AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 6 ಬಿಜೆಡಿ ಶಾಸಕರ ಅಮಾನತು

ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವುದು ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಿಜು ಜನತಾದಳ (ಬಿಜೆಡಿ) ತನ್ನ ಪಕ್ಷದ 6 ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಇಂದು ಹೊರಡಿಸಿದ ಅಧಿಕೃತ ಆದೇಶದಲ್ಲಿ ಈ ಅಮಾನತು ಕುರಿತು ಘೋಷಿಸಲಾಗಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 6 ಬಿಜೆಡಿ ಶಾಸಕರ ಅಮಾನತು
Naveen Patnaik
ಸುಷ್ಮಾ ಚಕ್ರೆ
|

Updated on: Mar 21, 2026 | 8:50 PM

Share

ಒಡಿಶಾ, ಮಾರ್ಚ್ 21: ಇತ್ತೀಚೆಗೆ ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ಸಂದರ್ಭದಲ್ಲಿ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜು ಜನತಾದಳ (ಬಿಜೆಡಿ) ತನ್ನ 6 ಶಾಸಕರನ್ನು ಅಮಾನತುಗೊಳಿಸಿದೆ. ಶಾಸಕರು ಅಡ್ಡ ಮತದಾನದಲ್ಲಿ ತೊಡಗಿದ್ದಾರೆ ಎಂದು ಪತ್ತೆಯಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಶೋಕಾಸ್ ನೋಟಿಸ್‌ಗೆ ಅವರು ನೀಡಿದ ಉತ್ತರಗಳ ಪರಿಶೀಲನೆ ಮತ್ತು ಬಿಜೆಡಿ ಶಿಸ್ತು ಸಮಿತಿಯ ಸಂಪೂರ್ಣ ಪರಿಶೀಲನೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗಮನಾರ್ಹ ಅಡ್ಡ ಮತದಾನ ಕಂಡುಬಂದಿತು. 8 ಬಿಜೆಡಿ ಶಾಸಕರು (ಈಗ ಅಮಾನತುಗೊಂಡಿರುವ ಆರು ಮಂದಿ ಮತ್ತು ಈಗಾಗಲೇ ಅಮಾನತುಗೊಂಡಿರುವ ಇಬ್ಬರು ಸದಸ್ಯರು ಸೇರಿದಂತೆ) ಬಿಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿದ್ದ ಸಾಮಾನ್ಯ ವಿರೋಧ ಪಕ್ಷದ ಅಭ್ಯರ್ಥಿ ದತ್ತೇಶ್ವರ ಹೋಟಾ ಬದಲಿಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಮತ ಚಲಾಯಿಸಿದ್ದರು. ಇದು ದಿಲೀಪ್ ರೇ ಅವರ ಗೆಲುವಿಗೆ ಕಾರಣವಾಯಿತು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ; ಬಿಹಾರದಿಂದ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಕಣಕ್ಕೆ

ಇದರ ಪರಿಣಾಮವಾಗಿ ಬಿಜೆಪಿ 2 ಸ್ಥಾನಗಳನ್ನು, ಬಿಜೆಡಿ 1 ಸ್ಥಾನ ಮತ್ತು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ 4ನೇ ಸ್ಥಾನಗಳನ್ನು ಪಡೆದರು. ಬಿಜೆಡಿ ಈ ಹಿಂದೆ ಮಾರ್ಚ್ 17ರಂದು 6 ಶಾಸಕರಿಗೆ ಪಕ್ಷದ ವಿಪ್ ಅನ್ನು ಧಿಕ್ಕರಿಸಿದ್ದಕ್ಕಾಗಿ ವಿವರಣೆಗಳನ್ನು ಕೋರಿ ಶೋಕಾಸ್ ನೋಟಿಸ್‌ಗಳನ್ನು ನೀಡಿತ್ತು. ಇದೀಗ ಅವರನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಶಾಸಕರು:

ಬಲಿಗುಡದ ಶಾಸಕರಾದ ಚಕ್ರಮಣಿ ಕನ್ಹಾರ್

ಜಯದೇವ್‌ನ ಶಾಸಕರಾದ ನಬಾ ಕಿಶೋರ್ ಮಲ್ಲಿಕ್

ಚೌದ್ವಾರ-ಕಟಕ್‌ನ ಶಾಸಕರಾದ ಸೌವಿಕ್ ಬಿಸ್ವಾಲ್

ಬಸ್ತಾದ ಶಾಸಕರಾದ ಸುಬಾಸಿನಿ ಜೆನಾ

ತಿರ್ಟೋಲ್‌ನ ಶಾಸಕ ರಮಾಕಾಂತ ಭೋಯ್

ಬಂಕಿಯ ಶಾಸಕರಾದ ದೇವಿ ರಂಜನ್ ತ್ರಿಪಾಠಿ

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಸನ್ನದ್ಧ: ಮತದಾನಕ್ಕೆ ಶಾಸಕರ ಬ್ಯಾಚ್ ರಚನೆ, ಅದಕ್ಕೆ ಓರ್ವ ಲೀಡರ್

ಈ ಶಾಸಕರು ಬಿಜೆಡಿ ಪಕ್ಷದ ಮೂಲ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ. ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವು ಪಕ್ಷದ ವಿಪ್ ಮತ್ತು ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us