AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Gardening Tips: ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ ಹೇಗೆ? ಇಲ್ಲಿದೆ ಸೂಕ್ತ ಸಲಹೆ

ಮಳೆಗಾಲ ಬಂತೆಂದರೆ ಸಾಕು ಮನೆಯ ಸುತ್ತಮುತ್ತಲಿನ ಪರಿಸರವು ಹಸಿರಿನಿಂದ ತುಂಬಿರುತ್ತದೆ. ಸಾಕಷ್ಟು ನೀರು ಬೀಳುವ ಕಾರಣ ಈ ಸಮಯದಲ್ಲಿ ಮರಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಆದರೆ ಕೆಲವೊಮ್ಮೆ ಹೆಚ್ಚಿನ ಮಳೆಯ ಕಾರಣದಿಂದಾಗಿ ಗಿಡಗಳು ಹಾನಿಗೊಳಗಾಗುತ್ತವೆ ಮತ್ತು ಕೊಳೆತು ಹೋಗುತ್ತವೆ. ಹಾಗಾಗಿ ಈ ಋತುವಿನಲ್ಲಿ ಗಿಡಗಳ ಆರೈಕೆಯನ್ನು ತುಸು ಹೆಚ್ಚೇ ಮಾಡಬೇಕಾಗುತ್ತದೆ. ಅದಕ್ಕಾಗಿ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಮನೆಯ ಕೈತೋಟವನ್ನು ಸುಂದರವಾಗಿ ಮತ್ತು ಆರೋಗ್ಯಕವಾಗಿ ಇರಿಸಬಹುದು.

Monsoon Gardening Tips: ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ ಹೇಗೆ? ಇಲ್ಲಿದೆ ಸೂಕ್ತ ಸಲಹೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Jul 12, 2023 | 6:01 PM

Share

ಮಳೆಗಾಲವು ಹೂವು, ಹಣ್ಣು ಹಾಗೂ ತರಕಾರಿಯ ತೋಟಗಾರಿಕೆಗೆ ಉತ್ತಮವಾದ ಸಮಯವಾಗಿದೆ. ಹೆಚ್ಚಿನವರು ಈ ಸಮಯದಲ್ಲಿ ಮನೆಯ ಕೈತೋಟದಲ್ಲಿ ಹೊಸ ಗಿಡಗಳನ್ನು ನೆಡಲು ಬಯಸುತ್ತಾರೆ. ಈ ಋತುವಿನಲ್ಲಿ ವಾತಾವರಣದ ತೇವಾಂಶದ ಕಾರಣದಿಂದ ಗಿಡ ಮರಗಳು ವೇಗವಾಗಿ ಬೆಳೆಯುತ್ತವೆ. ಆದರೆ ಮಳೆಗಾದಲ್ಲಿ ಸುರಿಯುವ ಹೆಚ್ಚಿನ ಮಳೆಯಿಂದಾಗಿ ಹಾಗೂ ಕೀಟಗಳ ಕಾಟದಿಂದಾಗಿ ಸಸ್ಯಗಳಿಗೆ ಹಾನಿಯಾಗಬಹುದು ಮತ್ತು ಅವುಗಳು ಕೊಳೆಯಬಹುದು. ಈ ಸಮಯದಲ್ಲಿ ಗಿಡಗಳಿಗೆ ಹೆಚ್ಚುವರಿ ಆರೈಕೆ ಮತ್ತು ಪೋಷಣೆಯ ಅಗತ್ಯವಿರುತ್ತದೆ. ಮಳೆಗಾಲದಲ್ಲಿ ಗಾರ್ಡನಿಂಗ್ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ಕೈತೋಟದ ನಿರ್ವಹಣೆ:

• ನೀವೇನಾದರೂ ಗಿಡಗಳನ್ನು ಹೂ ಕುಂಡದಲ್ಲಿ ನೆಟ್ಟಿದ್ದರೆ, ಆ ಕುಂಡದ ತಳಭಾಗದಲ್ಲಿ ರಂಧ್ರಗಳಿದೆಯೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ ಕುಂಡದಲ್ಲಿ ನೀರು ಹಾಗೇಯೇ ನಿಂತರೆ ಗಿಡಗಳ ಬೇರುಗಳು ಕೊಳೆಯಲು ಪ್ರಾರಂಭಿಸುತ್ತದೆ. ಕುಂಡದಲ್ಲಿ ರಂಧ್ರಗಳಿಲ್ಲದಿದ್ದರೆ, ಒಂದು ಅಥವಾ ಎರಡು ಸಣ್ಣ ರಂಧ್ರಗಳನ್ನು ಮಾಡಿ ನಂತರ ಅವುಗಳಲ್ಲಿ ಸಸಿಗಳನ್ನು ನೆಡಿ.

• ಮಳೆಗಾಲದಲ್ಲಿ ಗಿಡಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ. ಮತ್ತು ಹೂವಿನ ತೋಟದ ಸುತ್ತಲೂ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಿ. ಏಕೆಂದರೆ ಅದು ಗಿಡಗಳನ್ನು ಹಾಳುಮಾಡಬಹುದು.

• ವಿಶೇಷವಾಗಿ ಹೂಕುಂಡದಲ್ಲಿ ನೀವು ಗಿಡಗಳನ್ನು ನೆಟ್ಟು ತುಂಬಾ ಸಮಯವಾಗಿದ್ದರೆ, ಅವುಗಳಿಗೆ ಹೊಸ ಮಣ್ಣನ್ನು ಹಾಕಿ. ಹಾಗೂ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುತ್ತಿರಿ.

• ಗಿಡಗಳ ಕುಂಡದಲ್ಲಿನ ಮಣ್ಣಿಗೆ ವರ್ಮಿಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರವನ್ನು ಹಾಕುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಮತ್ತು ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ.

ಇದನ್ನೂ ಓದಿ: Monsoon Vegetable Gardening: ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಬೆಳೆಯಲು ಸೂಕ್ತವಾದ ತರಕಾರಿಗಳ ಯಾವುವು?

• ಮಳೆಗಾಲದಲ್ಲಿ ಗಿಡಗಳ ಸುತ್ತಲೂ ಬೆಳೆಯುವ ಕಳೆಗಳನ್ನು ಆಗಾಗ್ಗೆ ತೆಗೆಯುತ್ತಿರಬೇಕು. ಇಲ್ಲದಿದ್ದರೆ ಆ ಕಳೆಗಳು ಸಂಪೂರ್ಣವಾಗಿ ಗಿಡಗಳನ್ನು ಆವರಿಸಿ, ರೋಗವನ್ನು ಉಂಟುಮಾಡಬಹುದು.

• ಮಳೆ ಜೋರಾಗಿ ಸುರಿದಾಗ ಮತ್ತು ಗಿಡಗಳು ಮಳೆ ನೀರಿನೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ, ಹೂಕುಂಡಗಳನ್ನು ಎತ್ತಿಕೊಂಡು ಮಳೆಹನಿ ಬೀಳದ ಸ್ಥಳದಲ್ಲಿರಿಸಿ. ಏಕೆಂದರೆ ಮಳೆನೀರಿನ ರಭಸಕ್ಕೆ ಸಸ್ಯಗಳು ಹಾನಿಗೊಳಗಾವುವ ಸಾಧ್ಯತೆ ಇರುತ್ತದೆ.

• ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಸಗಣಿ ಅಥವಾ ಇತರ ಗೊಬ್ಬರಗಳನ್ನು ಗಿಡಗಳ ಬುಡಕ್ಕೆ ಹಾಕುತ್ತಿರಿ.

• ಕಾಲಕಾಲಕ್ಕೆ ಗಿಡಗಳನ್ನು ಪರೀಕ್ಷಿಸುತ್ತಿರಿ. ಹಳದಿ ಮತ್ತು ರೋಗಪೀಡಿತ ಎಳೆಗಳನ್ನು ತಕ್ಷಣವೇ ತೆಗೆದು ಹಾಕಿ, ಇಲ್ಲದಿದ್ದರೆ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳು ಸಿಗುವುದಿಲ್ಲ.

• ಮಳೆಗಾಲದಲ್ಲಿ ಕೀಟಗಳು ಸಸ್ಯಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಇದಕ್ಕಾಗಿ ನೀವು ನೈಸರ್ಗಿಕ ಕೀಟನಾಶಕಗಳಾದ ಬೇವಿನ ಎಣ್ಣೆಯನ್ನು ಸಸ್ಯಗಳಿಗೆ ಸಿಂಪಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:00 pm, Wed, 12 July 23

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!