Gold Buying Tips: ಹಬ್ಬದಂದು ಚಿನ್ನ ಖರೀದಿಸುವ ಮೊದಲು  ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು

ದೀಪಾವಳಿ ಹಬ್ಬದ ಮೊದಲ ದಿನವಾದ ಧನತ್ರಯೋದಶಿ ಹಬ್ಬದಂದು  ಚಿನ್ನವನ್ನು ಖರೀದಿಸುವುದು ಮಂಗಳಕರವೆಂದು ಹೇಳಲಾಗುತ್ತದೆ. ಈ ಕಾರಣದಿಂದ ಹೆಚ್ಚಿನವರು ಈ ಶುಭ ದಿನದಂದು ಚಿನ್ನವನ್ನು ಖರೀದಿಸುತ್ತಾರೆ. ನೀವು ಕೂಡ ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ, ಚಿನ್ನವನ್ನು ಖರೀದಿಸುವ ಮೊದಲು ಈ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

Gold Buying Tips: ಹಬ್ಬದಂದು ಚಿನ್ನ ಖರೀದಿಸುವ ಮೊದಲು  ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 09, 2023 | 7:01 PM

ಕಾರ್ತಿಕ ಮಾಸದ ಅಮವಾಸ್ಯೆಯ ದಿನದಂದು ಆಚರಿಸಲಾಗುವ ದೀಪಾವಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ದೀಪಾವಳಿಯ ಎರಡು ದಿನಗಳ ಮೊದಲು ಧನತ್ರಯೋದಶಿ ಅಥವಾ ಧನತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಆಭರಣಗಳು, ಪಾತ್ರೆಗಳು ಇತ್ಯಾದಿಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಧನತ್ರಯೋದಶಿ ದಿನದಂದು  ಚಿನ್ನವನ್ನು ಖರೀದಿಸಿದರೆ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಈ ಶುಭದಿನದಂದು ಹೆಚ್ಚಿನ ಭಾರತೀಯರು ಚಿನ್ನವನ್ನು ಖರೀದಿಸುತ್ತಾರೆ ಈ ಶುಭ ಸಂದರ್ಭದಲ್ಲಿ ನೀವು ಕೂಡ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು  ಬಹಳ ಮುಖ್ಯ.

ಚಿನ್ನ ಖರೀದಿಸುವ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು:

ಶುದ್ಧತೆಯನ್ನು ಪರಿಶೀಲಿಸಿ:

ಚಿನ್ನದ ಶುದ್ಧತೆಯನ್ನು ಕ್ಯಾರೆಟ್ಗಳಲ್ಲಿ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಪರಿಶುದ್ಧವಾದ ಚಿನ್ನವಾಗಿದೆ. . ಆದರೆ ಚಿನ್ನವನ್ನು ಹೆಚ್ಚು ಬಾಳಿಕೆ ಬರುವಂತೆ  ಮಾಡಲು ಅದಕ್ಕೆ ಇತರ ಲೋಹಗಳನ್ನು ಬೆರೆಸಲಾಗುತ್ತದೆ.  ಚಿನ್ನವು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಮತ್ತು 16 ಕ್ಯಾರೆಟ್ಗಳಲ್ಲಿ ದೊರೆಯುತ್ತದೆ. ಚಿನ್ನದ ಶುದ್ಧತೆಯು ಹೆಚ್ಚಿದ್ದಷ್ಟು ಅದರ ಬೆಲೆಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಆಭರಣ ತಯಾರಿಕೆಗೆ 22 ಕ್ಯಾರೆಟ್ ಚಿನ್ನವನ್ನು ಬಳಸಲಾಗುತ್ತದೆ. ಹಾಗಾಗಿ ನೀವು ಖರೀದಿಸುತ್ತಿರುವ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಅತ್ಯಗತ್ಯ.

ಹಾಲ್ಮಾರ್ಕ್ ಪರಿಶೀಲಿಸಿ:

ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ನೀವು ಖರೀದಿಸುವ ಚಿನ್ನದ ಮೇಲೆ ಹಾಲ್ ಮಾರ್ಕ್  ಚಿಹ್ನೆ ಇದೇಯೇ ಎಂಬುವುದನ್ನು ಪರಿಶೀಲಿಸುವುದು ಮುಖ್ಯ.  ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್  (BIS) ಹಾಲ್ಮಾರ್ಕ್ ಶುದ್ಧತೆಯ ವಿಶ್ವಾಸಾರ್ಹ ಸೂಚಕವಾಗಿದೆ. ಈ ಹಾಲ್ಮಾರ್ಕ್ ತ್ರಿಕೋನ ಚಿಹ್ನೆಯನ್ನು ಹೊಂದಿದೆ.  ಹಾಗಾಗಿ BSI ಹಾಲ್ಮಾರ್ಕ್ ಇರುವ ಚಿನ್ನವನ್ನು ಖರೀದಿಸುವುದು ಹೆಚ್ಚು ಉತ್ತಮ.

ಮೇಕಿಂಗ್ ಚಾರ್ಜ್ ಪರಿಶೀಲಿಸಿ:

ಚಿನ್ನಾಭರಣಗಳನ್ನು ಖರೀದಿಸುವಾಗ, ಅದರ ಮೇಕಿಂಗ್ ಚಾರ್ಜ್ ಬಗ್ಗೆ ಪರಿಶೀಲಿಸುವುದು ಮುಖ್ಯ. ಬ್ರಾಂಡ್ ಅಥವಾ ಮಳಿಗೆಗಳನ್ನು ಅವಲಂಬಿಸಿ ಮೇಕಿಂಗ್ ಚಾರ್ಜಸ್ ಬದಲಾಗುತ್ತಿರುತ್ತವೆ. ದೀಪಾವಳಿ ಹಬ್ಬ ಅಥವಾ ಇನ್ನಾವುದೇ ಹಬ್ಬಗಳ ಸಂದರ್ಭಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು, ಅನೇಕ ಆಭರಣ ಬ್ರಾಂಡ್ಗಳು ಮೇಕಿಂಗ್ ಚಾರ್ಜ್ಗಳಲ್ಲಿ (ದೀಪಾವಳಿ ಕೊಡುಗೆ) 50%, 30%, ಶೇಕಡಾ ಇತ್ಯಾದಿ ಭಾರಿ ರಿಯಾಯಿತಿಗಳನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೇಕಿಂಗ್ ಶುಲ್ಕಗಳ  ಮಾಹಿತಿಯನ್ನು ಪರಿಶೀಲಿಸಿ, ಅತೀ ಕಡಿಮೆ ಮೇಕಿಂಗ್ ಚಾರ್ಜ್ ಇರುವ ಆಭರಣ ಮಳಿಗೆಗಳಲ್ಲಿ ಚಿನ್ನವನ್ನು ಖರೀದಿಸಿ. ಏಕೆಂದರೆ ಇದರಿಂದ  ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:ಚಿನ್ನ ಖರೀದಿಸುವಾಗ ಈ ವಿಚಾರಗಳು ತಿಳಿದಿರಲಿ 

ಚಿನ್ನದ ಬೆಲೆಯನ್ನು ಪರಿಶೀಲಿಸಿ:

ನೀವು ಚಿನ್ನಾಭರಣವನ್ನು ಖರೀದಿಸುವ ಮೊದಲು, ಇಂದಿನ ಚಿನ್ನದ ಬೆಲೆ ಎಷ್ಟು ಎಂದು ಖಚಿತಪಡಿಸಿಕೊಳ್ಳಿ. ರಾಜ್ಯಗಳು ಮತ್ತು ನಗರಗಳಿಗೆ ಅನುಗುಣವಾಗಿ ಚಿನ್ನದ ಬೆಲೆಗಳು ಬದಲಾಗುತ್ತಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಕಡಿಮೆ ಇರುವ ಮಳಿಗೆ ಅಥವಾ ಅಂಗಡಿಗಳಲ್ಲಿ ಚಿನ್ನವನ್ನು ಖರೀದಿಸುವುದು ಉತ್ತಮ. ಇದರೊಂದಿಗೆ ನೀವು ಮೇಕಿಂಗ್ ಚಾರ್ಜ್ ಎಷ್ಟು ಎಂಬುದನ್ನು ತಿಳಿಯುವುದು ಕೂಡಾ ಮುಖ್ಯವಾಗಿದೆ.

ವಿಶ್ವಾಸಾರ್ಹ ಆಭರಣ ವ್ಯಾಪಾರಿಗಳಿಂದ ಆಭರಣ ಖರೀದಿಸಿ:

ದೀಪಾವಳಿ ಹಬ್ಬದಂದು ಚಿನ್ನವನ್ನು ಖರೀದಿಸಲು ಹೋದರೆ, ವಿಶ್ವಾಸಾರ್ಹ ಆಭರಣ ವ್ಯಾಪಾರಿಗಳಿಂದ ಅಥವಾ ವಿಶ್ವಾಸಾರ್ಹ ಬ್ರ್ಯಾಂಡ್ಗಳಿಂದ  ಮಾತ್ರ ಚಿನ್ನವನ್ನು ಖರೀದಿಸಿ ಹೀಗೆ ಮಾಡುವುದರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳು ಬಹಳವಾಗಿ ಕಡಿಮೆಯಾಗುತ್ತವೆ.

ರಿಟರ್ನ್ ಪಾಲಿಸಿಯ ಬಗ್ಗೆ ತಿಳಿಯಿರಿ:

ನಿಮ್ಮ ಖರೀದಿಯನ್ನು ಮಾಡುವ ಮೊದಲು ಚಿನ್ನದ ರಿಟರ್ನ್ ಪಾಲಿಸಿಯ ಬಗ್ಗೆ ವಿಚಾರಿಸಿ. ನಿಮ್ಮ ಚಿನ್ನವನ್ನು ಅವರಿಗೆ ಮರಲಿ ಮಾರಾಟ ಮಾಡುವ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕೆಲವೊಮ್ಮೆ ಆರ್ಥಿಕ ಸಮಸ್ಯೆ ಉಂಟಾದಾಗ ಚಿನ್ನವನ್ನು ಮಾರಾಟ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಎಷ್ಟು ಹಣ ಪಡೆಯುತ್ತೀರಿ ಮತ್ತು ಅದರ ಷರತ್ತುಗಳು ಯಾವುವು ಎಂದುದನ್ನು ತಿಳಿಯಿರಿ. ಇದನ್ನು ಬೈ ಬ್ಯಾಕ್ ಪಾಲಿಸಿ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಅಗತ್ಯವಿದ್ದರೆ ನೀವು ಖರೀದಿಸಿದ ಚಿನ್ನವನ್ನು ಸುಲಭವಾಗಿ ಮರಳಿ ಮಾರಾಟ ಮಾಡಲು ಸಾಧ್ಯವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು