Sign In

By signing in or creating an account, you agree with Associated Broadcasting Company's Terms & Conditions and Privacy Policy.

1970 ರಲ್ಲೂ ನಡೆದಿತ್ತು ಬಾಂಗ್ಲಾ ಗಲಭೆ; ಬದುಕುಳಿದವರ ಕಥೆ ರೋಚಕ!

ಬಾಂಗ್ಲಾದೇಶದಲ್ಲಿ ಆಗುತ್ತಿರುವ ಗಲಭೆಯನ್ನ ನೋಡಿಯೇ ಇರ್ತಿರಿ. ಆದ್ರೆ, ಅದೇ ರೀತಿಯ ದೊಡ್ಡ ಗಲಭೆ ದಶಕಗಳ ಹಿಂದೆಯೂ ನಡೆದಿತ್ತಂತೆ. ಅಂದಿನ ಗಲಾಟೆಯಲ್ಲಿ ಬದುಕುಳಿದು ರಕ್ಷಿಸಲ್ಪಟ್ಟೋರು ಈಗ ರಾಜ್ಯದ ಗಡಿ ಜಿಲ್ಲೆ ರಾಯಚೂರಿನಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದಲ್ಲಿರುವ ಈಗಿನ ಹಿಂದುಗಳನ್ನ ಕಾಪಾಡಿ ಎಂದು ಕಣ್ಣೀರಿಡ್ತಿದ್ದಾರೆ.

1970 ರಲ್ಲೂ ನಡೆದಿತ್ತು ಬಾಂಗ್ಲಾ ಗಲಭೆ; ಬದುಕುಳಿದವರ ಕಥೆ ರೋಚಕ!
1970 ರ ಬಾಂಗ್ಲಾ ಗಲಭೆಯಲ್ಲಿ ಬದುಕುಳಿದವರ ಕಥೆ ರೋಚಕ
Follow us
ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 11, 2024 | 6:13 PM

ರಾಯಚೂರು, ಆ.11: ಸದ್ಯ ಬಾಂಗ್ಲಾದಲ್ಲಿ ಹೊತ್ತಿ ಉರಿದ ಗಲಭೆ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಅತೀ ದೊಡ್ಡ ಗಲಭೆಗಳು ನಡೆದಿವೆ. ಅದರಲ್ಲಿ ಅಳಿದು ಉಳಿದವರೇ ಈಗ ರಾಯಚೂರು(Raichur) ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್​ಎಚ್​ ಕ್ಯಾಂಪ್​​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಾಂಗ್ಲಾ ನಿರಾಶ್ರಿತರೆಲ್ಲಾ ಭಾರತಕ್ಕೆ ಬಂದಿದ್ದು 1970ರಲ್ಲಿ. ಅಂದು ಕೂಡ ಇದೇ ರೀತಿ ಗಲಾಟೆಗಳು ನಡೆದಿದ್ದು, ಆಗ ಹಿಂದೂಗಳನ್ನ ಟಾರ್ಗೆಟ್ ಮಾಡಿ ಟಾರ್ಚರ್ ನೀಡಲಾಗ್ತಿತ್ತಂತೆ. ಹೀಗಾಗಿ 1970ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಅನ್ಯಾಯಕ್ಕೊಳಗಾದವರು ಭಾರತದಲ್ಲಿ ನೆಲೆಸಲಿಚ್ಛಿಸಿದ್ದರಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪುನರ್ವಸತಿಗೆ ಸಮ್ಮತಿಸಲಾಗಿತ್ತು.

ಸದ್ಯ ಒಟ್ಟು 5 ಆರ್​ಎಚ್​ ಕ್ಯಾಂಪ್​ಗಳ ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 20,000 ಕ್ಕೂ ಹೆಚ್ಚು ಬಾಂಗ್ಲಾ ನಿರಾಶ್ರಿತರು ವಾಸವಿದ್ದಾರೆ. ಅಂದು ಕೂಡ ಹಿಂದುಗಳ ಮೇಲೆ ದೌರ್ಜನ್ಯ ನಡೆದಿತ್ತು,ಈಗಲೂ ಅದೇ ಆಗ್ತಿದೆ ಎಂದು ಇಲ್ಲಿನ ಜನ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಹೇಳುತ್ತಿದ್ದಾರೆ. ಹೌದು, 1947 ಯಿಂದ ಈವರೆಗೂ ಬಾಂಗ್ಲಾದಲ್ಲಿ ಗಲಾಟೆಗಳು ನಡೆಯುತ್ತಲೇ ಇವೆಯಂತೆ. ಏನೇ ಆದರೂ ಹಿಂದೂಗಳ ಮೇಲೆಯೇ ದಬ್ಬಾಳಿಕೆ, ಟಾರ್ಚರ್ ಮಾಡುತ್ತಾರೆ ಎಂದು ರಾಯಚೂರಿನಲ್ಲಿರುವ ಬಾಂಗ್ಲಾ ನಿರಾಶ್ರಿತರು ಅಳಲನ್ನ ತೋಡಿಕೊಳ್ತಿದ್ದಾರೆ.

ಇದನ್ನೂ ಓದಿ:ರಾಯಚೂರು: ಸಿಂಧನೂರಿನ ಐವರಿಗೆ ಸಿಎಎ ಕಾಯ್ದೆಯಡಿ ಪೌರತ್ವ

ಬಾಂಗ್ಲಾದಲ್ಲಿ ನಡೆಯುತ್ತಿರುವ ಗಲಭೆಯಲ್ಲೂ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ನಮ್ಮ ಕುಟುಂಬಸ್ಥರು ಅಲ್ಲೇ ಇದ್ದು ಅವರು ಕೂಡ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಇಲ್ಲಿನ ನಿರಾಶ್ರಿತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬಾಂಗ್ಲಾ ನಿರಾಶ್ರಿತ ಪ್ರಣಬ್ ಬಾಲಾ ಎಂಬಾತ ಮಾತನಾಡಿ, ‘ 1962, 1964 ,1971 ಆಯ್ತು, ಬಾಬ್ರಿ ಮಸೀದಿ ಗಲಾಟೆ ಸಮಯದಲ್ಲೂ ಹಿಂದುಗಳ ಮೇಲೆಯೇ ಟಾರ್ಚರ್ ಮಾಡಲಾಗಿದೆ. ದೇವಸ್ಥಾನಗಳನ್ನ ಸುಟ್ಟು ಹಾಕ್ತಾರೆ, ಮನೆಗಳಿಗೆ ಲೂಟಿ ಮಾಡುತ್ತಾರೆ. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ. 1970ರಲ್ಲಿ ಈಗ ನಡೆಯುತ್ತಿರೊ ಗಲಭೆಗಿಂತ ಹೆಚ್ಚಾಗಿ ಗಲಾಟೆಗಳು ನಡೆದಿದ್ದವು. ಹೀಗಾಗಿಯೇ ನಾವು ಇಲ್ಲಿ ಬಂದು ನೆಲೆಸಿದ್ದೇವೆ. ಈಗ ನಡೆಯುತ್ತಿರೊ ಗಲಭೆಯಲ್ಲೂ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದರು.

ಅವರಿಗೆ ಪ್ರಧಾನಿ ಮೋದಿ ಅವ್ರು ರಕ್ಷಣೆ ನೀಡಬೇಕು ಎಂದು ಮನವಿ

ಸದ್ಯ ಬಾಂಗ್ಲಾದಲ್ಲಿರುವ ಹಿಂದುಗಳಿಗೆ ಪ್ರಧಾನಿ ಮೋದಿ ಅವರು ರಕ್ಷಣೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಇಲ್ಲಿನ ಜನ ಮನವಿ ಮಾಡ್ತಿದ್ದಾರೆ. ಅದೆನೆ ಇರಲಿ ನಾಲ್ಕು ದಶಕಗಳಿಂದ ಇಲ್ಲೆ ಜೀವನ ಕಂಡುಕೊಂಡಿರುವ ಈ ನಿರಾಶ್ರಿತರ ಪೈಕಿ, ಸದ್ಯ ಐದು ಜನಕ್ಕೆ ಸಿಎಎ ಅಡಿಯಲ್ಲಿ ಪೌರತ್ವ ಸಿಕ್ಕಿದೆ. ಇಲ್ಲಿನ ಉಳಿದವರು ಕೂಡ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು, ಆ ದಾಖಲೆ ಪಡೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಇವ್ರಿಗೆ ಪೌರತ್ವ ಪಡೆದ ಖುಷಿಯ ಮಧ್ಯೆ ಬಾಂಗ್ಲಾ ಗಲಭೆಯಲ್ಲಿ ತಮ್ಮ ಸಂಬಂಧಿಕರುಗಳು ದೌರ್ಜನ್ಯ ಎದುರಿಸುತ್ತಿರೋದ್ರಿಂದ ಇವರೆಲ್ಲ ಮಂಕಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Sun, 11 August 24

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್