರ ಆಗಿದ್ದೇನು?

‘ಯಾರು ರಾಜ್​ಕುಮಾರ್ ಎಂದು ನಾನು ಸಿಂಹ ಅವರನ್ನು ಕೇಳಿದೆ. ಮುತ್ತು ರಾಜ್ ಹೆಸರನ್ನು ತೆಗೆದು, ನಾವೇ ರಾಜ್​ಕುಮಾರ್ ಅಂತ ಹೆಸರು ಬದಲಾಯಿಸಿದ್ದೇವೆ. ನನಗೆ ನಾಚಿಕೆ ಆಯ್ತು. ನಾನು ಮಾಡ್ತಿರೋದು ಮೊದಲ ಸಿನಿಮಾ ಇದು. ಒಳ್ಳೆಯ ಹೆಸರು ಬಂದರೆ ರಾಜ್​ಕುಮಾರ್ ಅಂತ ಇಟ್ಟಿದ್ದಕ್ಕೆ ತೊಂದರೆ ಇಲ್ಲ, ಆದರೆ ಸಿನಿಮಾ ಚೆನ್ನಾಗಿ ಆಗಿಲ್ಲ ಎಂದರೆ, ಈ ಕರ್ಮಕ್ಕೆ ಇವನು ರಾಜ್​ಕುಮಾರ್ ಅಂತ ಹೆಸರು ಇಟ್ಕೊಂಡ್ನಾ ಅಂತ ಕೇಳೋ ತರ ಆಗಬಹುದು’ ಎಂದು ರಾಜ್​ಕುಮಾರ್ ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Thu, 25 September 25

ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?