AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Social Media: ಸಾಮಾಜಿಕ ಮಾಧ್ಯಮದ ಹೋಲಿಕೆಯಿಂದ ಪ್ರಭಾವಿತರಾಗುವುದನ್ನು ಹೇಗೆ ನಿಲ್ಲಿಸಬಹುದು? ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮಕ್ಕೆ ಸುಲಭವಾಗಿ ಪ್ರವೇಶ ಸಿಗುತ್ತಿರುವುದರಿಂದ ಸಾಮಾಜಿಕ ಮಾಧ್ಯಮದ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಹೊರತಾಗಿ ಬೇರೆಯವರ ಬಗೆಗೆ ಅವರ ಜೀವನದ ಬಗ್ಗೆ ಆಲೋಚನೆ ಹೆಚ್ಚಾಗುವ ಹಾಗೆ ಮಾಡಿದೆ ಇದನ್ನೇ ನಾವು ಸಾಮಾಜಿಕ ಮಾಧ್ಯಮ ಹೋಲಿಕೆ ಎನ್ನುತ್ತೇವೆ.

Social Media: ಸಾಮಾಜಿಕ ಮಾಧ್ಯಮದ ಹೋಲಿಕೆಯಿಂದ ಪ್ರಭಾವಿತರಾಗುವುದನ್ನು ಹೇಗೆ ನಿಲ್ಲಿಸಬಹುದು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 06, 2023 | 1:56 PM

Share

ಇತ್ತೀಚೆಗೆ ಭಾರತದಲ್ಲಿ ಸಾಮಾಜಿಕ ಮಾಧ್ಯಮ (Social Media) ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮಾನವ ಸಮಾಜ ಮತ್ತು ಸಂಘ ಜೀವಿ ಎಂಬುದನ್ನು ಸಾಮಾಜಿಕ ಮಾಧ್ಯಮಗಳು ಸಾಬೀತು ಮಾಡಿವೆ. ವಯಸ್ಸಿನ ನಿರ್ಬಂಧದ ಕೊರತೆ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಸುಲಭವಾಗಿ ಪ್ರವೇಶ ಸಿಗುತ್ತಿರುವುದರಿಂದ ಸಾಮಾಜಿಕ ಮಾಧ್ಯಮದ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಹೊರತಾಗಿ ಬೇರೆಯವರ ಬಗೆಗೆ, ಅವರ ಜೀವನದ ಬಗ್ಗೆ ಆಲೋಚನೆ ಹೆಚ್ಚಾಗುವ ಹಾಗೆ ಮಾಡಿದೆ ಇದನ್ನೇ ನಾವು ಸಾಮಾಜಿಕ ಮಾಧ್ಯಮ ಹೋಲಿಕೆ ಎನ್ನುತ್ತೇವೆ. ಸಾಮಾಜಿಕ ಮಾಧ್ಯಮ ಬರಿ ಮನೋರಂಜನೆಯಾಗಿರದೇ ಹೋಲಿಕೆಯ ಒಂದು ವಿದ್ಯಮಾನವಾಗಿದ್ದು, ವ್ಯಕ್ತಿಗಳು ತಮ್ಮ ಸ್ವಂತ ಜೀವನ ಮತ್ತು ಸಾಧನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ಪಡಿಸುತ್ತಾರೆ ಅಲ್ಲದೆ ಅವುಗಳಿಗೆ ಮೆಚ್ಚುಗೆ ನೀಡಬೇಕು ಎಂದು ಬಯಸುತ್ತಾರೆ. ಕೆಲವರು ಬೇರೆಯವರ ಜೀವನ ನೋಡಿ ತಮ್ಮ ಜೀವನ ಅಭದ್ರತೆಯಲ್ಲಿದೆ ಎಂದು ಚಿಂತೆ ಮಾಡುತ್ತಾರೆ. ಹಾಗಾಗಿ ಇವೆಲ್ಲವೂ ಖಿನ್ನತೆಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮದ ಹೋಲಿಕೆಯ ಅಪಾಯವೆಂದರೆ ವ್ಯಕ್ತಿಗಳು ತಮ್ಮ ಮೌಲ್ಯಗಳು ಮತ್ತು ಗುರಿಗಳಿಗಿಂತ ಹೆಚ್ಚಾಗಿ ಬಾಹ್ಯ ಮೌಲ್ಯೀಕರಣ ಮತ್ತು ಇತರರ ಅಭಿಪ್ರಾಯಗಳಿಗೆ ಆದ್ಯತೆ ನೀಡುವಂತೆ ಮಾಡುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವ ಚಿತ್ರಗಳು ಮತ್ತು ಪೋಸ್ಟ್‌ಗಳು ಯಾರೊಬ್ಬರ ಜೀವನದ ಸಂಪೂರ್ಣ ನೈಜತೆಯನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಸಾಮಾಜಿಕ ಮಾಧ್ಯಮದ ಬಳಕೆಯನ್ನು ಒಂದು ಮಿತಿಯಲ್ಲಿ ಬಳಕೆ ಮಾಡಿ. ಬೇರೆಯವರ ಜೀವನ ನಮ್ಮದಲ್ಲ. ಅವರಿಗೂ ಹೇಳಿಕೊಳ್ಳಲಾದ ಕಷ್ಟವಿರಬಹುದು ಹಾಗು ಸ್ವಯಂ ಸಹಾನುಭೂತಿ ಬೆಳಿಸಿಕೊಳ್ಳುವುದರಿಂದ ಸಾಮಾಜಿಕ ಮಾಧ್ಯಮದ ಹೋಲಿಕೆಯ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಸಾಮಾಜಿಕ ಮಾಧ್ಯಮ ಹೋಲಿಕೆಯನ್ನು ತಡೆಯಲು ಇಲ್ಲಿವೆ ಐದು ಮಾರ್ಗಗಳು:

ನಿಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸಿ: ನೀವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಸಮಯವನ್ನು ಕಳೆಯುತ್ತೀರಿ ಎಂಬುದಕ್ಕೆ ಒಂದು ಸಮಯ ನಿಗದಿಪಡಿಸಿ ಅದರ ಹೊರತಾಗಿ ನೀವು ಹೆಚ್ಚು ಸಮಯ ವ್ಯರ್ಥ ಮಾಡಬಾರದು. ಅಲ್ಲದೆ ಬೇರೆಯವರು ಹಾಕಿದ ಪೋಸ್ಟ್ ಗಳಿಗೆ ನಿಮ್ಮನ್ನು ಹೋಲಿಸಿಕೊಳ್ಳಬಾರದು.

ಸ್ವಯಂ ಜಾಗೃತಿ ಅಗತ್ಯ: ನೀವು ಸಾಮಾಜಿಕ ಮಾಧ್ಯಮ ಬಳಸುವಾಗ ಬೇರೆಯವರು ಹಾಕಿದ ಫೋಟೋ ಅಥವಾ ಇನ್ನಿತರ ಬರಹ ನೋಡಿ ನಿಮಗೆ ಹೇಗೆ ಅನಿಸುತ್ತದೆ ಎಂಬುದರ ಬಗ್ಗೆ ಗಮನ ಕೊಡಿ. ನೀವು ಅಸೂಯೆ, ಅಥವಾ ದುಃಖ, ನಕಾರಾತ್ಮಕ ಭಾವನೆಗಳು ನಿಮ್ಮ ಅನುಭವಕ್ಕೆ ಬಂದರೆ, ವಿರಾಮ ತೆಗೆದುಕೊಳ್ಳಿ ಅದರ ಬದಲಾಗಿ ನಿಮಗೆ ಒಳ್ಳೆಯ ಭಾವನೆ ನೀಡುವ, ಅಥವಾ ನಿಮಗೆ ಖುಷಿ ನೀಡುವ ಕೆಲಸ ಮಾಡಿ.

ಇದನ್ನೂ ಓದಿ: Social Media Influencers: ಸಾಮಾಜಿಕ ಮಾಧ್ಯಮ ಪ್ರಭಾವಿಗಳೇ ಎಚ್ಚರ; ಬಂದಿದೆ ಹೊಸ ನಿಯಮ, ತಪ್ಪಿದರೆ 50 ಲಕ್ಷ ದಂಡ

ಕೃತಜ್ಞತೆಯನ್ನು ಬೆಳೆಸಿಕೊಳ್ಳಿ: ನಿಮ್ಮ ಜೀವನದಲ್ಲಿ ನಡೆದಿರುವ ಒಳ್ಳೆಯ ವಿಷಯಗಳ ಮೇಲೆ ಕೇಂದ್ರೀಕರಿಸಿ ಮತ್ತು ಅವುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಗಮನವನ್ನು ನಿಮ್ಮ ಬಳಿ ಇರುವಲ್ಲಿ ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ನೀವು ಬೇರೆಯವರ ಜೀವನದ ಬಗ್ಗೆಯೇ ಯೋಚನೆ ಮಾಡುತ್ತೀರಿ.

ನಿಮ್ಮ ಗುರಿಗಳು ಮತ್ತು ಮೌಲ್ಯಗಳ ಮೇಲೆ ಕೇಂದ್ರೀಕರಿಸಿ: ನಿಮ್ಮನ್ನು ಇತರರೊಂದಿಗೆ ಹೋಲಿಸುವ ಬದಲು, ನಿಮ್ಮ ಸ್ವಂತ ಗುರಿಗಳು ಮತ್ತು ಮೌಲ್ಯಗಳ ಮೇಲೆ ಕೇಂದ್ರೀಕರಿಸಿ. ಮತ್ತು ಅವು ಈಡೇರಲು ಹೆಚ್ಚು ಕೆಲಸ ಮಾಡಿ, ಅಲ್ಲದೆ ನಿಮಗೆ ಜೀವನದಲ್ಲಿ ನಿಮಗೆ ಮುಖ್ಯವಾದುದನ್ನು ನೆನಪಿಸಿಕೊಳ್ಳಿ.

ಅಧಿಕೃತ ಸಂಬಂಧ ಬೆಸೆಯಲಿ: ಸಾಮಾಜಿಕ ಮಾಧ್ಯಮದ ಬಗ್ಗೆ ಹೆಚ್ಚು ಗಮನ ಕೊಡುವ ಬದಲು, ನಿಜ ಜೀವನದಲ್ಲಿ ಜನರೊಂದಿಗೆ ಅಧಿಕೃತ ಸಂಬಂಧ ಬೆಸೆಯಲು ಸಮಯ ನೀಡಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ನಿಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ಕ್ಲಬ್‌ಗಳು ಅಥವಾ ಗುಂಪುಗಳನ್ನು ಸೇರಿಕೊಳ್ಳಿ.

Published On - 12:30 pm, Thu, 6 April 23

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು