Kannada News Photo gallery Bangaluru rain: DK Shivakumar visits Kendriya Vihar Apartment today: Instruct the officers to shift everyone, Karnataka news in kannada
ಕೇಂದ್ರೀಯ ವಿಹಾರಗೆ ಡಿಕೆ ಶಿವಕುಮಾರ್ ಭೇಟಿ: ಮನೆ ಬಾಗಿಲು ಒಡೆದಾದ್ರೂ ಜನರನ್ನು ಹೊರ ತರುವಂತೆ ಸೂಚನೆ
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಆಗುತ್ತಿದೆ. ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಸದ್ಯ ಅವಾಂತರಗಳು ಸೃಷ್ಟಿಯಾದ ಯಲಹಂಕದ ಕೇಂದ್ರೀಯ ವಿಹಾರ, ಥಣಿಸಂದ್ರ ಮತ್ತು ಸಾಯಿಬಾಬಾ ಲೇಔಟ್ಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಅದರಲ್ಲೂ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಬೇಸ್ಮೆಂಟ್ನಲ್ಲಿ ಮಳೆ ನೀರು ತುಂಬಿಕೊಂಡಿದ್ದು, ನಿವಾಸಿಗಳು ಪರದಾಡಿದ್ದಾರೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
1 / 7
ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ಭೇಟಿ ನೀಡಿದ ಡಿಕೆ ಶಿವಕುಮಾರ್, ನೀರು ನುಗ್ಗಲು ಕಾರಣ ಏನು, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಿಂದ ನೀರು ಬರುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
2 / 7
ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಹಾಗೂ ಎನ್ಡಿಆರ್ಎಫ್ ತಂಡಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
3 / 7
ಸೆಂಟಿಮೆಂಟ್ ಬೇಡ, ಅನಾಹುತವಾದರೆ ಯಾರು ಹೊಣೆ? ಎಲ್ಲರನ್ನೂ ಶಿಫ್ಟ್ ಮಾಡಿ. ಮನೆಯ ಡೋರ್ ಒಡೆದಾದ್ರೂ ಹೊರಗಡೆ ಕರೆದುಕೊಂಡು ಬನ್ನಿ. ಒಂದು ವಾರ ಬೇರೆ ಕಡೆ ನಿವಾಸಿಗಳಿಗೆ ವ್ಯವಸ್ಥೆ ಮಾಡಿ ಎಂದು ತುಷಾರ್ ಗಿರಿನಾಥ್ಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
4 / 7
ಕೇಂದ್ರೀಯ ವಿಹಾರ ವಸತಿ ಸಮುಚ್ಚಯದಲ್ಲಿ ಕೇಂದ್ರ ಸರ್ಕಾರದ ನೌಕರರು ವಾಸಿಸುತ್ತಿದ್ದು, ಯಲಹಂಕದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿರುವ ಇತಿಹಾಸವಿಲ್ಲ. ಸಮುಚ್ಚಯದಲ್ಲಿನ ಅರ್ಧದಷ್ಟು ಮಳೆಯ ನೀರನ್ನು ಈಗಾಗಲೇ ತೆಗೆಯಲಾಗಿದೆ ಎಂದಿದ್ದಾರೆ.
5 / 7
ಇನ್ನು ಎಡೆಬಿಡದೆ ಸುರಿದ ಮಳೆಯಿಂದ ಥಣಿಸಂದ್ರ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಅಲ್ಲಿನ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
6 / 7
ಸಾಯಿಬಾಬಾ ಲೇಔಟ್ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಸ್ಥಳಗಳಿಗೂ ಭೇಟಿ ನೀಡಿ, ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದ್ದಾರೆ.