AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಕ್ಕೆ ಹೋಗುವಾಗ ಉಪಾಸನಾ ಲಗೇಜ್ ಬ್ಯಾಗ್​ನಲ್ಲಿರುತ್ತೆ ಕುಕ್ಕರ್

ರಾಮ್‌ಚರಣ್‌ ಅವರಿಗೆ ಭಾರತೀಯ ಆಹಾರದ ಬಗ್ಗೆ ವಿಶೇಷ ಆಸಕ್ತಿ ಇದೆ. ವಿದೇಶ ಪ್ರವಾಸಗಳಲ್ಲಿ ಭಾರತೀಯ ಆಹಾರ ಸಿಗುವುದು ಕಷ್ಟ ಎಂದು ತಿಳಿದ ಉಪಾಸನಾ ಅವರು, ಪ್ರತಿ ಪ್ರಯಾಣದಲ್ಲೂ ಕುಕ್ಕರ್ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ರಾಮ್‌ಚರಣ್‌ ಅವರಿಗೆ ದಿನಕ್ಕೊಮ್ಮೆಯಾದರೂ ಭಾರತೀಯ ಊಟ ಸಿಗುತ್ತದೆ.

ವಿದೇಶಕ್ಕೆ ಹೋಗುವಾಗ ಉಪಾಸನಾ ಲಗೇಜ್ ಬ್ಯಾಗ್​ನಲ್ಲಿರುತ್ತೆ ಕುಕ್ಕರ್
ಉಪಾಸನಾ-ರಾಮ್ ಚರಣ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 11, 2025 | 11:04 AM

ರಾಮ್ ಚರಣ್ (Ram Charan) ಅವರಿಗೆ ಊಟದ ಬಗ್ಗೆ ವಿಶೇಷ ಪ್ರೀತಿ ಇದೆ. ಅದರಲ್ಲೂ ದಕ್ಷಿಣ ಭಾರತದ ಊಟ ಎಂದರೆ ರಾಮ್ ಚರಣ್ ಅವರಿಗೆ ಸಾಕಷ್ಟು ಇಷ್ಟವಂತೆ. ರಾಮ್ ಚರಣ್ ಅವರು ನಾನಾ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಭಾರತದ ಊಟವೇ ಬೇಕು ಎಂದು ಹಠ ಹಿಡಿದು ಕುಳಿತರೆ ಅದು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಉಪಾಸನಾ ಅವರು ಒಂದು ಪ್ಲ್ಯಾನ್ ಮಾಡಿದ್ದಾರೆ. ಪ್ರತಿ ಬಾರಿ ವಿದೇಶಕ್ಕೆ ಹೋಗುವಾಗ ಮನೆಯಿಂದ ಕುಕ್ಕರ್ ತೆಗೆದುಕೊಂಡು ಹೋಗುತ್ತಾರೆ.

ರಾಮ್ ಚರಣ್ ಅವರು ಹಿಂದೂ ಧರ್ಮದ ಆಚರಣೆಗಳನ್ನು ಫಾಲೋ ಮಾಡುತ್ತಾರೆ. ಹಬ್ಬ-ಹರಿದಿನಗಳಲ್ಲಿ ಭಾಗಿ ಆಗುತ್ತಾರೆ.  ರಾಮ್ ಚರಣ್ ಅವರಿಗೆ ಊಟದ ಬಗ್ಗೆ ವಿಶೇಷ ಕಾಳಜಿ ಇದೆ. ಹಬ್ಬಗಳಂದು ಮಾಡುವ ಅಡುಗೆಯನ್ನು ಅವರು ಆಸ್ವಾದಿಸುತ್ತಾರೆ. ಅವರು ವಿದೇಶಕ್ಕೆ ಹೋದರೂ ಭಾರತದ ಊಟ ಮಾಡೋದು ಬಿಡಲ್ಲ. ದಿನಕ್ಕೆ ಒಮ್ಮೆಯಾದರೂ ಅವರು ಭಾರತೀಯ ಊಟವನ್ನು ಮಾಡುತ್ತಾರಂತೆ.

‘ವಿದೇಶದಲ್ಲಿ ಎಲ್ಲಿಯೇ ಹೋದರೂ ನನ್ನ ಪತಿಗೆ ಭಾರತೀಯ ಊಟ ಮಾಡಲೇಬೇಕು. ದಿನದಲ್ಲಿ ಒಂದು ಊಟ ಭಾರತದ್ದಾಗಿರಬೇಕು’ ಎಂದು ಉಪಾಸನಾ ಅವರು ಹೇಳಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲಿ ಭಾರತದ ಊಟ ಸಿಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಸುತ್ತಾಟ ಮಾಡಬೇಕಾಗುತ್ತದೆ. ಸಮಯ ಇಲ್ಲ ಎಂದಾಗ ಅದು ಅಸಾಧ್ಯ ಕೂಡ ಹೌದು. ಹೀಗಾಗಿ, ಉಪಾಸನಾ ಕುಕ್ಕರ್​ನ ತೆಗೆದುಕೊಂಡು ಹೋಗುತ್ತಾರಂತೆ.

ಇದನ್ನೂ ಓದಿ
Image
‘ನೀವು ಬಿಡಿ ದುಬಾರಿ ನಟಿ’ ಎಂದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರವೇನು?
Image
Agnyathavasi Review: ಕೊಲೆಯ ಮಧ್ಯೆ ‘ಅಜ್ಞಾತದ’ ಕಥೆ; ಬಗೆದಷ್ಟು ವಿಶೇಷತೆ
Image
ದೇಶಭಕ್ತಿ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿದ ಸೆನ್ಸಾರ್ ಮಂಡಳಿ; ಕಾರಣ ಏನು?
Image
ಕಂಗನಾ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದು ನಿಜವೇ? ಕಳ್ಳಾಟ ಬಯಲು

ರಾಮ್ ಚರಣ್ ತಾಯಿ ವಿವಿಧ ರೀತಿಯ ರೆಡಿ ಮೇಡ್ ಫುಡ್​ಗಳನ್ನು ಮಾಡುತ್ತಾರೆ. ಅವರದ್ದೇ ಕಂಪನಿ ಕೂಡ ಇದೆ. ಇವುಗಳನ್ನು ಉಪಾಸನಾ ತೆಗೆದುಕೊಂಡು ಹೋಗುತ್ತಾರೆ. ‘ನಾವು ಎಲ್ಲೇ ಹೋದರೂ  ಎಲೆಕ್ಟ್ರಿಕ್ ಕುಕ್ಕರ್ ತೆಗೆದುಕೊಂಡು ಹೋಗುತ್ತೇವೆ. ನೀರು ಹಾಕಿ , ಸ್ವಿಚ್ ಹಾಕುತ್ತೇವೆ. ಇದರಿಂದ ಅಡುಗೆ ಆಗುತ್ತದೆ. ಫೈಯರ್ ಅಲಾರಮ್ ಕೂಗೋ ಭಯವೂ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಕಿರಿಯ ಹಾಸ್ಯನಟನ ಕಾಲು ನಮಸ್ಕರಿಸಿದ ರಾಮ್ ಚರಣ್, ವಿಷಯವೇನು?

ಉಪಾಸನಾ ಅತ್ತೆ ಸುರೇಖಾ ಅವರು ‘ಅತ್ತಮ್ಮಾಸ್ ಕಿಚನ್’ ಆರಂಭಿಸಿದ್ದಾರೆ. ಹೋಮ್ ಮೇಡ್ ಫುಡ್​ಗಳು ಇದರಲ್ಲಿ ಲಭ್ಯ. ಇತ್ತೀಚೆಗೆ ಉಪಾಸನಾ ಅವರು ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಸೆಟ್​​ಗೆ ಭೇಟಿ ಕೊಟ್ಟಿದ್ದರು. ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರಿಗೆ ಈ ಕಿಚನ್​ನಿಂದ ಕೆಲ ಗಿಫ್ಟ್​ಗಳನ್ನು ಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:04 am, Fri, 11 April 25

ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!