Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ

ಬಿಗ್​ ಬಾಸ್​ನಲ್ಲಿ ನಿರೂಪಕರು ಯಾರು ಎಂಬುದರ ಮೇಲೆ ಇಡೀ ಶೋನ ಮಜಾ ನಿರ್ಧಾರ ಆಗಿರುತ್ತದೆ. ಹಾಗಾಗಿ ಒಳ್ಳೆಯ ನಿರೂಪಕರಿಗಾಗಿ ವೀಕ್ಷಕರ ವಲಯದಿಂದ ಬೇಡಿಕೆ ಕೇಳಿಬರುತ್ತಿದೆ.

Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ
ಬಿಗ್​ ಬಾಸ್​
Follow us
| Updated By: ಮದನ್​ ಕುಮಾರ್​

Updated on: Aug 15, 2021 | 8:53 AM

ಕನ್ನಡ ಬಿಗ್​ ಬಾಸ್​ ಸೀಸನ್​ 8ಕ್ಕೆ ಇತ್ತೀಚೆಗಷ್ಟೇ ತೆರೆಬಿದ್ದಿದೆ. ಮಂಜು ಪಾವಗಡ ಅವರು ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿದಿರುವುದು ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ. ಮುಂದಿನ ಸೀಸನ್​ ಆದಷ್ಟು ಬೇಗ ಶುರುವಾಗಲಿ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಹೊಸ ಸೀಸನ್​ನಲ್ಲೂ ಕಿಚ್ಚ ಸುದೀಪ್ (Kichcha Sudeep)​ ಅವರೇ ನಿರೂಪಣೆ ಮಾಡಲಿದ್ದಾರೆ. ಆದರೆ ಬೇರೆ ಭಾಷೆಯ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ನಿರೂಪಕರ ಆಯ್ಕೆ ಬಗ್ಗೆ ವೀಕ್ಷಕರಿಗೆ ಕಿರಿಕಿರಿ ಎನಿಸಿದೆ. ತೆಲುಗು ಬಿಗ್ ಬಾಸ್​ಗೆ ಜ್ಯೂ. ಎನ್​ಟಿಆರ್​, ನಾನಿ ಮತ್ತು ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ಹೋಸ್ಟ್​ ಆಗಿ ಕೆಲಸ ಮಾಡಿದ್ದರು. ಹೊಸ ಸೀಸನ್​ನಲ್ಲಿ ದಯವಿಟ್ಟು ನಿರೂಪಕರನ್ನು ಬದಲಾಯಿಸಿ ಎಂಬ ಕೂಗು ವೀಕ್ಷಕರ ವಯಲದಿಂದ ಕೇಳಿಬರುತ್ತಿದೆ.

ಈವರೆಗೂ ತೆಲುಗು ಬಿಗ್​ ಬಾಸ್​ ಕಾರ್ಯಕ್ರಮವು 4 ಸೀಸನ್​ಗಳನ್ನು ಪೂರ್ಣಗೊಳಿಸಿದೆ. 5ನೇ ಸೀಸನ್​ಗೆ ಸಿದ್ಧತೆಗಳು ನಡೆದಿವೆ. ಮೂರು ಮತ್ತು ನಾಲ್ಕನೇ ಸೀಸನ್​ಗೆ ನಿರೂಪಕರಾಗಿದ್ದ ನಾಗಾರ್ಜುನ ಅವರೇ 5ನೇ ಸೀಸನ್​ನಲ್ಲೂ ಮುಂದುವರಿಯಲಿದ್ದಾರೆ ಎಂಬುದು ಖುಚಿತವಾಗಿದೆ. ಆ.14ರಂದು ಹೊಸ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದನ್ನು ಕಂಡು ವೀಕ್ಷಕರು ನಿರಾಶರಾಗಿದ್ದಾರೆ.

ಒಂದು ವರ್ಗದ ವೀಕ್ಷಕರಿಗೆ ನಾಗಾರ್ಜುನ ನಿರೂಪಣೆ ಮಾಡುವ ಶೈಲಿ ಇಷ್ಟವಾಗಿಲ್ಲ. ಹಾಗಾಗಿ ಈ ಬಾರಿ ದಯವಿಟ್ಟು ನಾಗಾರ್ಜುನ ಬಿಗ್​ ಬಾಸ್​ ನಿರೂಪಣೆ ಮಾಡುವುದು ಬೇಡ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಪ್ರೋಮೋದಲ್ಲಿ ನಾಗಾರ್ಜುನ ಅವರನ್ನು ಕಂಡ ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಅವರ ಬದಲಿಗೆ ದಯವಿಟ್ಟು ನಟ ನಾನಿ ಅವರನ್ನು ಕರೆತನ್ನಿ ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈಗಾಗಲೇ ನಾಗಾರ್ಜುನ ಜೊತೆ ‘ಸ್ಟಾರ್​ ಮಾ’ ಮಾಹಿನಿ ಒಪ್ಪಂದ ಮಾಡಿಕೊಂಡಿರುವುದರಿಂದ 5ನೇ ಸೀಸನ್​ನಲ್ಲೂ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ.

ತಮ್ಮ ಸಿನಿಮಾಗಳ ಶೂಟಿಂಗ್​ ಇದ್ದಾಗ ನಾಗಾರ್ಜುನ ಅವರು ಬಿಗ್​ ಬಾಸ್​ ನಿರೂಪಣೆಗೆ ಚಕ್ಕರ್​ ಹಾಕುತ್ತಾರೆ. ಮೂರು ಮತ್ತು ನಾಲ್ಕನೇ ಸೀಸನ್​ನಲ್ಲಿ ಅದೇ ರೀತಿ ಆಗಿತ್ತು. ಆಗ ಅವರ ಬದಲಿಗೆ ಒಮ್ಮೆ ರಮ್ಯಾ ಕೃಷ್ಣ ಹಾಗೂ ಇನ್ನೊಮ್ಮೆ ಸಮಂತಾ ಅಕ್ಕಿನೇನಿ ಬಂದು ನಿರೂಪಣೆ ಮಾಡಿದ್ದರು. ಈ ಬಾರಿ ಕೂಡ ಅದು ಮರುಕಳಿಸಿದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​