AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಕ್ಯಾಪ್ಟನ್ ಆಗಿದ್ಯಾರು? ಉತ್ತಮ-ಕಳಪೆ ಯಾರಿಗೆ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ಹತ್ತಿರವಾಗಿದೆ. ಈ ಹಂತದಲ್ಲಿ ಈ ವಾರ ಮನೆಯ ಕ್ಯಾಪ್ಟನ್ ಯಾರಾದರು? ಉತ್ತಮ ಯಾರಿಗೆ ಸಿಕ್ಕಿತು? ಕಳಪೆ ಯಾರಾದರು?

ಮನೆಯ ಕ್ಯಾಪ್ಟನ್ ಆಗಿದ್ಯಾರು? ಉತ್ತಮ-ಕಳಪೆ ಯಾರಿಗೆ?
ಬಿಗ್​ಬಾಸ್ ಕನ್ನಡ
ಮಂಜುನಾಥ ಸಿ.
|

Updated on: Jan 05, 2024 | 10:48 PM

Share

ಫಿನಾಲೆಗೆ ಹತ್ತಿರ ಬರುತ್ತಿದ್ದಂತೆ ಕ್ಯಾಪ್ಟನ್ ಆಗಲು ಮನೆಯ ಸದಸ್ಯರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ ವಾರಕ್ಕೆ ಬಿಗ್​ಬಾಸ್ (BiggBoss) ಮನೆಯ ಕ್ಯಾಪ್ಟನ್ ಆಗಲು ಟಾಸ್ಕ್ ಗುರುವಾರದ ಎಪಿಸೋಡ್​ನಲ್ಲಿಯೇ ಆರಂಭವಾಗಿತ್ತು. ಮತದಾನದ ಮೂಲಕ ಟಾಸ್ಕ್ ಆರಂಭವಾಗಿ ವಿನಯ್, ಕಾರ್ತಿಕ್, ಸಂಗೀತಾ, ತುಕಾಲಿ ಸಂತೋಷ್ ಅವರಗಳು ಕ್ಯಾಪ್ಟೆನ್ಸಿ ರೇಸ್​ನಲ್ಲಿ ಉಳಿದಿದ್ದರು. ಬಳಿಕ ಬಿಗ್​ಬಾಸ್ ನೀಡಿದ ವಿಶೇಷ ಅಧಿಕಾರದಿಂದ ಕಾರ್ತಿಕ್ ಹಾಗೂ ವಿನಯ್ ಅವರನ್ನು ಸಂಗೀತಾ ಕ್ಯಾಪ್ಟೆನ್ಸಿ ರೇಸ್​ನಿಂದ ಹೊರಗೆ ಇಟ್ಟರು. ಅಂತಿಮವಾಗಿ ತುಕಾಲಿ ಸಂತು ಹಾಗೂ ಸಂಗೀತಾ ಅಷ್ಟೆ ಉಳಿದರು.

ಶುಕ್ರವಾರದ ಎಪಿಸೋಡ್​ನಲ್ಲಿ ಕ್ಯಾಪ್ಟೆನ್ಸಿಗಾಗಿ ಸಂಗೀತಾ ಹಾಗೂ ತುಕಾಲಿ ಸ್ಪರ್ಧೆ ಮಾಡಿದರು. ಮೊದಲಿಗೆ, ತಾವು ಕ್ಯಾಪ್ಟನ್ ಆದರೆ ಹಿಂದಿನ ಕ್ಯಾಪ್ಟನ್​ಗಳ ಯಾವ ಗುಣವನ್ನು ಅಳವಡಿಸಿಕೊಳ್ಳುತ್ತೇವೆ, ಯಾವ ಗುಣವನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ವಿವರಿಸಬೇಕಿತ್ತು, ಅಂತೆಯೇ ಇಬ್ಬರೂ ಸಹ ವಿವರ ನೀಡಿದರು. ಚೆಂಡನ್ನು ಹಲಗೆಯ ಮೇಲಿಟ್ಟು ಬ್ಯಾಲೆನ್ಸ್ ಮಾಡುವುದು ಆ ಬಳಿಕ ಅದೇ ಚೆಂಡನ್ನು ಗುರಿ ನೋಡಿ ರಂಧ್ರವೊಂದಕ್ಕೆ ಹಾಕುವ ಟಾಸ್ಕ್ ಅನ್ನು ಬಿಗ್​ಬಾಸ್ ನೀಡಿದರು. ವಿನಯ್ ಹಾಗೂ ಕಾರ್ತಿಕ್ ಅವರನ್ನು ಆಟಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ಆರಂಭದಲ್ಲಿ ಇಬ್ಬರೂ ಸಹ ಚೆಂಡನ್ನು ಬ್ಯಾಲೆನ್ಸ್ ಮಾಡಲು ಪರದಾಡಿದರು, ಬಳಿಕ ಸಂಗೀತಾ ತುಸು ವೇಗ ಪಡೆದುಕೊಂಡರು. ತುಕಾಲಿ ಸಂತು, ಸಂಗೀತಾ ಟಾಸ್ಕ್​ ಮುಗಿಸಿಬಿಟ್ಟರೆ ಎಂದು ಆತಂಕಕ್ಕೆ ಒಳಗಾಗುತ್ತಲೇ ಆಡಿದ ಪರಿಣಾಮ ತುಸು ನಿಧಾನವಾಗಿ ಟಾಸ್ಕ್ ಮುಗಿಸಿದರು. ಚೆನ್ನಾಗಿ ಆಡಿದ ಸಂಗೀತಾ ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್ ಆದರು. ಹದಿಮೂರು ವಾರಗಳಲ್ಲಿ ಇದೇ ಮೊದಲ ಬಾರಿಗೆ ಸಂಗೀತಾ ಮನೆಯ ಕ್ಯಾಪ್ಟನ್ ಆದಂತಾಯಿತು. ಆ ಮೂಲಕ ಮೂರನೇ ಬಾರಿಗೆ ಮಹಿಳಾ ಸ್ಪರ್ಧಿಯೇ ಕ್ಯಾಪ್ಟನ್ ಆದಂತಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ? ಚರ್ಚೆ ಹುಟ್ಟುಹಾಕಿದ ಸಂಗೀತಾ

ಸಂಗೀತಾ ಕ್ಯಾಪ್ಟನ್ ಆದ ಬಳಿಕ ‘ಉತ್ತಮ-ಕಳಪೆ’ ನೀಡುವ ಪ್ರಕ್ರಿಯೆ ಆರಂಭವಾಯ್ತು. ಈ ವಾರ ಉತ್ತಮವಾಗಿ ಪ್ರದರ್ಶನ ನೀಡಿ, ಕಳೆದುಕೊಂಡಿದ್ದ ಬಹುಮಾನದ ಮೊತ್ತವನ್ನು ಒಟ್ಟು ಸೇರಿಸಲು ಸಹಾಯ ಮಾಡಿದ ಕಾರ್ತಿಕ್​ಗೆ ಬಹುತೇಕರು ಉತ್ತಮ ಬಿರುದು ನೀಡಿದರು. ಸಂಗೀತಾ ಸಹ ಕಾರ್ತಿಕ್​ಗೆ ಉತ್ತಮ ನೀಡಿದರು. ಈ ವಾರ ಕಳಪೆ ಪ್ರದರ್ಶನ ನೀಡಿದ್ದಲ್ಲದೆ, ನಿಯಮಗಳನ್ನು ಸರಿಯಾಗಿ ಪಾಲಿಸದ ಮೈಖಲ್​ಗೆ ಕಳಪೆ ನೀಡಲಾಯ್ತು. ಕಾರ್ತಿಕ್​ ಇಂದ ಅಂತರ ಕಾಯ್ದುಕೊಂಡಿರುವ ಸಂಗೀತಾ, ಕಾರ್ತಿಕ್ ಕೊರಳಿಗೆ ಮೆಡಲ್ ಹಾಕಿದರು.

ಕ್ಯಾಪ್ಟೆನ್ಸಿ ಭಾಷಣ ಮಾಡಿದ ಸಂಗೀತಾ, ಎಲ್ಲರೂ ಶಾಂತವಾಗಿ ಈ ವಾರ ಇರೋಣ, ನಾನು ಶಿಕ್ಷೆ ನೀಡುವುದಿಲ್ಲ, ಆದರೆ ಯಾರೂ ಗಂಭೀರವಾದ ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದರು. ಈ ವಾರ ಸಂಗೀತಾ ಹೇಗೆ ಮನೆಯನ್ನು ನಿಭಾಯಿಸುತ್ತಾರೆಯೋ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್