Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ

| Updated By: ಮದನ್​ ಕುಮಾರ್​

Updated on: Dec 25, 2022 | 9:59 PM

BBK9 Elimination: 13ನೇ ವಾರದಲ್ಲಿ ಅರುಣ್​ ಸಾಗರ್​ ಅವರಿಗೆ ಕೆಲವೊಂದು ಅಡೆತಡೆ ಉಂಟಾಗಿತ್ತು. ದೊಡ್ಮನೆಯಲ್ಲಿ ಒಟ್ಟು 93 ದಿನಗಳನ್ನು ಪೂರೈಸಿ ಅವರು ಎಲಿಮಿನೇಟ್​ ಆಗಿದ್ದಾರೆ.

Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ
ಅರುಣ್ ಸಾಗರ್
Follow us on

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋನ 13ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಅರುಣ್​ ಸಾಗರ್ (Arun Sagar)​ ಅವರು ಔಟ್​ ಆಗಿದ್ದಾರೆ. ಮುಂದಿನ ವಾರವೇ ಬಿಗ್​ ಬಾಸ್​ ಫಿನಾಲೆ (Bigg Boss Finale) ನಡೆಯಲಿದೆ. ಆದರೆ ಫಿನಾಲೆ ವಾರಕ್ಕೆ ಕಾಲಿಡುವಲ್ಲಿ ಅರುಣ್​ ಸಾಗರ್​ ಮುಗ್ಗರಿಸಿದ್ದಾರೆ. ಅವರು ದೊಡ್ಮನೆಯಲ್ಲಿ ವಿಶೇಷವಾಗಿ ಮನರಂಜನೆ ನೀಡಲು ಪ್ರಯತ್ನಿಸಿದ್ದರು. ಬಿಗ್​ ಬಾಸ್​ನಲ್ಲಿ ಅರುಣ್​ ಸಾಗರ್​ ಅವರಿಗೆ ಸಿಕ್ಕಿದ್ದು ಇದು ಎರಡನೇ ಅವಕಾಶವಾಗಿತ್ತು. ಬಿಗ್​ ಬಾಸ್​ ಮೊದಲ ಸೀಸನ್​ನಲ್ಲಿ ಅರುಣ್​ ಸಾಗರ್​ ಸ್ಪರ್ಧಿಸಿದ್ದರು. 9ನೇ ಸೀಸನ್​ನಲ್ಲಿ (BBK9) ‘ಪ್ರವೀಣರು’ ಗುಂಪಿನಲ್ಲಿ ಅರುಣ್​ ಸಾಗರ್​ ಅವಕಾಶ ಪಡೆದರು. ಆದರೆ ಟ್ರೋಫಿ ಗೆಲ್ಲುವ ಅವರ ಕನಸು ಭಗ್ನವಾಗಿದೆ.

ಅರುಣ್​ ಸಾಗರ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 93ನೇ ದಿನದವರೆಗೂ ಅವರು ವೀಕ್ಷಕರಿಂದ ಹೆಚ್ಚಿನ ವೋಟ್​ ಪಡೆದು ಸೇಫ್​ ಆಗಿದ್ದರು. ಆದರೆ ಈ ನಡುವೆ ಅವರಿಗೆ ಕೆಲವೊಂದು ಅಡೆತಡೆ ಉಂಟಾಗಿತ್ತು. ಅವರ ಕೈಗೆ ಪೆಟ್ಟಾಗಿತ್ತು. ಅವರ ಮಗಳು ಅದಿತಿ ಸಾಗರ್​ಗೆ ಪೆಟ್ಟಾಗಿದ್ದರಿಂದ ಅವರು ಮಾನಸಿಕವಾಗಿ ಕೊಂಚ ಕುಗ್ಗಿದರು. ಈ ಎಲ್ಲ ಕಾರಣದಿಂದ ಅರುಣ್​ ಸಾಗರ್​ ಎಲಿಮಿನೇಟ್​ ಆಗಬೇಕಾಯಿತು.

ಕಿಚ್ಚನ ಚಪ್ಪಾಳೆ ಪಡೆದ ಆರ್ಯವರ್ಧನ್​ ಗುರೂಜಿ:

ಈ ಸೀಸನ್​ನ ಕೊನೇ ವಾರದಲ್ಲಿ ಆರ್ಯವರ್ಧನ್​ ಗುರೂಜಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ‘ಆಟ ಚೆನ್ನಾಗಿ ಆಡಿದ್ದೀರಿ. ಎಲ್ಲರ ಜೊತೆ ಬೆರೆತಿದ್ದೀರಿ. ಈ ವಾರ ನೀವು ಇದ್ದ ರೀತಿ ಚೆನ್ನಾಗಿತ್ತು’ ಎಂದು ಕಿಚ್ಚ ಸುದೀಪ್​ ಹೇಳಿದರು. ಈ ಮೆಚ್ಚುಗೆ ಪಡೆದಿದ್ದಕ್ಕೆ ಆರ್ಯವರ್ಧನ್​ ಭಾವುಕರಾದರು.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಇದನ್ನೂ ಓದಿ: Amulya Gowda: ಬಿಗ್ ಬಾಸ್ ಎಲಿಮಿನೇಷನ್‌ಗೆ ಟ್ವಿಸ್ಟ್‌; ಅಮೂಲ್ಯ ಔಟ್, ಇಂದು ಮತ್ತೋರ್ವ ಸ್ಪರ್ಧಿ‌ ಎಲಿಮಿನೇಟ್

ಫಿನಾಲೆ ವಾರಕ್ಕೆ 6 ಮಂದಿ ಎಂಟ್ರಿ:

ರೂಪೇಶ್ ರಾಜಣ್ಣ, ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ, ದಿವ್ಯಾ ಉರುಡುಗ, ದೀಪಿಕಾ ದಾಸ್​, ರಾಕೇಶ್​ ಅಡಿಗ ಅವರು 14ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಅಂದರೆ, ಫಿನಾಲೆ ವಾರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಮಿಡ್​ ಮೀಕ್​ ಎಲಿಮಿನೇಷನ್​ನಲ್ಲಿ ಒಬ್ಬರು ಔಟ್​ ಆಗುವ ಸಾಧ್ಯತೆ ಇದೆ. ನಂತರ ಫಿನಾಲೆಗೆ 5 ಮಂದಿ ಪ್ರವೇಶ ಪಡೆಯಲಿದ್ದಾರೆ.

ಇದನ್ನೂ ಓದಿ: Anupama Gowda: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಅನುಪಮಾ ಗೌಡ; ನಟಿ-ನಿರೂಪಕಿಯ ದೊಡ್ಮನೆ ಆಟ ಅಂತ್ಯ

ರಾಕೇಶ್​ ಅಡಿಗ, ರೂಪೇಶ್​ ಶೆಟ್ಟಿ ಮತ್ತು ಆರ್ಯವರ್ಧನ್​ ಗುರೂಜಿ ಅವರು ಬಿಗ್​ ಬಾಸ್​ ಒಟಿಟಿಯಿಂದ ಟಿವಿ ಸೀಸನ್​ನ ಫಿನಾಲೆ ವಾರದ ತನಕವೂ ಸಾಗಿ ಬಂದಿದ್ದಾರೆ. ಹಳೇ ಸೀಸನ್​ನ ಸ್ಪರ್ಧಿಗಳಾದ ದೀಪಿಕಾ ದಾಸ್​, ದಿವ್ಯಾ ಉರುಡುಗ ಜೊತೆ ಹೊಸ ಸ್ಪರ್ಧಿ ರೂಪೇಶ್​ ರಾಜಣ್ಣ ಕೂಡ ಸಖತ್​ ಪೈಪೋಟಿ ನೀಡುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಟ್ರೋಫಿ ಸಿಗಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.