AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ-ಕೈ ಮಿಲಾಯಿಸಿದ ವಿನಯ್-ಕಾರ್ತಿಕ್, ಸಂಗೀತಾ-ನಮ್ರತಾ

Bigg Boss: ಬಿಗ್​ಬಾಸ್ ಮನೆಯಲ್ಲಿ ವಿನಯ್ ಹಾಗೂ ಕಾರ್ತಿಕ್ ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಟಾಸ್ಕ್​ ಒಂದನ್ನು ಆಡುವಾಗ ಇಬ್ಬರೂ ಪರಸ್ಪರ ತುಸು ಜೋರಾಗಿಯೇ ಪರಸ್ಪರ ಜಗಳವಾಡಿದ್ದಾರೆ.

ಕೈ-ಕೈ ಮಿಲಾಯಿಸಿದ ವಿನಯ್-ಕಾರ್ತಿಕ್, ಸಂಗೀತಾ-ನಮ್ರತಾ
ಮಂಜುನಾಥ ಸಿ.
|

Updated on: Dec 05, 2023 | 11:48 PM

Share

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಆರಂಭವಾದಾಗಿನಿಂದಲೂ ವಿನಯ್ (Vinay) ಹಾಗೂ ಸಂಗೀತಾ (Sangeetha) ಅವರಿಬ್ಬರದ್ದೂ ಪರಸ್ಪರ ವಿರುದ್ಧ ತಂಡಗಳು ಎಂದಾಗಿದೆ. ವಿನಯ್ ಹಾಗೂ ಸಂಗೀತಾಗೆ ಪರಸ್ಪರರನ್ನು ಕಂಡರೆ ಉರಿವಷ್ಟು ಕೋಪ. ಸಂಗೀತಾ ತಂಡದಲ್ಲಿರುವ ಕಾರ್ತಿಕ್ ಸಹ ಸಂಗೀತಾಗೆ ಬೆಂಬಲಿಸುತ್ತಾ ವಿನಯ್​ರೊಟ್ಟಿಗೆ ವೈರತ್ವ ಬೆಳೆಸಿಕೊಂಡಿದ್ದಾರೆ. ಅಲ್ಲದೆ, ವಿನಯ್​ಗೆ ಬಿಗ್​ಬಾಸ್ ಮನೆಯಲ್ಲಿ ತಕ್ಕ ಎದುರಾಳಿಯೆಂದರೆ ಅದು ಕಾರ್ತಿಕ್ ಮಾತ್ರ.

ಮಂಗಳವಾರದ ಎಪಿಸೋಡ್​ನಲ್ಲಿ ಮನೆಯಲ್ಲಿ ಸಂಗೀತಾ ಹಾಗೂ ವರ್ತೂರು ಸಂತೋಷ್​ರನ್ನು ತಂಡದ ಲೀಡರ್​ಗಳನ್ನಾಗಿ ಮಾಡಲಾಗಿದೆ. ಸಂಗೀತಾ ತಂಡವನ್ನು ರಾಕ್ಷಸರ ತಂಡವೆಂದು, ವರ್ತೂರು ತಂಡವನ್ನು ಗಂಧರ್ವರ ತಂಡವೆಂದು ಕರೆಯಲಾಗಿದ್ದು, ಎರಡೂ ತಂಡಗಳ ನಡುವೆ ಟಾಸ್ಕ್ ಆಡಿಸಲಾಗುತ್ತಿದೆ. ವರ್ತೂರು ತಂಡದಲ್ಲಿ ವಿನಯ್ ಇದ್ದರೆ, ಸಂಗೀತಾ ತಂಡದಲ್ಲಿ ಕಾರ್ತಿಕ್ ಇದ್ದಾರೆ.

ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ ಬಳಿಕ, ಧ್ವಜಗಳನ್ನು ನೆಟ್ಟು ಅದನ್ನು ಕಾಪಾಡಿಕೊಳ್ಳುವ ಟಾಸ್ಕ್ ಒಂದನ್ನು ನೀಡಲಾಯ್ತು. ರಾಕ್ಷಸರ ಗುಂಪಿನವರು ಕೆಂಪು ಧ್ವಜ ನೆಡಬೇಕು, ಗಂಧರ್ವರು ಬಿಳಿ ಧ್ವಜ ನೆಟ್ಟು ಅದನ್ನು ಎದುರಾಳಿಗಳ ಕೈಗೆ ಸಿಗದಂತೆ ಕಾಪಾಡಬೇಕು ಎಂಬುದು ಟಾಸ್ಕ್ ಆಗಿತ್ತು. ಈ ಟಾಸ್ಕ್​ ಆಡುವಾಗ ವಿನಯ್ ಹಾಗೂ ಕಾರ್ತಿಕ್ ಪರಸ್ಪರ ಕೈ-ಕೈ ಮಿಲಾಯಿಸಿದರು. ಪರಸ್ಪರರು ಭುಜಗಳಿಂದ ಪರಸ್ಪರರನ್ನು ತಳ್ಳಾಡಿಕೊಂಡರು, ಎಳೆದಾಡಿದರು. ಕಾರ್ತಿಕ್ ಒಮ್ಮೆಯಂತೆ ವಿನಯ್ ಅನ್ನು ಎತ್ತಿಕೊಂಡು ಹೋಗಿ ದೂರ ಒಗೆದರು, ವಿನಯ್ ಸಹ ಕಾರ್ತಿಕ್ ಅನ್ನು ಎಳೆದಾಡಿದರು. ಈ ಹಂತದಲ್ಲಿ ಇಬ್ಬರಿಗೂ ಏಟು ತಗುಲಿತು.

ಇದನ್ನೂ ಓದಿ:ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

ಇತ್ತ ವಿನಯ್ ಹಾಗೂ ಕಾರ್ತಿಕ್​ಗೆ ಜಗಳವಾಗುವ ಹೊತ್ತಿನಲ್ಲಿಯೇ ನಮ್ರತಾ ಹಾಗೂ ಸಂಗೀತಾ ಸಹ ಪರಸ್ಪರ ಕಿತ್ತಾಡಿದರು. ತಮ್ಮ-ತಮ್ಮ ಧ್ವಜ ರಕ್ಷಿಸಿಕೊಳ್ಳುವ ಭರದಲ್ಲಿ ಕತ್ತು ಹಿಡಿದು ಎಳೆದಾಡಿದರು. ತನಿಷಾ, ಸಿರಿ ಅವರುಗಳು ಬೇಡ, ಇಷ್ಟೋಂದು ದೈಹಿಕವಾಗಿ ಆಡುವುದು ಬೇಡ ಎಂದು ಕಿರುಚಿ, ಕ್ಯಾಪ್ಟನ್ ಸ್ನೇಹಿತ್​ರನ್ನು ಆಟ ನಿಲ್ಲಿಸುವಂತೆ ಹೇಳುವಂತೆ ಬೇಡಿದರೂ ಸ್ನೇಹಿತ್ ಆಟ ನಿಲ್ಲಿಸಲಿಲ್ಲ. ಕೊನೆಗೆ ಬಿಗ್​ಬಾಸ್, ಆಟವನ್ನು ನಿಲ್ಲಿಸುವಂತೆ ಹೇಳಿದರು. ಆಗ ತನಿಷಾ, ಸ್ನೇಹಿತ್ ಮೇಲೆ ಕೂಗಾಡಿ, ಎರಡೂ ಆಟಗಾರರಿಗೆ ಏಟಾಗುತ್ತಿದೆ ಇಂಥಹಾ ಸಮಯದಲ್ಲಿ ಆಟ ನಿಲ್ಲಿಸದಿದ್ದರೆ ಕ್ಯಾಪ್ಟನ್ ಆಗಿ ಪ್ರಯೋಜನವೇನು ಎಂದು ಕೂಗಾಡಿದರು. ಕೊನೆಗೆ ಆ ಜಗಳ ತುಕಾಲಿ ಮತ್ತು ತನಿಷಾಗೆ ಹತ್ತಿಕೊಂಡಿತು. ಅದಕ್ಕೆ ಮೂಗು ತೂರಿಸಿದ ಸಂಗೀತಾ ಸಹ ತುಕಾಲಿ ವಿರುದ್ಧ ಜಗಳ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆಯಲು ಸಿದ್ದರಾಮಯ್ಯ ಸಜ್ಜು
17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆಯಲು ಸಿದ್ದರಾಮಯ್ಯ ಸಜ್ಜು
ಸಿಬ್ಬಂದಿ ಬಳಿ ಪೈಲ್ಸ್​ ಆಪರೇಷನ್​ ಆಗಿರುವ ಪ್ರೂಫ್ ಕೇಳಿದ ಹಿರಿಯ ಅಧಿಕಾರಿ
ಸಿಬ್ಬಂದಿ ಬಳಿ ಪೈಲ್ಸ್​ ಆಪರೇಷನ್​ ಆಗಿರುವ ಪ್ರೂಫ್ ಕೇಳಿದ ಹಿರಿಯ ಅಧಿಕಾರಿ
ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ
ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್: ಜೋಡಿಯ ಮೋಜು-ಮಸ್ತಿ ರಹಸ್ಯ ಬಯಲು
ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್: ಜೋಡಿಯ ಮೋಜು-ಮಸ್ತಿ ರಹಸ್ಯ ಬಯಲು
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್