AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ: ಹುಡುಗನ ಜೊತೆಗೆ ಹುಡುಗ ಡೇಟಿಂಗ್​​​​​​​​​​​​ ಮಾಡಲು ಕರೆಸಿ ಕಿಡ್ನಾಪ್

ಇವತ್ತಿನ ದಿನದಲ್ಲಿ ಹುಡುಗ ಹುಡುಗಿಯರ ಡೇಟಿಂಗ್​​​ ಮಾಡಲು ಕೆಲ ಆ್ಯಪ್​​​ಗಳು ಇವೆ. ಕೇವಲ ಯುವತಿ-ಯುವಕರಿಗೆ ಮಾತ್ರವಲ್ಲ, ಹುಡುಗನ ಜೊತೆಗೆ ಹುಡುಗ ಹಾಗೂ ಹುಡುಗಿ ಜೊತೆಗೆ ಹುಡುಗಿಯರ ಡೇಟಿಂಗ್ ಆ್ಯಪ್​​ಗಳು ಸಹ ಇವೆ. ಇದೇ ಒಂದು ಆ್ಯಪ್​​​ನಲ್ಲಿ ಪರಿಚಯ ಆಗಿದ್ದವನ ಡೇಟ್ ಮಾಡಲು ಹೋಗಿ ಕಿಡ್ನಾಪ್ ಆಗಿದ್ದಾನೆ. ಬೆಂಗಳೂರಿನಲ್ಲೇ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ.

ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ: ಹುಡುಗನ ಜೊತೆಗೆ ಹುಡುಗ ಡೇಟಿಂಗ್​​​​​​​​​​​​ ಮಾಡಲು ಕರೆಸಿ ಕಿಡ್ನಾಪ್
ಪ್ರಾತಿನಿಧಿಕ ಚಿತ್ರ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jun 22, 2026 | 10:12 PM

Share

ಬೆಂಗಳೂರು, (ಜೂನ್ 22): ಸಾಮಾಜಿಕ ಜಾಲತಾಣಗಳು ಈಗ ಅವುಗಳ ಲಿಮಿಟ್ ಮೀರಿ ಹೋಗಿದೆ. ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾಗಿದ್ದವು ನಂತರದ ದಿನದಲ್ಲಿ ಯುವಕ ಯುವತಿಯರ ಡೇಟಿಂಗ್ ಆ್ಯಪ್​​​ ಗಳಾಗಿ ಬದಲಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಯುವಕ ಯುವಕರೂ ಡೇಟಿಂಗ್ ಮಾಡುವ ಆ್ಯಪ್​​​ ಗಳು ಬಂದಿದ್ದು, ಇದೇ ರೀತಿ ಆ್ಯಪ್​​​ ನಂಬಿ ಹೋದವನೊಬ್ಬ ಕಿಡ್ನಾಪ್ ಆಗಿ ಚಾಕುವಿನಿಂದ ಇರಿಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಡೇಟಿಂಗ್ ಆ್ಯಪ್ ಕಿಡ್ನಾಪ್ ಕಥೆ ಹೊರ ಬಂದಿದ್ದೇ ಒಂದು ರೀತಿ ರೋಚಕ.

ಡೇಟೇಂಗ್​​​ಗೆ ಹೋದವನು ಕಿಡ್ನಾಪ್

ಸೈಯದ್ ಮಜರ್ ಎನ್ನುವಾತ ಡೇಟಿಂಗ್ ಆ್ಯಪ್ ನ ಮೂಲಕ ವಾಸೀಂ ಎಂಬಾತನ ಜೊತೆಗೆ ಗೆಳೆತನ ಮಾಡಿದ್ದ. ಆದ್ರೆ ಅಸಲಿಗೆ ಅವನು ವಾಸೀಂ ಆಗಿರಲಿಲ್ಲ ಅವನ ನಿಜವಾದ ಹೆಸರು ತನ್ನು. ಈಗ ಅದು ತನ್ನು ಅಲಿಯಾಸ್ ವಾಸೀಂ ಅಗಿದೆ. ಇಬ್ಬರು ಕೆಲ ದಿನಗಳ ಕಾಲ ಚಾಟ್ ಮಾಡಿದ್ದಾರೆ. ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಏರಿಯಾದಲ್ಲಿ ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದರು. ಆದ್ರೆ ತನ್ನು ಅಲಿಯಾಸ್ ವಾಸಿಂ ಒಬ್ಬನೇ ಬಂದಿರಲಿಲ್ಲ. ಬದಲಾಗಿ ಕಾರಿನಲ್ಲಿ ತಬ್ರೇಜ್ ಸೇರಿ ಇನ್ನೂ ಮೂವರನ್ನು ಕರೆದುಕೊಂಡು ಬಂದಿದ್ದ. ಕಾರಿನ ಬಳಿಗೆ ಸೈಯದ್ ನ ಕರೆಸಿಕೊಂಡು ನಂತರ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಚಾಕು ಹಾಕಿ ಬೆದರಿಸಿ ಹಣ, ಮೊಬೈಲ್ ದೋಚಿದ್ದಾರೆ.

ಇದನ್ನೂ ಓದಿ: ವಿಚಾರಣೆಗೆ ಕರೆದು ಪೊಲೀಸರಿಂದ ಹಲ್ಲೆ ಆರೋಪ: ಠಾಣೆಯಲ್ಲೇ ವೃದ್ಧ ಸಾವು

ಕಿಡ್ನಾಪ್ ಕಥೆ ಹೊರ ಬಂದಿದ್ದೇ ರೋಚಕ

ಅಷ್ಟಕ್ಕೂ ಈ ಕೇಸ್ ಹೊರ ಬಂದಿದ್ದೆ ಒಂದು ರೋಚಕ.ಆರೋಪಿಗಳು ಚಾಕು ಇರಿದು ಕಾರಿನಲ್ಲೇ ಸುತ್ತಾಡಿಸುತ್ತಿರುವಾಗ ಬಾಗಲೂರ ಬಳಿ ಕಿಡ್ನಾಪ್ ಆಗಿದ್ದ ಸೈಯದ್ ತಪ್ಪಿಸಿಕೊಂಡಿದ್ದಾನೆ. ಕಾರಿನಿಂದ ಓಡಿ ಹೋಗಿ ಅಲ್ಲಿದ್ದ ಸ್ಥಳೀಯರ ಸಹಾಯ ಕೇಳಿದ್ದಾನೆ. ಈ ವೇಳೆ ಸ್ಥಳೀಯರು ಕಾರಿನಲ್ಲಿದ್ದವರನ್ನು ಓಡಿಸಿಕೊಂಡು ಹೋದಾಗ ಓರ್ವ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಬಳಿಕ ಕಾಲು ಮುರಿದುಕೊಂಡವ, ತನ್ನ ಮೇಲೆ ಹಲ್ಲೆ ಮಾಡಿ ಕಾಲು ಮುರಿದ್ದಾರೆ ಎಂದು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪೊಲೀಸ್ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಡೇಟಿಂಗ್ ಆ್ಯಪ್ ಕಿಡ್ನಾಪ್ ಕಥೆ ಬಯಲಾಗಿದೆ.

ಬಳಿಕ ಸಂಪಿಗೆಹಳ್ಳಿ ಪೊಲೀಸರು ಕಿಡ್ನಾಪ್ ಕೇಸ್ ದಾಖಲು ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದು ಇನ್ನೋರ್ವ ಆಸ್ಪತ್ರೆಯಲ್ಲಿ ಇದ್ದು ಆತ ಗುಣಮುಖ ಆದ ನಂತರ ಬಂಧಿಸಲಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಯಾವುದೋ ಆ್ಯಪ್ ,ಯಾವುದೋ ವೆಬ್ ಸೈಟ್ ನಲ್ಲಿ ಪರಿಚಯ ಆದ ಅಂತ ಲಿಂಗಭೇದ ಮರೆತು ಡೇಟಿಂಗ್ ಹೋಗುವ ಮೊದಲು ಎಚ್ಚರಿಕೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ