AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಘರ್ಷಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಚುನಾವಣೆ: ABVP ಗೆಲುವು; ಸಿಎಂಗೆ ದೂರು ನೀಡಲು ಮುಂದಾದ NSUI

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಚುನಾವಣೆಯಲ್ಲಿ ಪರೋಕ್ಷ ಮತದಾನದ ಮೂಲಕ ಎಬಿವಿಪಿ ಗೆಲುವು ಸಾಧಿಸಿದ್ದು, ಸರ್ಕಾರದ ನೂತನ ಆದೇಶ ಉಲ್ಲಂಘಿಸಿ ಎಲೆಕ್ಷನ್ ನಡೆಸಿದ ಕುಲಪತಿ ವಿರುದ್ಧ ಸಿಎಂಗೆ ದೂರು ನೀಡಲು ಎನ್‍ಎಸ್‌ಯುಐ ಮುಂದಾಗಿದೆ. ಈವರೆಗೂ ಇದ್ದ ಪರೋಕ್ಷ ಚುನಾವಣೆ ಬದಲು, ನೇರ ಚುನಾವಣೆ ನಡೆಸಲು ನಿನ್ನೆರಾಜ್ಯ ಸರ್ಕಾರ ಆದೇಶಿಸಿರುವ ನಡೆದ ಈ ಚುನಾವಣೆ ವಿವಾದಕ್ಕೆ ಕಾರಣವಾಗಿದೆ.

ಸಂಘರ್ಷಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಚುನಾವಣೆ: ABVP ಗೆಲುವು; ಸಿಎಂಗೆ ದೂರು ನೀಡಲು ಮುಂದಾದ NSUI
ಮಂಗಳೂರಿನ ಹಂಪನಕಟ್ಟೆಯಲ್ಲಿರೋ ವಿವಿ ಕಾಲೇಜುImage Credit source: enrollacademy.com
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Sep 11, 2026 | 3:53 PM

Share

ಮಂಗಳೂರು, ಸೆಪ್ಟೆಂಬರ್​​ 11: ಕಾಲೇಜು-ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ಪುನರಾರಂಭಕ್ಕೆ ಮೊನ್ನೆ(ಸೆ.09)ಯಷ್ಟೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನಡುವೆಯೇ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಎಲೆಕ್ಷನ್​​ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. ಪರೋಕ್ಷ ಮತದಾನದ ಮೂಲಕ ನಡೆದಿರುವ ಚುನಾವಣೆಯಲ್ಲಿ ಎಬಿವಿಪಿ ಗೆದ್ದು ಬೀಗಿದ್ದು, ಸರ್ಕಾರದ ಆದೇಶದ ನಡುವೆ ನಡೆದಿರುವ ಈ ಎಲೆಕ್ಷನ್​​ ಬಗ್ಗೆ NSUI ಆಕ್ಷೇಪ ತೆಗೆದಿದೆ. ಮಂಗಳೂರು ವಿವಿ ಕುಲಪತಿ ವಿರುದ್ಧ ಸಿಎಂಗೆ ದೂರು ನೀಡಲೂ ಮುಂದಾಗಿದೆ.

ಚುನಾವಣೆ ಬಗ್ಗೆ ಸಂಘರ್ಷ ಯಾಕೆ?

ಈವರೆಗೂ ಇದ್ದ ಪರೋಕ್ಷ ಚುನಾವಣೆ ಬದಲು, ನೇರ ಚುನಾವಣೆ ನಡೆಸಲು ನಿನ್ನೆ (ಸೆ.10) ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶ ಬರುವುದಕ್ಕೂ ಮೊದಲೇ ಚುನಾವಣೆ ನಿಗದಿಯಾಗಿತ್ತು ಎಂಬ ಕಾರಣ ನೀಡಿ ಚುನಾವಣೆ ನಡೆಸಲಾಗಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ, ಪರೋಕ್ಷ ಚುನಾವಣೆ ಆದ್ರೆ ABVPಗೆ ಗೆಲುವು ಪಕ್ಕಾ ಎಂಬ ಕಾರಣಕ್ಕೆ ವಿಶ್ವ ವಿದ್ಯಾಲಯದ ಮೇಲೆ ಒತ್ತಡ ಹೇರಲಾಗಿತ್ತು. ಹೊಸ ಆದೇಶದಂತೆ ಚುನಾವಣೆ ನಡೆಸಲು ಆಗ್ರಹಿಸಲಾಗಿತ್ತು. ಆದರೆ ವಿಶ್ವ ವಿದ್ಯಾಲಯ ಮಾತ್ರ ಯಾರ ಒತ್ತಡಕ್ಕೂ ಮಣಿಯದೆ ಮಂಗಳೂರಿನ ಹಂಪನಕಟ್ಟೆಯಲ್ಲಿರೋ ವಿವಿ ಕಾಲೇಜಿನಲ್ಲಿ ಎಲೆಕ್ಷನ್​​ ನಡೆಸಿದೆ.

LIVE TV

ಇದನ್ನೂ ಓದಿ: ಸಚಿವ ಸಂಪುಟ ಸಭೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅಸ್ತು

ವಿವಿ ಕುಲಪತಿ ವಿರುದ್ಧ ದೂರು ಕೊಡಲು ಸಿದ್ಧತೆ

ಇಂದು ನಡೆದ ಮಂಗಳೂರು ವಿವಿ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಬೀಗಿದ ಎಬಿವಿಪಿ ವಿಜಯೋತ್ಸವ ಆಚರಿಸಿದ್ದರೆ, ಇತ್ತ ಈ ಸಂಬಂಧ ಸಿಎಂ ಡಿಕೆಶಿಗೆ ದೂರು ಕೊಡಲು ಸಿದ್ಧತೆ NSUI ಸಿದ್ಧತೆ ನಡೆಸಿದೆ. ಜಿಲ್ಲಾಡಳಿತದ ಮೂಲಕ ದೂರು ಸಲ್ಲಿಸಲು NSUI ತೀರ್ಮಾನಿಸಿದ್ದು, ಸೆಪ್ಟೆಂಬರ್18ರಂದು ಮಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಸಿಎಂ ಬಂದಾಗ ಚರ್ಚೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us