AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ

ಬಿಗ್​ ಬಾಸ್​ನಲ್ಲಿ ನಿರೂಪಕರು ಯಾರು ಎಂಬುದರ ಮೇಲೆ ಇಡೀ ಶೋನ ಮಜಾ ನಿರ್ಧಾರ ಆಗಿರುತ್ತದೆ. ಹಾಗಾಗಿ ಒಳ್ಳೆಯ ನಿರೂಪಕರಿಗಾಗಿ ವೀಕ್ಷಕರ ವಲಯದಿಂದ ಬೇಡಿಕೆ ಕೇಳಿಬರುತ್ತಿದೆ.

Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ
ಬಿಗ್​ ಬಾಸ್​
TV9 Web
| Edited By: |

Updated on: Aug 15, 2021 | 8:53 AM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ಕ್ಕೆ ಇತ್ತೀಚೆಗಷ್ಟೇ ತೆರೆಬಿದ್ದಿದೆ. ಮಂಜು ಪಾವಗಡ ಅವರು ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿದಿರುವುದು ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ. ಮುಂದಿನ ಸೀಸನ್​ ಆದಷ್ಟು ಬೇಗ ಶುರುವಾಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಹೊಸ ಸೀಸನ್​ನಲ್ಲೂ ಕಿಚ್ಚ ಸುದೀಪ್ (Kichcha Sudeep)​ ಅವರೇ ನಿರೂಪಣೆ ಮಾಡಲಿದ್ದಾರೆ. ಆದರೆ ಬೇರೆ ಭಾಷೆಯ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ನಿರೂಪಕರ ಆಯ್ಕೆ ಬಗ್ಗೆ ವೀಕ್ಷಕರಿಗೆ ಕಿರಿಕಿರಿ ಎನಿಸಿದೆ. ತೆಲುಗು ಬಿಗ್ ಬಾಸ್​ಗೆ ಜ್ಯೂ. ಎನ್​ಟಿಆರ್​, ನಾನಿ ಮತ್ತು ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ಹೋಸ್ಟ್​ ಆಗಿ ಕೆಲಸ ಮಾಡಿದ್ದರು. ಹೊಸ ಸೀಸನ್​ನಲ್ಲಿ ದಯವಿಟ್ಟು ನಿರೂಪಕರನ್ನು ಬದಲಾಯಿಸಿ ಎಂಬ ಕೂಗು ವೀಕ್ಷಕರ ವಯಲದಿಂದ ಕೇಳಿಬರುತ್ತಿದೆ.

ಈವರೆಗೂ ತೆಲುಗು ಬಿಗ್​ ಬಾಸ್​ ಕಾರ್ಯಕ್ರಮವು 4 ಸೀಸನ್​ಗಳನ್ನು ಪೂರ್ಣಗೊಳಿಸಿದೆ. 5ನೇ ಸೀಸನ್​ಗೆ ಸಿದ್ಧತೆಗಳು ನಡೆದಿವೆ. ಮೂರು ಮತ್ತು ನಾಲ್ಕನೇ ಸೀಸನ್​ಗೆ ನಿರೂಪಕರಾಗಿದ್ದ ನಾಗಾರ್ಜುನ ಅವರೇ 5ನೇ ಸೀಸನ್​ನಲ್ಲೂ ಮುಂದುವರಿಯಲಿದ್ದಾರೆ ಎಂಬುದು ಖುಚಿತವಾಗಿದೆ. ಆ.14ರಂದು ಹೊಸ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದನ್ನು ಕಂಡು ವೀಕ್ಷಕರು ನಿರಾಶರಾಗಿದ್ದಾರೆ.

ಒಂದು ವರ್ಗದ ವೀಕ್ಷಕರಿಗೆ ನಾಗಾರ್ಜುನ ನಿರೂಪಣೆ ಮಾಡುವ ಶೈಲಿ ಇಷ್ಟವಾಗಿಲ್ಲ. ಹಾಗಾಗಿ ಈ ಬಾರಿ ದಯವಿಟ್ಟು ನಾಗಾರ್ಜುನ ಬಿಗ್​ ಬಾಸ್​ ನಿರೂಪಣೆ ಮಾಡುವುದು ಬೇಡ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಪ್ರೋಮೋದಲ್ಲಿ ನಾಗಾರ್ಜುನ ಅವರನ್ನು ಕಂಡ ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅವರ ಬದಲಿಗೆ ದಯವಿಟ್ಟು ನಟ ನಾನಿ ಅವರನ್ನು ಕರೆತನ್ನಿ ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈಗಾಗಲೇ ನಾಗಾರ್ಜುನ ಜೊತೆ ‘ಸ್ಟಾರ್​ ಮಾ’ ಮಾಹಿನಿ ಒಪ್ಪಂದ ಮಾಡಿಕೊಂಡಿರುವುದರಿಂದ 5ನೇ ಸೀಸನ್​ನಲ್ಲೂ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ.

ತಮ್ಮ ಸಿನಿಮಾಗಳ ಶೂಟಿಂಗ್​ ಇದ್ದಾಗ ನಾಗಾರ್ಜುನ ಅವರು ಬಿಗ್​ ಬಾಸ್​ ನಿರೂಪಣೆಗೆ ಚಕ್ಕರ್​ ಹಾಕುತ್ತಾರೆ. ಮೂರು ಮತ್ತು ನಾಲ್ಕನೇ ಸೀಸನ್​ನಲ್ಲಿ ಅದೇ ರೀತಿ ಆಗಿತ್ತು. ಆಗ ಅವರ ಬದಲಿಗೆ ಒಮ್ಮೆ ರಮ್ಯಾ ಕೃಷ್ಣ ಹಾಗೂ ಇನ್ನೊಮ್ಮೆ ಸಮಂತಾ ಅಕ್ಕಿನೇನಿ ಬಂದು ನಿರೂಪಣೆ ಮಾಡಿದ್ದರು. ಈ ಬಾರಿ ಕೂಡ ಅದು ಮರುಕಳಿಸಿದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ