AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೇ ಬಿಟ್ಟರೂ ಕರ್ಮ ಬಿಡಲಿಲ್ಲ; ಮಾಡಿದ ತಪ್ಪಿಗೆ ಸೌಂದರ್ಯಾಗೆ ದೊಡ್ಡ ಶಿಕ್ಷೆ

ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಆಸಿಯಾ ಫಿರ್ದೋಸ್ ಅತ್ತಾಗ ಅಣಕಿಸಿ ಟೀಕೆಗೆ ಒಳಗಾಗಿದ್ದರು. ಆದರೆ ವಿಮಾನದ ಕಿರಿದಾದ ಜಾಗದಲ್ಲಿ ಮಹಾಕವಿ ಮಂಜು ಮಾತುಗಳಿಂದ ಇರಿಟೇಟ್ ಆದ ಸೌಂದರ್ಯಾ ತಾವೇ ಕಣ್ಣೀರಿಟ್ಟು ಹೊರಬಂದಿದ್ದಾರೆ. ಮಾಡಿದ ತಪ್ಪಿಗೆ ಕರ್ಮ ತಕ್ಷಣವೇ ಶಿಕ್ಷೆ ನೀಡಿದೆ ಎಂದು ವೀಕ್ಷಕರು ಚರ್ಚಿಸುತ್ತಿದ್ದಾರೆ.

ಯಾರೇ ಬಿಟ್ಟರೂ ಕರ್ಮ ಬಿಡಲಿಲ್ಲ; ಮಾಡಿದ ತಪ್ಪಿಗೆ ಸೌಂದರ್ಯಾಗೆ ದೊಡ್ಡ ಶಿಕ್ಷೆ
ಸೌಂದರ್ಯಾ ಶೆಟ್ಟಿ Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on: Sep 11, 2026 | 2:48 PM

Share

ಮುಖ್ಯಾಂಶಗಳು

  • ಆಸಿಯಾ ಅತ್ತಿದ್ದನ್ನು ಅಣಕಿಸಿದ್ದ ಸೌಂದರ್ಯಾ ಶೆಟ್ಟಿ
  • ವಿಮಾನದ ಸಣ್ಣ ಜಾಗದಲ್ಲಿ ಕಣ್ಣೀರು ಹಾಕಿದ ನಟಿ
  • ಬಿಗ್ ಬಾಸ್ ಮನೆಯಲ್ಲಿ ಕೆಲಸ ಮಾಡಿತಾ 'ಕರ್ಮ'ದ ಫಲಾಫಲ?

ಸೌಂದರ್ಯಾ ಶೆಟ್ಟಿ ಅವರು ವಿವಿಧ ರೀತಿಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಅವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ. ಕರ್ಮ ಅವರನ್ನು ಬಿಟ್ಟು ಬಿಡದೆ ಕಾಡಿದೆ. ಕೊನೆಗೆ ಬೇರೆ ದಾರಿ ಇಲ್ಲದೆ ಅವರು ಕಣ್ಣೀರು ಹಾಕಿದ್ದಾರೆ. ಈ ಘಟನೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಆಸಿಯಾ ಫಿರ್ದೋಸ್ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ಆಡಲು ಮುಂದಾದರು. ಅವರು ಹಠ ಬಿಡದೆ ಟಾಸ್ಕ್ ಆಡುತ್ತೇನೆ ಎಂದು ಕುಳಿತರು. ಆದರೆ, ಇದಕ್ಕೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಕೆಲವರು ಇದನ್ನು ವಿರೋಧಿಸಿದರು. ಆಸಿಯಾ ಅವರೇ ಹೇಳಿಕೊಂಡಂತೆ ಈ ರೀತಿಯ ಸ್ಥಿತಿಯಲ್ಲಿ ಅವರಿಗೆ ಕಣ್ಣೀರು ಬರುತ್ತದೆಯಂತೆ. ಆಗಲೂ ಹಾಗೆಯೇ ಆಯಿತು.

ಆಸಿಯಾ ಅವರು ಕಣ್ಣೀರು ಹಾಕಲು ಆರಂಭಿಸಿದರು. ‘ನನಗೆ ಅನ್ಯಾಯ ಆಗುತ್ತಿದೆ’ ಎಂಬರ್ಥದಲ್ಲಿ ಮಾತನಾಡಿದರು. ಇದು ಸೌಂದರ್ಯಾ ಶೆಟ್ಟಿ ಅವರನ್ನು ಟ್ರಿಗರ್ ಮಾಡಿತು. ಅವರು ನೇರವಾಗಿ ಕೂಗಾಡಲು ಆರಂಭಿಸಿದರು. ಆಸಿಯಾ ಯಾವ ರೀತಿಯಲ್ಲಿ ಅಳುತ್ತಿದ್ದರೋ ಅದೇ ರೀತಿ ಮುಖ ಮಾಡುತ್ತಾ ಅಣಕಿಸೋಕೆ ಆರಂಭಿಸಿದರು. ಸೌಂದರ್ಯಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ.

ಇದನ್ನೂ ಓದಿ: ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಆಸಿಯಾನ ಅಣಕಿಸಿದ ವಿಡಿಯೋ ವೈರಲ್

ಸೌಂದರ್ಯಾ ಶೆಟ್ಟಿ ಅವರು ಈ ವಾರ ಬಿಗ್ ಬಾಸ್ ಮನೆಯಲ್ಲಿರೋ ವಿಮಾನದಲ್ಲಿ ವಾಸವಿದ್ದಾರೆ. ಅಲ್ಲಿ ಜಾಗ ಕಿರಿದು. ಹೀಗಾಗಿ, ಯಾರೇ ಚಿಕ್ಕದಾಗಿ ಮಾತನಾಡಿದರೂ ಅದು ದೊಡ್ಡದಾಗಿ ಕೇಳುತ್ತದೆ. ಮಾಡರ್ನ್ ಮಹಾಕವಿ ಮಂಜು ಅವರು ಮಾತನಾಡಿದ್ದು ಸೌಂದರ್ಯಾ ಶೆಟ್ಟಿಗೆ ಇರಿಟೇಶನ್ ಅನಿಸಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕೋಕೆ ಆರಂಭಿಸಿದ್ದಾರೆ. ವಿಮಾನ ಡೋರ್ ತೆಗೆಯುವ ಪ್ರಯತ್ನವನ್ನು ಕೂಡ ಅವರು ಮಾಡಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಅವರನ್ನು ಮನೆಯವರು ಸಮಾಧಾನ ಮಾಡಲು ಪ್ರಯತ್ನಿಸದರೂ ಅದು ಆಗಿಲ್ಲ. ಕೊನೆಗೆ ವಿಮಾನದಿಂದ ಹೊರ ಬಂದು ಗಾರ್ಡನ್ ಏರಿಯಾದಲ್ಲಿ ಅಳುತ್ತಾ ಕುಳಿತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ