ಸಂಶೋಧನೆ: ತಾಪಮಾನ ಏರಿಕೆಯಿಂದ ಭಾರತದ 90 ಪ್ರತಿಶತದಷ್ಟು ಜನರ ಮೇಲೆ ತೀವ್ರ ಪರಿಣಾಮ

ತಾಪಮಾನ ಏರಿಕೆಯಿಂದ ಜನರ ಜೀವನ ಕಷ್ಟಕರವಾಗಿದೆ. ಇದು ಹೀಗೆ ಮುಂದುವರಿದಲ್ಲಿ ಇನ್ನು ಹೆಚ್ಚಿನ ಸಮಸ್ಯೆ ಎದುರಿಸಿಬೇಕು ಎಂದು ಸಂಶೋಧನೆ ಎಚ್ಚರಿಕೆ ನೀಡಿದೆ.

ಸಂಶೋಧನೆ: ತಾಪಮಾನ ಏರಿಕೆಯಿಂದ ಭಾರತದ 90 ಪ್ರತಿಶತದಷ್ಟು ಜನರ ಮೇಲೆ ತೀವ್ರ ಪರಿಣಾಮ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 20, 2023 | 2:32 PM

ಹವಾಮಾನ ಬದಲಾವಣೆಯಿಂದ ಉಂಟಾಗುವ ತಾಪಮಾನ ಏರಿಕೆಯಿಂದ ಭಾರತದ ಸುಮಾರು 90 ಪ್ರತಿಶತದಷ್ಟು ಜನರ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು ಎಂದು ಹೊಸ ಅಧ್ಯಯನವೊಂದರಲ್ಲಿ ಸಾಬೀತಾಗಿದೆ. 48ಕ್ಕೂ ಹೆಚ್ಚು ಹವಾಮಾನ ಕೇಂದ್ರಗಳು ಮಂಗಳವಾರ 42 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನವನ್ನು ದಾಖಲಿಸಿದ್ದು, ಒಡಿಶಾದಲ್ಲಿ ಗರಿಷ್ಠ 44.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವರದಿಯ ಪ್ರಕಾರ, ಬಿಸಿಗಾಳಿಗಳು ಮಾರಣಾಂತಿಕ ಖಾಯಿಲೆ, ಜನರ ಉತ್ಪಾದಕತೆ, ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ, ಈ ಹಿಂದೆ ಆಗಿರದ ಮಟ್ಟಿಗೆ ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ದೇಶದ ಪ್ರಗತಿಯನ್ನು ವಿಮರ್ಶಾತ್ಮಕವಾಗಿ ಅಡ್ಡಿಪಡಿಸಬಹುದು.

ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಅಧ್ಯಯನವು ಭಾರತದ ಇತ್ತೀಚಿನ ಶಾಖ ಸೂಚ್ಯಂಕ (ಎಚ್ಐ) ಜೊತೆಗೆ ಹವಾಮಾನ ದುರ್ಬಲತೆ ಸೂಚ್ಯಂಕ (ಸಿವಿಐ) ಅನ್ನು 2022 ರ ಬಿಸಿಗಾಳಿಯನ್ನು ಕೇಸ್ ಸ್ಟಡಿಯಾಗಿ ಬಳಸಿಕೊಂಡು ವಿಶ್ಲೇಷಿಸಿದೆ. ಬಿಸಿಗಾಳಿಗಳು ಈಗ ಸರ್ಕಾರ ಊಹಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಗಳನ್ನು ತೀವ್ರ ಹವಾಮಾನ ಅಪಾಯಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ಈ ಅಧ್ಯಯನ ತೋರಿಸಿಕೊಟ್ಟಿದೆ.

“ಭಾರತದಲ್ಲಿ ಶಾಖದ ಅಲೆಗಳು ಹೆಚ್ಚು ತೀವ್ರವಾಗುತ್ತಿವೆ, ಇದು ದೇಶದ 80% ಜನರನ್ನು ಅಪಾಯಕ್ಕೆ ದೂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸದಿದ್ದರೆ, ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ತನ್ನ ಪ್ರಗತಿಯನ್ನು ನಿಧಾನಗೊಳಿಸಬಹುದು. ಅಲ್ಲದೆ ಹವಾಮಾನ ತಜ್ಞರು ದೇಶದ ಹವಾಮಾನ ದೌರ್ಬಲ್ಯವನ್ನು ನಿರ್ಣಯಿಸುವ ಮಾನದಂಡಗಳನ್ನು ಮರು ಮೌಲ್ಯಮಾಪನ ಮಾಡಲು ಇದು ಸೂಕ್ತ ಸಮಯ” ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ರೂಪಿಸಿದ ಸೂಚ್ಯಂಕದ ಪ್ರಕಾರ, ದೇಶದ ಸುಮಾರು 20 ಪ್ರತಿಶತದಷ್ಟು ಜನರು ಹವಾಮಾನ ಬದಲಾವಣೆಗೆ ಹೆಚ್ಚು ಗುರಿಯಾಗುತ್ತಾರೆ ಆದರೆ ಶಾಖ ಸೂಚ್ಯಂಕವು ಭಾರತದ 90 ಪ್ರತಿಶತವನ್ನು ಅಪಾಯದ ವಲಯದಲ್ಲಿರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಉದಾಹರಣೆಗೆ, 6 ರಿಂದ 7 ಡಿಗ್ರಿ ಸೆಲ್ಸಿಯಸ್ ತಾಪಮಾನದ ವೈಪರೀತ್ಯಗಳಿಗೆ ಸಾಕ್ಷಿಯಾದ ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳನ್ನು ಹವಾಮಾನ ದುರ್ಬಲತೆಯಲ್ಲಿ ಕಡಿಮೆ ಎಂದು ವರ್ಗೀಕರಿಸಲಾಗಿದೆ ಆದರೆ ಬಿಸಿಗಾಳಿಯಿಂದಾಗಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ.

ದೆಹಲಿಗೆ ಹೆಚ್ಚಿನ ಬಿಸಿಗಾಳಿ ಅಪಾಯ

32 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ದೆಹಲಿಯ ಬಹುತೇಕ ಎಲ್ಲಾ ಭಾಗವು ತೀವ್ರ ಶಾಖದ ಪರಿಣಾಮದಿಂದ ಅಪಾಯದಲ್ಲಿದೆ ಎಂದು ವರದಿ ಹೇಳುತ್ತಿದೆ. ಅಂದಾಜಿನ ಪ್ರಕಾರ ನಗರದ 100% ಭಾಗವು ‘ಅಪಾಯ’ ಎಚ್ಐ (ಶಾಖ ಸೂಚ್ಯಂಕ) ಮಟ್ಟದಲ್ಲಿದೆ. ದೆಹಲಿ ಸರ್ಕಾರದ ದುರ್ಬಲತೆಯ ಮೌಲ್ಯಮಾಪನದ ಪ್ರಕಾರ ಪ್ರಸ್ತುತ ಶಾಖ-ಕ್ರಿಯಾ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ, ವೇಗದ ನಗರೀಕರಣದಿಂದ ಇದು ಮತ್ತಷ್ಟು ಹದಗೆಡುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: Summer: ರಾಜ್ಯದಲ್ಲಿ ಹೆಚ್ಚಿದ ಬೇಸಿಗೆ ಬೇಗೆ; ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಟಿದ ಗರಿಷ್ಠ ತಾಪಮಾನ

2001 ರಿಂದ 2021 ರವರೆಗೆ ಕಳೆದ 20 ವರ್ಷಗಳಲ್ಲಿ ವಿಪರೀತ ಹವಾಮಾನ ಘಟನೆಗಳಿಂದಾಗಿ ಉಂಟಾಗುವ ಸಾವಿನ ಪ್ರಮಾಣವು ತೀವ್ರಗೊಂಡಿದ್ದರೂ, ಎಸ್ಡಿಜಿ ಪ್ರಗತಿಯ ವೇಗವು ನಿಧಾನಗೊಂಡಿದೆ ಎಂದು ತೋರಿಸುತ್ತದೆ. ವಾಸ್ತವವಾಗಿ, ಕಳೆದ ಮೂರು ವರ್ಷಗಳಲ್ಲಿ, 17 ರಲ್ಲಿ 11 ಗುರಿಗಳನ್ನು ಸಾಧಿಸುವಲ್ಲಿ ವಿಫಲವಾದ ಕಾರಣ ಭಾರತದ ಜಾಗತಿಕ ಎಸ್ಡಿಜಿ ಶ್ರೇಯಾಂಕ ಕುಸಿದಿದೆ.

ಅಧ್ಯಯನ ತಂಡವು ತೀವ್ರತೆಯ ವರ್ಗಗಳನ್ನು ವರ್ಗೀಕರಿಸಲು ರಾಷ್ಟ್ರೀಯ ಡೇಟಾ ಮತ್ತು ಅನಾಲಿಟಿಕ್ಸ್ ಪ್ಲಾಟ್ಫಾರ್ಮ್​​ನಿಂದ ರಾಜ್ಯ ಮಟ್ಟದ ಹವಾಮಾನ ದೌರ್ಬಲ್ಯ ಸೂಚಕಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಇತ್ತೀಚಿನ ಸರ್ಕಾರಿ ಡೇಟಾವನ್ನು ಬಳಸಿದ್ದು. ನಂತರ ಇದನ್ನು 20 ವರ್ಷಗಳಲ್ಲಿ (2001-2021) ಎಸ್ಡಿಜಿಯಲ್ಲಿ ಭಾರತದ ಪ್ರಗತಿಗೆ ಹೋಲಿಸಿಲಾಗಿದೆ. ಈ ಅವಧಿಯಲ್ಲಿ ತೀವ್ರ ಹವಾಮಾನ ಸಂಬಂಧಿತ ಮರಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:31 pm, Thu, 20 April 23