AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhima Koregaon case ಸಿಸಿಟಿವಿ ಕಣ್ಗಾವಲು, ಫೋನ್ ಬಳಕೆ ನಿರ್ಬಂಧಗಳೊಂದಿಗೆ ಗೌತಮ್ ನವಲಖಾ ಗೃಹಬಂಧನಕ್ಕೆ ಸುಪ್ರೀಂ ಅನುಮತಿ

ನವಲಖಾ ಅವರು ಗೃಹಬಂಧನದಲ್ಲಿರುವಾಗ ಇಂಟರ್ನೆಟ್, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಐಪ್ಯಾಡ್ ಅಥವಾ ಇತರ ಯಾವುದೇ ಸಂವಹನ ಸಾಧನಗಳನ್ನು ಬಳಸಬಾರದು ಎಂದು ನ್ಯಾಯಾಲಯ ಹೇಳಿದೆ

Bhima Koregaon case ಸಿಸಿಟಿವಿ ಕಣ್ಗಾವಲು, ಫೋನ್ ಬಳಕೆ ನಿರ್ಬಂಧಗಳೊಂದಿಗೆ ಗೌತಮ್ ನವಲಖಾ ಗೃಹಬಂಧನಕ್ಕೆ ಸುಪ್ರೀಂ ಅನುಮತಿ
ಗೌತಮ್ ನವಲಖಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 10, 2022 | 6:01 PM

Share

ಭೀಮಾ ಕೋರೆಗಾಂವ್ ಪ್ರಕರಣದ(Bhima Koregaon case) ಆರೋಪಿ ಗೌತಮ್ ನವಲಖಾ (Gautam Navlakha) ಅವರ ಆರೋಗ್ಯದ ಆಧಾರದ ಮೇಲೆ ಜೈಲಿನಿಂದ ಗೃಹಬಂಧನಕ್ಕೆ ವರ್ಗಾಯಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ ಆಕ್ಷೇಪಣೆಗಳ ಹೊರತಾಗಿಯೂ ಅವರ ಮನವಿಯನ್ನು ಸುಪ್ರೀಂಕೋರ್ಟ್(Supreme Court) ಗುರುವಾರ ಅಂಗೀಕರಿಸಿದೆ. ನವಲಖಾ ಆರಂಭದಲ್ಲಿ ಒಂದು ತಿಂಗಳ ಕಾಲ ಗೃಹಬಂಧನದಲ್ಲಿರುತ್ತಾರೆ. ಅದರ ನಂತರ ನ್ಯಾಯಾಲಯವು ಅದನ್ನು ಪರಿಶೀಲಿಸುತ್ತದೆ. ಪೀಠವು ಮುಂಬೈನಲ್ಲಿ ಅವರೊಂದಿಗೆ ವಾಸಿಸಲು ಅನುಮತಿ ನೀಡಿದ  ಅವರ ಸಹಚರ ಸಾಹಬಾ ಹುಸೇನ್‌ಗೆ ಕಠಿಣ ಷರತ್ತುಗಳನ್ನು ವಿಧಿಸಿತು. ಷರತ್ತುಗಳು ಫೋನ್ ಬಳಕೆಯ ಮೇಲಿನ ನಿರ್ಬಂಧಗಳನ್ನು ಒಳಗೊಂಡಿವೆ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠ ಹೇಳಿದೆ.  ನವಲಖಾ ಅವರನ್ನು ವರ್ಗಾವಣೆ ಮಾಡುವ ಮೊದಲು “ಆವರಣದ ಅಗತ್ಯ ಮೌಲ್ಯಮಾಪನವನ್ನು ಕೈಗೊಳ್ಳಲು” ಎನ್ಐಎಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಗೃಹಬಂಧನದ ಯಾವುದೇ ದುರುಪಯೋಗವನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಸಂಸ್ಥೆಯು “ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸ್ವತಂತ್ರವಾಗಿದೆ” ಎಂದು ಅದರ ಆದೇಶವು ಹೇಳಿದೆ. ಆರೋಪಿಯು ತನ್ನ ಭದ್ರತೆಗಾಗಿ 2.4 ಲಕ್ಷ ರೂ. ಠೇವಣಿ ಇರಿಸಲು ಅದು ಹೇಳಿದೆ.

ನವಲಖಾ ಅವರು ಗೃಹಬಂಧನದಲ್ಲಿರುವಾಗ ಇಂಟರ್ನೆಟ್, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಐಪ್ಯಾಡ್ ಅಥವಾ ಇತರ ಯಾವುದೇ ಸಂವಹನ ಸಾಧನಗಳನ್ನು ಬಳಸಬಾರದು ಎಂದು ನ್ಯಾಯಾಲಯ ಹೇಳಿದೆ. ದಿನಕ್ಕೆ ಒಮ್ಮೆ ಭದ್ರತಾ ಸಿಬ್ಬಂದಿ ಒದಗಿಸಬಹುದಾದ ಮೊಬೈಲ್ ಫೋನ್ ಅನ್ನು 10 ನಿಮಿಷಗಳ ಕಾಲ ಬಳಸಲು ಅವರಿಗೆ ಅನುಮತಿಸಲಾಗುವುದು. ಅವರು ತನ್ನ ಸಹಚರನ ಫೋನ್ ಸೇರಿದಂತೆ ಯಾವುದೇ ಇತರ ಫೋನ್ ಅನ್ನು ಬಳಸಬಾರದು, ಅದು ಇಂಟರ್ನೆಟ್ ಸಂಪರ್ಕವಿಲ್ಲದ ಮೂಲ ಫೋನ್ ಆಗಿರಬೇಕು.

ಸಹಚರರ ಫೋನ್‌ನ ಕಣ್ಗಾವಲು ಮತ್ತು ಕರೆಗಳನ್ನು ರೆಕಾರ್ಡ್ ಮಾಡಲು ಎನ್‌ಐಎಗೆ ಮುಕ್ತವಾಗಿರುತ್ತದೆ. ಅವರು ತನ್ನ ಫೋನ್‌ನಿಂದ ಕರೆಗಳು ಅಥವಾ ಸಂದೇಶಗಳ ವಿವರಗಳನ್ನು ಅಳಿಸಬಾರದು ಎಂದು ನ್ಯಾಯಾಲಯ ಹೇಳಿದೆ.

ನವಲಖಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ದೆಹಲಿಯಲ್ಲಿ ಮನೆ ಹೊಂದಿರುವುದರಿಂದ ದೆಹಲಿ ಅನುಕೂಲವಾಗಲಿದೆ ಎಂದು ಹೇಳಿದ್ದರೂ, ಮುಂಬೈ ಅಥವಾ ನವಿ ಮುಂಬೈಯನ್ನು ತೊರೆಯಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅವರು ವಾರದಲ್ಲಿ ಮೂರು ಗಂಟೆಗಳ ಕಾಲ ತಮ್ಮ ಕುಟುಂಬದ ಇಬ್ಬರು ಸದಸ್ಯರನ್ನು ಭೇಟಿ ಮಾಡಬಹುದು, ಅವರ ವಿವರಗಳನ್ನು ಎನ್ಐಎಗೆ ನೀಡಬೇಕು. ಸಂದರ್ಶಕರು  ಅವರಿಗೆ ಮೊಬೈಲ್ ಫೋನ್​​ನಲ್ಲಿ ಕರೆ ಮಾಡಿದರು ಸಹ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಾದ ಫೋನ್‌ಗಳು, ಐಪ್ಯಾಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಮನೆಯೊಳಗೆ ಅನುಮತಿಸಲಾಗುವುದಿಲ್ಲ.

ಕೊಠಡಿಗಳ ಒಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅವಕಾಶ ನೀಡಬೇಕೆಂದು ಸಂಸ್ಥೆ ಒತ್ತಾಯಿಸಿದರೂ, ಪ್ರತಿ ಕೊಠಡಿಯ ಪ್ರವೇಶದ್ವಾರದಲ್ಲಿ ಮತ್ತು ಹೊರಗೆ ಅವುಗಳನ್ನು ಅಳವಡಿಸುವಂತೆ ನ್ಯಾಯಾಲಯವು ಸೂಚಿಸಿತು. ಕ್ಯಾಮೆರಾಗಳು ಪೂರ್ತಿ ಕೆಲಸ ಮಾಡುವ ಸ್ಥಿತಿಯಲ್ಲಿರಬೇಕು, ಯಾವುದೇ ಸಮಯದಲ್ಲಿ ನಿಷ್ಪರಿಣಾಮಕಾರಿಯಾಗಬಾರದು ಎಂದು ಪೀಠ ಹೇಳಿದೆ. ಅವುಗಳ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ನವಲಖಾ ಭರಿಸುತ್ತಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ