AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Gardening Tips: ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ ಹೇಗೆ? ಇಲ್ಲಿದೆ ಸೂಕ್ತ ಸಲಹೆ

ಮಳೆಗಾಲ ಬಂತೆಂದರೆ ಸಾಕು ಮನೆಯ ಸುತ್ತಮುತ್ತಲಿನ ಪರಿಸರವು ಹಸಿರಿನಿಂದ ತುಂಬಿರುತ್ತದೆ. ಸಾಕಷ್ಟು ನೀರು ಬೀಳುವ ಕಾರಣ ಈ ಸಮಯದಲ್ಲಿ ಮರಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಆದರೆ ಕೆಲವೊಮ್ಮೆ ಹೆಚ್ಚಿನ ಮಳೆಯ ಕಾರಣದಿಂದಾಗಿ ಗಿಡಗಳು ಹಾನಿಗೊಳಗಾಗುತ್ತವೆ ಮತ್ತು ಕೊಳೆತು ಹೋಗುತ್ತವೆ. ಹಾಗಾಗಿ ಈ ಋತುವಿನಲ್ಲಿ ಗಿಡಗಳ ಆರೈಕೆಯನ್ನು ತುಸು ಹೆಚ್ಚೇ ಮಾಡಬೇಕಾಗುತ್ತದೆ. ಅದಕ್ಕಾಗಿ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಮನೆಯ ಕೈತೋಟವನ್ನು ಸುಂದರವಾಗಿ ಮತ್ತು ಆರೋಗ್ಯಕವಾಗಿ ಇರಿಸಬಹುದು.

Monsoon Gardening Tips: ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ ಹೇಗೆ? ಇಲ್ಲಿದೆ ಸೂಕ್ತ ಸಲಹೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Jul 12, 2023 | 6:01 PM

Share

ಮಳೆಗಾಲವು ಹೂವು, ಹಣ್ಣು ಹಾಗೂ ತರಕಾರಿಯ ತೋಟಗಾರಿಕೆಗೆ ಉತ್ತಮವಾದ ಸಮಯವಾಗಿದೆ. ಹೆಚ್ಚಿನವರು ಈ ಸಮಯದಲ್ಲಿ ಮನೆಯ ಕೈತೋಟದಲ್ಲಿ ಹೊಸ ಗಿಡಗಳನ್ನು ನೆಡಲು ಬಯಸುತ್ತಾರೆ. ಈ ಋತುವಿನಲ್ಲಿ ವಾತಾವರಣದ ತೇವಾಂಶದ ಕಾರಣದಿಂದ ಗಿಡ ಮರಗಳು ವೇಗವಾಗಿ ಬೆಳೆಯುತ್ತವೆ. ಆದರೆ ಮಳೆಗಾದಲ್ಲಿ ಸುರಿಯುವ ಹೆಚ್ಚಿನ ಮಳೆಯಿಂದಾಗಿ ಹಾಗೂ ಕೀಟಗಳ ಕಾಟದಿಂದಾಗಿ ಸಸ್ಯಗಳಿಗೆ ಹಾನಿಯಾಗಬಹುದು ಮತ್ತು ಅವುಗಳು ಕೊಳೆಯಬಹುದು. ಈ ಸಮಯದಲ್ಲಿ ಗಿಡಗಳಿಗೆ ಹೆಚ್ಚುವರಿ ಆರೈಕೆ ಮತ್ತು ಪೋಷಣೆಯ ಅಗತ್ಯವಿರುತ್ತದೆ. ಮಳೆಗಾಲದಲ್ಲಿ ಗಾರ್ಡನಿಂಗ್ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ:

• ನೀವೇನಾದರೂ ಗಿಡಗಳನ್ನು ಹೂ ಕುಂಡದಲ್ಲಿ ನೆಟ್ಟಿದ್ದರೆ, ಆ ಕುಂಡದ ತಳಭಾಗದಲ್ಲಿ ರಂಧ್ರಗಳಿದೆಯೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ ಕುಂಡದಲ್ಲಿ ನೀರು ಹಾಗೇಯೇ ನಿಂತರೆ ಗಿಡಗಳ ಬೇರುಗಳು ಕೊಳೆಯಲು ಪ್ರಾರಂಭಿಸುತ್ತದೆ. ಕುಂಡದಲ್ಲಿ ರಂಧ್ರಗಳಿಲ್ಲದಿದ್ದರೆ, ಒಂದು ಅಥವಾ ಎರಡು ಸಣ್ಣ ರಂಧ್ರಗಳನ್ನು ಮಾಡಿ ನಂತರ ಅವುಗಳಲ್ಲಿ ಸಸಿಗಳನ್ನು ನೆಡಿ.

• ಮಳೆಗಾಲದಲ್ಲಿ ಗಿಡಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ. ಮತ್ತು ಹೂವಿನ ತೋಟದ ಸುತ್ತಲೂ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಿ. ಏಕೆಂದರೆ ಅದು ಗಿಡಗಳನ್ನು ಹಾಳುಮಾಡಬಹುದು.

• ವಿಶೇಷವಾಗಿ ಹೂಕುಂಡದಲ್ಲಿ ನೀವು ಗಿಡಗಳನ್ನು ನೆಟ್ಟು ತುಂಬಾ ಸಮಯವಾಗಿದ್ದರೆ, ಅವುಗಳಿಗೆ ಹೊಸ ಮಣ್ಣನ್ನು ಹಾಕಿ. ಹಾಗೂ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುತ್ತಿರಿ.

• ಗಿಡಗಳ ಕುಂಡದಲ್ಲಿನ ಮಣ್ಣಿಗೆ ವರ್ಮಿಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರವನ್ನು ಹಾಕುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಮತ್ತು ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ.

ಇದನ್ನೂ ಓದಿ: Monsoon Vegetable Gardening: ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳ ಯಾವುವು?

• ಮಳೆಗಾಲದಲ್ಲಿ ಗಿಡಗಳ ಸುತ್ತಲೂ ಬೆಳೆಯುವ ಕಳೆಗಳನ್ನು ಆಗಾಗ್ಗೆ ತೆಗೆಯುತ್ತಿರಬೇಕು. ಇಲ್ಲದಿದ್ದರೆ ಆ ಕಳೆಗಳು ಸಂಪೂರ್ಣವಾಗಿ ಗಿಡಗಳನ್ನು ಆವರಿಸಿ, ರೋಗವನ್ನು ಉಂಟುಮಾಡಬಹುದು.

• ಮಳೆ ಜೋರಾಗಿ ಸುರಿದಾಗ ಮತ್ತು ಗಿಡಗಳು ಮಳೆ ನೀರಿನೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ, ಹೂಕುಂಡಗಳನ್ನು ಎತ್ತಿಕೊಂಡು ಮಳೆಹನಿ ಬೀಳದ ಸ್ಥಳದಲ್ಲಿರಿಸಿ. ಏಕೆಂದರೆ ಮಳೆನೀರಿನ ರಭಸಕ್ಕೆ ಸಸ್ಯಗಳು ಹಾನಿಗೊಳಗಾವುವ ಸಾಧ್ಯತೆ ಇರುತ್ತದೆ.

• ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಸಗಣಿ ಅಥವಾ ಇತರ ಗೊಬ್ಬರಗಳನ್ನು ಗಿಡಗಳ ಬುಡಕ್ಕೆ ಹಾಕುತ್ತಿರಿ.

• ಕಾಲಕಾಲಕ್ಕೆ ಗಿಡಗಳನ್ನು ಪರೀಕ್ಷಿಸುತ್ತಿರಿ. ಹಳದಿ ಮತ್ತು ರೋಗಪೀಡಿತ ಎಳೆಗಳನ್ನು ತಕ್ಷಣವೇ ತೆಗೆದು ಹಾಕಿ, ಇಲ್ಲದಿದ್ದರೆ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳು ಸಿಗುವುದಿಲ್ಲ.

• ಮಳೆಗಾಲದಲ್ಲಿ ಕೀಟಗಳು ಸಸ್ಯಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಇದಕ್ಕಾಗಿ ನೀವು ನೈಸರ್ಗಿಕ ಕೀಟನಾಶಕಗಳಾದ ಬೇವಿನ ಎಣ್ಣೆಯನ್ನು ಸಸ್ಯಗಳಿಗೆ ಸಿಂಪಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:00 pm, Wed, 12 July 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ