AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bay Leaf Benefits: ಬಿರಿಯಾನಿ ಎಲೆ ಕೇವಲ ರುಚಿಗಷ್ಟೇ ಅಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ಸಾಂಪ್ರದಾಯಿಕ ನಂಬಿಕೆ!

ಬಿರಿಯಾನಿ ಎಲೆ ಕೇವಲ ಅಡುಗೆಗೆ ಸೀಮಿತವಲ್ಲ. ಇದು ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತ. ಸಾಂಪ್ರದಾಯಿಕವಾಗಿ, ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸಲು, ಮಾನಸಿಕ ಶಾಂತಿ ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಈ ಎಲೆಯನ್ನು ಸುಡುವುದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಜೊತೆಗೆ ವ್ಯಾಪಾರ ಅಭಿವೃದ್ಧಿಗೂ ಇದನ್ನು ಉಪಯೋಗಿಸಲಾಗುತ್ತದೆ.

Bay Leaf Benefits: ಬಿರಿಯಾನಿ ಎಲೆ ಕೇವಲ ರುಚಿಗಷ್ಟೇ ಅಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ಸಾಂಪ್ರದಾಯಿಕ ನಂಬಿಕೆ!
ಬಿರಿಯಾನಿ ಎಲೆ Image Credit source: Abby Mercer/AllRecipes
ಅಕ್ಷತಾ ವರ್ಕಾಡಿ
|

Updated on: Aug 07, 2026 | 10:13 AM

Share

ಬಿರಿಯಾನಿ ಎಲೆ (Bay leaf) ಎಂದ ತಕ್ಷಣ ಪ್ರತಿಯೊಬ್ಬರ ಮನಸ್ಸಿಗೆ ಮೊದಲು ಬರುವುದು ಬಿರಿಯಾನಿ ಮತ್ತು ಪುಲಾವ್‌ನಂತಹ ಸ್ವಾದಿಷ್ಟ ಭಕ್ಷ್ಯಗಳ ಸುವಾಸನೆ. ಆದರೆ, ಇದು ಕೇವಲ ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಮಾತ್ರವಲ್ಲ. ಅನೇಕ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಲ್ಲಿ, ಈ ಎಲೆಯನ್ನು ಶಾಂತಿ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಸುದೀರ್ಘ ಕಾಲದಿಂದ ಪರಿಗಣಿಸಲಾಗುತ್ತಿದೆ.

ಸಾಂಪ್ರದಾಯಿಕ ನಂಬಿಕೆಗಳು ಮತ್ತು ಮನೆಯ ವಾತಾವರಣ:

ಕೆಲವು ಕುಟುಂಬಗಳಲ್ಲಿ ವಿಶೇಷ ಹಾಗೂ ಪ್ರಮುಖ ದಿನಗಳಲ್ಲಿ, ಹೊಸ ಕಾರ್ಯಕ್ರಮಗಳ ಯಶಸ್ವಿ ಆರಂಭದಲ್ಲಿ ಅಥವಾ ಪೂಜಾ ಕಾರ್ಯಗಳ ಸಮಯದಲ್ಲಿ ಬಿರಿಯಾನಿ ಎಲೆಗಳನ್ನು ಬಳಸುವ ಪದ್ಧತಿ ಇಂದಿಗೂ ಮುಂದುವರೆದಿದೆ. ಈ ಪುರಾತನ ಸಂಪ್ರದಾಯದ ಹಿಂದೆ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ಹಾಗೂ ಕುಟುಂಬದ ಪ್ರತಿಯೊಬ್ಬ ಸದಸ್ಯರ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುವ ಶುಭ ಬಯಕೆ ಅಡಗಿದೆ.

ಸಕಾರಾತ್ಮಕ ಆಲೋಚನೆಗಳಿಗೆ ಸಿಗುವ ಮಾನಸಿಕ ಉತ್ತೇಜನ:

ಮನೆಯ ನಿರ್ದಿಷ್ಟ ಸ್ಥಳಗಳಲ್ಲಿ ಬಿರಿಯಾನಿ ಎಲೆಯನ್ನು ಇಡುವುದರಿಂದ ಅಥವಾ ಪೂಜೆಗಳಲ್ಲಿ ಬಳಸುವುದರಿಂದ ಜೀವನದಲ್ಲಿ ಶುಭ ಬದಲಾವಣೆಗಳು ಉಂಟಾಗುತ್ತವೆ ಎಂದು ಅನೇಕ ಜನರು ಬಲವಾಗಿ ನಂಬುತ್ತಾರೆ. ಈ ನಂಬಿಕೆಯು ವ್ಯಕ್ತಿಯ ಮಾನಸಿಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ. ಇಂತಹ ಸಕಾರಾತ್ಮಕ ಆಚರಣೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಭವಿಷ್ಯವನ್ನು ಆಶಾವಾದಿ ದೃಷ್ಟಿಕೋನದಿಂದ ಎದುರಿಸಲು ಸಹಾಯವಾಗುತ್ತದೆ. ಅಂದರೆ, ಎಲೆಯು ನೇರವಾಗಿ ಪವಾಡ ಮಾಡುವ ಬದಲು, ಅದರೊಂದಿಗೆ ಜಾಗೃತಗೊಳ್ಳುವ ಸಕಾರಾತ್ಮಕ ಚಿಂತನೆಗಳೇ ವ್ಯಕ್ತಿಗೆ ನಿಜವಾದ ಶಕ್ತಿಯಾಗಿ ಮಾರ್ಪಡುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸಾಂಪ್ರದಾಯಿಕ ನಂಬಿಕೆಗಳು:

ಬಿರಿಯಾನಿ ಎಲೆಯ ಮೇಲೆ ನಿಮ್ಮ ಕೋರಿಕೆಯನ್ನು ಬರೆದು ಅದನ್ನು ಸುಡುವುದರಿಂದ ಆಸೆಗಳು ಬೇಗನೆ ಈಡೇರುತ್ತವೆ ಎಂಬ ನಂಬಿಕೆಯಿದೆ. ಇದಲ್ಲದೇ ಮನೆಯಲ್ಲಿ ಬಿರಿಯಾನಿ ಎಲೆಯನ್ನು ಧೂಪದಂತೆ ಸುಟ್ಟರೆ ಬರುವ ಸುವಾಸನೆಯು ನಕಾರಾತ್ಮಕ ಶಕ್ತಿಯನ್ನು ಹೊಡೆದುಹಾಕಿ, ಮನಸ್ಸಿಗೆ ಶಾಂತಿ ನೀಡುತ್ತದೆ. ವ್ಯಾಪಾರ ಅಥವಾ ಹಣಕಾಸಿನ ಅಭಿವೃದ್ಧಿಗಾಗಿ ಪರ್ಸ್ ಅಥವಾ ತಿಜೋರಿಯಲ್ಲಿ ಈ ಎಲೆಯನ್ನು ಇಟ್ಟುಕೊಳ್ಳುವ ವಾಡಿಕೆಯೂ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು!
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು!
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ವಿಡಿಯೋ ನೋಡಿ
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ವಿಡಿಯೋ ನೋಡಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ