AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಂಚಿಯ ಮಾರ್ವಾಡಿ ಕಾಲೇಜು ಬಳಿ ದುರಂತ: ನೀರಿನ ಟ್ಯಾಂಕ್ ಸ್ಲ್ಯಾಬ್ ಕುಸಿದು ಇಬ್ಬರು ಕಾರ್ಮಿಕರು ಸಾವು, ಮೂವರ ರಕ್ಷಣೆ

ರಾಂಚಿಯ ಮಾರ್ವಾಡಿ ಕಾಲೇಜು ಬಳಿ ಹಳೆಯ ನೀರಿನ ಟ್ಯಾಂಕ್ ನೆಲಸಮ ಮಾಡುವಾಗ ಕುಸಿದು ಭಾರಿ ದುರಂತ ಸಂಭವಿಸಿದೆ. ಕಾಂಕ್ರೀಟ್ ಸ್ಲ್ಯಾಬ್‌ಗಳು ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರನ್ನು ಎನ್‌ಡಿಆರ್‌ಎಫ್ ರಕ್ಷಿಸಿದೆ. ಕನಿಷ್ಠ ಸುರಕ್ಷತಾ ಕ್ರಮಗಳಿಲ್ಲದೆ ಕೆಲಸ ಮಾಡಿಸಿದ ಬಗ್ಗೆ ಆರೋಪಗಳಿದ್ದು, ಗುತ್ತಿಗೆದಾರ ಮತ್ತು ಜಾಗದ ಮಾಲೀಕರ ವಿರುದ್ಧ ತನಿಖೆ ನಡೆಯುತ್ತಿದೆ. ಕಾರ್ಮಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

ರಾಂಚಿಯ ಮಾರ್ವಾಡಿ ಕಾಲೇಜು ಬಳಿ ದುರಂತ: ನೀರಿನ ಟ್ಯಾಂಕ್ ಸ್ಲ್ಯಾಬ್ ಕುಸಿದು ಇಬ್ಬರು ಕಾರ್ಮಿಕರು ಸಾವು, ಮೂವರ ರಕ್ಷಣೆ
ಎನ್​ಡಿಆರ್​ಎಫ್
ನಯನಾ ರಾಜೀವ್
|

Updated on: Sep 10, 2026 | 7:55 AM

Share

ರಾಂಚಿ, ಸೆಪ್ಟೆಂಬರ್ 10: ಜಾರ್ಖಂಡ್ ರಾಜಧಾನಿ ರಾಂಚಿಯ ಮಾರ್ವಾಡಿ ಕಾಲೇಜು ಸಮೀಪ ಬುಧವಾರ ಸಂಜೆ ಹಳೆಯ ನೀರಿನ ಟ್ಯಾಂಕ್ ನೆಲಸಮ ಮಾಡುವ ಕಾಮಗಾರಿ ವೇಳೆ ಭಾರಿ ಅವಘಡ ಸಂಭವಿಸಿದೆ. ಟ್ಯಾಂಕ್‌ನ ಕಾಂಕ್ರೀಟ್ ಸ್ಲ್ಯಾಬ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿ ಸಿಲುಕಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿದ್ದ ಇತರ ಮೂವರು ಕಾರ್ಮಿಕರನ್ನು ಅದೃಷ್ಟವಶಾತ್ ರಕ್ಷಿಸಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಶವಗಳನ್ನು ಹೊರತೆಗೆದಿದೆ.

ಮಾರ್ವಾಡಿ ಕಾಲೇಜಿಗೆ ಹೊಂದಿಕೊಂಡಿರುವ ಜಾಗದಲ್ಲಿ ಹಳೆಯ ಕಟ್ಟಡ ಮತ್ತು ನೀರಿನ ಟ್ಯಾಂಕ್ ಅನ್ನು ನೆಲಸಮ ಮಾಡುವ ಕಾಮಗಾರಿ ನಡೆಯುತ್ತಿತ್ತು. ಸಂಜೆ 5.30 ರಿಂದ 6 ಗಂಟೆಯ ಸುಮಾರಿಗೆ ಸ್ಲ್ಯಾಬ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.

ಐವರ ಪೈಕಿ ಇಬ್ಬರು ಬಲಿ: ಘಟನೆ ನಡೆದಾಗ ಸ್ಥಳದಲ್ಲಿ ಐವರು ಕಾರ್ಮಿಕರಿದ್ದರು. ಮೂವರು ತಕ್ಷಣವೇ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇಬ್ಬರು ಭಾರವಾದ ಕಾಂಕ್ರೀಟ್ ದಿಮ್ಮಿಗಳ ಅಡಿಯಲ್ಲಿ ಹೂತುಹೋಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಎನ್‌ಡಿಆರ್‌ಎಫ್ ಮಿಂಚಿನ ಕಾರ್ಯಾಚರಣೆ: ಸ್ಥಳೀಯ ಕೊತ್ವಾಲಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೊದಲ ಶವವನ್ನು ಹೊರತೆಗೆದರು. ನಂತರ ಎನ್‌ಡಿಆರ್‌ಎಫ್ 9ನೇ ಬೆಟಾಲಿಯನ್ ಕಮಾಂಡೆಂಟ್ ಎಂಡಿ ಸಲೀಮ್ ರಯೀಮ್ ನೇತೃತ್ವದ ತಂಡ ಜೆಸಿಬಿ ಮತ್ತು ವಿಶೇಷ ಕಟ್ಟಿಂಗ್ ಉಪಕರಣಗಳನ್ನು ಬಳಸಿ ಕೇವಲ 20 ರಿಂದ 25 ನಿಮಿಷಗಳಲ್ಲಿ ಎರಡನೇ ಶವವನ್ನು ಹೊರತೆಗೆದಿದೆ.

ಮತ್ತಷ್ಟು ಓದಿ: ತರಗತಿ ನಡೆಯುತ್ತಿದ್ದ ವೇಳೆಯೇ ಕುಸಿದ ಸರ್ಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ: ಎಂಜಿನಿಯರ್ ನಿರ್ಲಕ್ಷ್ಯದಿಂದ ಅವಘಡ?

ಪೊಲೀಸ್ ತನಿಖೆ: ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯಾವುದೇ ಕನಿಷ್ಠ ಸುರಕ್ಷತಾ ಸಾಧನಗಳಿಲ್ಲದೆ ಹಳೆಯ ಕಟ್ಟಡವನ್ನು ಕೆಡವಲು ಸೂಚಿಸಲಾಗಿತ್ತೇ ಎಂಬ ಬಗ್ಗೆ ಗುತ್ತಿಗೆದಾರ ಮತ್ತು ಜಾಗದ ಮಾಲೀಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಇನ್ಸ್‌ಪೆಕ್ಟರ್ ಸನೋಜ್ ಚೌಧರಿ ತಿಳಿಸಿದ್ದಾರೆ.

ಕಾರ್ಮಿಕರ ಸುರಕ್ಷತಾ ಲೋಪ: ಹಳೆಯ ಮತ್ತು ಶಿಥಿಲಗೊಂಡ ನೀರಿನ ಟ್ಯಾಂಕ್‌ಗಳನ್ನು ಕೆಡವುವಾಗ ಕಾಲಮ್ ಹಾಗೂ ಬೀಮ್‌ಗಳಿಗೆ ಸರಿಯಾದ ಜಾಕ್ ಸಪೋರ್ಟ್ ನೀಡದೆ ಮತ್ತು ಕಾರ್ಮಿಕರಿಗೆ ಹೆಲ್ಮೆಟ್, ಸುರಕ್ಷತಾ ಬೆಲ್ಟ್‌ಗಳಂತಹ ರಕ್ಷಣಾ ಕವಚಗಳಿಲ್ಲದೆ ಕೆಲಸ ಮಾಡಿಸಿರುವುದು ಮೇಲ್ನೋಟಕ್ಕೆ ದುರಂತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಡಿಯೋ

ನಗರ ಪ್ರದೇಶಗಳಲ್ಲಿ ಕಟ್ಟಡ ಕೆಡವುವಿಕೆ ನಿಯಮಗಳು: ನಗರ ಪಾಲಿಕೆಯ ನಿಯಮಗಳ ಪ್ರಕಾರ ಯಾವುದೇ ವಾಣಿಜ್ಯ ಅಥವಾ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳನ್ನು ಕೆಡವುವ ಮುನ್ನ ಸೂಕ್ತ ಪರವಾನಗಿ ಪಡೆಯುವುದು ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಬ್ಯಾರಿಕೇಡ್ ಹಾಕುವುದು ಕಡ್ಡಾಯ. ಈ ಕಾಮಗಾರಿಗೆ ಅಂತಹ ಅನುಮತಿ ಇತ್ತೇ ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us