AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dizziness: ದಿಢೀರ್ ಎಂದು ಎದ್ದು ನಿಂತಾಗ ತಲೆ ಸುತ್ತುವುದೇಕೆ?

ಮಲಗಿದ್ದಲ್ಲಿಂದ ಅಥವಾ ಕುಳಿತ ಸ್ಥಿತಿಯಿಂದ ಇದ್ದಕ್ಕಿದ್ದಂತೆ ಎದ್ದು ನಿಂತಾಗ ಕೆಲವರಿಗೆ ತಲೆ ಸುತ್ತುವುದು, ಕಣ್ಣು ಮುಂದೆ ಕತ್ತಲಾಗುವುದು ಅಥವಾ ದೇಹ ದುರ್ಬಲವಾದಂತೆ ಅನಿಸಬಹುದು. ಈ ಸಮಸ್ಯೆ ಏಕೆ ಉಂಟಾಗುತ್ತದೆ, ಯಾರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಮತ್ತು ತಲೆ ಸುತ್ತುವುದನ್ನು ತಪ್ಪಿಸಲು ಏನು ಮಾಡಬಹುದು ಎಂಬುದನ್ನು ತಿಳಿಯಿರಿ.

Dizziness: ದಿಢೀರ್ ಎಂದು ಎದ್ದು ನಿಂತಾಗ ತಲೆ ಸುತ್ತುವುದೇಕೆ?
Dizziness
ಮಾಲಾಶ್ರೀ ಅಂಚನ್​
| Edited By: |

Updated on: Sep 11, 2026 | 11:20 AM

Share

ಮುಖ್ಯಾಂಶಗಳು

  • ಕುಳಿತಲ್ಲಿಂದ ಎದ್ದು ನಿಂತ ತಕ್ಷಣ ತಲೆ ಸುತ್ತುತ್ತದೆಯೇ?
  • ಎದ್ದು ನಿಂತಾಗ ಕಣ್ಣು ಮುಂದೆ ಕತ್ತಲಾಗುವುದೇಕೆ?
  • ತಲೆ ಸುತ್ತುವುದನ್ನು ತಪ್ಪಿಸಲು ಎದ್ದು ನಿಲ್ಲುವಾಗ ಈ ಸಣ್ಣ ಅಭ್ಯಾಸ ಪಾಲಿಸಿ!

ಹಾಸಿಗೆಯಲ್ಲಿ ಮಲಗಿದ್ದಾಗ (Sleep) ಅಥವಾ ಕೂತಲ್ಲಿಂದ ತಕ್ಷಣ ಎದ್ದು ನಿಂತಾಗ ಕೆಲ ಕ್ಷಣಗಳಲ್ಲಿ ತಲೆ ಸುತ್ತಿದಂತೆ, ಕಣ್ಣು ಮುಂದೆ ಕತ್ತಲೆ ಬಂದಂತೆ ಅಥವಾ ದೇಹದಲ್ಲಿ ಒಂದು ರೀತಿಯ ದುರ್ಬಲತೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕೆಲವು ಸೆಕೆಂಡುಗಳಲ್ಲಿ ಇದು ಸರಿಹೋಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದಕ್ಕೆ ದೇಹದ ರಕ್ತದೊತ್ತಡದಲ್ಲಿ ಉಂಟಾಗುವ ತಾತ್ಕಾಲಿಕ ಬದಲಾವಣೆಯೇ ಕಾರಣವಾಗಿರಬಹುದು.

ಎದ್ದು ನಿಂತಾಗ ದೇಹದಲ್ಲಿ ಏನಾಗುತ್ತದೆ?

ನಾವು ಮಲಗಿರುವಾಗ ದೇಹದಾದ್ಯಂತ ರಕ್ತದ ಹರಿವು ಸಾಮಾನ್ಯವಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಎದ್ದು ನಿಂತಾಗ ಗುರುತ್ವಾಕರ್ಷಣೆಯ ಕಾರಣದಿಂದ ರಕ್ತದ ಒಂದು ಭಾಗ ಕಾಲುಗಳು ಮತ್ತು ಹೊಟ್ಟೆಯ ಭಾಗದಲ್ಲಿ ತಾತ್ಕಾಲಿಕವಾಗಿ ಸಂಗ್ರಹವಾಗುತ್ತದೆ. ಇದರಿಂದ ಹೃದಯಕ್ಕೆ ಮರಳುವ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು. ಪರಿಣಾಮವಾಗಿ ರಕ್ತದೊತ್ತಡವೂ ಕ್ಷಣಕಾಲ ಇಳಿಯುತ್ತದೆ.

ಸಾಮಾನ್ಯವಾಗಿ ದೇಹ ಇದನ್ನು ತಕ್ಷಣವೇ ಸರಿಪಡಿಸುತ್ತದೆ. ರಕ್ತನಾಳಗಳು ಸ್ವಲ್ಪ ಸಂಕುಚಿತವಾಗುತ್ತವೆ ಮತ್ತು ಹೃದಯದ ಬಡಿತ ಹೆಚ್ಚಾಗಿ ಮೆದುಳಿಗೆ ಅಗತ್ಯವಾದ ರಕ್ತಪ್ರವಾಹವನ್ನು ಕಾಪಾಡಲು ದೇಹ ಪ್ರಯತ್ನಿಸುತ್ತದೆ. ಆದರೆ ಈ ಹೊಂದಾಣಿಕೆ ತಕ್ಷಣ ಆಗದಿದ್ದರೆ ಕೆಲವು ಕ್ಷಣಗಳ ಕಾಲ ತಲೆ ಸುತ್ತುವುದು ಅಥವಾ ಹಗುರವಾದ ಅನುಭವ ಉಂಟಾಗಬಹುದು.

ಯಾರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳಬಹುದು?

ದೇಹದಲ್ಲಿ ನೀರಿನ ಕೊರತೆ ಇದ್ದಾಗ ಈ ಅನುಭವ ಹೆಚ್ಚಾಗಬಹುದು. ಜ್ವರ, ವಾಂತಿ, ಅತಿಸಾರ, ಹೆಚ್ಚು ಬೆವರುವುದು ಅಥವಾ ಸಾಕಷ್ಟು ನೀರು ಕುಡಿಯದಿರುವುದು ದೇಹದ ದ್ರವ ಪ್ರಮಾಣವನ್ನು ಕಡಿಮೆ ಮಾಡಬಹುದು. ದೀರ್ಘಕಾಲ ಹಾಸಿಗೆಯಲ್ಲೇ ವಿಶ್ರಾಂತಿ ಪಡೆಯುವುದು, ಕೆಲವು ಔಷಧಿಗಳು ಮತ್ತು ಕೆಲವು ಆರೋಗ್ಯ ಸಮಸ್ಯೆಗಳೂ ಎದ್ದು ನಿಂತಾಗ ರಕ್ತದೊತ್ತಡ ಕುಸಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ಜ್ವರ ಬಂದಾಗ ಸ್ನಾನ ಮಾಡುವುದು ಸರಿಯೇ? ಏನು ಮಾಡಬೇಕು ಮತ್ತು ಏನು ಮಾಡಬಾರದು?

ತಲೆ ಸುತ್ತಿದಾಗ ಏನು ಮಾಡಬೇಕು?

ಎದ್ದು ನಿಂತ ತಕ್ಷಣ ತಲೆ ಸುತ್ತಿದರೆ ಅದನ್ನು ನಿರ್ಲಕ್ಷಿಸಿ ನಡೆಯಲು ಮುಂದಾಗಬಾರದು. ಕೂಡಲೇ ಕುಳಿತುಕೊಳ್ಳುವುದು ಅಥವಾ ಸಾಧ್ಯವಾದರೆ ಮಲಗುವುದು ಸುರಕ್ಷಿತ. ಸಾಮಾನ್ಯವಾಗಿ ಕೆಲವು ಕ್ಷಣಗಳಲ್ಲಿ ಈ ಲಕ್ಷಣ ಕಡಿಮೆಯಾಗಬಹುದು. ಹಾಸಿಗೆಯಿಂದ ಎದ್ದಾಗ ಮೊದಲು ಕುಳಿತುಕೊಂಡು ಸ್ವಲ್ಪ ಸಮಯ ಕಾಯ್ದು ನಂತರ ನಿಧಾನವಾಗಿ ನಿಲ್ಲುವ ಅಭ್ಯಾಸ ಸಹಾಯ ಮಾಡಬಹುದು. ಸಾಕಷ್ಟು ನೀರು ಕುಡಿಯುವುದೂ ದೇಹದಲ್ಲಿ ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆಯನ್ನು ತಪ್ಪಿಸಲು ಸಹಾಯಕವಾಗಬಹುದು.

ವಿಶೇಷವಾಗಿ ಬೆಳಗ್ಗೆ ಹಾಸಿಗೆಯಿಂದ ಎದ್ದಾಗ ಅಥವಾ ಬಹಳ ಹೊತ್ತು ಕುಳಿತುಕೊಂಡ ಬಳಿಕ ಇದ್ದಕ್ಕಿದ್ದಂತೆ ನಿಲ್ಲುವುದನ್ನು ತಪ್ಪಿಸುವುದು ಒಳ್ಳೆಯದು. ಮೊದಲು ದೇಹದ ಸ್ಥಿತಿಯನ್ನು ನಿಧಾನವಾಗಿ ಬದಲಿಸಿ, ನಂತರ ನಿಲ್ಲುವುದು ಸುರಕ್ಷಿತ ಅಭ್ಯಾಸ.

ಆಗಾಗ ತಲೆ ಸುತ್ತುತ್ತಿದ್ದರೆ?

ಒಂದೊಮ್ಮೆ ಎದ್ದು ನಿಂತಾಗ ಕೆಲವು ಸೆಕೆಂಡುಗಳ ಕಾಲ ತಲೆ ಹಗುರವಾಗುವುದು ಸಾಮಾನ್ಯವಾಗಿ ಗಂಭೀರ ಸಮಸ್ಯೆಯ ಸೂಚನೆಯಾಗಿರಬೇಕೆಂದಿಲ್ಲ. ಆದರೆ ಇದು ಪದೇಪದೇ ನಡೆಯುತ್ತಿದ್ದರೆ, ದೃಷ್ಟಿ ಮಸುಕಾಗುತ್ತಿದ್ದರೆ, ತೀವ್ರ ದುರ್ಬಲತೆ ಕಾಣಿಸುತ್ತಿದ್ದರೆ ಅಥವಾ ಪ್ರಜ್ಞೆ ತಪ್ಪುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ