ದಾವಣಗೆರೆ: ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಯಾವುದೇ ಜಾತ್ರೆ, ಮಹೋತ್ಸವಗಳು ನಡೆದಿರಲಿಲ್ಲ. ಸದ್ಯ ಪ್ರಕರಣಗಳು ಕಡಿಮೆಯಾದ ಹಿನ್ನೆಲೆ ಈ ಬಾರಿ ಯಾವುದೇ ಜಾತ್ರೆ ಹಾಗೂ ಮಹೋತ್ಸವಗಳಗೆ ನಿರ್ಬಂಧನೆಗಳಿರಲಿಲ್ಲ. ಜಿಲ್ಲೆಯಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿದೆ. ಮಾರಮ್ಮನ ಜಾತ್ರೆಯಲ್ಲಿ ಭಕ್ತರು ಮಾರುದ್ದದ ಕಬ್ಬಿಣದ ರಾಡನ್ನ ಬಾಯಲ್ಲೇ ಹಾಯಿಸಿಕೊಂಡು, ಬೆನ್ನಿಗೆ ಹುಕ್ ಹಾಕಿಕೊಂಡು ವಾಹನ ಎಳೆದು ತಮ್ಮ ಹರಕೆಗಳನ್ನು ತೀರಿಸಿದ್ದಾರೆ. ಈ ದೃಶ್ಯಗಳು ಮೈ ಜುಮ್ ಎನಿಸುವಂತಿದ್ದವು.
ಮೈಜುಮ್ಮೆನ್ನಿಸುತ್ತೆ ಮುತ್ತು ಮಾರಮ್ಮನ ಜಾತ್ರೆ ಮುತ್ತು ಮಾರಮ್ಮನ ಜಾತ್ರೆ. ತಮಿಳುನಾಡು ಮೂಲದ ದೇವಿಯ ಈ ವಿಶೇಷ ಜಾತ್ರೆ ನಡೆದಿರೋದು ದಾವಣಗೆರೆಯಲ್ಲಿ. ದಾವಣಗೆರೆ ನಗರದ ಭಾರತ ಕಾಲೋನಿಯಲ್ಲಿ ಮುತ್ತುು ಮಾರಮ್ಮನ ಜಾತ್ರೆ ನಡೆದಿದ್ದು ಹತ್ತಾರು ಭಕ್ತರು ಅಲ್ಲಿ ಹರಕೆ ತೀರಿಸುತ್ತಿದ್ರು. ತಮಿಳುನಾಡು ಮೂಲದ ಕೆಲವರು ಕೆಲಸಕ್ಕೆ ಅಂತಾ ಶತಮಾನದ ಹಿಂದೆಯೇ ಬಂದು ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಇಲ್ಲೇ ಸೆಟ್ಲ ಆಗಿರೋ ಅವರೆಲ್ಲಾ ತಮ್ಮ ಸಂಪ್ರದಾಯಕ ಆಚರಣೆ ಮಾತ್ರ ಮರೆತಿಲ್ಲ. ಬಾಯಿಯಲ್ಲಿ ಕಬ್ಬಿಣದ ರಾಡ್ ತೂರಿಸಿಕೊಂಡು ಹರಕೆ ತೀರಿಸುತ್ತಾರೆ. ಪ್ರತಿ ವರ್ಷ ಇಂತಹದೊಂದು ಹರಕೆ ತೀರಿಸಲೇ ಬೇಕಂತೆ. ಈ ರೀತಿ ಹರಕೆ ತೀರಿಸಿದ್ರೆ, ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ, ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ ಸರಿ ಹೋಗುತ್ತೆ ಅನ್ನೋದು ಭಕ್ತರ ನಂಬಿಕೆ. ಇದನ್ನೂ ಓದಿ: ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ಗೆ ಪರಿಹಾರ ಇಲ್ಲಿದೆ
ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು
ಇನ್ನು ಕೇವಲ ಬಾಯಿಗೆ ಮಾತ್ರ ಅಲ್ಲದೆ, ಬೆನ್ನಿಗೆ ಕಬ್ಬಿಣದ ಹುಕ್ ಹಾಕಿಕೊಂಡು ದೇವಿಯ ವಿಗ್ರಹವನ್ನ ಎಳೆದುಕೊಂಡು ಹೋಗ್ತಾರೆ. ಬೆನ್ನಿನ ಚರ್ಮದ ಸಹಾಯದಿಂದ ಆಟೋ ಒಂದನ್ನ ಎಳೆದುಕೊಂಡು ಹೋಗಿ ದೇವಿಯ ಹರಕೆ ತೀರಿಸೋ ದೃಶ್ಯವಂಥೂ ಮೈಜುಮ್ಮೆನ್ನಿಸುತ್ತೆ. ತಮಿಳು ಭಾಷಿಕರೇ ಹೆಚ್ಚು ಇರೋ ಇದೇ ಏರಿಯಾದ ಜನ ಮೂರು ದಿನ ಉಪವಾಸ ವ್ರತ ಆಚರಣೆ ಮಾಡಿ ಬಳಿಕ ಹರಕೆ ತೀರಿಸುತ್ತಾರೆ. ಚಿಕ್ಕನಳ್ಳಿಯ ಹಳ್ಳಕ್ಕೆ ಹೋಗಿ ಗಂಗೆ ಪೂಜೆ ಮಾಡಿಕೊಂಡು ಬರುವ ರಸ್ತೆಯೂದ್ದಕ್ಕೂ ಹರಕೆ ತೀರಿಸುತ್ತಾ ಬರುತ್ತಾರೆ.
ಒಟ್ನಲ್ಲಿ ಒಂದು ಸಣ್ಣ ಸೂಜಿ ತಾಗಿದ್ರೆ ಸಾಕು ಅಳು ಬರುತ್ತೆ. ಆದ್ರೆ ಇಲ್ಲಿ ಮಾತ್ರ ಮಾರುದ್ದ ರಾಡನ್ನೇ ಬಾಯಿಯಲ್ಲೇ ತೂರಿಸಿಕೊಂಡು ದೇವಿಯ ಹರಕೆ ತೀರಿಸುತ್ತಾರೆ. ಯಾವ ನೋವು ಇಲ್ಲದೆ ಆರಾಮಾಗಿ ಇರ್ತಾರೆ. ಇದೆಲ್ಲಾ ದೇವಿಯ ಮಹಿಮೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಇದನ್ನೂ ಓದಿ: ಧನ ಲಾಭ ರಹಸ್ಯ: ಯಾವ ರಾಶಿಯವರು ಯಾವ ದೇವರ ಆರಾಧನೆ ಮಾಡುವುದರಿಂದ ಧನ ಲಾಭ ಪ್ರಾಪ್ತಿಯಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
ಮುತ್ತು ಮಾರಮ್ಮನ ಜಾತ್ರೆ
ಮುತ್ತು ಮಾರಮ್ಮನ ಜಾತ್ರೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ