AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​: ಆರ್​ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ

ದೊಡ್ಡ ಮಟ್ಟದ ಕಾರ್ಪೊರೇಟ್ ಕಂಪನಿಗಳಿಗೆ, ಉದ್ಯಮಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​ (ತಮ್ಮದೇ ಬ್ಯಾಂಕ್​ ವ್ಯವಸ್ಥೆ ಮಾಡಿಕೊಳ್ಳಲು ಪರವಾನಗಿ) ನೀಡುವ ಪ್ರಸ್ತಾವನೆಯನ್ನು ಆರ್​ಬಿಐ ರಚಿಸಿರುವ ತಜ್ಞರ ಸಮಿತಿ ಸದಸ್ಯರಲ್ಲಿ ಓರ್ವರಾದ ಸಚಿನ್​ ಚತುರ್ವೇದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​: ಆರ್​ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
Lakshmi Hegde
|

Updated on: Nov 30, 2020 | 12:36 PM

Share

ಮುಂಬೈ: ದೊಡ್ಡ ಮಟ್ಟದ ಕಾರ್ಪೊರೇಟ್ ಕಂಪನಿಗಳಿಗೆ, ಉದ್ಯಮಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​ (ತಮ್ಮದೇ ಬ್ಯಾಂಕ್​ ವ್ಯವಸ್ಥೆ ಮಾಡಿಕೊಳ್ಳಲು ಪರವಾನಗಿ) ನೀಡುವ ಪ್ರಸ್ತಾವನೆಯನ್ನು ಆರ್​ಬಿಐ ರಚಿಸಿರುವ ತಜ್ಞರ ಸಮಿತಿ ಸದಸ್ಯರಲ್ಲಿ ಓರ್ವರಾದ ಸಚಿನ್​ ಚತುರ್ವೇದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ನಾವು ದೊಡ್ಡ ಖಾಸಗಿ ಸಂಸ್ಥೆಗಳಿಗೆ ಪರವಾನಗಿ ಕೊಡುವ ಮೂಲಕ ಹೊಸ ಬ್ಯಾಂಕ್​ಗಳನ್ನು ಆರಂಭಿಸುವ ಅಧಿಕಾರ ನೀಡಲು ಪ್ರಸ್ತಾವನೆ ಮುಂದಿಟ್ಟಿದ್ದೇವೆ. ಅದಕ್ಕೆ ಯಾಕಿಷ್ಟು ವಿರೋಧ ಎಂಬ ಬಗ್ಗೆ ಅಚ್ಚರಿ ಆಗುತ್ತಿದೆ ಎಂದು ಚತುರ್ವೇದಿ ಹೇಳಿದ್ದಾರೆ. ಕಾರ್ಪೋರೇಟ್​ ಸಂಸ್ಥೆಗಳಿಗೆ ಬ್ಯಾಂಕಿಂಗ್ ಲೈಸೆನ್ಸ್​ ನೀಡುವ ಬಗ್ಗೆ ಸಲಹೆ, ಪರಿಶೀಲನೆಗಾಗಿ ರಚಿಸಲಾದ ಆಂತರಿಕ ಸಮಿತಿಯಲ್ಲಿ ಚತುರ್ವೇದಿ ಸಹ ಇದ್ದಾರೆ.

​1993ರಲ್ಲಿ ಆರು ಖಾಸಗಿ ಬ್ಯಾಂಕ್​ಗಳಿಗೆ ಪರವಾನಗಿ ನೀಡಿದ್ದನ್ನು ದಾಖಲೆ ಸಮೇತ ನಮ್ಮ ವರದಿಯ ಎರಡನೇ ಚಾಪ್ಟರ್​ನಲ್ಲಿ ಉಲ್ಲೇಖಿಸಿದ್ದೇವೆ. ಅದನ್ನೇ ಈಗ ವಿಸ್ತರಿಸಲು ಆರ್​ಬಿಐ ಸಮಿತಿ ಮುಂದಾಗಿದೆ. ಇದೀಗ ದೊಡ್ಡ ಖಾಸಗಿ ಸಂಸ್ಥೆಗಳಿಗೆ ಬ್ಯಾಂಕಿಂಗ್ ಪರವಾನಗಿ ನೀಡುತ್ತಿದ್ದೇವೆ. ನಾವೀಗ ಯಾವುದೇ ಹೊಸ ಕ್ರಮದ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಮಾಡುತ್ತಿಲ್ಲ. ಮೊದಲಿನಿಂದಲೂ ಇದ್ದ ಅವಕಾಶವನ್ನು ವಿಸ್ತರಣೆ ಮಾಡುತ್ತಿದ್ದೇವೆ ಅಷ್ಟೇ ಎಂದು ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಡೈರೆಕ್ಟರ್​ ಜನರಲ್ ಸಹ ಆಗಿರುವ ಸಚಿನ್​ ಚತುರ್ವೇದಿ ಆರ್​ಬಿಐ ಕ್ರಮವನ್ನು ಸ್ಪಷ್ಟಪಡಿಸಿದ್ದಾರೆ.

ದೊಡ್ಡ ಉದ್ಯಮಗಳಿಗೆ ಪರವಾನಗಿ ನೀಡಲು ಮುಂದಾಗಿರುವ ನಿರ್ಧಾರದ ಹಿಂದೆ ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡುವ ಹೊರತು ಮತ್ಯಾವುದೇ ಹೊಸ ಉದ್ದೇಶಗಳು ಇಲ್ಲ ಎಂದು ಹೇಳಿದ್ದಾರೆ.

ಚತುರ್ವೇದಿ ಅವರು ಆರ್ಥಿಕ ಅಭಿವೃದ್ಧಿ, ಫೈನಾನ್ಸ್​ ಡೆವಲಪ್​ಮೆಂಟ್​ಗಳ ಬಗ್ಗೆ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುವಾಗ ಅದರ ಪರಿಶೀಲನಾ ಸಮಿತಿಯಲ್ಲೂ ಇದ್ದವರು.

ಆರ್​ಬಿಐ ನಡೆಗೆ ವಿರೋಧ

ಆರ್​ಬಿಐ ಆಂತರಿಕ ಸಮಿತಿ ಹೊಸ ಬ್ಯಾಂಕ್​ಗಳಿಗೆ ಲೈಸೆನ್ಸ್​ ಕೊಡುವ ಪ್ರಸ್ತಾವ ಮುಂದಿಟ್ಟಾಗಿನಿಂದ ಅನೇಕರ ವಿರೋಧ ವ್ಯಕ್ತವಾಗುತ್ತಿದೆ. ಎಡಪಂಥೀಯರು ಆರ್​ಬಿಐ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಲ್ಲದೆ, ಇದು ಹಣಕಾಸು ವ್ಯವಸ್ಥೆಯನ್ನು ಅವನತಿಯತ್ತ ಕೊಂಡೊಯ್ಯುವ ಯೋಜನೆ ಎಂದು ಟೀಕಿಸಿದ್ದಾರೆ.

ಆರ್​ಬಿಐ ಮಾಜಿ ಗವರ್ನರ್​ ರಘುರಾಮ್ ರಾಜನ್​, ಮಾಜಿ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಕೂಡ ಇದು ಸಮಂಜಸ ಹೆಜ್ಜೆಯಲ್ಲ. ಅತ್ಯಂತ ಕೆಟ್ಟ ಪರಿಕಲ್ಪನೆ ಎಂದು ಎಚ್ಚರಿಸಿದ್ದಾರೆ. ಆರ್​ಬಿಐ ಸಮಿತಿಯಲ್ಲಿರುವ ಅನೇಕ ಸದಸ್ಯರೇ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಹೀಗೆ ಬಹುತೇಕ ತಜ್ಞರ, ಗಣ್ಯರ ವಿರೋಧದ ನಡುವೆಯೂ ಆರ್​ಬಿಐನ ಆಂತರಿಕ ಕಾರ್ಯ ಸಮಿತಿ ತನ್ನ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಆರ್​ಬಿಐಗೆ ಸುಪ್ರೀಂಕೋರ್ಟ್​ ಖಡಕ್ ಸೂಚನೆ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?