AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1963ರಲ್ಲೇ ಬಂದಿತ್ತು ಒಮಿಕ್ರಾನ್​ ಹೆಸರಿನ ಸಿನಿಮಾ; ಚಿತ್ರದ ಕಥೆ ಕೇಳಿದ್ರೆ ಅಚ್ಚರಿ ಪಡ್ತೀರಾ

2021ರಲ್ಲಿ ಕಾಣಿಸಿಕೊಂಡಿರುವ ಕೊರನಾ ರೂಪಾಂತರಿಯ ಹೆಸರು ಒಮಿಕ್ರಾನ್. ಅದಕ್ಕೂ ಮೊದಲು ಹೀಗೊಂದು ರೂಪಾಂತರಿ ಇದೆ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಇಡೀ ವಿಶ್ವ ಈ ಬಗ್ಗೆ ಮಾತನಾಡುತ್ತಿದೆ.

1963ರಲ್ಲೇ ಬಂದಿತ್ತು ಒಮಿಕ್ರಾನ್​ ಹೆಸರಿನ ಸಿನಿಮಾ; ಚಿತ್ರದ ಕಥೆ ಕೇಳಿದ್ರೆ ಅಚ್ಚರಿ ಪಡ್ತೀರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 02, 2021 | 8:15 PM

ಕೊರೊನಾ ವೈರಸ್​ ಇಡೀ ಜಗತ್ತನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೊವಿಡ್​ನ ಹೊಸ ರೂಪಾಂತರಿಗಳು ಪತ್ತೆ ಆಗುತ್ತಿದ್ದು, ಆತಂಕ ಹೆಚ್ಚುತ್ತಿದೆ. ಹೊಸ ರೂಪಾಂತರಿಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಈ ವೈರಸ್​ ಬಗೆಗಿನ ಅಧ್ಯಯನ ಮತ್ತಷ್ಟು ಜಟಿಲವಾಗುತ್ತಿದೆ. ಸದ್ಯ ಎಲ್ಲೆಲ್ಲೂ ಒಮಿಕ್ರಾನ್​ ರೂಪಾಂತರಿಯದ್ದೇ ಸುದ್ದಿ. ಈ ಕೊರೊನಾ ರೂಪಾಂತರಿ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ಈ ಹೆಸರಿನಲ್ಲಿ ಸಿನಿಮಾ ಕೂಡ ಬಂದಿತ್ತು ಎಂದರೆ ನೀವು ನಂಬಲೇ ಬೇಕು. ಅದೂ 1963ರಲ್ಲಿ! ಈ ಸಿನಿಮಾದ ಪೋಸ್ಟರ್​ ಸಾಕಷ್ಟು ವೈರಲ್​ ಆಗುತ್ತಿದೆ.

2021ರಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿಯ ಹೆಸರು ಒಮಿಕ್ರಾನ್. ಅದಕ್ಕೂ ಮೊದಲು ಹೀಗೊಂದು ರೂಪಾಂತರಿ ಇದೆ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಇಡೀ ವಿಶ್ವ ಈ ಬಗ್ಗೆ ಮಾತನಾಡುತ್ತಿದೆ. ಹೀಗಿರುವಾಗ ಈ ರೂಪಾಂತರಿ ಬಗ್ಗೆ 1963ರಲ್ಲಿ ಸಿನಿಮಾ ಬರೋಕೆ ಹೇಗೆ ಸಾಧ್ಯ? ಅಂದೇ ಈ ಬಗ್ಗೆ ಊಹೇ ಮಾಡಲಾಗಿತ್ತೇ? ಹೀಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅದಕ್ಕೂ ಇಲ್ಲಿ ಉತ್ತರವಿದೆ.

ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್​ ಮಹಿಂದ್ರಾ, ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ‘ದಿ ಒಮಿಕ್ರಾನ್​ ವೇರಿಯಂಟ್​’ ಅನ್ನೋದು ಸಿನಿಮಾದ ಹೆಸರು. 1963ರಲ್ಲೇ ಈ ಸಿನಿಮಾ ಇಟಲಿ ಭಾಷೆಯಲ್ಲಿ ತೆರೆಗೆ  ಬಂದಿತ್ತು ಎನ್ನುವ ವಿಚಾರವನ್ನು ಅವರು ರಿವೀಲ್​ ಮಾಡಿದ್ದಾರೆ.

ಈ ಚಿತ್ರ ಅಸಲಿಗೆ ವೈರಸ್​ ಬಗ್ಗೆ ಇಲ್ಲ. ಈ ಸಿನಿಮಾ ಏಲಿಯನ್​ಗಳ ಬಗ್ಗೆ ಇದೆ. ಮೃತಪಟ್ಟ ಕಾರ್ಖಾನೆ ಸಿಬ್ಬಂದಿಗಳನ್ನು ಅನ್ಯಜೀವಿ ಗ್ರಹಗಳು ತೆಗೆದುಕೊಂಡು ಹೋಗುತ್ತವೆ. ಇವು ಮೃತಪಟ್ಟವರಿಗೆ ಜೀವ ತರಿಸುತ್ತವೆ. ಈ ಮೂಲಕ ಭೂಮಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತವೆ. ಇದು ಸಿನಿಮಾದ ಒಂದೆಳೆ. ಸದ್ಯ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿಲ್ಲ ಚಾನ್ಸ್​​, ಆಲ್ಕೋಹಾಲ್​ ಮಾರಾಟ ಆರಂಭಿಸಿದ ಖ್ಯಾತ ಕಾಮಿಡಿಯನ್​; ಫೋಟೋ ವೈರಲ್

Published On - 8:03 pm, Thu, 2 December 21

ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?