AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varamahalakshmi Vrata: ವರಮಹಾಲಕ್ಷ್ಮಿ ಹಬ್ಬ; ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ಮಹಾಲಕ್ಷ್ಮಿ ಬರುವಳು ಮನೆಗೆ

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಎರಡು ಶುಕ್ರವಾರಗಳು ಬರುತ್ತವೆ‌. ಮೊದಲನೆಯ ಶುಕ್ರವಾರವು ಮಾಸದ ಆರಂಭದಲ್ಲಿ ಬರುತ್ತದೆ. ಎರಡನೆಯದು ಶುಕ್ಲ ಪಕ್ಷದ ಅಂತ್ಯದಲ್ಲಿ ಬರುವುದು. ಶುಕ್ರವಾರವು ಲಕ್ಷ್ಮಿಗೆ ಪ್ರಿಯವಾದ ವಾರವಾಗಿದೆ. ಹಾಗಾಗಿ ಆ ದಿನ ವ್ರತವನ್ನು ಆಚರಿಸುವುದು ಹಿಂದಿನ ಪದ್ಧತಿ.

Varamahalakshmi Vrata: ವರಮಹಾಲಕ್ಷ್ಮಿ ಹಬ್ಬ; ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ಮಹಾಲಕ್ಷ್ಮಿ ಬರುವಳು ಮನೆಗೆ
Varalakshmi Vratham
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ|

Updated on: Aug 14, 2024 | 3:16 PM

Share

ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ವ್ರತವೂ ಒಂದು. ಶ್ರಾವಣವು ವಿಷ್ಣುವಿಗೆ ಸಂಬಂಧಿಸಿದ ಮಾಸವಾದ ಕಾರಣ, ವಿಷ್ಣುವಿನ ಪತ್ನಿಯನ್ನೂ ಈ ಮಾಸದಲ್ಲಿ ಆರಾಧಿಸುವುದು ವಿಶೇಷ. ಶ್ರಾವಣ ಮಾಸದ ಶುಕ್ರವಾದಂದು ಆರಾಧನೆ ಮಾಡುತ್ತಾರೆ. ಶುಕ್ರವಾರವು ಲಕ್ಷ್ಮಿಗೆ ಪ್ರಿಯವಾದ ವಾರವಾಗಿದೆ. ಹಾಗಾಗಿ ಆ ದಿನ ವ್ರತವನ್ನು ಆಚರಿಸುವುದು ಹಿಂದಿನ ಪದ್ಧತಿ. ಶ್ರಾವಣ ಮಾಸದಲ್ಲಿ ಬರುವುದು ನಾಲ್ಕು ಶುಕ್ರವಾರಗಳು ಮಾತ್ರ. ಈ ನಾಲ್ಕರಲ್ಲಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಶ್ರೇಷ್ಠ.

ಯಾಕೆ ಆ ದಿನ ಒಳ್ಳೆಯದು?

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಎರಡು ಶುಕ್ರವಾರಗಳು ಬರುತ್ತವೆ‌. ಮೊದಲನೆಯ ಶುಕ್ರವಾರವು ಮಾಸದ ಆರಂಭದಲ್ಲಿ ಬರುತ್ತದೆ. ಎರಡನೆಯದು ಶುಕ್ಲ ಪಕ್ಷದ ಅಂತ್ಯದಲ್ಲಿ ಬರುವುದು. ಇದು ವಿಶೇಷ. ಏಕೆಂದರೆ ಸಂಪತ್ತಿನ ಸಮೃದ್ಧಿಗಾಗಿ ಮಾಡುವ ವ್ರತ ಇದು‌. ಅದು ಹೇಗೆ ವೃದ್ಧಿಯಾಗಬೇಕು ಎಂದರೆ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಯಾಗಬೇಕು.

ಚಾಂದ್ರೀಕಲಾ ಯಥಾ ಶುಕ್ಲ ವರ್ಧತೇ ಸಾ ದಿನೇ ದಿನೇ ತಥಾ ದಯಾ ತೇ ಮಯ್ಯೇವ ವರ್ಧತಾಮಭಿವರ್ಧತಾಮ್ ||

ಚಂದ್ರನ‌ ಕಲೆಯಂತೆ ವೃದ್ಧಿಯಾಗಿ ಹುಣ್ಣಿಮೆಯ ಚಂದ್ರನಂತೆ ಪೂರ್ಣ ಸಂಪತ್ತು ಸಿಗಲಿ ಎನ್ನುವುದು ಆಶಯ. ಚಂದ್ರನ ಬಲವಿರುವ ಕಾಲವೂ ಅದೇ ಆಗಿದೆ.‌ ಚಂದ್ರನು ಮನಃಕಾರಕನಾದ ಕಾರಣ ಮಹಾಲಕ್ಷ್ಮಿಯ ಉಪಾಸನೆಯಿಂದ ಸಂತೋಷವೂ ಪ್ರಾಪ್ತಿಯಾಗಲಿ ಎನ್ನುವುದು.

ಯಾವ ಸಂಪತ್ತು ಸಿಗಬೇಕು?

ಸಂಪತ್ತು ಎಂದಾಕ್ಷಣ ಹಣ, ಒಡವೆ, ಭೂಮಿ, ವಾಹನ ಇಷ್ಟು ಮಾತ್ರ ನೆನಪಾಗುತ್ತದೆ. ಆದರೆ ಅಷ್ಟು ಮಾತ್ರ ಸಂಪತ್ತಲ್ಲ. ವಿದ್ಯೆ, ಉದ್ಯೋಗ, ಬಲ, ನೆಮ್ಮದಿ, ಸಂತೋಷ, ಆರೋಗ್ಯ, ಅಧಿಕಾರ, ಸಮ್ಮಾನ, ಸಜ್ಜನರ ಸಹವಾಸ, ಉಪಚಾರ, ಸಂತಾನ, ಎಲ್ಲವೂ ಸಂಪತ್ತೇ. ಯಾವುದು ಜೀವನಕ್ಕೆ ಬೇಕಾಗಿದ್ದು, ಸಿಗದೇ ಅಪ್ರಾಪ್ತವಾಗಿದೆಯೋ ಅಂತಹುದರ ಪ್ರಾಪ್ತಿಯಾಗುವುದು. ಮಹಾಲಕ್ಷ್ಮಿಯನ್ನು ವಿಧಿವತ್ತಾಗಿ ಆವಾಹಿಸಿ, ಆರಾಧಿಸಿ, ಬಂಧುಗಳನ್ನು, ಅತಿಥಿಗಳನ್ನು, ಸಜ್ಜನರನ್ನು ಆಹ್ವಾನಿಸಿ, ತೃಪ್ತಿಕರವಾಗಿ ಅವರಿಗೆ ಭೋಜನ ಮಾಡಿಸಿದರೆ ಲಕ್ಷ್ಮೀ ಕಟಾಕ್ಷವು ಸದಾ ಇರುವುದು.

ಇದನ್ನೂ ಓದಿ: ರಕ್ಷಾ ಬಂಧನದ ಇತಿಹಾಸ ಹಾಗೂ ರಾಖಿಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ರಾತ್ರಿ ಏಕೆ ಲಕ್ಷ್ಮೀ ಪೂಜೆ?

ಹಗಲಿನಲ್ಲಿ ಲಕ್ಷ್ಮೀಪೂಜೆ ಇಲ್ಲ. ರಾತ್ರಿ ಅಥವಾ ಸಂಜೆಯ ಹೊತ್ತಿನಲ್ಲಿ ಇದರ ಆಚರಣೆ ಇರುವುದು. ಸಂಪತ್ತು ಪ್ರದರ್ಶನಕ್ಕೆ ಇರುವುದಲ್ಲ. ಅದು ಜೀವನವು ಚೆನ್ನಾಗಿ ನಡೆಸಲು ಇರುವುದು ಎನ್ನುವುದು ತೋರಿಸುತ್ತದೆ. ಲಕ್ಷ್ಮಿಯು ಯಾರಿಗೂ ಕಾಣದಂತೆ ಬರುತ್ತಾಳೆ, ಯಾರಿಗೂ ಕಾಣದಂತೆ ಯಾವಾಗಲೋ ಹೋಗುತ್ತಾಳೆ. ರಾತ್ರಿ ಅದು ಕಾಣಿಸದು. ಆದರೆ ಸಂಪತ್ತು ಪಡೆದವನು ಅದನ್ನು ತೋರಿಸಿ, ಅಹಂಕಾರ ಪಡುತ್ತಾನೆ. ಲಕ್ಷ್ಮಿಯು ಮತ್ತೆ ಎಂದೋ ಮಾಯವಾಗುತ್ತಾಳೆ. ಹಾಗಾಗಿ ಸಂಪತ್ತಿನ ಆಗಮನದಿಂದ ಹಿಗ್ಗುವುದು, ಗಮನದಿಂದ ಕುಗ್ಗುವುದು ಆಗದೇ ಒಂದೇ ರೀತಿಯಲ್ಲಿ ಇರುವ ಸಂದೇಶವನ್ನು ಆಕೆ ಕೊಡುತ್ತಾಳೆ. ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡೂ ಕೂಡ ಲಕ್ಷ್ಮೀ ನೀಡುವ ಸಂದೇಶ ಬಗೆಗೇ ಇರುವುದಾಗಿದೆ. ಲಕ್ಷ್ಮೀನಾರಾಯಣ ಪಠಣವು ಮಂಗಲಕರವಾದುದು.‌ ಲಕ್ಷ್ಮಿಯನ್ನು ನಾರಾಯಣನ್ನು ಏಕಕಾಲಕ್ಕೆ ಅರ್ಚಿಸುವ ಸುವರ್ಣ ಅವಕಾಶ ವರಮಹಾಲಕ್ಷ್ಮೀ ವ್ರತ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ
ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು