AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಕಮ್ಯೂನಿಕೇಶನ್ಸ್ ಬಿಲ್; ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಗೆ ಹೊಸ ವಿಧಾನ ಸೇರಿ ಹಲವು ಸುಧಾರಣೆಗಳು

Telecommunications Bill 2023, Highlights: ಕೇಂದ್ರ ಸರ್ಕಾರ 2023ರ ದೂರಸಂಪರ್ಕ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಿದೆ. 138 ವರ್ಷದ ಹಿಂದಿನ ಟೆಲಿಗ್ರಾಂ ಕಾಯ್ದೆಯ ಬದಲು ಇದನ್ನು ರೂಪಿಸಲಾಗಿದೆ. 4ಜಿ, 5ಜಿ ಇತ್ಯಾದಿ ಸ್ಪೆಕ್ಟ್ರಂ ಹಂಚಿಕೆಗೆ ಇರುವಂತೆ ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಹರಾಜು ಪ್ರಕ್ರಿಯೆ ಇರುವುದಿಲ್ಲ. ಸರ್ಕಾರವೇ ಶುಲ್ಕ ನಿಗದಿ ಮಾಡುತ್ತದೆ. ತುರ್ತು ಸಂದರ್ಭ ಬಂದರೆ ಸರ್ಕಾರ ಯಾವುದೇ ಟೆಲಿಕಮ್ಯೂನಿಕೇಶನ್ಸ್ ನೆಟ್ವರ್ಕ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಹೊಸ ಕಾಯ್ದೆ ಬಲ ಕೊಡುತ್ತದೆ.

ಟೆಲಿಕಮ್ಯೂನಿಕೇಶನ್ಸ್ ಬಿಲ್; ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಗೆ ಹೊಸ ವಿಧಾನ ಸೇರಿ ಹಲವು ಸುಧಾರಣೆಗಳು
ಲೋಕಸಭೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 19, 2023 | 12:35 PM

Share

ನವದೆಹಲಿ, ಡಿಸೆಂಬರ್ 19: ಕೇಂದ್ರ ಸರ್ಕಾರ ಶತಮಾನದಷ್ಟು ಹಳೆಯದಾದ ಟೆಲಿಗ್ರಾಫ್ ಕಾಯ್ದೆಯ ಬದಲು 2023ರ ದೂರಸಂಪರ್ಕ ಮಸೂದೆ (Telecommunications Bill 2023) ಜಾರಿಗೊಳಿಸಲು ಮುಂದಾಗಿದೆ. ಸರ್ಕಾರ ನಿನ್ನೆ ಸೋಮವಾರ (ಡಿ. 18) ಲೋಕಸಭೆಯಲ್ಲಿ ಈ ಹೊಸ ಮಸೂದೆ ಮಂಡನೆ ಮಾಡಿದೆ. ಪರಿಣಿತರ ಪ್ರಕಾರ, ಈ ಮಸೂದೆ ಹೊಸ ಕಾಲಕ್ಕೆ ಅನುಗುಣವಾಗಿರುವ ಕಾನೂನುಗಳನ್ನು ಪ್ರಸ್ತಾಪಿಸಿದೆ. ದೇಶದಲ್ಲಿ ಇಂಟರ್ನೆಟ್ ಕ್ರಾಂತಿ ಹೆಚ್ಚಿಸಲಿದೆ, ಸರ್ಕಾರಕ್ಕೆ ಹೆಚ್ಚಿನ ಬಲ ಕೊಡಲಿದೆ, ಟೆಲಿಕಾಂ ನೀತಿಗಳಲ್ಲಿ ಸುಧಾರಣೆ ತರಲು ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಕ್ಯಾಬಿನೆಟ್ ಈ ಮಸೂದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಲೋಕಸಭೆಯಲ್ಲೂ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ಇದು ಕಾಯ್ದೆಯಾಗಿ ಜಾರಿಗೆ ಬರುತ್ತದೆ.

ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಹೊಸ ವಿಧಾನ

ಟೆಲಿಕಮ್ಯುನಿಕೇಶನ್ಸ್ ಬಿಲ್​ನಲ್ಲಿ ಇರುವ ಪ್ರಮುಖ ಅಂಶಗಳಲ್ಲಿ ಒಂದು ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ (satellite spectrum allocation) ವಿಚಾರ. 2ಜಿ, 3ಜಿ, 4ಜಿ, 5ಜಿ ಇತ್ಯಾದಿ ಸ್ಪೆಕ್ಟ್ರಂಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. ಆದರೆ, ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಈ ವಿಧಾನಕ್ಕೆ ತಿಲಾಂಜಲಿ ಹೇಳಿ, ಆಡಳಿತಾತ್ಮಕ ಹಂಚಿಕೆ ವಿಧಾನ (administrative allocation) ಅನುಸರಿಸಲು ನಿರ್ಧರಿಸಲಾಗಿದೆ. ಅಂದರೆ, ಈ ಸ್ಪೆಕ್ಟ್ರಂ ಬಳಕೆಗೆ ಸರ್ಕಾರವೇ ಶುಲ್ಕ ನಿಗದಿ ಮಾಡುತ್ತದೆ.

ಭಾರ್ತಿ ಏರ್ಟೆಲ್ ಹಾಗೂ ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಸಂಸ್ಥೆಗಳೂ ಕೂಡ ಆಡಳಿತಾತ್ಮಕವಾಗಿ ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಏರ್​ಟೆಲ್​ನ ಒನ್​ವೆಬ್, ಸ್ಟಾರ್​ಲಿಂಕ್, ಅಮೇಜಾನ್​ನ ಕ್ಯೂಪರ್, ರಿಲಾಯನ್ಸ್​ನ ಜಿಯೋ ಸೆಟಿಲೈಟ್ ಕಮ್ಯೂನಿಕೇಶನ್ಸ್ ಮೊದಲಾದ ಕಂಪನಿಗಳಿಗೆ ಸಹಾಯವಾಗಲಿದೆ.

ಇದನ್ನೂ ಓದಿ: CP Gurnani: ಎಐ ತಂತ್ರಜ್ಞಾನದಿಂದ ಉದ್ಯೋಗನಷ್ಟಕ್ಕಿಂತ ಉದ್ಯೋಗಸೃಷ್ಟಿ ಹೆಚ್ಚು ಎಂದ ಟೆಕ್ ಮಹೀಂದ್ರ ನಿರ್ಗಮಿತ ಸಿಇಒ

ಅಲ್ಲದೇ, ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಸೇವೆಯ ವೆಚ್ಚ ಕಡಿಮೆ ಆಗುತ್ತದೆ. ಹಾಗು ಬಹಳ ಬೇಗ ಈ ಸೇವೆ ಭಾರತದ ಮೂಲೆಮೂಲೆ ತಲುಪಲು ಸಾಧ್ಯವಾಗುತ್ತದೆ. ಹರಾಜು ಪ್ರಕ್ರಿಯೆ ಅನುಸರಿಸಿದರೆ ಸೆಟಿಲೈಟ್ ಬ್ರಾಡ್​ಬ್ಯಾಂಡ್ ಸೇವೆಗಳ ವೆಚ್ಚ ಹೆಚ್ಚಾಗುತ್ತದೆ. ಜೊತೆಗೆ ಸಮಯವೂ ಹೆಚ್ಚು ವ್ಯಯವಾಗುತ್ತದೆ.

ದೂರಸಂಪರ್ಕ ಸೇವೆಗಳ ನಿಯಂತ್ರಣ ಸರ್ಕಾರದ ಕೈಯಲ್ಲಿ…

2023ರ ಟೆಲಿಕಮ್ಯೂನಿಕೇಶನ್ಸ್ ಬಿಲ್​ನಲ್ಲಿ ಇರುವ ಇನ್ನೊಂದು ಪ್ರಮುಖ ಅಂಶವೆಂದರೆ ಅದು ಸರ್ಕಾರಕ್ಕೆ ಕೊಟ್ಟಿರುವ ಹೆಚ್ಚಿನ ನಿಯಂತ್ರಣ ಅಧಿಕಾರ. ರಾಷ್ಟ್ರೀಯ ಭದ್ರತಾ ಅಪಾಯದ ಸ್ಥಿತಿ ಬಂದರೆ ಯಾವುದೇ ದೂರಸಂಪರ್ಕ ಸೇವೆ ಅಥವಾ ನೆಟ್ವರ್ಕ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುವ, ಅಥವಾ ರದ್ದು ಮಾಡುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ.

ಬಳಕೆದಾರರ ಹಿತದೃಷ್ಟಿಯಿಂದ ವಾಟ್ಸಾಪ್ ಇತ್ಯಾದಿ ಇಂಟರ್ನೆಟ್ ಆಧಾರಿತ ಕರೆ ಮತ್ತು ಮೆಸೇಜಿಂಗ್ ಆ್ಯಪ್​ಗಳನ್ನು ಟೆಲಿಕಮ್ಯೂನಿಕೇನ್ಸ್ ವ್ಯಾಖ್ಯಾನದ ಪರಿಧಿಗೆ ತರಲಾಗಿದೆ.

ಇದನ್ನೂ ಓದಿ: ಬಿಹಾರದಲ್ಲಿ ಸೀತಾ ಜನ್ಮಸ್ಥಳ ಅಭಿವೃದ್ಧಿ ಯೋಜನೆ ಕೈಗೊಂಡ ನಿತೀಶ್ ಕುಮಾರ್, ಏನಿದು ಅಜೆಂಡಾ?

ಇದರ ಜೊತೆ ಕರಡು ಮಸೂದೆಯಲ್ಲಿ ಇನ್ನೂ ಕೆಲ ಮಹತ್ವದ ಸುಧಾರಣಾ ಕ್ರಮಗಳು ಪ್ರಸ್ತಾಪವಾಗಿವೆ. ಪ್ರವೇಶ ಶುಲ್ಕ, ಪರವಾನಗಿ ಶುಲ್ಕ, ದಂಡ ಇತ್ಯಾದಿಯನ್ನು ಮನ್ನಾ ಮಾಡುವಂತಹ ಅಧಿಕಾರವನ್ನು ಸರ್ಕಾರಕ್ಕೆ ಕೊಡಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತದೆ, ಟೆಲಿಕಾಂ ನೆಟ್ವರ್ಕ್​ಗಳ ಲಭ್ಯತೆ ಹೆಚ್ಚುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಮತ್ತು ರಾಷ್ಟ್ರೀಯ ಭದ್ರತೆಗೆ ಲಾಭ ಆಗುತ್ತದೆ.

ಇನ್ನು, ಒಂದು ಕಂಪನಿ ತನ್ನ ಪರವಾನಿಗೆಯನ್ನು ಮರಳಿಸಿದರೆ ಲೈಸೆನ್ಸ್ ಶುಲ್ಕದ ರೀಫಂಡ್ ಇತ್ಯಾದಿ ವಿಚಾರದಲ್ಲಿ ನಿಯಮಗಳನ್ನು ಸುಲಭಗೊಳಿಸುವ ಪ್ರಸ್ತಾಪವು ಈ ಮಸೂದೆಯಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ